ಓದುಗರ ಪತ್ರ
ದೇಶವೊಂದರ ಮುಖ್ಯಸ್ಥ ಇನ್ನೊಂದು ದೇಶದ ವಿರುದ್ಧ ಯುದ್ಧ ಸಾರಿದ್ದಾರೆ. ಈ ಸಂಘರ್ಷದಲ್ಲಿ ತಮ್ಮ ಜನರೂ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದರ ಅರಿವಿದ್ದರೂ ಆತನದ್ದು ಅಪಾರ ಅಹಂಕಾರ. ಇಂತಹ ಸರ್ವಾಧಿಕಾರಿ ಧೋರಣೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೂ ಮುಂದಾಗಿರುವ ಮುಖ್ಯಸ್ಥನ ವಿರುದ್ಧ ಇಡೀ ದೇಶವೇ ತಿರುಗಿಬಿದ್ದಿದೆ. ಎಲ್ಲ ವಯೋಮಾನದವರೂ ಪ್ರತಿಭಟನೆಯ ಅಸ್ತ್ರ ಹಿಡಿದು ಬೀದಿಗಿಳಿದಿದ್ದಾರೆ. ಮುಖ್ಯಸ್ಥನ ಪ್ರತಿಕೃತಿಯನ್ನು ದಹಿಸಿದ್ದಾರೆ. ಸಿಕ್ಕಿದ್ದರೆಲ್ಲೆಲ್ಲ ಆತನ ಚಿತ್ರಪಟಕ್ಕೆ ಹೊಡೆಯುತ್ತಿದ್ದಾರೆ. ನಮಗೆ ರಾಜಪ್ರಭುತ್ವ ಬೇಕಿಲ್ಲ; ಪ್ರಜಾಪ್ರಭುತ್ವ ಬೇಕು ಎಂದು ಗುಡುಗಿದ್ದಾರೆ. ಹಾಗಿದ್ದರೂ ಯುದ್ಧದಿಂದ ಹಿಂದೆ ಸರಿಯುವ ಜನಪರ, ಜೀವಪರ ಚಿಂತನೆ ಆತನಿಗಿಲ್ಲ. ಆದರೆ, ಜನಾಕ್ರೋಶವನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂಬುದು ಆ ಮುಖ್ಯಸ್ಥನಿಗೆ ಅರ್ಥ ಆಗಿದ್ದಂತೆ ಇಲ್ಲ. ಇದು ಯಾವ ದೇಶದ ಕಥೆ ನಿಮಗೆ ಗೊತ್ತಾಯಿತೆ? ಇದು ಅಮೆರಿಕ ದೇಶದ ಪರಿಸ್ಥಿತಿ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಟ್ಟಹಾಸದ ಪರಿಣಾಮ.
ಭಾರತದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಇಲ್ಲಿಯೂ ಅಮೆರಿಕದಂತಹ ಪ್ರತಿಭಟನೆಗಳು ನಡೆಯುವುದು ಸಾಧ್ಯವೆ? ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಜನರು ಆಕ್ರೋಶ ವ್ಯಕ್ತಪಡಿಸಲು ಅವಕಾಶ ಇದೆಯೇ? ಜನಪರ ಹೋರಾಟಗಾರರು ಜೈಲಿಗೆ ಹೋಗದೇ ತಪ್ಪಿಸಿಕೊಳ್ಳಲು ಅವಕಾಶ ಇದೆಯೇ? ಎಲ್ಲರೂ ಯೋಚಿಸಬೇಕಾದ ಜರೂರತ್ತು ಇದೆ.
ರಾಜಶೇಖರ್, ಜನತಾನಗರ, ಮೈಸೂರು
ಮಂಡ್ಯ : ಜಿಲ್ಲೆಯ ನಾಲ್ಕು ಪೊಲೀಸ್ ಉಪ ವಿಭಾಗಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. 28 ಮಂದಿ ಆರೋಪಿಗಳನ್ನು…
ಬಾಗಲಕೋಟೆ : ಕಾಂಗ್ರೆಸ್ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ…
ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ…
ನವದೆಹಲಿ : ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್ ಜತೆಗೆ ಸಂಘಟಿತ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್…
ಟೆಹ್ರಾನ್ : ಅಮೆರಿಕದ ಮಿತ್ರರಾಷ್ಟ್ರಗಳಲ್ಲಿನ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮುಂದುವರಿದಿರುವಂತೆಯೇ ಇತ್ತ ಇರಾನ್ ಮೇಲೆ ಮುಗಿಬಿದ್ದಿರುವ…
ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ…