ರಾಜ್ಯದ ವಿವಿಧ ಭಾಗಗಳಲ್ಲಿ ರಾಗಿ, ಭತ್ತ, ಜೋಳ ಮೊದಲಾದ ಫಸಲನ್ನು ಒಕ್ಕಣೆ ಮಾಡಲು ರಸ್ತೆಯನ್ನೇ ಬಳಸುತ್ತಿದ್ದು, ಇದರಿಂದ ಅಪಘಾತಗಳು ಸಂಭವಿಸಿ ವಾಹನ ಚಾಲಕರು ಮೃತಪಟ್ಟರೂ ಇನ್ನೂ ರಸ್ತೆಯ ಮೇಲೆ ಒಕ್ಕಣೆ ನಿಷೇಧಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ದಶಕಗಳ ಹಿಂದೆ ಸುಗ್ಗಿ ಕಾಲದಲ್ಲಿ ಫಸಲು ಒಕ್ಕಣೆ ಮಾಡಲು ಕಣಗಳನ್ನು ನಿರ್ಮಿಸಿ ರೋಣಗಲ್ಲು ಬಳಸಿ ಧಾನ್ಯಗಳನ್ನು ಬೇರ್ಪಡಿಸುತ್ತಿದ್ದರು. ಈಗ ಧಾನ್ಯ ಒಕ್ಕಣೆಗೆ ಯಂತ್ರಗಳು ಬಂದಿರುವುದರಿಂದ ರೈತರು ಕಣ ಸಂಸ್ಕೃತಿಯನ್ನೇ ಮರೆತಿದ್ದಾರೆ. ಹೆಚ್ಚು ಭೂಮಿ ಇರುವ ರೈತರು ಧಾನ್ಯ ಒಕ್ಕಣೆ ಯಂತ್ರಗಳನ್ನು ಬಾಡಿಗೆ ಪಡೆದು -ಸಲು ಕಟಾವಿನ ಜೊತೆಗೆ ಧಾನ್ಯವನ್ನೂ ಒಕ್ಕಣೆ ಮಾಡಿಸುತ್ತಾರೆ. ಸಣ್ಣ ರೈತರು ಒಕ್ಕಣೆ ಮಾಡಲು ಕಣವಿಲ್ಲದೆ ರಸ್ತೆಯ ಮೇಲೆ ಫಸಲನ್ನು ಹರಡುತ್ತಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸರ್ಕಾರ ರೈತರಿಗೆ ಸಾಮೂಹಿಕವಾಗಿ ಧಾನ್ಯ ಒಕ್ಕಣೆಗೆ ಕಣ ನಿರ್ಮಿಸಬೇಕು. ರಸ್ತೆಯ ಮೇಲೆ ಧಾನ್ಯ ಒಕ್ಕಣೆ ನಿಷೇಧಿಸುವ ಮೂಲಕ ಜೀವ ಹಾನಿಯನ್ನು ತಡೆಗಟ್ಟಬೇಕು.
-ಎ.ಎಸ್. ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.
ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…
ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…
ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…
ಹೊಸದಿಲ್ಲಿ : ನೀಟ್-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…
ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…
ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…