Andolana originals

ಮುಂಗಾರು: ಎರಡೂ ಮಾಸ ಮಳೆ ಅಭಾವ!

ಚಾಮರಾಜನಗರ: ಪೂರ್ವ ಮುಂಗಾರು ಅವಧಿಯಲ್ಲಿ ಅಧಿಕ ಮಳೆ ಬಿದ್ದು ಸುಮಾರು ೫೭೧ ರೈತರ ೨೪೧.೦೩ ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದ್ದು, ಜಿಲ್ಲೆಯಲ್ಲಿ ಸದ್ಯದ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳು ಮಳೆ ಕೊರತೆ ಎದುರಿಸ ಲಾರಂಭಿಸಿವೆ. ಈ ನಡುವೆ ಮೋಡ ಕವಿದ ವಾತಾವರಣ ಆವರಿಸಿ ತುಂತುರು ಹನಿ ಬೀಳುತ್ತಿದ್ದು, ಗಟ್ಟಿ ಮಳೆ ಆಗಬೇಕಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ೨೦೨೫ರ ಮಾರ್ಚ್, ಏಪ್ರಿಲ್, ಮೇ ಮಾಹೆಯ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿತ್ತು.

ಮಾರ್ಚ್‌ನಲ್ಲಿ ೧೫.೩ ಮಿ.ಮೀ. ವಾಡಿಕೆಗಿಂತ ೧೬.೪ ಮಿ. ಮೀ. ಮಳೆ ಬಿದ್ದಿತ್ತು.ಅಂತೆಯೇ ಏಪ್ರಿಲ್‌ನಲ್ಲಿ ೬೬.೮ ಮಿ.ಮೀ. ವಾಡಿಕೆಗಿಂತ ೮೬.೦೬ ಮಿ.ಮೀ., ಮೇ ನಲ್ಲಿ ೧೧೪ ಮಿ.ಮೀ. ವಾಡಿಕೆಗಿಂತ ೧೧೯.೦೨ ಮಿ.ಮೀ. ಮಳೆ ಸುರಿದಿತ್ತು. ಕ್ರಮವಾಗಿ ಈ ಮೂರೂ ತಿಂಗಳುಗಳಲ್ಲಿ ಶೇ.೭, ಶೇ.೩೬, ಶೇ.೫ರಷ್ಟು ಹೆಚ್ಚು ಮಳೆಯಾಗಿ ಸುಮಾರು ೫೭೧ ರೈತರ ೨೪೧.೦೩ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, ಪರಿಹಾರ ಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಪೂರ್ವ ಮುಂಗಾರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿಹೆಚ್ಚು ೧೫೧.೧೮ ಹೆಕ್ಟೇರ್, ಚಾಮರಾಜನಗರ ತಾಲ್ಲೂಕಿನಲ್ಲಿ ೭೫.೬೨ ಹೆಕ್ಟೇರ್, ಹನೂರು ತಾಲ್ಲೂಕಿನಲ್ಲಿ ೧೪.೫೫ ಹೆಕ್ಟೇರ್, ಕೊಳ್ಳೇಗಾಲ ತಾಲ್ಲೂಕಿನಲ್ಲಿ ೦.೫ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿರುವ ಈ ವರದಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅವರಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಖಾಂತರ ಕಳೆದ ತಿಂಗಳೇ ಸಲ್ಲಿಕೆಯಾಗಿದೆ. ಅಲ್ಲಿ ಅನುಮತಿ ದೊರೆತ ಕೂಡಲೇ ಜಿಲ್ಲಾಧಿಕಾರಿಯವರ ಪ್ರಕೃತಿ ವಿಕೋಪ ನಿಧಿಯ ವೈಯಕ್ತಿಕ ಠೇವಣಿ ಖಾತೆಯಿಂದ ಡಿಬಿಟಿ ಮುಖಾಂತರ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಆಗಲಿದೆ.

ಬಹುತೇಕ ಬಾಳೆ ಬೆಳೆಯೇ ಹೆಚ್ಚು ಹಾನಿಗೊಳಗಾಗಿದ್ದು, ಎನ್‌ಡಿ ಆರ್‌ಎಫ್ ಮಾರ್ಗಸೂಚಿ ಪ್ರಕಾರ ಬಾಳೆ ಬೆಳೆಗೆ (ನೀರಾವರಿ) ೧೭ ಸಾವಿರ ರೂ., ಮಳೆ ಆಶ್ರಿತಕ್ಕೆ ೮,೫೦೦ ರೂ.ಗಳನ್ನು ಪ್ರತಿ ಹೆಕ್ಟೇರ್‌ಗೆ ನಿಗದಿಪಡಿಸಲಾಗಿದೆ. ೨೦೨೪ರ ಪೂರ್ವ ಮುಂಗಾರು ಅವಧಿಯಲ್ಲಿ ೯೮೫.೩೮ ಹೆ.ಬಾಳೆ, ೧೫.೯ ಹೆಕ್ಟೇರ್ ಜೋಳದ ಬೆಳೆ ಅತಿವೃಷ್ಟಿಯಿಂದ ಹಾನಿಗೊಳಗಾಗಿ ೨,೧೭೦ ರೈತರಿಗೆ ಒಟ್ಟು ೧,೫೭,೪೩,೧೭೫ ರೂ. ಪರಿಹಾರವು ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯ ಅನುದಾನದಿಂದ ಪಾವತಿಯಾಗಿತ್ತು. ಈ ಬಾರಿಯ ಪೂರ್ವ ಮುಂಗಾರು ಬೆಳೆ ಹಾನಿ ಪರಿಹಾರ ಇಷ್ಟರಲ್ಲೇ ಸಂದಾಯ ಆಗಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ

” ಸೋಮವಾರವೂ ದಟ್ಟ ಮೋಡ ಕವಿದು ಚಾಮರಾಜನಗರದಲ್ಲಿ ಹನಿ ತೊಟ್ಟಿಕ್ಕುತ್ತಲೇ ಇತ್ತು. ಈ ಜಿನುಗು ಮಳೆಯಿಂದ ಬೆಳೆದು ನಿಂತಿರುವ ಬೆಳೆಗಳಿಗೆ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ. ಮಳೆ ಜೋರಾಗಿ ಬೀಳಬೇಕು.”

– ಬೂದಿತಿಟ್ಟು ಮಲ್ಲೇಶ್, ರೈತ

” ಜೂನ್, ಜುಲೈನಲ್ಲಿ ಮಳೆ ಕೊರತೆ ಯಾಗಿದೆಯಾದರೂ ಬೆಳೆಗಳಿಗೆ ತೊಂದರೆ ಉಂಟಾಗಿಲ್ಲ. ಸೂರ್ಯಕಾಂತಿ, ಜೋಳದ ಬೆಳೆ ಕಟಾವು ಹಂತದಲ್ಲಿವೆ. ರಾಗಿ ಬಿತ್ತನೆ ಇನ್ನೂ ನಡೆಯುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಈ ವಾರ ಜಿಲ್ಲೆಯಲ್ಲಿ ಮಳೆ ಆಗಲಿದೆ.”

– ಬಿ.ಬಿ.ಅಬೀದ್, ಜಂಟಿ ಕೃಷಿ ನಿರ್ದೇಶಕರು

ಆಗ ಮಳೆ ಪ್ರಭಾವ, ಈಗ ಅಭಾವ:  ಪೂರ್ವ ಮುಂಗಾರು ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರೆ ಮುಂಗಾರು ವೇಳೆ (ಜೂನ್, ಜುಲೈ) ಮಳೆ ಕೊರತೆ ಬಾಧಿಸಿ ಸಹಜವಾಗಿಯೇ ನಾನಾ ಬೆಳೆಗಳು ತುಸು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಜೂನ್‌ನಲ್ಲಿ ಶೇ.೪೬ರಷ್ಟು ಮತ್ತು ಜುಲೈನಲ್ಲಿ ಇದೇ ೨೮ರ ಸೋಮವಾರದತನಕ ಶೇ.೨೯ರಷ್ಟು ಮಳೆ ಕೊರತೆಯನ್ನು ಜಿಲ್ಲೆ ಎದುರಿಸುತ್ತಿದೆ. ಜುಲೈನಲ್ಲಿ ಇಲ್ಲಿಯ ತನಕ ೧೧೬ ಮಿ.ಮೀ. ಮಳೆ ವಾಡಿಕೆಯಂತೆ ಬೀಳಬೇಕಿತ್ತು. ಬಿದ್ದಿರುವುದು ೮೨ ಮಿ.ಮೀ. ಮಾತ್ರ. ಇನ್ನು ಜೂನ್‌ನಲ್ಲಿ ವಾಡಿಕೆಯಂತೆ ೫೮.೪ ಮಿ.ಮೀ. ಆಗಬೇಕಿತ್ತು, ಆಗಿರುವುದು ೩೧.೮ ಮಿ.ಮೀ. ಮಾತ್ರ! ಮೋಡ ಕವಿದ ವಾತಾವರಣ, ತುಂತುರು ಹನಿಗೆ ಸೀಮಿತವಾಗದೇ ಮುಂದೆ ಮಳೆ ಸುರಿದರೆ ಬೆಳೆಗಳಿಗೆ ಹೇಳಿಕೊಳ್ಳುವಂತಹ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಮಳೆ ಅಭಾವ ಯಥಾಸ್ಥಿತಿಯಲ್ಲಿ ಸಾಗಿದರೆ ಬೆಳೆಗಳು ಕ್ರಮೇಣ ಒಣಗಿ ಬರಪರಿಸ್ಥಿತಿ ಎದುರಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ.

ಆಂದೋಲನ ಡೆಸ್ಕ್

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

8 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

8 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

8 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

8 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

8 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

8 hours ago