Andolana originals

ʼದೀಪಾವಳಿ ಸಂಭ್ರಮ ಪರಿಸರಕ್ಕೆ ಮಾರಕ ಆಗದಿರಲಿ’

• ಸಂದರ್ಶನ: ಬಾ.ನಾ.ಸುಬ್ರಹ್ಮಣ್ಯ
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ತಮ್ಮ ಚೆಲುವು, ಮುಗ್ಧತೆ ಮತ್ತು ಅಭಿನಯದಿಂದ ಎಲ್ಲರಿಗೂ ಇಷ್ಟವಾದ ನಾಯಕನಟಿ ರುಕ್ಕಿಣಿ ವಸಂತ್, ಅಲ್ಪ ಕಾಲದಲ್ಲೇ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ‘ಬರ’ ಮತ್ತು ಭೈರತಿ ರಣಗಲ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಈ ಸಂದರ್ಭದಲ್ಲಿ “ಆಂದೋಲನ’ದ ಜೊತೆಗೆ ಮಾತ್ರನಾಡಿರುವ ರುಕ್ಕಿಣಿ, ದೀಪಾವಳಿಯ ನೆನಪುಗಳು, ಈ ಬಾರಿಯ ದೀಪಾವಳಿ ಆಚರಣೆ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ದೀಪಾವಳಿ ಎಂದರೆ ನಿಮ್ಮ ಪಾಲಿಗೆ ಏನು?
ರುಕ್ಕಿಣಿ ವಸಂತ್‌: ಸಂಭ್ರಮ. ಎಲ್ಲರೂ ಒಟ್ಟಿಗೆ ಸೇರಲು ಸಿಗುವ ಅವಕಾಶ, ಖುಷಿ,

• ಆಂದೋಲನ: ದೀಪಾವಳಿ ಹಬ್ಬದ ನಿಮ್ಮ ಬಾಲ್ಯದ ನೆನಪು ಗಳೇನು? ಹೇಗೆ ಆಚರಿಸುತ್ತಿದ್ದಿರಿ?
ರುಕ್ಕಿಣಿ ವಸಂತ್‌: ನನಗೆ ದೀಪಾವಳಿ ಕುರಿತಂತೆ ಜಾಸ್ತಿ ನೆನಪುಗಳಿಲ್ಲ. ಆ ಅನುಭವದ ನೆನಪು ಮಾತ್ರ. ವಿದೇಶದಲ್ಲಿರುವ ನಮ್ಮ ಸಂಬಂಧಿಕರೆಲ್ಲ ನಮ್ಮ ಅಜ್ಜಿ ಮನೆಗೆ ಬರುತ್ತಿದ್ದರು. ಬೆಂಗಳೂರಿನಲ್ಲಿದ್ದಾಗ ನಾವು ಅಜ್ಜಿ ಮನೆಯಲ್ಲೇ ಇದ್ದೆವು. ಉಳಿದಂತೆ ಸೇನೆಯಲ್ಲಿದ್ದ ಅಪ್ಪನ ಜೊತೆಯಲ್ಲಿ ಬೇರೆ ಊರುಗಳಲ್ಲಿ ಇರುತ್ತಿದ್ದೆವು.

ಉತ್ತರ ಭಾರತದಲ್ಲಿ, ಬೇರೆ ಬೇರೆ ಕಡೆ… ದೀಪಾವಳಿ ವೇಳೆ ನಾವೆಲ್ಲ ಸೇರಿಕೊಂಡು ಅಜ್ಜಿ ಮನೆಗೆ ಹೋಗ್ತಾ ಇದ್ವಿ. ಅಲ್ಲಿ ಹಬ್ಬದೂಟ, ಹೊಸಬಟ್ಟೆ… ಕೆಲವೊಬ್ರು ಪಟಾಕಿ ಹೊಡೀತಾ ಇದ್ರು… ನನಗೆ ಆ ಶಬ್ದಇಷ್ಟ ಆಗ್ತಿರಲಿಲ್ಲ… ನಾನು ಬರೀ ಸ್ಟಾರ್ಕ್ಟರ್ ಹಿಡ್ಕೊಂಡು ಓಡಾಡುತ್ತಿದ್ದೆ ಎಲ್ಲಾ ಕಡೆ, ನನಗೆ ಹೊಸ ಬಟ್ಟೆ, ಹಬ್ಬದೂಟ, ಎಲ್ಲ ಕಡೆ ದೀಪ ಹಚ್ಚೇದು ಆ ತರಹದ ನೆನಪುಗಳಿರೋದು.

ಕುಟುಂಬದ ಎಲ್ಲರೂ ಒಟ್ಟಿಗೆ ಸೇರುವ ಖುಷಿ ಮಾತ್ರ ಮರೆಯಲಾಗದ್ದು. ಕುಟುಂಬದ ಎಲ್ಲರೂ ಒಟ್ಟಿಗೆ ಸೇರುವ ಖುಷಿ ಮಾತ್ರ ಮರೆಯಲಾಗದ್ದು. ನಾವೆಲ್ಲ ಅಜ್ಜಿ ಮನೆಯಲ್ಲಿ ಸೇರ್ಕೊಂಡು, ಇಲ್ಲಿದ್ದರೆ ಆಂಟಿ, ಅಂಕಲ್ ಮನೇಲಿ ಸೇರ್ಕೊಂಡು ಒಟ್ಟಿಗೆ ಆಚರಿಸುತ್ತಿದ್ಬಿ. ಬಹಳ ದಿನಗಳ ನಂತರ ವರ್ಷದಲ್ಲೊಮ್ಮೆ ಕುಟುಂಬದವರೆಲ್ಲರ ಜೊತೆಗೆ ಸೇರುವ ಅವಕಾಶ; ಕಸಿನ್ಸ್ ಎಲ್ಲ ಒಟ್ಟಿಗೆ ಸೇರ್ಕೊಂಡು, ಓಡಾಡಿಕೊಂಡು ಹಬ್ಬ ಆಚರಿಸಿದ ಖುಷಿಯ ಅನುಭವ.

ಆಂದೋಲನ: ಈ ಬಾರಿ ದೀಪಾವಳಿ ಹೇಗೆ ಆಚರಿಸುತ್ತೀರಿ?
ರುಕ್ಕಿಣಿ ವಸಂತ್: ಈ ದೀಪಾವಳಿ ಸ್ವಲ್ಪ ಬೇರೆ ಥರ ಇರುತ್ತೆ. ಯಾಕೆಂದ್ರೆ ಬಘೀರ ಹಾಗೂ ಭೈರತಿ ರಣಗಲ್ ಈ ಎರಡು ಚಿತ್ರಗಳು ರಿಲೀಸ್ ಆಗ್ತಿವೆ. ಹಾಗಾಗಿ ಹಿಂದಿನಂತೆ ಆಚರಿಸಲಿಕ್ಕೆ ಸಮಯಸಿಗುತ್ತಿಲ್ಲ. ನಮ್ಮ ಕುಟುಂಬದವರು ಈಗಾಗಲೇ ಇಂಡಿಯಾಕ್ಕೆ ಬಂದಿದ್ದಾರೆ. ಅವರ ಜೊತೆ ಕಾಲಕಳೆಯೋಕೆ ತುಂಬಾ ಆಸೆ. ಆದರೆ ಆಗುತ್ತಿಲ್ಲ. ಚಿತ್ರಗಳ ಪ್ರೊಮೋಶನ್‌ ಗಾಗಿ ಎಲ್ಲ ಕಡೆ ಓಡಾಡ್ತಾ ಇದ್ದೀನಿ; ಹಾಗೂ ಕೆಲವೊಂದು ಚಿತ್ರಗಳ ಚಿತ್ರೀಕರಣ ಬೇರೆ ನಡೆಯುತ್ತಿದೆ ಮಧ್ಯದಲ್ಲಿ ಹಾಗಾಗಿ ಈ ಸಲ ಪ್ರೊಫೆಶನಲ್ ದೀಪಾವಳಿ ಆಗಿಹೋಗಿದೆ. ತುಂಬಾ ಖುಷಿಯ ವಿಷಯ. ಯಾಕೆಂದರೆ ಅದು ಒಂದು ಬೇರೆಯೇ ರೀತಿಯ ಅನುಭವ.

ಆಂದೋಲನ: ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಆಶಯಗಳೇನು?
ರುಕ್ಷಿಣಿ ವಸಂತ್: ನಾನು ಈ ದೀಪಾವಳಿಗೆ ಬರೀ ಸಿನಿಮಾ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ. ನನಗೆ ವೃತ್ತಿಪರ ನಿರೀಕ್ಷೆ ಮತ್ತು ಕನಸುಗಳಿವೆ. ಬಘೀರ ಮತ್ತು ಭೈರತಿ ರಣಗಲ್ ಚೆನ್ನಾಗಿ ಓಡಬೇಕು, ಜನರಿಗೆ ಇಷ್ಟ ಆಗಬೇಕು; ನನ್ನ ಪಾತ್ರಗಳು, ನಾನು ಪಾತ್ರಗಳನ್ನು ನಿಭಾಯಿಸಿದ ರೀತಿ ಎಲ್ಲರಿಗೂ ಇಷ್ಟ ಆಗಬೇಕು ಅಂತ ಆಶಿಸುತ್ತೀನಿ.

ಆಂದೋಲನ: ನಮ್ಮ ಓದುಗರಿಗೆ, ಕನ್ನಡಿಗರಿಗೆ, ಈ ಸಂದರ್ಭದಲ್ಲಿ ಏನು ಹೇಳಲು ಬಯಸುತ್ತೀರಿ?
ರುಕ್ಕಿಣಿ ವಸಂತ್: ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಎಲ್ಲರೂ ಈ ಹಬ್ಬಾನ ನಿಮ್ಮ ಕುಟುಂಬದ ಜೊತೆಗೆ, ಸ್ನೇಹಿತರ ಜೊತೆಗೆ ಆಚರಿಸಿ, ಸಂಭ್ರಮಿಸಿ ಪಟಾಕಿ ಹೊಡೆಯುವುದಾದರೆ ಹುಷಾರಾಗಿ ಹೊಡೆಯಿರಿ. ಹೆಚ್ಚು ಪರಿಸರ ಮಾಲಿನ್ಯ ಆಗಲು ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳುತ್ತೇನೆ.

ಆಂದೋಲನ ಡೆಸ್ಕ್

Recent Posts

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

29 mins ago

ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್

ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…

34 mins ago

ಬೆಳಗಾವಿ ಅಧಿವೇಶನದಲ್ಲೂ ನಟ ದರ್ಶನ್‌ ಬಗ್ಗೆ ಚರ್ಚೆ : ಏನದು?

ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…

36 mins ago

ದಿ ಡೆವಿಲ್‌ ಚಿತ್ರದ ವಿಮರ್ಶೆ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ….!

ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…

44 mins ago

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

57 mins ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

1 hour ago