Andolana originals

ಹಣ್ಣಿನಂಗಡಿ ರಾಮಕೃಷ್ಣ

ಮೈಸೂರಿನ ಶಿವರಾಮಪೇಟೆ ರಸ್ತೆಯ ಪಕ್ಕದಲ್ಲಿ ಹಣ್ಣಿನ ಅಂಗಡಿಯೊಂದಿದೆ. ಆಯಾಸದಿಂದ ಬಂದ ಗ್ರಾಹಕರಿಗೆಲ್ಲ ತಂಪನೆಯ ಪಾನೀಯವನ್ನು ನೀಡುತ್ತಾ ಬಂದಿರುವ ಇವರ ಹೆಸರು ರಾಮಕೃಷ್ಣ.

ಅಂಗಡಿ ತೆರೆದು, ಆಗಲೇ ನಾಲ್ಕು ವಸಂತಗಳು ಕಳೆದಿವೆ. ಈ ಮೊದಲು ಡಿಜಿಟಲ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅರವತ್ತು ವಾರದ ಹಿರಿಯ ವರ್ಷವಾದ ಮೇಲೆ ಪ್ರೆಸ್‌ನಲ್ಲಿ ಕೆಲಸ ಮಾಡಲಾಗದೆ, ಸುಮ್ಮನೆ ಮನೆಯಲ್ಲೂ ಕೂರಲಾಗದೆ, ಆದಾಯಕ್ಕೆ ಮುಂದೇನು ಮಾಡಬಹುದೆಂದು ಜೀವ ಚಡಪಡಿಸುತ್ತಿತ್ತು. ಒಂದು ದಿನ ತಾನೇಕೆ ಹಣ್ಣಿನಂಗಡಿ ತೆರೆಯಬಾರದು ಎಂದು ಯೋಚನೆ ಹೊಳೆದು, ಅಂಗಡಿ ತೆರೆದೇಬಿಟ್ಟರು. ಕಾಲಕ್ಕೆ ಅನುಗುಣವಾದ ಹಣ್ಣುಗಳಿಗೆ ಇವರ ಅಂಗಡಿಯಲ್ಲಿ ವಿಶೇಷ ಆದ್ಯತೆ, ಬೇಸಿಗೆಯಲ್ಲಿ ವ್ಯಾಪಾರ ಹೇಗೊ ಕುದುರುತ್ತದೆ. ಆದರೆ, ಮಳೆಗಾಲದಲ್ಲಿ ಗ್ರಾಹಕರ ಸ್ಪಂದನೆ ಹೇಗಿರುತ್ತದೆ ಎಂದು ಕೇಳಿದರೆ, ಲಾಭವಂತೂ ಇಲ್ಲ. ಆದರೆ ನಷ್ಟ ಆಗುವುದಿಲ್ಲ ಎಂಬ ಸಂತೃಪ್ತಿಯ ಉತ್ತರ. ವಿಜಯನಗರದಲ್ಲಿರುವ ತಮ್ಮ ಮನೆಯಿಂದ ಬೆಳಿಗ್ಗೆ ಬರುವಾಗಲೇ ಮಾರುಕಟ್ಟೆಯಿಂದ ಹಣ್ಣುಗಳನ್ನೆಲ್ಲ ತಂದು, ಒಂಬತ್ತು ಗಂಟೆಗೆ ತೆರೆದ ಅಂಗಡಿಯ ಕದ, ಮುಚ್ಚುವುದು ರಾತ್ರಿ ಹತ್ತು ಗಂಟೆಗೆ. ತಮ್ಮೊಂದಿಗೆ ಮತ್ತೊಬ್ಬ ಹುಡುಗ ನನ್ನು ಕೆಲಸಕ್ಕೆ ಜೊತೆಮಾಡಿಕೊಂಡಿದ್ದಾರೆ. ಒಂದುವೇಳೆ, ಅವರು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದರೆ ಸ್ವತಃ ರಾಮಕೃಷ್ಣ ಅವರೇ ಹಣ್ಣಿನ ರಸವನ್ನು ತಯಾರಿಸುತ್ತಾರೆ. ಹಣ್ಣಿನಂಗಡಿ ಅಂತಲ್ಲ ಎಲ್ಲ ಕೆಲಸಕ್ಕೂ ಅಡೆತಡೆಗಳಿವೆ, ನಾವದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂಬ ಕಾಯಕ ತತ್ವವನ್ನು ಇವರ ಬಾಯಲ್ಲಿ ಕೇಳುವುದೇ ಚಂದ.

ಆಂದೋಲನ ಡೆಸ್ಕ್

Recent Posts

ಪತ್ನಿ, ತಾಯಿಯನ್ನು ಕೊಂದು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ವ್ಯಕ್ತಿ

ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ…

2 hours ago

ಚಲುವಾಂಬ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ಮಗು ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು…

2 hours ago

ಹಾಸನ: ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ

ಹಾಸನ: ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

2 hours ago

ಸಚಿವ ಡಾ.ಜಿ.ಪರಮೇಶ್ವರ್‌ ಬೆಟ್ಟಿಂಗ್‌ ಕೇಸ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ವಿರುದ್ಧದ ಬೆಟ್ಟಿಂಗ್‌ ಹೇಳಿಕೆ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಬೆಟ್ಟಿಂಗ್…

2 hours ago

ಪಶ್ಚಿಮ ಬಂಗಾಳದಲ್ಲಿ 89.93%, ತಮಿಳುನಾಡಿನಲ್ಲಿ 82.24% ಮತದಾನ

ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಹಳ ಉತ್ಸಾಹದಿಂದ ಭಾಗಿಯಾಗಿದ್ದರು. ತಮಿಳುನಾಡಿನಲ್ಲಿ ಶೇ.82.24% ಮತದಾನ ದಾಖಲಾಗಿದ್ದು,…

2 hours ago

ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೂ ನೇಣಿಗೆ ಶರಣಾದ ಬಾಲಕಿ…!

ನಂಜನಗೂಡು: ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದರು…

3 hours ago