Andolana originals

ಹಣ್ಣಿನಂಗಡಿ ರಾಮಕೃಷ್ಣ

ಮೈಸೂರಿನ ಶಿವರಾಮಪೇಟೆ ರಸ್ತೆಯ ಪಕ್ಕದಲ್ಲಿ ಹಣ್ಣಿನ ಅಂಗಡಿಯೊಂದಿದೆ. ಆಯಾಸದಿಂದ ಬಂದ ಗ್ರಾಹಕರಿಗೆಲ್ಲ ತಂಪನೆಯ ಪಾನೀಯವನ್ನು ನೀಡುತ್ತಾ ಬಂದಿರುವ ಇವರ ಹೆಸರು ರಾಮಕೃಷ್ಣ.

ಅಂಗಡಿ ತೆರೆದು, ಆಗಲೇ ನಾಲ್ಕು ವಸಂತಗಳು ಕಳೆದಿವೆ. ಈ ಮೊದಲು ಡಿಜಿಟಲ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅರವತ್ತು ವಾರದ ಹಿರಿಯ ವರ್ಷವಾದ ಮೇಲೆ ಪ್ರೆಸ್‌ನಲ್ಲಿ ಕೆಲಸ ಮಾಡಲಾಗದೆ, ಸುಮ್ಮನೆ ಮನೆಯಲ್ಲೂ ಕೂರಲಾಗದೆ, ಆದಾಯಕ್ಕೆ ಮುಂದೇನು ಮಾಡಬಹುದೆಂದು ಜೀವ ಚಡಪಡಿಸುತ್ತಿತ್ತು. ಒಂದು ದಿನ ತಾನೇಕೆ ಹಣ್ಣಿನಂಗಡಿ ತೆರೆಯಬಾರದು ಎಂದು ಯೋಚನೆ ಹೊಳೆದು, ಅಂಗಡಿ ತೆರೆದೇಬಿಟ್ಟರು. ಕಾಲಕ್ಕೆ ಅನುಗುಣವಾದ ಹಣ್ಣುಗಳಿಗೆ ಇವರ ಅಂಗಡಿಯಲ್ಲಿ ವಿಶೇಷ ಆದ್ಯತೆ, ಬೇಸಿಗೆಯಲ್ಲಿ ವ್ಯಾಪಾರ ಹೇಗೊ ಕುದುರುತ್ತದೆ. ಆದರೆ, ಮಳೆಗಾಲದಲ್ಲಿ ಗ್ರಾಹಕರ ಸ್ಪಂದನೆ ಹೇಗಿರುತ್ತದೆ ಎಂದು ಕೇಳಿದರೆ, ಲಾಭವಂತೂ ಇಲ್ಲ. ಆದರೆ ನಷ್ಟ ಆಗುವುದಿಲ್ಲ ಎಂಬ ಸಂತೃಪ್ತಿಯ ಉತ್ತರ. ವಿಜಯನಗರದಲ್ಲಿರುವ ತಮ್ಮ ಮನೆಯಿಂದ ಬೆಳಿಗ್ಗೆ ಬರುವಾಗಲೇ ಮಾರುಕಟ್ಟೆಯಿಂದ ಹಣ್ಣುಗಳನ್ನೆಲ್ಲ ತಂದು, ಒಂಬತ್ತು ಗಂಟೆಗೆ ತೆರೆದ ಅಂಗಡಿಯ ಕದ, ಮುಚ್ಚುವುದು ರಾತ್ರಿ ಹತ್ತು ಗಂಟೆಗೆ. ತಮ್ಮೊಂದಿಗೆ ಮತ್ತೊಬ್ಬ ಹುಡುಗ ನನ್ನು ಕೆಲಸಕ್ಕೆ ಜೊತೆಮಾಡಿಕೊಂಡಿದ್ದಾರೆ. ಒಂದುವೇಳೆ, ಅವರು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದರೆ ಸ್ವತಃ ರಾಮಕೃಷ್ಣ ಅವರೇ ಹಣ್ಣಿನ ರಸವನ್ನು ತಯಾರಿಸುತ್ತಾರೆ. ಹಣ್ಣಿನಂಗಡಿ ಅಂತಲ್ಲ ಎಲ್ಲ ಕೆಲಸಕ್ಕೂ ಅಡೆತಡೆಗಳಿವೆ, ನಾವದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂಬ ಕಾಯಕ ತತ್ವವನ್ನು ಇವರ ಬಾಯಲ್ಲಿ ಕೇಳುವುದೇ ಚಂದ.

ಆಂದೋಲನ ಡೆಸ್ಕ್

Recent Posts

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

38 mins ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

2 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

7 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

14 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

14 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

14 hours ago