Andolana originals

ದಂಡ ರಿಯಾಯಿತಿ: ನಿಯಮ ಉಲ್ಲಂಘನೆಗೆ ಸ್ಛೂರ್ತಿ?

‘ಸಂಚಾರ ನಿಯಂತ್ರಣ ಪೊಲೀಸರ ಆದ್ಯ ಕರ್ತವ್ಯ ಆಗಲಿ’

 ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು

ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಪ್ರಸ್ತಾವನೆಯ ಮೇರೆಗೆ ಬಾಕಿ ಇರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ಸಾರ್ವಜನಿಕರಿಗೆ ಜೂ.೨೧ರಿಂದ ಜು.೧೦ರವರೆಗೆ ಮಾತ್ರ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂಬುದು ಮಾಧ್ಯಮಗಳ ವರದಿ.

ಸಂಚಾರ ನಿಯಮಗಳನ್ನು ಉಲ್ಲಂಸುವ ವಾಹನ ಸವಾರ/ಚಾಲಕರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಇದುವರೆಗೆ ದಂಡ ವಸೂಲು ಮಾಡುವಲ್ಲಿ ಸಂಚಾರ ಪೊಲೀಸರು ವಿಫಲವಾಗಿದ್ದಾರೆ ಎಂಬುದಕ್ಕೆ ಈ ಆದೇಶ/ಪ್ರಕಟಣೆಯೇ ಸಾಕ್ಷಿ!

ಇನ್ನೇನು ಕೆಲವೇ ದಿನಗಳಲ್ಲಿ ಸಂಗ್ರಹದಲ್ಲಿರುವ ಹಲವು ಉತ್ಪನ್ನಗಳು ಯೋಗ್ಯತೆಯನ್ನು ಕಳೆದುಕೊಳ್ಳುತ್ತವೆ ಎಂಬ ವಿಷಯ ತಿಳಿದೊಡನೆ ನಗರದ ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಯವರು (ಮಾಲ್) ತಮ್ಮಲ್ಲಿರುವ ಐಸ್ ಕ್ರೀಂ, ಬಿಸ್ಕೆಟ್, ಪನೀರ್ ಮುಂತಾದಮಾಲುಗಳನ್ನು ಶೇ.೫೦ ರಿಯಾಯಿತಿ ದರದಲ್ಲಿ ಅಥವಾ ಒಂದು ಕೊಂಡರೆ ಒಂದು ಉಚಿತ ಎಂಬ ಘೋಷಣೆಯೊಂದಿಗೆ ಆಫರ್ ನೀಡಿ ಗ್ರಾಹಕರನ್ನು ಆಕರ್ಷಿಸಿ ಯಾಮಾರಿಸುವಂತೆಯೇ ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಸಿ ದಂಡ ಕಟ್ಟದೇ ಅಡ್ಡಾಡುತ್ತಿರುವ ವಾಹನ ಸವಾರರಿಗೆ ಶೇ.೫೦ ರಿಯಾಯಿತಿಯ ಆಫರ್ ನೀಡಿದೆ! ಸಂಚಾರ ನಿಯಮಗಳನ್ನು ಉಲ್ಲಂಸಿದ ವಾಹನ ಸವಾರ/ಚಾಲಕರು ದಂಡ ಕಟ್ಟುವುದರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರೆ ಅಂತಹವರ ವಾಹನಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೇ ಜಪ್ತಿ ಮಾಡಲು ಕ್ರಮ ಕೈಗೊಳ್ಳಬೇಕಿತ್ತು.

ಸಂಚಾರ ನಿಯಮ ಉಲ್ಲಂಸಿದವರಿಂದ ದಂಡ ವಸೂಲು ಮಾಡುವುದೊಂದೇ ಪೊಲೀಸರ ಕರ್ತವ್ಯ ಅಲ್ಲ. ಸಂಚಾರ ನಿಯಂತ್ರಣ ಮಾಡುವುದೇ ಸಂಚಾರ ಪೊಲೀಸರ ಕರ್ತವ್ಯವಾಗಬೇಕು. ಕೇವಲ ದಂಡವನ್ನು ಮಾತ್ರ ವಿಧಿಸಬಹುದಾದ ಇಂತಹ ಲಘು ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯಾದ ೬ ತಿಂಗಳ ಅವಧಿಯೊಳಗೆ ದಂಡ ವಸೂಲು ಮಾಡಬಹುದು. ನಿಯಮ ಉಲ್ಲಂಘನೆಯಾದ ಆರು ತಿಂಗಳ ನಂತರ ಕಾಲ ಪರಿಮಿತಿ ಮೀರಿ ದಂಡ ವಿಧಿಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ ಕಲಂ ೫೧೪ (೨)(ಎ) ಅನ್ವಯ ನ್ಯಾಯಾಲಯಗಳಿಗೂ ಅಧಿಕಾರವಿಲ್ಲ.

ಹೀಗಿರುವಾಗ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಆರು ತಿಂಗಳ ಕಾಲಾವಧಿ ಮೀರಿರುವ ಇಂತಹ ಲಘು ಪ್ರಕರಣಗಳಲ್ಲಿ ರಿಯಾಯಿತಿ/ ಆಫರ್ ನೀಡುವ ಆಮಿಷ ಒಡ್ಡಿ ಕಾನೂನು ಬಾಹಿರವಾಗಿ ದಂಡ ವಸೂಲು ಮಾಡಲು ಇಂತಹ ಆದೇಶ/ ಪ್ರಕಟಣೆ ಹೊರಡಿಸಿರಬಹುದು. ಈ ವಿಚಾರವಾಗಿ ನ್ಯಾಯಾಲಯಗಳೇ ಪೊಲೀಸ್ ಹಾಗೂ ಸರ್ಕಾರಕ್ಕೆ ಕಿವಿಹಿಂಡಿ ಚಾಟಿ ಬೀಸಬೇಕಾಗಿದೆ. ಸಂಚಾರ ನಿಯಮ ಉಲ್ಲಂಸಲು ಅವಕಾಶ ನೀಡಿದ ನಂತರ ೫೦% ರಿಯಾಯಿತಿ ಆಮಿಷ ಒಡ್ಡಿ ದಂಡಯಾತ್ರೆ ಮಾಡುವ ಬದಲಾಗಿ ಇನ್ನು ಮುಂದಾದರೂ, ಸಂಚಾರ ಪೊಲೀಸರು ರಸ್ತೆಗಿಳಿದು ಸಂಚಾರ ನಿಯಂತ್ರಣ ಮಾಡಲು ಮುಂದಾಗಲಿ.

” ಕೇವಲ ದಂಡವನ್ನು ಮಾತ್ರ ವಿಽಸಬಹುದಾದ ಇಂತಹ ಲಘು ಪ್ರಕರಣಗಳಲ್ಲಿ ನಿಯಮಉಲ್ಲಂಘನೆಯಾದ ೬ ತಿಂಗಳ ಅವಧಿಯೊಳಗೆ ದಂಡ ವಸೂಲು ಮಾಡಬಹುದು. ನಿಯಮ ಉಲ್ಲಂಘನೆಯಾದ ಆರು ತಿಂಗಳ ನಂತರ ಕಾಲಪರಿಮಿತಿ ಮೀರಿ ದಂಡ ವಿಧಿಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ ಕಲಂ ೫೧೪ (೨)(ಎ) ಅನ್ವಯ ನ್ಯಾಯಾಲಯಗಳಿಗೂ ಅಧಿಕಾರವಿಲ್ಲ”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಾರ್ಥಕ ಬದುಕಿನ ಸಾಧಕ!

ಸಾರ್ಥಕ ಬದುಕಿನ ಸಾಧಕ! ಗಹನ ಆರ್ಥಿಕ ಚಿಂತನೆಗಳನು ಎಳೆಎಳೆಯಾಗಿ ಬಿಡಿಸಿ ನೀಡಿದ ನಾಡ ಅಪ್ಪಟ ಆರ್ಥಿಕ ಚಿಂತಕ! ಶಿಷ್ಯರ ಮನದ…

3 hours ago

ಓದುಗರ ಪತ್ರ: ಕಲಬೆರಕೆ ಮಾಫಿಯಾ: ಕ್ರಮ ಅಗತ್ಯ

ತೆಲಂಗಾಣದಲ್ಲಿ ೩೦,೦೦೦ ಕೆ.ಜಿ. ನಕಲಿ ಮಸಾಲೆ ಜಪ್ತಿಯಾಗಿರುವುದು ಕೇವಲ ಎಚ್ಚರಿಕೆಯಲ್ಲ ನಮಗಿದು ನೇರ ಬೆದರಿಕೆ! ಮಸಾಲೆ, ಹಾಲು, ಎಣ್ಣೆ ಹಾಗೂ…

3 hours ago

ಓದುಗರ ಪತ್ರ: ಉದ್ಯಾನವನಗಳಲ್ಲಿ ಸಂಗೀತ ವಾದ್ಯ ಜೋಡಣೆ: ಪಾಲಿಕೆ ಕ್ರಮ ಅಭಿನಂದನಾರ್ಹ

ಮೈಸೂರು ಮಹಾನಗರ ಪಾಲಿಕೆಯು ಹೊರಾಂಗಣ ಸಂಗೀತ ವಾದ್ಯಗಳ ಜೋಡಣೆ ಎಂಬ ಹೆಸರಿನಲ್ಲಿ ಉದ್ಯಾನವನಗಳಲ್ಲಿ ಸಂಗೀತ ವಾದ್ಯಗಳನ್ನು ಜೋಡಿಸುವ ವಿನೂತನ ಪ್ರಯೋಗವನ್ನು…

3 hours ago

ಮೀಸಲಾತಿ ವಿರೋಧಿ ದನಿಗೆ ಮೋದಿ ಮಣಿಯುವರೇ?

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೇಶದಲ್ಲಿ ದಿಢೀರನೆ ಹುಟ್ಟಿಕೊಂಡ ಕಾಕ್ರೋಚ್ ಜನತಾ…

3 hours ago

ಕುಕ್ಕರಿನ ಸೀಟಿ ಕೂಗಲು ಶುರುವಾಗಿದೆ!

ಬಿ.ಎಸ್.ವಿನಯ್ ಇಲ್ಲಿಯವರೆಗೆ ನಮ್ಮಂತಹ ಅಂಕಲ್ -ಆಂಟಿಗಳು ಜೆನ್ ಝೀಗಳ ಬಗ್ಗೆ ಒಳ್ಳೆಯ ಮಾತಾಡಿದ್ದಕ್ಕಿಂತ ಮೂಗು ಮುರಿದದ್ದೇ ಹೆಚ್ಚು. ಈ ಹುಡುಗರಿಗೆ…

3 hours ago

ಕೆಲವಷ್ಟು ಭರವಸೆಗಳು ಮತ್ತು ಹಲವಷ್ಟು ಆತಂಕಗಳು

ಸ್ವಾಮಿ ಪೊನ್ನಾಚಿ ನಾನು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳುವ ಕಾಲಕ್ಕೆ ಹೆಚ್ಚು ಕಡಿಮೆ ಚಳವಳಿಗಳ ಕಾವು ನಿಂತೇ ಹೋಗಿತ್ತು. ಜೋರು ಗಾಳಿ…

3 hours ago