Andolana originals

ರಸ್ತೆಯಲ್ಲೇ ಹರಿಯುವ ಚರಂಡಿ ನೀರು: ಕೆ.ಆರ್.ನಗರದ ಪ್ರಮುಖ ರಸ್ತೆಯಲ್ಲೇ ಅವ್ಯವಸ್ಥೆ

ಕೆ.ಆರ್.ನಗರ: ರಸ್ತೆಯಲ್ಲಿ ಗಲೀಜು ನೀರು… ಮೂಗು ಮುಚ್ಚಿಕೊಂಡು ಜನರ ಓಡಾಟ… ಇದು ಕಳೆದ 4-5 ದಿನಗಳಿಂದ ಪಟ್ಟಣದ ಪ್ರಮುಖ ಪುರಸಭೆ ವೃತ್ತದಿಂದ ಮಧುವನಹಳ್ಳಿ, ಚೀರನಹಳ್ಳಿ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಕಂಡುಬರುತ್ತಿರುವ ಅವ್ಯವಸ್ಥೆ. ಇದರಿಂದ ಅಕ್ಕಪಕ್ಕದ ಮನೆಯ ವಾಸಿಗಳು, ಜನರು, ತರಕಾರಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಪಟ್ಟಣದ ಐದಾರು ಕಡೆಯ ಬಡಾವಣೆಗಳಲ್ಲಿ ಒಳಚರಂಡಿ ತುಂಬಿಕೊಂಡು ಮ್ಯಾನ್‌ಹೋಲ್ ಮುಚ್ಚಳ ತೆರೆದು ಕೊಳಚೆ ನೀರು ಹರಿಯುತ್ತಿದೆ. ಮಳೆಗಾಲದ ಆರಂಭಕ್ಕೂ ಮುನ್ನ ಒಳಚರಂಡಿಗಳನ್ನು ದುರಸ್ತಿ ಮಾಡದಿದ್ದರಿಂದ ಈ ರೀತಿಯಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಜನನಿಬಿಡ ಪ್ರದೇಶ ಹಾಗೂ ವಿಧಾನ ಪರಿಷತ್‌ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಅವರ ಮನೆಗೆ ಅನತಿ ದೂರದಲ್ಲಿರುವ ರಸ್ತೆಗೆ ಹೊಂದಿಕೊಂಡಂತೆ ಇರುವ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಬಿಇಒ ಕಚೇರಿ ಎದುರು ರಸ್ತೆಯಲ್ಲಿ ಮ್ಯಾನ್ ಹೋಲ್‌ಗಳಲ್ಲಿ ತುಂಬಿ ಹರಿಯುತ್ತಿದ್ದರೂ ಪುರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರು ಅದೇ ಕೊಳಚೆ ನೀರಿನಲ್ಲಿ ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕಳೆದ 4-5 ದಿನಗಳಿಂದ ಒಳ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ಮ್ಯಾನ್‌ಹೋಲ್ ದುರಸ್ತಿಗೊಳಿಸುವ ಗೋಜಿಗೆ ಹೋಗದೇ ಪಟ್ಟಣದ ಪುರಸಭೆ ಕಣ್ಣುಚ್ಚಿ ಕುಳಿತಿದೆ ಎಂದು ಜನರು ದೂರಿದ್ದಾರೆ.

ಬೇಸಿಗೆಯಲ್ಲಿ ಮ್ಯಾನ್ ಹೋಲ್‌ಗಳನ್ನು ದುರಸ್ತಿ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಈ ಪರಿಸ್ಥಿತಿ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಉಂಟಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಒಳಚರಂಡಿ ನೀರು ತುಂಬಿಹರಿಯುತ್ತಿದೆ. ಆದರೆ ಪುರಸಭೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಗಾಲಕ್ಕೂ ಮುನ್ನವೇ ಇಂತಹ ಮ್ಯಾನ್‌ಹೋಲ್‌ಗಳ ಪೈಪ್‌ಲೈನ್‌ ದುರಸ್ತಿ ಮಾಡಬೇಕಿತ್ತು. ಆಗ ಪುರಸಭೆ ಗಮನ ಹರಿಸಲಿಲ್ಲ. ಇತ್ತೀಚೆಗೆ ನಿರಂತರ ಮಳೆಯಾದ ಪರಿಣಾಮ ಪ್ರಮುಖ ಪ್ರದೇಶದಲ್ಲಿನ ಒಳಚರಂಡಿ ಮ್ಯಾನ್
ಹೋಲ್‌ಗಳು ತುಂಬಿಕೊಂಡಿವೆ.
-ಆಸಿಫ್ ಪಾಷ, ಬೈಕ್ ಮೆಕ್ಯಾನಿಕ್

ಪಟ್ಟಣದಲ್ಲಿ ಐದಾರು ಬಡಾವಣೆಗಳಲ್ಲಿ ಮಳೆ ಬಂದರೆ ಚರಂಡಿ ನೀರು ತುಂಬಿ ಮ್ಯಾನ್ ಹೋಲ್ ಮುಚ್ಚಳಗಳು ತೆರೆದು ರಸ್ತೆಯಲ್ಲಿ ನೀರು ಹರಿಯುತ್ತದೆ. ಪುರಸಭೆ ಸಿಬ್ಬಂದಿ ಇವುಗಳನ್ನು ಮುಚ್ಚಿ ಸರಿಪಡಿಸುವ ಕೆಲಸ ಮಾಡುತ್ತಿದ್ದು, ಕೆಲವು ಕಡೆಗಳಲ್ಲಿ ಪೈಪ್ ಲೈನ್ ಒಡೆದಿರುವುದರಿಂದ ಹೊಸದಾಗಿ ಪೈಪ್ ಲೈನ್ ಅಳವಡಿಸಲಾಗಿದೆ.
-ಹೇಮಂತ್‌ ಕುಮಾರ್ ಡೊಳ್ಳೆ, ಮುಖ್ಯಾಧಿಕಾರಿ, ಪುರಸಭೆ

ಭೇರ್ಯ ಮಹೇಶ್

ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಸಮೀಪದ ಬಟಿಗನಹಳ್ಳಿ ಗ್ರಾಮದವನಾದ ನಾನು ಭೇರ್ಯ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ ಹೊಸ ಅಗ್ರಹಾರದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದೇನೆ. 2002 ಹಾಗೂ 2004ರಲ್ಲಿ ಪತ್ರಿಕೋದ್ಯಮ ತರಬೇತಿ ಪಡೆದಿದ್ದೇನೆ. 1992ರಿಂದ ಆಂದೋಲನ ಮತ್ತು ಮೈಸೂರು ಮಿತ್ರ ಸೇರಿದಂತೆ ಪತ್ರಿಕಾ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದು, 2000ರಲ್ಲಿ ಪ್ರಜಾನುಡಿ ದಿನ ಪತ್ರಿಕೆಯ ಕೆ.ಆರ್.ನಗರ ತಾಲ್ಲೂಕು ಗ್ರಾಮಾಂತರ ವರದಿಗಾರನಾಗಿ ತದ ನಂತರ ಆಂದೋಲನ ಮತ್ತು ಕನ್ನಡ ಪ್ರಭ ಪತ್ರಿಕೆಯ ತಾಲ್ಲೂಕು ಗ್ರಾಮಾಂತರ ಮತ್ತು ಭೇರ್ಯ ಗ್ರಾಮದ ವರದಿಗಾರನಾಗಿ ಕಾರ್ಯನಿರ್ವಹಿಸಿ ಪ್ರಸ್ತುತ 2021ರಿಂದ ಕೆ.ಆರ್.ನಗರ ತಾಲ್ಲೂಕು ಆಂದೋಲನ ಪತ್ರಿಕೆಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

ಬ್ರೇಕ್‌ಫಾಸ್ಟ್‌ ಮೀಟಿಂಗ್:‌ ಸಿದ್ದರಾಮಯ್ಯರನ್ನು ತಬ್ಬಿ ಕಾಲಿಗೆ ಬಿದ್ದ ಡಿಸಿಎಂ ಡಿಕೆಶಿ

ಬೆಂಗಳೂರು: ಇಂದು ಬೆಳಿಗ್ಗೆ ಉಪಹಾರಕ್ಕೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.…

47 mins ago

ಓದುಗರ ಪತ್ರ: ತಡೆಯಲಿ ಸರ್ಕಾರ!

ತಡೆಯಲಿ ಸರ್ಕಾರ! ಏರುತ್ತಲೇ ಇದೆ ಇಂಧನ ಬೆಲೆ ಇಳಿಯುತ್ತಲೇ ಇದೆ ಮಾನವ ಬೆಲೆ! ಈ ಪರಿಯ ಹಾವು-ಏಣಿ ಆಟದಲಿ ಅಧೋಗತಿಗೆ…

59 mins ago

ಓದುಗರ ಪತ್ರ: ಬಿಪಿಎಲ್ ಆದಾಯ ಮಿತಿ ಹೆಚ್ಚಿಸಿ

ರಾಜ್ಯಾದ್ಯಂತ ಹೊಸ ಬಿಪಿಎಲ್ ಕಾರ್ಡ್‌ಗಾಗಿ ಸಲ್ಲಿಕೆಯಾಗಿರುವ ಮೂರು ಲಕ್ಷ ಅರ್ಜಿಗಳು ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಬೇಸರದ ಸಂಗತಿ.…

1 hour ago

ಓದುಗರ ಪತ್ರ: ರಸ್ತೆಗೆ ಡಾಂಬರೀಕರಣ ಮಾಡಿ

ಚಾಮರಾಜನಗರ ಜಿಲ್ಲೆಯ ಮರಿಯಾಲ ಗ್ರಾಮದ ಪ್ರಮುಖ ರಸ್ತೆಯು ಹಾಳಾಗಿದೆ. ಈ ರಸ್ತೆಯು ಕೆಲ್ಲಂಬಳ್ಳಿ, ಕಸ್ತೂರು ಮೂಲಕ ವಿವಿಧ ಗ್ರಾಮಗಳ ಮೂಲಕ…

1 hour ago

ಓದುಗರ ಪತ್ರ: ವಿಷಯದ ಗಂಭೀರತೆ ಮರೆತ ಪೊಲೀಸರು

ತಮಿಳುನಾಡಿನಲ್ಲಿ, ಕಳೆದ ಕೆಲವು ದಿನಗಳ ಹಿಂದೆ, ೧೦ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ವಿಷಯಕ್ಕೆ ಸಂಬಂಧಿಸಿದಂತೆ…

1 hour ago

ಓದುಗರ ಪತ್ರ: ಇಂಧನದ ಮೇಲಿನ ತೆರಿಗೆ ಇಳಿಸಿ

ಅಮೆರಿಕ -ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇರಾನ್ ಹಾರ್ಮುಜ್ ಜಲಸಂಽಯನ್ನು ಮುಚ್ಚಿದ್ದರಿಂದಾಗಿ ಕಚ್ಚಾತೈಲದ ಆಮದು ಪ್ರಮಾಣವು…

1 hour ago