Andolana originals

ಕುಸಿದ ಕಬಿನಿ ಉಪ ನಾಲೆ

ಕೊರೆಹುಂಡಿ ವ್ಯಾಪ್ತಿಯ ರೈತರು ಕಂಗಾಲು

೭,೨೦೦ ಎಕರೆ ಪ್ರದೇಶಕ್ಕೆ ನೀರು ಹರಿಯದೆ ಸಮಸ್ಯೆ 

ನಂಜನಗೂಡು: ಕಬಿನಿ ಬಲದಂಡೆ ನಾಲೆಯ ಉಪ ನಾಲೆ ಕುಸಿದು ಬಿದ್ದಿದ್ದು, ಹುಲ್ಲಹಳ್ಳಿ ನಾಲೆಯಲ್ಲಿ ನೀರು ಹರಿಯಲಾಗದ ಪರಿಸ್ಥಿತಿ ತಲೆದೋರಿದೆ. ಕಬಿನಿ ನಾಲೆಯಿಂದ ತಾಲ್ಲೂಕಿನ ಕೊರೆಹುಂಡಿ, ಕಲ್ಲಳ್ಳಿ, ಕತ್ವಾಡಿಪುರದ ಜಮೀನುಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಉಪ ನಾಲೆ ಹುಲ್ಲಹಳ್ಳಿ ನಾಲೆ ಮೇಲೆ ಕುಸಿದು ಬಿದ್ದ ಪರಿಣಾಮ ಹುಲ್ಲಹಳ್ಳಿ ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ಕತ್ವಾಡಿಪುರದ ಕಲ್ಲಳ್ಳಿ, ಕೊರೆಹುಂಡಿ, ಚಾಮಲಾಪುರ ಗ್ರಾಮಗಳ ೧೫೦ ಎಕರೆ ಸೇರಿದಂತೆ ಹುಲ್ಲಹಳ್ಳಿ ನಾಲೆಯ ೭,೨೦೦ ಎಕರೆ ಪ್ರದೇಶದ ಜಮೀನಿಗೆ ಈಗ ನೀರು ಸರಬರಾಜು ಮಾಡಲಾಗದಂತಾಗಿದೆ.

ಈ ಕಿರುನಾಲೆ ಕೊರೆಹುಂಡಿ ಸಮೀಪ ಹುಲ್ಲಹಳ್ಳಿ ನಾಲೆಯನ್ನು ಹಾದುಹೋದ ಸ್ಥಳದಲ್ಲೇ ಕುಸಿದ ಪರಿಣಾಮ ಆ ಉಪ ನಾಲೆಯ ಸಿಮೆಂಟು, ಕಬ್ಬಿಣ, ಮರಳೆಲ್ಲಾ ಹುಲ್ಲಹಳ್ಳಿ ನಾಲೆಯೊಳಗೆ ಬಿದ್ದಿದ್ದು, ನಾಲೆಯ ನೀರು ಮುಂದಕ್ಕೆ ಹರಿಯದಂತೆ ತಡೆಗೋಡೆಯಾಗಿ ಮಾರ್ಪಟ್ಟಿದೆ. ಇದರಿಂದ ಹುಲ್ಲಹಳ್ಳಿ ನಾಲೆಯ ಅಚ್ಚುಕಟ್ಟು ಪ್ರದೇಶದ ೭,೨೦೦ ಎಕರೆಗೂ ಹೆಚ್ಚು ಜಮೀನುಗಳಿಗೆ ನೀರು ಹರಿಸಲಾರದ ಪರಿಸ್ಥಿತಿ ಉಂಟಾಗಿದೆ.

ಅವಶೇಷಗಳನ್ನು ತೆಗೆಯದ ಹೊರತು ನಾಲೆಯ ನೀರು ಮುಂದೆ ಹರಿಯುವುದಿಲ್ಲ ಎಂಬಂತಾಗಿದೆ. ಭತ್ತದ ನಾಟಿಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ ಬಿಳಿಗೆರೆ ಹೋಬಳಿಯ ರೈತ ಸಮೂಹ ಈಗ ನೀರಿಲ್ಲದೆ ಪರದಾಡುವಂತಾಗಿದೆ.

ಈ ಘಟನೆಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿರುವ ಕೃಷಿಕರು, ತಮಗಾಗುವ ನಷ್ಟಕ್ಕೆ ಕಬಿನಿ ನಾಲಾ ವಿಭಾಗದ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಜಾಗದಲ್ಲಿ ಆ ಉಪ ನಾಲೆ ಶಿಥಿಲವಾಗಿತ್ತು ಎಂದು ೨ ತಿಂಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಕಾವೇರಿ ನೀರಾವರಿ ನಿಗಮದ ಕಬಿನಿ ನಾಲಾ ವ್ಯಾಪ್ತಿಯ ಇಂಜಿನಿಯರುಗಳು ದುರಸ್ತಿ ಮಾಡಿದ ಆ ಜಾಗವೇ ಅಂದು ಹಾಕಿದ್ದ ಸಿಮೆಂಟ್‌ನ ಬಣ್ಣ ಮಾಸುವ ಮೊದಲೇ ಕುಸಿತಕ್ಕೊಳಗಾಗಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

” ಈ ಕಿರು ನಾಲೆ ಇದೇ ಸ್ಥಳದಲ್ಲಿ ಶಿಥಿಲವಾಗಿರುವುದು ಇದೇ ಮೊದಲಲ್ಲ. ಮೂರನೇ ಬಾರಿಗೆ, ಅದೂ ಎರಡು ತಿಂಗಳ ಹಿಂದೆ ದುರಸ್ತಿಪಡಿಸಿದ್ದು ಈಗ ಪೂರ್ಣವಾಗಿ ಕುಸಿದಿದೆ. ನೀರಾವರಿ ಅಧಿಕಾರಿಗಳಿಗೆ ನಾಲೆಯ ಮಣ್ಣಿನ ಮೇಲಿರುವ ಆಸಕ್ತಿ ಅದರ ನಿರ್ವಹಣೆ ಕುರಿತು ಇಲ್ಲದಿರುವುದೇ ಇದಕ್ಕೆ ಕಾರಣ.”

-ಶಿವಣ್ಣ ಕತ್ವಾಡಿಪುರ, ರೈತ ಸಂಘದ ಗೌರವಾಧ್ಯಕ್ಷ

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

2 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

2 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

2 hours ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

2 hours ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

2 hours ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

2 hours ago