Andolana originals

ಜಂಬೂಸವಾರಿಯ ಸುದ್ದಿ ಮುಟ್ಟಿಸುವ ಫಿರಂಗಿ ಸದ್ದು!

ಮೈಸೂರು: ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಕಾತರದಿಂದ ಕಾಯುವುದು ಸರ್ವೇ ಸಾಮಾನ್ಯ. ಅದರಲ್ಲೂ ಹಳ್ಳಿಗಳಿಂದ ಆಗಮಿಸಿ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಾದು ಕೂರುವ ಮಂದಿಗೆ ಜಂಬೂಸವಾರಿ ಯಾವಾಗ ಹೊರಡುತ್ತದೆ ಎನ್ನುವುದನ್ನು ಯಾರೂ ತಲುಪಿಸಲ್ಲ.

ಆದರೆ, ಜಂಬೂ ಸವಾರಿ ದಿನ ೨೧ ಬಾರಿ ಸಿಡಿಸುವ ಸಿಡಿಮದ್ದಿನ ಸದ್ದು ಮಾತ್ರ ಮುಟ್ಟಿಸುತ್ತದೆ. ತಮ್ಮ ಕಣ್ಣೆದುರು ಬಂದಾಗ ಕಣ್ತುಂಬಿ ವೀಕ್ಷಿಸಿ ಆನಂದಿಸುವ ತನಕ ಗಂಟೆಗಟ್ಟಲೇ ಕಾಯುವ ಮನದಲ್ಲಿ ಫಿರಂಗಿ ಸದ್ದು ಕೇಳಿದೊಡನೆ ಎಲ್ಲಿಲ್ಲದ ಸಂತಸ. ಈ ಫಿರಂಗಿ ಸದ್ದು ಹೊರ ಬೀಳುತ್ತಿದ್ದಂತೆ ಕೊನೆಗೂ ಜಂಬೂಸವಾರಿ ಶುರುವಾಯ್ತು ಅನ್ನುತ್ತಲೇ ಮನಸ್ಸಿನಲ್ಲಿ ತಿಳಿದು ನೋಡುತ್ತಾರೆ. ಅಂತಹ ವಿಶೇಷತೆ ಇರುವ ಫಿರಂಗಿಗೆ ನೂರಾರು ವರ್ಷಗಳ ಇತಿಹಾಸವಿದೆ. ಸುದೀರ್ಘ ಇತಿಹಾಸ: ಫಿರಂಗಿಗಳಿಗೆ ೨೦೦ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸವಿದೆ.

ಭಾರತದಲ್ಲಿ ಈ ಮೊದಲು ಯುದ್ಧದ ಸಂದರ್ಭದಲ್ಲಿ ಕತ್ತಿ, ಗುರಾಣಿ, ಈಟಿ ಇತ್ಯಾದಿ ಸ್ವದೇಶಿ ನಿರ್ಮಿತ ಆಯುಧಗಳ ಬಳಕೆಯಾಗುತ್ತಿತ್ತು. ಬ್ರಿಟಿಷರ ಆಗಮನದ ನಂತರ ಅವರೊಂದಿಗೆ ಈ ಫಿರಂಗಿಯೂ ಬಂದಿತು. ನಂತರದ ದಿನಗಳಲ್ಲಿ ಮೈಸೂರು ಪ್ರಾಂತ್ಯವನ್ನಾಳುತ್ತಿದ್ದ ಟಿಪ್ಪು ಸುಲ್ತಾನ್ ಅವರು ಫ್ರೆಂಚರ ನೆರವಿನಿಂದ ಮೈಸೂರಿಗೆ ಫಿರಂಗಿಗಳನ್ನು ತರಿಸಿಕೊಂಡಿ ದ್ದರು. ನಂತರ ೧೭೯೨ರಲ್ಲಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ನಡೆದ ಮೂರನೇ ಮೈಸೂರು- ಆಂಗ್ಲೋ ಯುದ್ಧದಲ್ಲಿ ಇದೇ ಫಿರಂಗಿಗಳು ಬಳಕೆಯಾಗಿದ್ದವು.

ಬಳಿಕ ೧೭೯೯ರಲ್ಲಿ ನಡೆದ ನಾಲ್ಕನೇ ಯುದ್ಧದಲ್ಲಿಯೂ ಫಿರಂಗಿಗಳನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲಾಗಿತ್ತು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸಾವನ್ನಪ್ಪಿದರು. ಇದಾದ ನಂತರ ಮತ್ತೇ ಫಿರಂಗಿಗಳನ್ನು ಬಳಸುವ ಸಂದರ್ಭ ಎದುರಾಗಲಿಲ್ಲ. ಇದೀಗ ಫಿರಂಗಿಗಳನ್ನು ದಸರಾ ಸಂದರ್ಭದಲ್ಲಿ ಬಳಸಲಾಗುತ್ತದೆ. ದಸರಾ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯುವ ವೇಳೆ ಫಿರಂಗಿ ಮೂಲಕ ೨೧ ಕುಶಾಲುತೋಪುಗಳನ್ನು ಹಾರಿಸಲಾಗುತ್ತದೆ. ನಂತರ ಮತ್ತೆ ಪೊಲೀಸ್ ಇಲಾಖೆ ಅವುಗಳನ್ನು ಅರಮನೆ ಮಂಡಳಿಯ ವಶಕ್ಕೆ ನೀಡುತ್ತದೆ.

೫೩ ಸೆಕೆಂಡುಗಳಲ್ಲಿ ಕೆಲಸ ಪೂರ್ಣ: ಫಿರಂಗಿ ಸಿಡಿಸುವುದು ಅಷ್ಟು ಸುಲಭವಲ್ಲ. ನಿಜಕ್ಕೂ ಅತ್ಯಂತ ರೋಮಾಂಚನ ಮತ್ತು ಅಪಾಯಕಾರಿ ಕೆಲಸ. ರಾಷ್ಟ್ರಗೀತೆಯನ್ನು ನುಡಿಸುವ ಅವಽ ೫೩ ಸೆಕೆಂಡುಗಳು ಮಾತ್ರ. ಇಷ್ಟು ಕಡಿಮೆ ಅವಽಯಲ್ಲಿ ಪೊಲೀಸರು ೨೧ ಸುತ್ತು ಕುಶಾಲು ತೋಪುಗಳನ್ನು ಹಾರಿಸಬೇಕಿದೆ. ಪೊಟಾಷಿಯಂ ಹಾಗೂ ಮದ್ದು ಪುಡಿಯ ಮಿಶ್ರಣವನ್ನು ಒಬ್ಬರು ತುಂಬಿದರೆ, ಮತ್ತೊಬ್ಬರು ಅದಕ್ಕೆ ಬೆಂಕಿಯನ್ನು ತಗುಲಿಸುವ ಕೆಲಸ ಮಾಡಬೇಕು. ಭಾರೀ ಶಬ್ದದೊಂದಿಗೆ ಕುಶಾಲು ತೋಪು ಹಾರಿದ ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಅದನ್ನು ಕ್ಷಣ ಮಾತ್ರದಲ್ಲಿ ಸ್ವಚ್ಛಗೊಳಿಸಬೇಕು. ಈ ಪ್ರಕ್ರಿಯೆ ೨೧ ಸುತ್ತು ಕುಶಾಲು ತೋಪು ಹಾರಿಸುವಾಗಲೂ ನಡೆಯಬೇಕು. ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸ್ಥಳದಲ್ಲಿರುವ ಸಿಬ್ಬಂದಿ ಅಪಾಯಕ್ಕೆ ಸಿಲುಕಬೇಕಾಗುತ್ತದೆ.

ಶುಕ್ರವಾರದಿಂದ ಕುಶಾಲು ತೋಪು ತಾಲೀಮು

ಕುಶಾಲತೋಪು ಹಾರಿಸುವ ಸಲುವಾಗಿ ಸಿಎಆರ್ ಎಸಿಪಿ, ಎಎಸ್‌ಐ ನೇತೃತ್ವದಲ್ಲಿ ೩೦ ಮಂದಿ ಪೊಲೀಸರ ತಂಡ ಶುಕ್ರವಾರದಿಂದ ತಾಲೀಮು ಶುರು ಮಾಡಿದೆ. ಪ್ರತಿದಿನ ಬೆಳಿಗ್ಗೆ ೭ ಗಂಟೆಯಿಂದ ೧೦ ಗಂಟೆಯವರೆಗೆ ಮದ್ದು ಮಿಶ್ರಣವನ್ನು ಬಳಸದೆ ಅಭ್ಯಾಸ ನಡೆಸಲಿದೆ. ಮುಂದಿನ ದಿನಗಳಲ್ಲಿ ಆನೆಗಳು, ಅಶ್ವಾರೋಹಿ ಪಡೆಯನ್ನು ನಿಲ್ಲಿಸಿಕೊಂಡು ಕುಶಾಲು ತೋಪು ಸಿಡಿಸುವ ತಾಲೀಮು ನಡೆಯಲಿದೆ.

ಕುಶಾಲುತೋಪು ಸಿಡಿಸಲು 35 ಮಂದಿ ಬಳಕೆ: ಕುಶಾಲು ತೋಪು ಹಾರಿಸುವುದೆಂದರೆ ಅದು ಸಾಮಾನ್ಯವಾದ ವಿಷಯವಲ್ಲ. ಅದಕ್ಕೆ ನುರಿತ ಸಿಬ್ಬಂದಿ ಬೇಕು. ಕುಶಾಲು ತೋಪು ಸಿಡಿಸುವ ವೇಳೆ ಸ್ವಲ್ಪ ಏರುಪೇರಾದರೂ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ. ಹೀಗಾಗಿ ಫಿರಂಗಿ ಬಳಕೆಯ ಅನುಭವವಿರುವ ೩೫ ಮಂದಿ ಸಿಬ್ಬಂದಿಯನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ.

ಫಿರಂಗಿ ಬಳಕೆ ತಂಡಕ್ಕೂ ಜೀವ ವಿಮೆ: ಕುಶಾಲು ತೋಪು ಸಿಡಿಸುವಾಗ ಈ ಹಿಂದೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದು ಪೊಲೀಸರು ಗಾಯಗೊಂಡಿದ್ದು ಉಂಟು. ಹಾಗಾಗಿ, ಕಳೆದ ಮೂರು ವರ್ಷಗಳಿಂದ ಫಿರಂಗಿ ಬಳಕೆಯ ತಂಡಕ್ಕೂ ಜೀವ ವಿಮೆ ಮಾಡಿಸಲಾಗಿದೆ.

 

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಓದುಗರ ಪತ್ರ | ನೀರು ಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಿ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯು ವನಸಿರಿ ನಾಡು ಎಂದೆ ಪ್ರಸಿದ್ಧಿ ಪಡೆದಿದೆ ಹಾಗೆ ಜಲಾಶಯಗಳ ಬೀಡು ಎಂದು ಹೆಸರು ಪಡೆದುಕೊಂಡಿದೆ. ಈಗ…

11 hours ago

ಓದುಗರ ಪತ್ರ | ಈ ವಿಶಾಲ ಪಾರ್ಕ್‌ಗೆ ಬೇಕು ಶೌಚಾಲಯ

ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಕುವೆಂಪು ನಗರದ ಎಂ -ಬ್ಲಾಕ್ ನಲ್ಲಿರುವ ಭಾರತ್ ಮಾತಾ ಉದ್ಯಾನವನವು ಕುವೆಂಪು ನಗರದ ಪ್ರಮುಖ…

11 hours ago

ಓದುಗರ ಪತ್ರ | ಚರಂಡಿ ಸೇರುತ್ತಿರುವ ನೀರಿಗೆ ‘ತಡೆ’ಹಾಕಿ

ಮೈಸೂರಿನ ವಿಜಯನಗರ ಎರಡನೇ ಹಂತದ ದಿವ್ಯರೂಪ ಕಲ್ಯಾಣ ಮಂಟಪದ ಸಮೀಪ ಮೂರು ವಾರಗಳಿಂದ ದಿನದಲ್ಲಿ ಆರು ಗಂಟೆಗಳ ಕಾಲ ಪ್ರತಿ…

11 hours ago

ನಾಡಿನುದ್ದಕ್ಕೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕಂಪು

ಡಿಸೆಂಬರ್‌ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ ಚಿರಂಜೀವಿ ಸಿ.ಹುಲ್ಲಹಳ್ಳಿ ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ವಾದಕ್ಕೆ ಮನಸೋತಿದ್ದ ಬಳ್ಳಾರಿ ಸಿದ್ದಮ್ಮ

ಡಾ. ಎಂ. ಡಿ. ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬಳ್ಳಾರಿ ಸಿದ್ದಮ್ಮನವರು ೧೯೦೩ರಲ್ಲಿ ಬಸೆಟಪ್ಪ…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಆಹಾರದ ಕುರಿತು ಕೆಲವು ಚಿಲ್ಲರೆ ಪ್ರಯೋಗಗಳು

ನಾನು ನನ್ನನ್ನು ಆಳವಾಗಿ ಪರಿಶೋಧಿಸಿಕೊಂಡಂತೆಲ್ಲ ನನ್ನ ಆಂತರಿಕ ಮತ್ತು ಬಾಹ್ಯ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ತೋರಿತು. ನನ್ನ…

12 hours ago