Andolana originals

ಅಸ್ಸಾದಿಯವರ ಶಿಷ್ಯನಾಗಿದ್ದೇ ಅವಿಸ್ಮರಣೀಯ

• ಆದಿತ್ಯ ಸೊಂಡಿ, ಹಿರಿಯ ವಕೀಲರು, ಸುಪ್ರೀಂ ಕೋರ್ಟ್, ಹೊಸದಿಲ್ಲಿ

ಡಾ.ಮುಜಾಫರ್ ಅಸ್ಸಾದಿಯವರ ಶಿಷ್ಯನಾಗಿರುವುದು ನನ್ನ ಭಾಗ್ಯ ಎಂದು ನಂಬುತ್ತೇನೆ. ನಮ್ಮ ಭೇಟಿಯು ಯೋಜಿತವಲ್ಲದಿದ್ದರೂ, ಅದು ತಪ್ಪದೇ ಒಂದು ದೈವೀಕೃತ್ಯವಾಯಿ ತೇನೋ ಅನಿಸುತ್ತದೆ. 2007ರಲ್ಲಿ ನಾನು ನನ್ನ ಪಿಎಚ್.ಡಿ.ಗೆ ಸೇರುವ ಯೋಜನೆ ಮಾಡುತಿದ್ದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದ ಅರೆಬರೆ ಸಹಕಾರದ ತೊಂದರೆಯಿಂದ ಬೇಸರಗೊಂಡು, ಅದನ್ನು ತಳ್ಳಿಹಾಕಿದ್ದೆ. ನನ್ನ ಹಿಂದಿ ಮಾಸ್ಟರ್ ಡಾ. ಇಕ್ವಾಲ್ ಅಹ್ಮದ್ (ನನಗೆ ಪಿಎಚ್.ಡಿ.ಗೆ ಪ್ರೇರೇಪಿಸಿದ ಮಹತ್ವದ ವ್ಯಕ್ತಿ) ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಅಸ್ಸಾದಿಯವರ ಶಿಷ್ಯನಾಗಿದ್ದೇ ನಿಸ್ವಾರ್ಥ ಸ್ನೇಹಭಾವ ಅವಿಸ್ಮರಣೀಯ ಸುಳಿವು ನೀಡಿದರು.

ಅವರು ಮೈಸೂರಿನಲ್ಲಿ ಬೆಳೆದವರಾಗಿದ್ದು, ಅದನ್ನು ಒಂದು ಕಲಿಕೆಗೆ ಸೂಕ್ತ ಸ್ಥಳವೆಂದು ತಿಳಿದಿದ್ದರು. ಅಸ್ಥಾದಿ ಯವರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಅವರ ಸಂಶೋಧನಾ ಕ್ಷೇತ್ರಗಳು ನನ್ನ ವೈಯಕ್ತಿಕ ಮತ್ತು ಸಾಮಾಜಿಕ ಆಸಕ್ತಿಯ ವಿಷಯಗಳಾಗಿದ್ದವು. ಹಾಗಾಗಿ ಅವರ ಸಂಪರ್ಕಕ್ಕೆ ಬಂದೆ. ಈ ರೀತಿಯಾಗಿ ಆರಂಭವಾಯಿತು mentorship, ಸ್ನೇಹ ಮತ್ತು ಮಾರ್ಗ ದರ್ಶನದ ಒಂದು ಚಿರಸ್ಥಾಯಿ ಸಂಬಂಧ.

ಶ್ರೇಷ್ಠ ಜ್ಞಾನ ಮತ್ತು ವಿಶ್ಲೇಷಣೆಯ ಮಾದರಿ: ಅಸ್ಸಾದಿಯವರು ಸುಲಭವಾಗಿ ಗಮನ ಸೆಳೆಯುವಂಥ ಜ್ಞಾನ ಮತ್ತು ವಿಶ್ಲೇಷಣೆಯ ಸಾಮರ್ಥ್ಯ ಹೊಂದಿದ್ದರು. ಅವರ ವಿದ್ವತ್ತು ಮತ್ತು ಆಳವಾದ ಅಧ್ಯಯನವು ನನ್ನಂತಹವರಿಗಿಂತ ಅನೇಕಾನೇಕ ಮೆಟ್ಟಿಲುಗಳಷ್ಟು ಮುಂದೆ ಇತ್ತು. ಆದರೂ ಅವರು ನನ್ನಂತಹವರಿಗೆ ಅವಶ್ಯವಾಗಿರುವ ಧೀಮಂತಿಕೆಯನ್ನು ತೋರಿಸಿಕೊಟ್ಟರು. ನನ್ನ ಪ್ರಾಥಮಿಕ ನನ್ನ ಪಿಎಚ್.ಡಿ ನಂತರ, ಅವರು ಡಾ.ಇನ್ಸಾಲ್ ಅಹ್ಮದ್ ಮತ್ತು ನನಗೆ ಮೈಸೂರಿನಲ್ಲಿ ಬಿರಿಯಾನಿ ಉಪಚಾರ ಮಾಡಿದರು. ಮತ್ತೊಮ್ಮೆ, ತಮ್ಮ ಮನೆಯಲ್ಲಿಯೇ ಭೋಜನಕ್ಕೆ ಕರೆದು, ಕುಟುಂಬದ ಜೊತೆ ಸಮಯ
ಹಂಚಿಕೊಂಡರು. ಇದು ಅವರ ಉದಾರ ಮನಸ್ಸಿಗೆ ಒಂದು ಉತ್ತಮ ಉದಾಹರಣೆ.

ಸಂಶೋಧನಾ ಪ್ರಸ್ತಾವನೆಗಳನ್ನು ತೆಗೆದುಕೊಂಡು ಹೋದಾಗ, ಅದು ಅವ್ಯವಸ್ಥಿತ ಬರವಣಿಗೆಯಾಗಿತ್ತು. ಅದನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕುರಿತು ಮಾರ್ಗದರ್ಶನ ನೀಡಿದರು. ಅಲ್ಲದೆ, ಬರವಣಿಗೆಯ ಶೈಲಿ ಮತ್ತು ರೂಪದಲ್ಲಿ
ಮಾರ್ಪಾಡು ಮಾಡಲು ಪ್ರೋತ್ಸಾಹಿಸಿದರು. ಅವರ ಸಕಾಲದ ಮಾರ್ಗದರ್ಶನದಿಂದ
ನನ್ನ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಾನು ಡಾಕ್ಟರೇಟ್ ಪದವಿಯನ್ನು ಗಳಿಸಲು ಸಾಧ್ಯವಾಯಿತು. ಅವರನ್ನು ನನ್ನ ಮಾರ್ಗದರ್ಶಕ ಎಂದು ಹೆಮ್ಮೆಪಟ್ಟು ಕರೆಯುತ್ತೇನೆ ಮತ್ತು ಅವರ ಅಧ್ಯಯನದ ಹಾದಿಯನ್ನು ಅನುಸರಿಸುತ್ತೇನೆ.

ಅಸ್ಥಾದಿಯವರ ಅಭ್ಯಾಸ ಕೇವಲ ಅಕಾಡೆಮಿಕ್ ಮಟ್ಟದಲ್ಲಿ ಮಾತ್ರವಲ್ಲ, ಸಮಕಾಲೀನ, ಸೈದ್ಧಾಂತಿಕ ಮತ್ತು ನೈತಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಮೈತ್ರಿ, ಮಾರ್ಗದರ್ಶನ, ಮತ್ತು ಅಭ್ಯಾಸದ ಮೂಲಕ ಅವರು ಹದವಾಗಿ ನನ್ನನ್ನು ಬೆಳೆಸಿದ್ದು, ಅವರು ನನಗೆ ಪ್ರೇರಣೆ ಮತ್ತು ಆಶೀರ್ವಾದದ ಮೂಲರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

2 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

2 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

2 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

14 hours ago