Andolana originals

ಅಸ್ಸಾದಿಯವರ ಶಿಷ್ಯನಾಗಿದ್ದೇ ಅವಿಸ್ಮರಣೀಯ

• ಆದಿತ್ಯ ಸೊಂಡಿ, ಹಿರಿಯ ವಕೀಲರು, ಸುಪ್ರೀಂ ಕೋರ್ಟ್, ಹೊಸದಿಲ್ಲಿ

ಡಾ.ಮುಜಾಫರ್ ಅಸ್ಸಾದಿಯವರ ಶಿಷ್ಯನಾಗಿರುವುದು ನನ್ನ ಭಾಗ್ಯ ಎಂದು ನಂಬುತ್ತೇನೆ. ನಮ್ಮ ಭೇಟಿಯು ಯೋಜಿತವಲ್ಲದಿದ್ದರೂ, ಅದು ತಪ್ಪದೇ ಒಂದು ದೈವೀಕೃತ್ಯವಾಯಿ ತೇನೋ ಅನಿಸುತ್ತದೆ. 2007ರಲ್ಲಿ ನಾನು ನನ್ನ ಪಿಎಚ್.ಡಿ.ಗೆ ಸೇರುವ ಯೋಜನೆ ಮಾಡುತಿದ್ದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದ ಅರೆಬರೆ ಸಹಕಾರದ ತೊಂದರೆಯಿಂದ ಬೇಸರಗೊಂಡು, ಅದನ್ನು ತಳ್ಳಿಹಾಕಿದ್ದೆ. ನನ್ನ ಹಿಂದಿ ಮಾಸ್ಟರ್ ಡಾ. ಇಕ್ವಾಲ್ ಅಹ್ಮದ್ (ನನಗೆ ಪಿಎಚ್.ಡಿ.ಗೆ ಪ್ರೇರೇಪಿಸಿದ ಮಹತ್ವದ ವ್ಯಕ್ತಿ) ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಅಸ್ಸಾದಿಯವರ ಶಿಷ್ಯನಾಗಿದ್ದೇ ನಿಸ್ವಾರ್ಥ ಸ್ನೇಹಭಾವ ಅವಿಸ್ಮರಣೀಯ ಸುಳಿವು ನೀಡಿದರು.

ಅವರು ಮೈಸೂರಿನಲ್ಲಿ ಬೆಳೆದವರಾಗಿದ್ದು, ಅದನ್ನು ಒಂದು ಕಲಿಕೆಗೆ ಸೂಕ್ತ ಸ್ಥಳವೆಂದು ತಿಳಿದಿದ್ದರು. ಅಸ್ಥಾದಿ ಯವರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಅವರ ಸಂಶೋಧನಾ ಕ್ಷೇತ್ರಗಳು ನನ್ನ ವೈಯಕ್ತಿಕ ಮತ್ತು ಸಾಮಾಜಿಕ ಆಸಕ್ತಿಯ ವಿಷಯಗಳಾಗಿದ್ದವು. ಹಾಗಾಗಿ ಅವರ ಸಂಪರ್ಕಕ್ಕೆ ಬಂದೆ. ಈ ರೀತಿಯಾಗಿ ಆರಂಭವಾಯಿತು mentorship, ಸ್ನೇಹ ಮತ್ತು ಮಾರ್ಗ ದರ್ಶನದ ಒಂದು ಚಿರಸ್ಥಾಯಿ ಸಂಬಂಧ.

ಶ್ರೇಷ್ಠ ಜ್ಞಾನ ಮತ್ತು ವಿಶ್ಲೇಷಣೆಯ ಮಾದರಿ: ಅಸ್ಸಾದಿಯವರು ಸುಲಭವಾಗಿ ಗಮನ ಸೆಳೆಯುವಂಥ ಜ್ಞಾನ ಮತ್ತು ವಿಶ್ಲೇಷಣೆಯ ಸಾಮರ್ಥ್ಯ ಹೊಂದಿದ್ದರು. ಅವರ ವಿದ್ವತ್ತು ಮತ್ತು ಆಳವಾದ ಅಧ್ಯಯನವು ನನ್ನಂತಹವರಿಗಿಂತ ಅನೇಕಾನೇಕ ಮೆಟ್ಟಿಲುಗಳಷ್ಟು ಮುಂದೆ ಇತ್ತು. ಆದರೂ ಅವರು ನನ್ನಂತಹವರಿಗೆ ಅವಶ್ಯವಾಗಿರುವ ಧೀಮಂತಿಕೆಯನ್ನು ತೋರಿಸಿಕೊಟ್ಟರು. ನನ್ನ ಪ್ರಾಥಮಿಕ ನನ್ನ ಪಿಎಚ್.ಡಿ ನಂತರ, ಅವರು ಡಾ.ಇನ್ಸಾಲ್ ಅಹ್ಮದ್ ಮತ್ತು ನನಗೆ ಮೈಸೂರಿನಲ್ಲಿ ಬಿರಿಯಾನಿ ಉಪಚಾರ ಮಾಡಿದರು. ಮತ್ತೊಮ್ಮೆ, ತಮ್ಮ ಮನೆಯಲ್ಲಿಯೇ ಭೋಜನಕ್ಕೆ ಕರೆದು, ಕುಟುಂಬದ ಜೊತೆ ಸಮಯ
ಹಂಚಿಕೊಂಡರು. ಇದು ಅವರ ಉದಾರ ಮನಸ್ಸಿಗೆ ಒಂದು ಉತ್ತಮ ಉದಾಹರಣೆ.

ಸಂಶೋಧನಾ ಪ್ರಸ್ತಾವನೆಗಳನ್ನು ತೆಗೆದುಕೊಂಡು ಹೋದಾಗ, ಅದು ಅವ್ಯವಸ್ಥಿತ ಬರವಣಿಗೆಯಾಗಿತ್ತು. ಅದನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕುರಿತು ಮಾರ್ಗದರ್ಶನ ನೀಡಿದರು. ಅಲ್ಲದೆ, ಬರವಣಿಗೆಯ ಶೈಲಿ ಮತ್ತು ರೂಪದಲ್ಲಿ
ಮಾರ್ಪಾಡು ಮಾಡಲು ಪ್ರೋತ್ಸಾಹಿಸಿದರು. ಅವರ ಸಕಾಲದ ಮಾರ್ಗದರ್ಶನದಿಂದ
ನನ್ನ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ನಾನು ಡಾಕ್ಟರೇಟ್ ಪದವಿಯನ್ನು ಗಳಿಸಲು ಸಾಧ್ಯವಾಯಿತು. ಅವರನ್ನು ನನ್ನ ಮಾರ್ಗದರ್ಶಕ ಎಂದು ಹೆಮ್ಮೆಪಟ್ಟು ಕರೆಯುತ್ತೇನೆ ಮತ್ತು ಅವರ ಅಧ್ಯಯನದ ಹಾದಿಯನ್ನು ಅನುಸರಿಸುತ್ತೇನೆ.

ಅಸ್ಥಾದಿಯವರ ಅಭ್ಯಾಸ ಕೇವಲ ಅಕಾಡೆಮಿಕ್ ಮಟ್ಟದಲ್ಲಿ ಮಾತ್ರವಲ್ಲ, ಸಮಕಾಲೀನ, ಸೈದ್ಧಾಂತಿಕ ಮತ್ತು ನೈತಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಮೈತ್ರಿ, ಮಾರ್ಗದರ್ಶನ, ಮತ್ತು ಅಭ್ಯಾಸದ ಮೂಲಕ ಅವರು ಹದವಾಗಿ ನನ್ನನ್ನು ಬೆಳೆಸಿದ್ದು, ಅವರು ನನಗೆ ಪ್ರೇರಣೆ ಮತ್ತು ಆಶೀರ್ವಾದದ ಮೂಲರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

11 hours ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

11 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

12 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

13 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

13 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

16 hours ago