ದಟ್ಟಕಾಡಿನ ನಡುವೆ ಗೂಡುಗಳಂತಹ ಮನೆಯಲ್ಲಿ ಉಸಿರು ಕೈಯಲ್ಲಿ ಹಿಡಿದು ದಿನ ಕಳೆಯುತ್ತಿದ್ದ ಇಂಡಿಗನತ್ತ ಗ್ರಾಮದ ಜನರ ಪಾಡುಗಳನ್ನು ಮಾನವೀಯತೆಯ ಅಂತರಂಗದ ಕಣ್ಣಿನಿಂದ ನೋಡಿ, ಸವಿಸ್ತಾರವಾದ ವರದಿ (ಮೇ 13ರ ಸಂಚಿಕೆ) ಮಾಡಿದ್ದಕ್ಕೆ ‘ಆಂದೋಲನ’ ದಿನಪತ್ರಿಕೆಗೆ ಧನ್ಯ ವಾದಗಳು. ಈ ವರದಿಯ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳಿ ಮೂರ್ನಾಲ್ಕು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ, ನೊಂದವರ ಧ್ವನಿಗೆ ಕಿವಿಯಾದ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರ ಕಾರ್ಯದಕ್ಷತೆ ಪ್ರಶಂಸಾರ್ಹ.
ಏ.26ರಂದು ಲೋಕಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಕಾರಣಗಳೇನಾದರೂ ಆಗಿರಲಿ, ತಪ್ಪು ಮಾಡಿದವರಿಗೆ ಶಿಕ್ಷೆಯೂ ಆಗಬೇಕು. ಆದರೆ, ಕಾನೂನು ಅರಿವಿಲ್ಲದ ನಿಷ್ಪಾಪಿ ಜನರು ಅನುಭವಿಸುತ್ತಿರುವ ಯಾತನೆಗಳನ್ನು ಕಣ್ಣಿಗೆ ಕಟ್ಟುವಂತೆ ಸಮಗ್ರವಾಗಿ ನೀಡಿದ್ದು, ಕೇವಲ ಜನರಲ್ಲದೆ, ಅಲ್ಲಿನ ಜಾನುವಾರುಗಳೂ ಮೇವು, ನೀರು ಇಲ್ಲದೆ ಅಸು ನೀಗುವಂತಹ ಸ್ಥಿತಿಗೆ ತಲುಪಿದ್ದ ವರದಿಗಾರಿಕೆ ಓದುಗರನ್ನು ಚಿಂತನೆಗೆ ಹಚ್ಚಿದೆ ಎಂದರೆ ಅತಿಶಯೋಕ್ತಿ ಅಲ್ಲ. ‘ಆಂದೋಲನ’ದ ಇಂತಹ ಮಾನವೀಯ ವರದಿಗಳ ಜೈತ್ರಯಾತ್ರೆ ನಿರಂತರವಾಗಿ ಮುಂದುವರಿಯಲಿ.
-ಎಂ.ಜಿ.ರಂಗಸ್ವಾಮಯ್ಯ, ಭೀಮನಗರ, ಚಾಮರಾಜನಗರ.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…
ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…
ನವೀನ್ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…