Andolana originals

137 ವರ್ಷ ದಾಟಿ ಮುನ್ನಡೆದ ಸರ್ಕಾರಿ ಶಾಲೆ!

ಹೇಮಂತ್ ಕುಮಾರ್

ಮಂಡ್ಯ: ಈ ಸರ್ಕಾರಿ ಶಾಲೆಗೆ ೧೩೭ ವರ್ಷ… ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ೪೧… ಒಂದು ಕಾಲದಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಕ್ಷರ ಕಲಿಕೆಗೆ ಸಾಕ್ಷಿಯಾಗಿದ್ದ ಶಾಲೆ ಇಂದು ವಿದ್ಯಾರ್ಥಿಗಳ ಬರ ಎದುರಿಸುತ್ತಿದೆ.

ಇದು ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಯ ಹಳೇ ನಗರದ ಟೌನ್ ಮಿಡ್ಲ್ ಸ್ಕೂಲ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಸ್ಥಿತಿಗತಿ. ೧೮೮೯ರಲ್ಲಿ ಸ್ಥಾಪನೆಗೊಂಡ ಈ ಶಾಲೆಗೀಗ ೧೩೭ವರ್ಷ. ಇತ್ತೀಚಿನ ವರ್ಷಗಳವರೆಗೆ ತನ್ನದೇ ಆದ ಖದರ್ ಹೊಂದಿದ್ದ ಈ ಶಾಲೆ ಹಳೇ ಮಂಡ್ಯದ ಏಕೈಕ ಶಾಲೆಯಾಗಿದೆ. ವಿಶಾಲವಾದ ಆವರಣ ಹೊಂದಿದ್ದ ಈ ಶಾಲೆ ಬಹಳಷ್ಟು ವರ್ಷಗಳ ಕಾಲ ತಾಲ್ಲೂಕು ಕಚೇರಿಗೂ ಅವಕಾಶ ನೀಡಿತ್ತು. ಇದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಶಾಸಕ ದಿ.ಎಚ್.ಡಿ.ಚೌಡಯ್ಯ ಸೇರಿದಂತೆ ಅನೇಕ ಗಣ್ಯರು ಓದಿದ ಶಾಲೆ.

೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದ ಶಾಲೆಯಲ್ಲೀಗ ೪೧ ವಿದ್ಯಾರ್ಥಿಗಳಷ್ಟೇ ವ್ಯಾಸಂಗ ಮಾಡುತ್ತಿದ್ದಾರೆ. ೧೩ ಕೊಠಡಿಗಳಿವೆ! ಓರ್ವ ಮುಖ್ಯ ಶಿಕ್ಷಕ, ಮೂವರು ಶಿಕ್ಷಕರು ಇರುವ ಈ ಶಾಲೆ ಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಇತ್ತೀಚೆಗೆ ಈ ಶಾಲೆಯಲ್ಲಿ ೧ನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮ ಕೂಡ ಆರಂಭವಾಗಿದೆ. ಸದ್ಯ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳನ್ನುಆರಂಭಿಸಲಾಗುತ್ತಿದ್ದು, ಟಿವಿ, ಡೆಸ್ಕ್‌ಗಳೂ, ಕುರ್ಚಿಗಳ ವ್ಯವಸ್ಥೆ ಇದೆ. ಆದರೆ ಇನ್ನೂ ಹಲವು ಸೌಲಭ್ಯಗಳ ಅಗತ್ಯವಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಡಿ.ಕೆ.ನಾಗರಾಜು ಅವರು. ಶಾಲಾವರಣದಲ್ಲಿ ನೆರಳು ನೀಡುವ ಮರಗಳಿದ್ದು, ಮಕ್ಕಳು ಊಟ ಮಾಡಲು ಸೂಕ್ತವಾದ ವಾತಾವರಣವಿದೆ. ಇತ್ತೀಚೆಗೆ ಸುಣ್ಣ ಬಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಹಳೆಯ ಹೆಂಚಿನ ಮನೆಯ ಎತ್ತರದ ಶಾಲೆ ಕಟ್ಟಡವು ಇಂದಿಗೂ ಸುಸ್ಥಿತಿಯ ಲ್ಲಿದ್ದು, ಹಿಂಭಾಗದಲ್ಲಿ ಹೆಚ್ಚುವರಿ ಕೊಠಡಿಗಳಿವೆ. ಆದರೆ,ಕಾಂಪೌಂಡ್ ಅಲ್ಲಲ್ಲಿ ಕುಸಿದಿದ್ದು ಸರಿಪಡಿಸಬೇಕಿದೆ.

” ಶತಮಾನ ಪೂರೈಸಿರುವ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ, ಕಟ್ಟಡಗಳ ಪರಂಪರೆಯನ್ನು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗಬೇಕಿದೆ.”

-ಮಧು ಜಿ.ಮಾದೇಗೌಡ, ವಿಧಾನಪರಿಷತ್ ಸದಸ್ಯ,

” ದಕ್ಷಿಣ ಪದವೀಧರರ ಕ್ಷೇತ್ರ ಶತಮಾನೋತ್ಸವ ಕಂಡ ಶಾಲೆಗಳನ್ನು ಗುರುತಿಸಿ ಹಂತ ಹಂತವಾಗಿ ಅನುದಾನ ದೊರಕಿಸುವ ಕೆಲಸ ನಡೆದಿದೆ. ಈಗಾಗಲೇ ಶಾಲೆಗೆ ಸೇರಿದ ಜಾಗದ ಹದ್ದುಬಸ್ತು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಹಸಿಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಶಾಲಾಭಿವೃದ್ಧಿ ಸಮಿತಿಗಳಿಗೂ ಶಾಲೆಗೆ ಸೇರಿದ ಸರ್ಕಾರಿ ಜಾಗವನ್ನು ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗಿದೆ.”

-ಮಹದೇವು, ಬಿಇಒ, ಮಂಡ್ಯ ದಕ್ಷಿಣ ವಲಯ

” ಮಂಡ್ಯ ಹಳೇ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾನು ಮುಖ್ಯೋಪಾಧ್ಯಾಯನಾಗಿ ಬಂದು ನಾಲ್ಕೈದು ವರ್ಷಗಳಾಗಿವೆ. ಒಂದನೇ ತರಗತಿ ಆರಂಭಿಸಿದ್ದು, ಕಟ್ಟಡವನ್ನು ಇಂದಿನ ಅಗತ್ಯಗಳಿಗೆ ಮಾರ್ಪಾಡು ಮಾಡಲಾಗಿದೆ. ಸುಣ್ಣಬಣ್ಣ ಮಾಡಿಸಿ ಒಂದು ಹೊಸ ರೂಪು ನೀಡಿದ್ದರಿಂದ ಮಕ್ಕಳ ಪ್ರವೇಶಾತಿ ಏರಿಕೆ ಕಂಡಿದೆ. ಶಾಲೆಯಲ್ಲೀಗ ೪೧ ವಿದ್ಯಾರ್ಥಿಗಳಷ್ಟೇ ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಶಿಕ್ಷಕರಿದ್ದಾರೆ. ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನೂ ಆರಂಭಿಸಲಾಗುವುದು.”

-ಡಿ.ಕೆ.ನಾಗರಾಜು, ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೇನಗರ, ಮಂಡ್ಯ

” ಈ ಶಾಲೆಯಲ್ಲಿ ನಾವು ಓದುತ್ತಿದ್ದ ಸಂದರ್ಭದಲ್ಲಿ ಒಂದರಿಂದ ೭ನೇ ತರಗತಿಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ಆಗ ಆಟೋಟಗಳಿಗೆ ಸಾಕಷ್ಟು ಜಾಗವಿತ್ತು. ಸುತ್ತಮುತ್ತಲ ಹಳ್ಳಿಗಳಿಂದ ಹುಡುಗರು ಸೈಕಲ್‌ನಲ್ಲೇ ಬಂದು – ಹೋಗುತ್ತಿದ್ದರು. ಈಗ ಎಲ್ಲ ಬದಲಾವಣೆಯಾಗಿದೆ. ಶಾಲೆಯ ಜಾಗವನ್ನು ಇತರೆ ಉದ್ದೇಶಕ್ಕೆ ಸರ್ಕಾರ ಬಳಸಿಕೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿದೆ.”

-ಗುರುಮೂರ್ತಿ, ಹಿರಿಯ ವಿದ್ಯಾರ್ಥಿ, ಟೌನ್ ಮಿಡ್ಲ್ ಸ್ಕೂಲ್

” ಇದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾದ್ದರಿಂದ ಈ ವ್ಯಾಪ್ತಿಯಲ್ಲಿ ಟೌನ್ ಮಿಡ್ಲ್ ಸ್ಕೂಲ್ ಎಂದೇ ಕರೆಯಲಾಗುತ್ತಿತ್ತು. ಆ ದಿನಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಂದ ಶಾಲೆ ತುಂಬಿ ತುಳುಕುತ್ತಿತ್ತು. ವಿಶಾಲವಾದ ಜಾಗವೂ ಇತ್ತು. ಈಗ ಮಕ್ಕಳ ಸಂಖ್ಯೆ ಕ್ಷೀಣಿಸಿದಂತೆ, ಜಾಗವೂ ಕಿರಿದಾಗುತ್ತಿದೆ.”

 -ಚಂದ್ರಕುಮಾರ್, ಉದ್ಯಮಿ

ಜಿಲ್ಲಾದ್ಯಂತ ಶತಮಾನ ಪೂರೈಸಿದ ೬೬ ಶಾಲೆಗಳು:  ಮಂಡ್ಯ ಜಿಲ್ಲಾದ್ಯಂತ ಶತಮಾನ ಪೂರೈಸಿರುವ ೬೬ ಶಾಲೆಗಳಿವೆ ಎಂದು ಮಂಡ್ಯ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಕೆಆರ್.ಪೇಟೆ ತಾಲ್ಲೂಕಿನಲ್ಲಿ ೧೩ ಶಾಲೆಗಳು,ಮಳವಳ್ಳಿಯಲ್ಲಿ ೪, ಮಳವಳ್ಳಿಯಲ್ಲಿ ೧೨, ಉತ್ತರ ವಲಯದಲ್ಲಿ ೪, ದಕ್ಷಿಣ ವಲಯದಲ್ಲಿ ೨, ನಾಗಮಂಗಲದಲ್ಲಿ ೧೦ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ೧೫ ಶಾಲೆಗಳಿವೆ ಎಂದು ತಿಳಿದುಬಂದಿದೆ.

 

 

 

ಆಂದೋಲನ ಡೆಸ್ಕ್

Recent Posts

ಪರಿಷತ್‌ ಚುನಾವಣೆಯಲ್ಲಿ ಕ್ರಾಸ್‌ ವೋಟ್‌ ಮಾಡಿದ ಶಾಸಕರು ಗೊತ್ತಿದೆ ; ಎಚ್‌.ಡಿ.ಕುಮಾರಸ್ವಾಮಿ

ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…

3 hours ago

ಮಂಡ್ಯ | ಐವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…

3 hours ago

ಜೂನ್‌ 21ರಂದು ನೀಟ್‌ ಮರುಪರೀಕ್ಷೆ ; ಮೈಸೂರು ಜಿಲ್ಲೆಯಲ್ಲಿ 7886 ಪರೀಕ್ಷಾರ್ಥಿಗಳ ನೋಂದಣಿ

ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…

4 hours ago

ನೀಟ್‌ಗಾಗಿ ಟೆಲಿಗ್ರಾಂ ನಿಷೇಧ ; ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಕೋರ್ಟ್‌

ಹೊಸದಿಲ್ಲಿ : ನೀಟ್‌-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…

5 hours ago

ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ ; ಡಾ.ಎಚ್.ಸಿ.ಮಹದೇವಪ್ಪ

ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…

5 hours ago

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

13 hours ago