ಆಂದೋಲನ 50

ನಾಲ್ಕು ಜಲಾಶಯಗಳಿದ್ದರೂ ತಾಲ್ಲೂಕಿಗೆ ತಪ್ಪಿಲ್ಲ ನೀರಿನ ಬವಣೆ

ಕಬಿನಿ, ನುಗು, ತಾರಕ ಮತ್ತು ಹೆಬ್ಬಾಳ ಸೇರಿ ನಾಲ್ಕು ಜಲಾಶಯಗಳನ್ನು ಹೊಂದಿದ ಹಿರಿಮೆ ಎಚ್.ಡಿ. ಕೋಟೆ ತಾಲೂಕಿನದು. ಆದರೆ ದೀಪದ ಬುಡ ಕತ್ತಲು ಎಂಬಂತೆ ನೆರೆ ತಾಲ್ಲೂಕು ಮತ್ತು ರಾಜ್ಯಗಳಿಗೆ ಈ ಜಲಾಶಯಗಳಿಂದ ಹೆಚ್ಚಿನ ಪ್ರಯೋಜನ ಸಿಕ್ಕಿದೆ ಹೊರತು ತಾಲ್ಲೂಕಿನ ಎಲ್ಲ ಭಾಗಕ್ಕೆ ಇನ್ನೂ ನೀರು ಪೂರೈಕೆ ಸಾಧ್ಯವಾಗಿಲ್ಲ. ಸುಡು ಬಿಸಿಲ ಬೇಗೆಯ ದಿನಗಳಲ್ಲಿ ತಾಲ್ಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.

ಕಬಿನಿ ರಾಜ್ಯದ ಪ್ರವಾಸೋದ್ಯಮಕ್ಕೆ ಆಸರೆಯಾಗಿರುವುದು ನಿಜ. ಆದರೆ ನೀರಾವರಿ ದೃಷ್ಟಿಯಿಂದ ತಾಲೂಕಿಗಿಂತ ಹೆಚ್ಚಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಮತ್ತು ನೆರೆ ರಾಜ್ಯಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಈ ದೃಷ್ಟಿಯಿಂದ ತಾರಕ,ನುಗು ಮತ್ತು ಹೆಬ್ಬಾಳ ಜಲಾಶಯ ತಾಲ್ಲೂಕಿನ ರೈತರ ಜೀವನಾಡಿಗಳೆನಿಸಿವೆ. ಕಬಿನಿ ಜಲಾಶಯ ಸಾಮಾನ್ಯವಾಗಿ ಪ್ರತಿ ವರ್ಷವೂ ಭರ್ತಿಯಾಗುತ್ತದೆ. ಆದರೆ ಮಳೆ ನೀರನ್ನೇ ಆಶ್ರಯಿಸಿದ ಉಳಿದ ಮೂರು ಜಲಾಶಯಗಳು ಭರ್ತಿಯಾದ ವರ್ಷಗಳು ಕಡಿಮೆ. ತಾರಕ ಮತ್ತು ನುಗು ಜಲಾಶಯಗಳು ನಿರ್ಮಾಣವಾಗಿ ಬಹಳಷ್ಟು ವರ್ಷಗಳ ಕಾಲ ಭರ್ತಿಯೇ ಆಗಿರಲಿಲ್ಲ. ಖುಷಿಯ ವಿಚಾರವೆಂದರೆ ಕಳೆದ ನಾಲ್ಕು ವರ್ಷಗಳಿಂದ ಈ ಜಲಾಶಯಗಳು ನಿರಂತರವಾಗಿ ಭರ್ತಿಯಾಗುತ್ತಿವೆ.

ತಾರಕ ಜಲಾಶಯ

ಕೋಟೆಯಿಂದ ಐದು ಕಿ.ಮೀ. ದೂರದ ಪೆಂಜಹಳ್ಳಿ ಬಳಿ ಈ ಜಲಾಶಯ ನಿರ್ಮಾಣವಾಗಿದೆ. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೧೯೬೮ರಲ್ಲಿ ಈ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ೧,೭೦೦ ಕೋಟಿ ರೂ. ವೆಚ್ಚದ ಜಲಾಶಯ ಕಾಮಗಾರಿ ೧೯೭೪ರಲ್ಲಿ ಆರಂಭಗೊಂಡು, ೧೯೮೩ರಲ್ಲಿ ಪೂರ್ಣಗೊಂಡಿತ್ತು.

ತಾರಕ ಜಲಾಶಯ ಭರ್ತಿಯಾದರೆ ತಾಲೂಕಿನ ೧೭,೪೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಭಾಗ್ಯ ಲಭಿಸುತ್ತದೆ. ಗರಿಷ್ಠ ೩.೯೪೭ ಟಿಎಂಸಿ (೨೪೨೫ ಅಡಿ) ಸಾಮರ್ಥ್ಯದ ಈ ಜಲಾಶಯ ೨೦೦೫ರಿಂದ ೨೦೦೮ ರವರೆಗೆ ಮೂರು ವರ್ಷ ನಿರಂತರವಾಗಿ ಭರ್ತಿಯಾಗಿತ್ತು. ಐದು ವರ್ಷಗಳ ಬಳಿಕ ೨೦೧೮-೧೯ರಲ್ಲಿ ಭರ್ತಿಯಾಗಿತ್ತು. ನಂತರ ನಿರಂತರವಾಗಿ ಭರ್ತಿಯಾಗುತ್ತಾ ಬಂದಿದೆ.

ನುಗು ಜಲಾಶಯ

ಕೋಟೆಯಿಂದ ೧೫ ಕಿ.ಮೀ. ದೂರದ ಬೀರವಾಳ ಬಳಿ ಕಟ್ಟಲಾಗಿರುವ ನುಗು ಜಲಾಶಯ ನಿರ್ಮಾಣ ಕಾರ‌್ಯ ೧೯೪೬ರಲ್ಲಿ ಆರಂಭವಾಗಿ ೧೯೫೯ರಲ್ಲಿ ಪೂರ್ಣಗೊಂಡಿತ್ತು. ಜಲಾಶಯ ೧೧೦ ಅಡಿಯಿದ್ದು, ೯೮೪ ಚದರ ಮೀ ವಿಸ್ತೀರ್ಣ ಹೊಂದಿದೆ. ಇದು ೭೩೨೯ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ ೫.೪೪ ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಜಲಾಶಯ ೨೦೦೯ ಮತ್ತು ೨೦೧೩ರಲ್ಲಿ ಭರ್ತಿಯಾಗಿತ್ತು. ೨೦೧೮ರ ನಂತರ ಪ್ರತಿವರ್ಷವೂ ಭರ್ತಿಯಾಗುತ್ತಿದೆ.

ಹೆಬ್ಬಾಳ ಜಲಾಶಯ

ಹೆಬ್ಬಾಳ, ಹೆಬ್ಬಳ್ಳ ಎಂದು ಕರೆಸಿಕೊಳ್ಳುವ ಜಲಾಶಯ ಪುಟ್ಟ ಜಲಾಶಯವಾಗಿದ್ದು, ಧಾರಾಕಾರ ಮಳೆ ಸುರಿದಾಗ ಭರ್ತಿಯಾಗಿ ನೀರು ಹೊರ ಹರಿಯುತ್ತದೆ. ಈ ವೇಳೆ ಕಂಡು ಬರುವ ದೃಶ್ಯ ರಮಣೀಯವಾಗಿದೆ.

andolana

Recent Posts

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

14 mins ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

1 hour ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

3 hours ago

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

6 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

6 hours ago

ಓದುಗರ ಪತ್ರ: ಸೇತುವೆ ಅವ್ಯವಸ್ಥೆ; ಸಂಚಾರ ದುಸ್ತರ

ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…

6 hours ago