ಆಂದೋಲನ 50

ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ಕೋಟಿ ಅವರ ಬರವಣಿಗೆ ಇರಲಿಲ್ಲ : ಎಚ್‌ಸಿಎಂ

ಸಾರ್ಥಕ ಪಯಣ ಸಮಾರಂಭದಲ್ಲಿ ರಾಜಶೇಖರ ಕೋಟಿ ಅವರ ಬದುಕುನ್ನು ಸ್ಮರಿಸಿದ ಮಾಜಿ ಸಚಿವರು 

ತಿ.ನರಸೀಪುರ: ಧರ್ಮ, ಜಾತಿ, ಗುಂಪು, ಪಂಗಡದ ಬಗ್ಗೆ ಇರದೇ ವಸ್ತು ನಿಷ್ಠವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದ ರಾಜಶೇಖರ ಕೋಟಿ ಅವರು ವೃತ್ತಿಧರ್ಮಕ್ಕೆ ವಿರುದ್ಧ ಬರವಣಿಗೆ ಮಾಡಲಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ತಿ.ನರಸೀಪುರ ತಾಲ್ಲೂಕಿನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೋಟಿ ಅವರು ಜಾತಿ, ಧರ್ಮದ ಪ್ರೇರೇಪಣೆಗೆ ಒಳಗಾದವರಲ್ಲ. ಪಾಟೀಲ್ ಪುಟ್ಟಪ್ಪ, ಪಿ.ಲಂಕೇಶ್, ಪ್ರೊ.ಕೆ.ರಾಮದಾಸ್, ದೇವನೂರ ಮಹಾದೇವ, ರಘುರಾಮ್ ಶೆಟ್ಟಿ, ವೇದಾಂತ ಹೆಮ್ಮಿಗೆ, ಪ್ರೊ.ಲಿಂಗದೇವರು ಹಳೆಮನೆ, ಪ.ಮಲ್ಲೇಶ್ ಅವರಂತಹವರ ಜತೆಗೂಡಿ ಬಂದವರು. ಒಬ್ಬ ಹೋರಾಟಗಾರನಾಗಿದ್ದರಿಂದಲೇ ದಲಿತರು, ಕಾರ್ಮಿಕ, ರೈತ ಚಳವಳಿಯನ್ನು ಬೆಂಬಲಿಸಿ ಪ್ರೇರಣೆಯಾಗಿ ನಿಲ್ಲುತ್ತಿದ್ದರು ಎಂದು ಹೇಳಿದರು.

‘ಆಂದೋಲನ’ ಜನರ ಪರ ಮತ್ತು ಅಭಿವೃದ್ಧಿ ಪರವಾಗಿ ಇರುತ್ತದೆ. ಪ್ರಚೋದನಾಕಾರಿ ಮತ್ತು ಪತ್ರಿಕಾ ಮೂಲಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳದಂತೆ ನೋಡಿಕೊಂಡು ೫೦ ವರ್ಷಗಳ ಕಾಲ ಅದರಲ್ಲಿ ಯಶಸ್ವಿಯಾಗಿ ನಡೆದುಕೊಂಡಿದ್ದಾರೆ. ಕೋಟಿ ನಿಜವಾಗಿಯೂ ಕೋಟಿ. ಜಾತಿ, ಧರ್ಮ, ಗುಂಪು ಸೀಮಿತವಾಗಿಲ್ಲದೆ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ದೇಶ ಬಂಡವಾಳಶಾಹಿಗಳ ಕಪಿಮುಷ್ಠಿಯ ಹಿಡಿತದಲ್ಲಿ ಸಿಲುಕಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವ್ಯವಸ್ಥೆಯನ್ನು ಕತ್ತು ಹಿಸುಕಿ ಅದರ ಆಶುಂವನ್ನು ಭಂಗಗೊಳಿಸುವ ಕೆಲಸ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮೊದಲಿಗಿಂತಲೂ ಈಗ ಹೆಚ್ಚು ಜವಾಬ್ದಾರಿಯಿಂದ ಪತ್ರಿಕಾಧರ್ಮ ಅರಿತು ಕೆಲಸ ಮಾಡಬೇಕಾಗಿದೆ ಎಂದರು.
ಜಿ.ಜನಾರ್ಧನರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದನ್ನೂ ದೃಶ್ಯ ಮಾಧ್ಯಮದಲ್ಲಿ ದಿನಗಟ್ಟಲೇ ತೋರಿಸಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಿದರೆ ಆ ದೃಷ್ಯವನ್ನು ಒಂದು ಕ್ಷಣವೂ ತೋರಿಸಲ್ಲ ಅಂದರೆ ಮನಸ್ಸಿಗೆ ಎಷ್ಟು ನೋವಾಗಬಾರದು ಎಂದು ಪ್ರಶ್ನಿಸಿದರು.

ರಾಜಶೇಖರ ಕೋಟಿ ಅವರಾಗಲೀ ಅಥವಾ ‘ಆಂದೋಲನ’ವಾಗಲಿ ಎಂದೂ ಜಾಹೀರಾತಿನ ಹಿಂದೆ ಬಿದ್ದವರಲ್ಲ. ಸದಾ ಓದುಗರನ್ನು ನೋಡುವುದು ಅವರ ಬಯಕೆಯಾಗಿದೆ ಎಂದು ನುಡಿದರು.

ಇಂದು ನಾವು ನಗಬೇಕು ಅಥವಾ ನಗಿಸಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ. ಮುಖವನ್ನು ಆ ಕಡೆ ತಿರುಗಿಸಿಕೊಳ್ಳುವುದು, ಮುಖ ಗಂಟಾಕಿಕೊಳ್ಳುವುದು ಅಲ್ಲ. ಎದುರಿಗೆ ಬಂದು ಮಾತನಾಡಿಸಿದರೆ ಮುಖ ಬೇರೆ ಕಡೆಗೆ ತಿರುಗಿಸುವ ಬದಲಿಗೆ ಅವರನ್ನು ಮಾತನಾಡಿಸಿಬಿಟ್ಟರೆ ಮನಸ್ಸು ಹಗುರವಾಗಲಿದೆ ಎಂಬುದನ್ನು ಅರಿಯಬೇಕು ಎಂದರು.


‘ಆಂದೋಲನ’ ಐವತ್ತು ವರ್ಷಗಳನ್ನು ಕಳೆದರೂ ಮದುವಣಗಿತ್ತಿಯ ಸಡಗರ ಕಡಿಮೆ ಮಾಡಿಕೊಂಡಿಲ್ಲ. ಪತ್ರಿಕಾ ಧರ್ಮವನ್ನು ಬಿಟ್ಟು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ಪತ್ರಿಕೆಯು ಜನರ ನಂಬಿಕೆ ಉಳಿಸಿಕೊಂಡು ವಿಶ್ವಾರ್ಹತೆ ಇರಿಸಿಕೊಂಡಿದೆ. ಪ್ರಾದೇಶಿಕತೆ ಉಳಿಸಿಕೊಂಡು ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಪತ್ರಿಕೆಯನ್ನು ನಡೆಸುವುದು ಸುಲಭವಲ್ಲದಿದ್ದರೂ ಅದನ್ನು ಬೆಳೆಸಿರುವುದು ದೊಡ್ಡ ಸಾಧನೆ. ರಾಜಶೇಖರ ಕೋಟಿ ಅವರನ್ನು ನೆನಪಿಸಿಕೊಳ್ಳದೆ ‘ಆಂದೋಲನ’ದ ಬಗ್ಗೆ ಮಾತನಾಡಿದರೆ ಅಪೂರ್ಣವಾಗಲಿದೆ.

-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು.

andolanait

Recent Posts

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

6 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

6 hours ago

ರಾಮಚಂದ್ರರಾವ್‌ ರಾಸಲೀಲೆ ಪ್ರಕರಣ: ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್‌ ಅನುಚಿತ ವರ್ತನೆ ಕುರಿತ ವೈರಲ್‌ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…

6 hours ago

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಮ್ಯಾಕ್ರನ್‌ ಜೊತೆ ಮೋದಿ ಮಾತುಕತೆ

ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ…

6 hours ago

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ನಿಧನ

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…

9 hours ago

ರಾಜ್ಯದಲ್ಲಿ ಮತ್ತೆರಡು ದಿನ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್‌, ಕಲಬುರ್ಗಿ,…

9 hours ago