ಆಂದೋಲನ 50

ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ಕೋಟಿ ಅವರ ಬರವಣಿಗೆ ಇರಲಿಲ್ಲ : ಎಚ್‌ಸಿಎಂ

ಸಾರ್ಥಕ ಪಯಣ ಸಮಾರಂಭದಲ್ಲಿ ರಾಜಶೇಖರ ಕೋಟಿ ಅವರ ಬದುಕುನ್ನು ಸ್ಮರಿಸಿದ ಮಾಜಿ ಸಚಿವರು 

ತಿ.ನರಸೀಪುರ: ಧರ್ಮ, ಜಾತಿ, ಗುಂಪು, ಪಂಗಡದ ಬಗ್ಗೆ ಇರದೇ ವಸ್ತು ನಿಷ್ಠವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದ ರಾಜಶೇಖರ ಕೋಟಿ ಅವರು ವೃತ್ತಿಧರ್ಮಕ್ಕೆ ವಿರುದ್ಧ ಬರವಣಿಗೆ ಮಾಡಲಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ತಿ.ನರಸೀಪುರ ತಾಲ್ಲೂಕಿನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೋಟಿ ಅವರು ಜಾತಿ, ಧರ್ಮದ ಪ್ರೇರೇಪಣೆಗೆ ಒಳಗಾದವರಲ್ಲ. ಪಾಟೀಲ್ ಪುಟ್ಟಪ್ಪ, ಪಿ.ಲಂಕೇಶ್, ಪ್ರೊ.ಕೆ.ರಾಮದಾಸ್, ದೇವನೂರ ಮಹಾದೇವ, ರಘುರಾಮ್ ಶೆಟ್ಟಿ, ವೇದಾಂತ ಹೆಮ್ಮಿಗೆ, ಪ್ರೊ.ಲಿಂಗದೇವರು ಹಳೆಮನೆ, ಪ.ಮಲ್ಲೇಶ್ ಅವರಂತಹವರ ಜತೆಗೂಡಿ ಬಂದವರು. ಒಬ್ಬ ಹೋರಾಟಗಾರನಾಗಿದ್ದರಿಂದಲೇ ದಲಿತರು, ಕಾರ್ಮಿಕ, ರೈತ ಚಳವಳಿಯನ್ನು ಬೆಂಬಲಿಸಿ ಪ್ರೇರಣೆಯಾಗಿ ನಿಲ್ಲುತ್ತಿದ್ದರು ಎಂದು ಹೇಳಿದರು.

‘ಆಂದೋಲನ’ ಜನರ ಪರ ಮತ್ತು ಅಭಿವೃದ್ಧಿ ಪರವಾಗಿ ಇರುತ್ತದೆ. ಪ್ರಚೋದನಾಕಾರಿ ಮತ್ತು ಪತ್ರಿಕಾ ಮೂಲಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳದಂತೆ ನೋಡಿಕೊಂಡು ೫೦ ವರ್ಷಗಳ ಕಾಲ ಅದರಲ್ಲಿ ಯಶಸ್ವಿಯಾಗಿ ನಡೆದುಕೊಂಡಿದ್ದಾರೆ. ಕೋಟಿ ನಿಜವಾಗಿಯೂ ಕೋಟಿ. ಜಾತಿ, ಧರ್ಮ, ಗುಂಪು ಸೀಮಿತವಾಗಿಲ್ಲದೆ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ದೇಶ ಬಂಡವಾಳಶಾಹಿಗಳ ಕಪಿಮುಷ್ಠಿಯ ಹಿಡಿತದಲ್ಲಿ ಸಿಲುಕಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವ್ಯವಸ್ಥೆಯನ್ನು ಕತ್ತು ಹಿಸುಕಿ ಅದರ ಆಶುಂವನ್ನು ಭಂಗಗೊಳಿಸುವ ಕೆಲಸ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮೊದಲಿಗಿಂತಲೂ ಈಗ ಹೆಚ್ಚು ಜವಾಬ್ದಾರಿಯಿಂದ ಪತ್ರಿಕಾಧರ್ಮ ಅರಿತು ಕೆಲಸ ಮಾಡಬೇಕಾಗಿದೆ ಎಂದರು.
ಜಿ.ಜನಾರ್ಧನರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದನ್ನೂ ದೃಶ್ಯ ಮಾಧ್ಯಮದಲ್ಲಿ ದಿನಗಟ್ಟಲೇ ತೋರಿಸಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಿದರೆ ಆ ದೃಷ್ಯವನ್ನು ಒಂದು ಕ್ಷಣವೂ ತೋರಿಸಲ್ಲ ಅಂದರೆ ಮನಸ್ಸಿಗೆ ಎಷ್ಟು ನೋವಾಗಬಾರದು ಎಂದು ಪ್ರಶ್ನಿಸಿದರು.

ರಾಜಶೇಖರ ಕೋಟಿ ಅವರಾಗಲೀ ಅಥವಾ ‘ಆಂದೋಲನ’ವಾಗಲಿ ಎಂದೂ ಜಾಹೀರಾತಿನ ಹಿಂದೆ ಬಿದ್ದವರಲ್ಲ. ಸದಾ ಓದುಗರನ್ನು ನೋಡುವುದು ಅವರ ಬಯಕೆಯಾಗಿದೆ ಎಂದು ನುಡಿದರು.

ಇಂದು ನಾವು ನಗಬೇಕು ಅಥವಾ ನಗಿಸಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ. ಮುಖವನ್ನು ಆ ಕಡೆ ತಿರುಗಿಸಿಕೊಳ್ಳುವುದು, ಮುಖ ಗಂಟಾಕಿಕೊಳ್ಳುವುದು ಅಲ್ಲ. ಎದುರಿಗೆ ಬಂದು ಮಾತನಾಡಿಸಿದರೆ ಮುಖ ಬೇರೆ ಕಡೆಗೆ ತಿರುಗಿಸುವ ಬದಲಿಗೆ ಅವರನ್ನು ಮಾತನಾಡಿಸಿಬಿಟ್ಟರೆ ಮನಸ್ಸು ಹಗುರವಾಗಲಿದೆ ಎಂಬುದನ್ನು ಅರಿಯಬೇಕು ಎಂದರು.


‘ಆಂದೋಲನ’ ಐವತ್ತು ವರ್ಷಗಳನ್ನು ಕಳೆದರೂ ಮದುವಣಗಿತ್ತಿಯ ಸಡಗರ ಕಡಿಮೆ ಮಾಡಿಕೊಂಡಿಲ್ಲ. ಪತ್ರಿಕಾ ಧರ್ಮವನ್ನು ಬಿಟ್ಟು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ಪತ್ರಿಕೆಯು ಜನರ ನಂಬಿಕೆ ಉಳಿಸಿಕೊಂಡು ವಿಶ್ವಾರ್ಹತೆ ಇರಿಸಿಕೊಂಡಿದೆ. ಪ್ರಾದೇಶಿಕತೆ ಉಳಿಸಿಕೊಂಡು ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಪತ್ರಿಕೆಯನ್ನು ನಡೆಸುವುದು ಸುಲಭವಲ್ಲದಿದ್ದರೂ ಅದನ್ನು ಬೆಳೆಸಿರುವುದು ದೊಡ್ಡ ಸಾಧನೆ. ರಾಜಶೇಖರ ಕೋಟಿ ಅವರನ್ನು ನೆನಪಿಸಿಕೊಳ್ಳದೆ ‘ಆಂದೋಲನ’ದ ಬಗ್ಗೆ ಮಾತನಾಡಿದರೆ ಅಪೂರ್ಣವಾಗಲಿದೆ.

-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು.

andolanait

Recent Posts

ದೆಹಲಿ: ಇಂದು 108 ಇಂಡಿಗೋ ವಿಮಾನಗಳ ಹಾರಾಟ ರದ್ದು

ನವದೆಹಲಿ: ಇಂಡಿಗೋ ವಿಮಾನದ ಅಧ್ವಾನ ಆರನೇ ದಿನವೂ ಮುಂದುವರಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನೂರಕ್ಕೂ…

4 mins ago

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

1 hour ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

1 hour ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

2 hours ago

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

2 hours ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

2 hours ago