ಆಂದೋಲನ 50

ಕೋಟೆಗೆ ಕೋಟಿಯವರ ನಂಟು ನೂರೆಂಟು

-ಮಂಜು ಕೋಟೆ

ಅವಿಭಜಿತ ಎಚ್.ಡಿ.ಕೋಟೆಯ ಸಮಸ್ಯೆಗಳಿಗೆ ಕಳೆದ ನಲವತ್ತು ವರ್ಷಗಳಿಂದ ಸ್ಪಂದಿಸಿದ ಆಂದೋಲನ ದಿನಪತ್ರಿಕೆ ಇಂದಿಗೂ ಈ ಕೈಂಕರ‌್ಯ ಮುಂದುವರಿಸುತ್ತಾ ಬಂದಿದೆ. ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿಯವರು ಎಚ್.ಡಿ.ಕೋಟೆ ತಾಲ್ಲೂಕಿನ ಬಗ್ಗೆ ಸದಾ ಕಾಳಜಿಯನ್ನು ಇಟ್ಟುಕೊಂಡಿದ್ದರು. ತಾಲ್ಲೂಕಿನ ಸಮಸ್ಯೆಗಳು, ಬಡತನ, ಇಲ್ಲಿನ ಜಾತಿ ವ್ಯವಸ್ಥೆ, ಬಡವರ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ಹೀಗೆ ಪ್ರತಿಯೊಂದು ವಿಚಾರಗಳನ್ನು ಹತ್ತಿರದಿಂದ ಕಂಡಿದ್ದರಿಂದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಜನರೊಂದಿಗೆ ಅವರ ನಂಟು ಬಲವಾಗಿತ್ತು.

ಅದು ೧೯೮೨-೮೩ರ ಸಂದರ್ಭ. ತಾಲ್ಲೂಕಿನ ದೇವಲಾಪುರ ಗ್ರಾಮದ ಅರಣ್ಯ ಇಲಾಖೆಯ ವಶದಲ್ಲಿದ್ದ ಸುಮಾರು ೩೫೦ ಎಕರೆ ಕುರುಚಲು ಕಾಡನ್ನು ಎಲ್ಲಾ ವರ್ಗದ ಸುಮಾರು ೧೫೦ ಭೂಹೀನ ಬಡ ರೈತರಿಗೆ ಹಂಚಿಕೆ ಮಾಡಲಾಗಿತ್ತು. ಅಲ್ಲಿ ಬೆಳೆಯನ್ನು ಹಾಕಲಾಗಿತ್ತು. ಆದರೆ ಬೆಳೆ ಕಟಾವಿಗೆ ಬರುವ ಹಂತದಲ್ಲಿ ಅರಣ್ಯ ಇಲಾಖೆ ಜಾಗ ತನಗೆ ಸೇರಿದ್ದೆಂದು ಅದನ್ನು ವಶಪಡಿಸಿಕೊಳ್ಳುವ ಜೊತೆಗೆ ಹಂಚಿಕೆಯ ಮುಂದಾಳತ್ವ ವಹಿಸಿದ್ದವರ ಮೇಲೆ ಪ್ರಕರಣ ಹಾಕಿ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ರೈತರ ಬೆಂಬಲಕ್ಕೆ ನಿಂತ ಆಂದೋಲನ ಪತ್ರಿಕೆ ಕಾನೂನು ಮತ್ತು ರಾಜಕೀಯ ಪರಿಹಾರದ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಲು ಶ್ರಮಿಸಿತು.

೧೯೯೬ ಡಿ.೨೩ರಂದು ಮೈಸೂರಿನಲ್ಲಿ ಆಯೋಜನೆಯಾಗಿದ್ದ ಶೋಷಿತ ಶಕ್ತಿಗಳ ಐಕ್ಯತಾ ಸಮಾವೇಶಕ್ಕೆ ಸುಮಾರು ೩೦೦೦ದಷ್ಟು ಜನ ೨೫-೩೦ ಲಾರಿಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಲಾರಿ ಉರುಳಿ ಬಿದ್ದು ೧೦ ಜನ ಮೃತಪಟ್ಟರು. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸರಕಾರದಿಂದ ಮೃತರ ಕುಟುಂಬಕ್ಕಾಗಲಿ, ಗಾಯಾಳುಗಳಿಗಾಗಲಿ ಯಾವುದೇ ಪರಿಹಾರ ಸಿಗಲಿಲ್ಲ. ಆಗ ರಾಜಶೇಖರ ಕೋಟಿಯವರು, ಪತ್ರಿಕೆಯ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ನೊಂದ ಕುಟುಂಬಗಳಿಗೆ ನೆರವು ನೀಡಿದರು. ದೇವಲಾಪುರ ಗ್ರಾಮಕ್ಕೆ ಬಂದು ಅದನ್ನು ವಿತರಿಸುವ ಮೂಲಕ ಪತ್ರಿಕೆ ನೊಂದವರ ಪರವಾಗಿದೆ ಎಂಬ ಸಂದೇಶ ಸಾರಿದರು.

ಸದಾ ಜನಜಂಗುಳಿಯಿಂದ ಕೂಡಿದ ಎಚ್.ಡಿ. ಕೋಟೆ ಪಟ್ಟಣ ಮತ್ತು ಹ್ಯಾಂಡ್ ಪೋಸ್ಟಿನಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಜೊತೆಗೆ ತಾಲ್ಲೂಕಿನ ಪ್ರತಿ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರೈತ ಚಳುವಳಿಗಳು, ದಲಿತಪರ ಚಳುವಳಿಗಳಲ್ಲಿ ಬೆನ್ನೆಲುಬಾಗಿ ನಿಂತ ಕೋಟಿ ಅವರು ಸಾಕಷ್ಟು ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮಾಜದ ಬದಲಾವಣೆಯ ಕನಸು ಕಂಡವರು.

ಮೈಸೂರು-ಮಾನಂದವಾಡಿ ಮತ್ತು ಕಬಿನಿ ರಸ್ತೆ ಅಭಿವೃದ್ಧಿಯಲ್ಲಿ ಕೋಟಿಯವರ ಪಾತ್ರವೂ ಇದೆ. ಆ ದಿನಗಳಲ್ಲಿ ತೀರ ಹದಗೆಟ್ಟಿದ್ದ ರಸ್ತೆಯ ಕುರಿತು ಪತ್ರಿಕೆಯಲ್ಲಿ ಸರಣಿ ವರದಿಗಳು ಬಂದ ಬಳಿಕವೇ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಕ್ಷೇತ್ರದ ಚುನಾಯಿತ ಶಾಸಕರೆಲ್ಲರೂ ಕೋಟಿ ಅವರ ನಿಕಟ ಸಂಬಂಧವಿಟ್ಟುಕೊಂಡು ಮಾರ್ಗದರ್ಶನ ಪಡೆಯುತ್ತಿದ್ದರು.

andolana

Recent Posts

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…

34 mins ago

ಓದುಗರ ಪತ್ರ: ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಿ

ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ)…

39 mins ago

ಓದುಗರ ಪತ್ರ: ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಿ

ಭಾರತದ ಶಿಕ್ಷಣ ನೀತಿ ಮಕ್ಕಳ ಆರೋಗ್ಯದ ಕುರಿತು ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ, ಬಹುತೇಕ ಶಾಲೆಗಳು ಇದನ್ನು ಪಾಲಿಸುತ್ತಿಲ್ಲ ಎಂಬುದು ವಿಷಾದಕರ…

50 mins ago

ವಿಕಸಿತ್ ಭಾರತ್- ಜಿ ರಾಮ್ ಜಿ: ಮಹಾತ್ಮನನ್ನು ಮರೆಗೆ ಸರಿಸುವ ಹುನ್ನಾರ

ಕೇಂದ್ರ ಸರ್ಕಾರದಲ್ಲಿ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ ೧೬ರಂದು…

54 mins ago

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ

ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ; ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ ಮೈಸೂರು: ರಾಜ್ಯ ಸರ್ಕಾರ…

2 hours ago

ಡಿ.26ರಿಂದ ಕೊಡವ ಹಾಕಿ ಚಾಂಪಿಯನ್ ಟ್ರೋಫಿ

ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…

4 hours ago