ಆಂದೋಲನ 50

ವನ್ಯಲೋಕಕ್ಕೆ ವರದಾನವಾದ ಕಬಿನಿ

 ಸ್ವಾತಂತ್ರ್ಯಪೂರ್ವದಲ್ಲಿ ಕಬಿನಿಗಿಂತ ಕಾಕನಕೋಟೆಯ ಹೆಸರೇ ಹೆಚ್ಚು ಪ್ರಚಲಿತದಲ್ಲಿತ್ತು. ಮೈಸೂರಿನ ಅರಸರಿಗೆ ಮತ್ತು ಬ್ರಿಟಿಷರಿಗೆ ಇದು ಶಿಕಾರಿ ಕೇಂದ್ರವಾಗಿತ್ತು. ಕಬಿನಿ ಜಲಾಶಯ ಈ ಪ್ರದೇಶದ ಮಾತ್ರವಲ್ಲ, ನಾಡಿನ ವನ್ಯಲೋಕದ ದಿಕ್ಕು ದೆಶೆಗಳನ್ನು ಬದಲಿಸಿತು.

 ಐದು ದಶಕಗಳ ಹಿಂದಿನ ಮಾತು. ಸ್ಥಳೀಯರಿಗೆ ಕಪಿಲೆಯಾಗಿ, ಹೊರಗಿನವರಿಗೆ ಕಬಿನಿಯಾಗಿದ್ದ ನದಿಯೊಂದು ಕಾವೇರಿಯೊಂದಿಗೆ ಲೀನಗೊಂಡು ತನ್ನ ಪಾಡಿಗೆ ತಾನು ಸಮುದ್ರ ಸೇರುತ್ತಿತ್ತು. ಕಾವೇರಿ, ತುಂಗೆ, ಭದ್ರಾ, ಕೃಷ್ಣೆ, ಭೀಮೆಗಳಿಗಿದ್ದಷ್ಟು ಪ್ರಾಮುಖ್ಯತೆ ಈ ನದಿಗೆ ಇರಲಿಲ್ಲ. ಕೇರಳದಲ್ಲಿ ಹುಟ್ಟಿ ಕರ್ನಾಟಕದ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಹರಿದು ಕಾವೇರಿಯಲ್ಲಿ ಒಂದಾಗುತ್ತಿದ್ದ ನದಿಯು ಜನರಿಗಿಂತ ಹೆಚ್ಚಾಗಿ ತನ್ನ ದಂಡೆಯ ಮೇಲೆ ವಿಶಾಲವಾಗಿ ಹರಡಿದ್ದ ನಾಗರಹೊಳೆ ಮತ್ತು ಬಂಡೀಪುರ ಕಾಡಿಗೆ ಆಸರೆಯಾಗಿತ್ತು. ಇದರ ನಡುವೆ ತಲೆಮಾರುಗಳಿಂದ ಜೀವಿಸಿದ್ದ ಒಂದಷ್ಟು ಹಾಡಿಗಳಿದ್ದವು.

೬೦ರ ದಶಕದ ಕೊನೆಯಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಸಮೀಪ ಕಬಿನಿ ಎಂಬ ಅಣೆಕಟ್ಟು ನಿರ್ಮಾಣದ ಪ್ರಸ್ತಾಪ ಬಂತು. ಅಲ್ಲಿ ಶತಮಾನಗಳಿಂದ ನೆಲೆ ನಿಂತಿದ್ದ ೧೦ಕ್ಕೂ ಅಧಿಕ ಗ್ರಾಮಗಳನ್ನು ಬೇರೆಡೆ ಸ್ಥಳಾಂತರ ಮಾಡುವ ಜೊತೆಗೆ, ಅಪಾರ ಪ್ರಮಾಣದ ಕಾಡನ್ನು ಕಡಿದು ಜಲಾಶಯಕ್ಕೆ ಬುನಾದಿ ಹಾಕುವ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಎದುರಾಯಿತು. ೨೨ ಹಳ್ಳಿಗಳು ಮತ್ತು ೧೪ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶಕ್ಕಾಗಿ ಇಷ್ಟೊಂದು ಪ್ರಮಾಣದಲ್ಲಿ ಕಾಡು ನಾಶ ಮಾಡುವ ಅವಶ್ಯಕತೆ ಇತ್ತೇ ಎಂಬ ಚರ್ಚೆಯ ನಡುವೆಯೇ ಯೋಜನೆಯ ರೂಪುರೇಷೆ ಪೂರ್ಣಗೊಂಡಿತ್ತು. ಕಾಡಿನ ಜನರ ನೆಲೆಗಳು ನದಿಪಾಲಾಯಿತು. ನೂರಾರು ಬಗೆಯ ಜೀವ ವೈವಿಧ್ಯತೆಯ ಬದುಕು ಜಲಗರ್ಭದಲ್ಲಿ ಒಂದಾಯಿತು. ೨೨೮೪ ಅಡಿ ಉದ್ದದ ೧೯.೫೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ ನಿರ್ಮಾಣ ೧೯೭೪ರಲ್ಲಿ ಮುಕ್ತಾಯವಾಯಿತು.

ಕಾಡನ್ನು ನುಂಗಿ, ಕಾಡಿನ ಜನರನ್ನು ಎತ್ತಂಗಡಿ ಮಾಡಿದ ಯೋಜನೆಯೇ ಮುಂದೊಂದು ದಿನ ಈ ಸ್ಥಳಕ್ಕೆ ವಿಶ್ವ ಭೂಪಟದಲ್ಲಿ ಮಾನ್ಯತೆ ತಂದುಕೊಡುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಜಲಾಶಯವೇ ಮುಂದೆ ಸಾವಿರಾರು ವನ್ಯಜೀವಿಗಳಿಗೆ ನೀರ ಆಸರೆಯಾಗಿ ಅವುಗಳ ಕಾಯಂ ನೆಲೆಯಾಗಲು ಸಹಕಾರಿಯಾಯಿತು. ಕಬಿನಿಯ ಹಿನ್ನೀರು ಕಾಡಿನ ಜೀವ ವೈವಿಧ್ಯತೆಗೆ ಹೊಸ ರೂಪ ನೀಡಿತು. ಬೇಸಿಗೆಯಲ್ಲಿ ನೀರನ್ನು ಹುಡುಕಿಕೊಂಡು ಅಲೆದಾಡುತ್ತಿದ್ದ ಬಂಡೀಪುರ ಮತ್ತು ನಾಗರಹೊಳೆಯ ವನ್ಯಜೀವಿಗಳಿಗೆ ಕಾಯಂ ನೀರಿನ ಸೆಲೆ ಸಿಕ್ಕಿದ್ದು ವರದಾನವಾಯಿತು. ಕಾಡಂಚಿನಲ್ಲಿ ನಿತ್ಯ ಹಸಿರ ಹೊದಿಕೆ ಸಿಕ್ಕಿದ್ದರಿಂದ ಮೇವಿನ ಬರವೂ ನೀಗಿತು. ನೀರಾವರಿ ಜತೆಗೆ ೨೪ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೂಡ ಇಲ್ಲಿ ಉತ್ಪಾದನೆಯಾಗುತ್ತಿದೆ.

andolana

Recent Posts

ಒಂದು ವಾರ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ: ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…

10 mins ago

ಉಡುಪಿ ಶ್ರೀಕೃಷ್ಣಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…

1 hour ago

ಓದುಗರ ಪತ್ರ: ಡಿಕೆಶಿ ಸೂಚನೆ ಸ್ವಾಗತಾರ್ಹ

ಮುಖ್ಯಮಂತ್ರಿಗಳಾದ ಕೆಲವೇ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿಗಳು ಬೆಳಿಗ್ಗೆ ೧೦ ಗಂಟೆಗೆ ಹಾಜರಾತಿ ದಾಖಲಿಸುವಂತೆ…

4 hours ago

ಓದುಗರ ಪತ್ರ: ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ದಾಖಲಿಸಲಿ

ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಅಂತ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಸರಿಯಲ್ಲ. ಖಾಸಗಿ ಶಾಲೆಗಳಲ್ಲಿ ಪ್ರವೇಶ…

4 hours ago

ಓದುಗರ ಪತ್ರ: ಮಲತಾಯಿ ಧೋರಣೆ ಏಕೆ?

ರಾಜ್ಯದಲ್ಲಿ ಕ್ರಿಕೆಟ್ ಗೀಳಿನ ಅಬ್ಬರದಲ್ಲಿ ಫುಟ್ಬಾಲ್ ಕ್ರೀಡೆ ಧೂಳೀಪಟ ವಾಗುತ್ತಿರುವುದು ಅತ್ಯಂತ ಆಘಾತಕಾರಿ. ಶೇ. ೯೦ ಕ್ಕೂ ಹೆಚ್ಚು ಫುಟ್ಬಾಲ್…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಇಂದು ಜಗತ್ತಿಗೆ ಗಾಂಧಿ ಚಿಂತನೆ ಹೆಚ್ಚು ಪ್ರಸ್ತುತ:  ಗಾಂಧಿ ಎಂದರೆ ಕೇವಲ ಇತಿಹಾಸದ ಪುಟಗಳಲ್ಲಿ ಉಳಿದಿರುವ ಸ್ವಾತಂತ್ರ್ಯ ಹೋರಾಟಗಾರ ಮಾತ್ರ ಅಲ್ಲ. ಸದಾ…

5 hours ago