ಆಂದೋಲನ 50

ಅಪ್ಪಾಜಿಗೆ ಪತ್ರಿಕೋದ್ಯಮ ಎಂದಿಗೂ ಉದ್ಯಮ ಆಗಿರಲಿಲ್ಲ : ರಶ್ಮಿ ಕೋಟಿ

ಮೈಸೂರು : ‘ಆಂದೋಲನ’ ದಿನಪತ್ರಿಕೆ ಅಪ್ಪಾಜಿಯ ಕನಸಿನ ಕೂಸು. ಅವರ ಅವಿರತ ಪರಿಶ್ರಮದ ಫಲ. ಸಮಾನ ಮನಸ್ಕ ಸಮಾಜವಾದಿ ಗೆಳೆಯರ ಒತ್ತಾಸೆಯ ಫಲಿತಾಂಶ. ಪತ್ರಿಕೆ ಮತ್ತು ಹೋರಾಟವೇ ಅವರ ಜೀವನ ಧರ್ಮವಾಗಿತ್ತು. ಪತ್ರಿಕೆಯನ್ನು ಎಂದೂ ಅವರು ಉದ್ಯಮದಂತೆ ಪರಿಗಣಿಸಿದ್ದೇ ಇಲ್ಲ . ಅದು ಹೋರಾಟದ ಮಾಧ್ಯಮವಾಗಿ, ದನಿಯಿಲ್ಲದವರ ದನಿಯಾಗಿ ಇರಬೇಕೆಂದು ಬಯಸಿದ್ದರು ಎಂದು ‘ಆಂದೋಲನ’ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ತಿಳಿಸಿದರು.

‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ೨೪ರ ಹರೆಯದಲ್ಲೇ ಆಂದೋಲನ ವಾರಪತ್ರಿಕೆಯನ್ನು ಪ್ರಾರಂಭ ಮಾಡುವ ಸಾಹಸವನ್ನು ಮಾಡಿದರು. ನಂತರ ಅವರ ಕನಸುಗಳ ಮೂಟೆಯನ್ನು ಹೊತ್ತುಕೊಂಡು ಮೈಸೂರಿಗೆ ಬಂದು ‘ಆಂದೋಲನ’ ದಿನಪತ್ರಿಕೆಯಾಗಿ ಈಗ ೫೦ ವರ್ಷಗಳನ್ನು ಪೂರೈಸಿದೆ. ನಿಷ್ಠುರವಾಗಿ ಬರೆಯಬೇಕಾದ ಸಂದರ್ಭದಲ್ಲಿ ಹಿಂಜರಿಯುತ್ತಿರಲಿಲ್ಲ. ಸತ್ಯ, ನಿಖರ, ನಿಷ್ಪಕ್ಷಪಾತ ಸುದ್ದಿಗಳನ್ನು ನೀಡಲು ಸದಾ ಪ್ರಾಮಾಣಿಕ ಪ್ರಯತ್ನ ಮಾಡಿ ಅನೇಕ ಬಾರಿ ಆ ಕಾರಣಕ್ಕಾಗಿ ನಷ್ಟವನ್ನು ಅನುಭವಿಸಿದ್ದಾರೆ. ಅಪ್ಪಾಜಿಯ ಗುರಿ, ಎದೆಗುಂದದೆ ಸಾಧಿಸುವ ಛಲ, ರಾಜಿ ಇಲ್ಲದ ವೃತ್ತಿಪರತೆ, ಕಠಿಣ ಪರಿಶ್ರಮ ‘ಆಂದೋಲ’ ನದ ಈ ಯಶಸ್ಸಿನ ಕಥೆಯನ್ನು ನಿರ್ಮಿ ಸಿದೆ. ಅಪ್ಪಾಜಿಯ ಸಿದ್ಧಾಂತಗಳು ಜಾಗೃತಪ್ರಜ್ಞೆಯಾಗಿ ಸದಾ ನಮ್ಮೊಂದಿಗಿವೆ ಎಂದು ನೆನೆದರು.

‘ಆಂದೋಲನ’ದ ೫೦ ವರ್ಷಗಳ ಈ ಸಾರ್ಥಕ ಪಯಣದಲ್ಲಿ ನಮ್ಮ ಓದುಗರು, ಅನೇಕ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು ಹೆಗಲು ನೀಡಿದ್ದೀರಿ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಪತ್ರಿಕಾ ಕ್ಷೇತ್ರದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೊಸ ಸ್ವರೂಪಗಳೊಂದಿಗೆ ‘ಆಂದೋಲನ’ ಮುಂದುವರಿಯುತ್ತಿದೆ. ಮುಂದೆಯೂ ಮತ್ತಷ್ಟು ಹೊಸತನಗಳಿಗೆ ತೆರೆದುಕೊಳ್ಳಲು ಬದ್ಧವಾಗಿದೆ.

ಅಪ್ಪಾಜಿ ಆಶಯಗಳನ್ನು, ಕನಸುಗಳನ್ನು ಪತ್ರಿಕೆಯ ಮೂಲಕ ಜೀವಂತವಾಗಿಡಬೇಕೆಂಬುದೇ ಇಡೀ ‘ಆಂದೋಲನ’ ಬಳಗದ ಅಭಿಲಾಷೆಯಾಗಿದೆ ಎಂದು ಹೇಳಿದರು.

andolana

Recent Posts

ರಾಜ್ಯಕ್ಕೆ ಇನ್ನೊಂದು ಹೈ ಸ್ಪೀಡ್ ರೈಲ್ವೆ ಕಾರಿಡಾರ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಜತೆ ಎಚ್‌ಡಿಕೆ ಚರ್ಚೆ

ಹೊಸದಿಲ್ಲಿ : ಬಜೆಟ್ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ,…

6 mins ago

ಮ.ಬೆಟ್ಟದಲ್ಲಿ ಸ್ವಚ್ಛತಾ ನಡಿಗೆ : ಕಸ ಸಂಗ್ರಹಿಸಿದ ಕಾಲೇಜು ವಿದ್ಯಾರ್ಥಿಗಳು

ಹನೂರು : ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಕೊಳ್ಳೇಗಾಲ ವಾಸವಿ ಪ್ರಥಮ ದರ್ಜೆ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು…

30 mins ago

ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್?

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್ ನೀಡುವ ಸಾಧ್ಯತೆ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಮೆಟ್ರೊ…

2 hours ago

ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯವೇ ಎಟಿಎಂ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಹಾಗೂ ಜೆಡಿಎಸ್‌…

2 hours ago

ಫೆ.14ರಿಂದ 18ರವರೆಗೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ: ಸಿದ್ಧತೆ ಪರಿಶೀಲಿಸಿದ ಎಈ ರಘು

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ.14 ರಿಂದ 18ರವರೆಗೆ…

2 hours ago

ಅಂತರರಾಷ್ಟ್ರೀಯ ವಾಣಿಜ್ಯ ಮೇಳ 2026: ಉತ್ಪಾದನೋತ್ತರ ಕೃಷಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿ: ಎನ್.ಚಲುವರಾಯಸ್ವಾಮಿ

ಬೆಂಗಳೂರು: ನಮ್ಮ ಸರ್ಕಾರವು 2017ರಲ್ಲಿ ಪ್ರಾರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆ…

3 hours ago