ಆಂದೋಲನ 50

ಗಿಡಗಂಟಿಗಳ ನಡುವೆ ಮುಚ್ಚಿ ಹೋಗಿದೆ ಪಾರಂಪರಿಕ ಸೇತುವೆ

ಮೈಸೂರು-ನಂಜನಗೂಡು ರಸ್ತೆಗೆ ಅಡ್ಡವಾಗಿ ಕಪಿಲಾ ನದಿಗೆ ನಿರ್ಮಿಸಲಾದ ರಾಜ್ಯದ ಅತ್ಯಂತ ಪುರಾತನವಾದ ಸೇತುವೆ ನಂಜನಗೂಡಿನ ಹಿರಿಮೆಯನ್ನು ಹೆಚ್ಚಿಸಿದೆ. ೧೭೩೫ ರಲ್ಲಿ ನಿರ್ಮಿಸಿದ ದಾಖಲೆ ಇರುವ ಈ ಸೇತುವೆ ರಾಜ್ಯದ ಅತ್ಯಂತ ಹಳೆಯ ಸೇತುವೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಆಧುನಿಕ ಸೇತುವೆಗಳು ಲೋಕಾರ್ಪಣೆಯಾದ ಕೆಲವರ್ಷಗಳಲ್ಲೇ ನೆಲಕಚ್ಚುವ ಸ್ಥಿತಿಯನ್ನು ಕಾಣುತ್ತಿರುವ ಈ ಕಾಲದಲ್ಲಿ ನಂಜನಗೂಡಿನ ಕಪಿಲಾ ಸೇತುವೆ ಈಗಲೂ ಸಾಕಷ್ಟು ಭದ್ರವಾಗಿಯೇ ಇ ದೆಎಂಬುದು ರಾಜ್ಯಕ್ಕೊಂದು ಹೆಮ್ಮೆಯ ವಿಷಯವಾಗಿದೆ. ಪ್ರಾರಂಭದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿಗಳ ಸಂಚಾರಕ್ಕಾಗಿ ಎಂಬಂತಾಗಿ ದ ಈ ಸೇತುವೆಯಲ್ಲಿ ೧೯ನೇ ಶತಮಾನ ದಲ್ಲಿ ಮೋಟಾರು ವಾಹನಗಳು ಸಂಚರಿಸಲಾರಂಭಿಸಿದ್ದವು.

ಶತಮಾನಗಳ ಹಿಂದೆೆಯೇ ನಂಜನಗೂಡಿಗೆ ರೈಲು ಸಂಪರ್ಕ ಕಲ್ಪಿತವಾದಾಗ ಈ ಸೇತುವೆಯಲ್ಲಿ ಮೋಟಾರು ಹಾಗೂ ರೈಲುಗಳೆರಡರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಮೀಟರ್‌ ಗೇಜಿ ನಿಂದ ಬ್ರಾಡ್‌ ಗೇಜಾಗಿ ಇಲ್ಲಿನ ರೈಲು ಬದಲಾಗುವವರೆಗೂ (೨೦೦೮) ಇದೇ ಸೇತುವೆ ಮೇಲೆ ರೈಲು ಸರಾಗವಾಗಿ ಸಂಚರಿಸುತ್ತಿತ್ತು. ಮೈಸೂರು- ನಂಜನಗೂಡು ನಡುವೆ ಸುಗಮ ಸಂಚಾರಕ್ಕಾಗಿ ದಳವಾಯಿ ದೇವರಾಜ ಎನ್ನುವವರು ಬೆಲ್ಲ, ಸುಣ್ಣ ದ ಗಾರೆ ಹಾಗೂ ಇಟ್ಟಿಗೆಗಳಿಂದ ಈ ಬಲಿಷ್ಠ ಸೇತುವೆಯನ್ನು ೧೭೩೫ ರಲ್ಲಿ ನಿರ್ಮಿಸಿ ದರು. ಸುಮಾರು ೨೭೩ ವರ್ಷಗಳ ಕಾಲ ಸಂಚಾರ ದ ವ್ಯವಸ್ಥೆಗೆ ಸಾಕ್ಷಿಯಾಗಿ ಈಗ ೨೮೬ ವರ್ಷ ಕಳೆದರೂ ಸಾಕಷ್ಟು ಗಟ್ಟಿಯಾಗಿ ಇರುವ ಈ ಸೇತುವೆ ಅಪರೂಪದ ವಾಸ್ತು ಶೈಲಿಯಿಂದ ಕೂಡಿದ್ದು ಅದನ್ನು ನಾವೀಗ ಉಳಿಸಿಕೊಳ್ಳ ಬೇಕಿದೆ. ಈಸ್ಟ್‌ ಇಂಡಿಯಾ ಕಂಪನಿಯ ರಾಯಭಾರಿ ಡ್ಯಾನೀಷ್‌ ರೇವ್‌ ಎಂಬವರು ಕಪಿಲಾ ನದಿಯಾ ಈ ಸೇತುವೆ ಕುರಿತು ೧೭೭೯ ಆಗಸ್ಟ್‌ ೨೩ ರಂದು ದಾಖಲಿಸಿದ್ದಾರೆ.

೧೦ ಅಡಿ ವಿಸ್ತಾರದ ಗೋಥಿಕ್‌ ಶೈಲಿಯ ಇತಿಹಾಸ ಹೊಂದಿರುವ ಕಮಾನುಗಳ ಸರಣಿಯಿಂದ ಕೂಡಿದ ಈ ಸೇತುವೆ ೮ ಅಡಿ ಅಗಲದ ಮಧ್ಯಸ್ಥಿಕೆಯ ಬೃಹತ್ತಾದ ಸ್ತಂಭಗಳನ್ನು ಹೊಂದಿದೆ. ಆರ್ಚ್‌ ಕ್ರೈಸ್ಟ್‌ ಮೇಲೆ ೫ ಅಡಿಗಳಿಗಿಂತ ಹೆಚ್ಚು ಅಗಲದ ಅಡಿಪಾಯದ ಕಲ್ಲಿನ ಸ್ತರಗಳ ಮೇಲೆ ಇದನ್ನು ನಿಲ್ಲಿಸಲಾಗಿದೆ. ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ಸೇತುವೆಮ ಕಪಿಲೆಯಲ್ಲಿ ಬಂದ ಪ್ರವಾಹಗಳಿಗೆ ಜಗ್ಗದೆ ಅಳುಕದೆ ನಮ್ಮ ಮುಂದೆ ನಿಂತಿರುವುದೇ ನಮ್ಮವರ ಅಂದಿನ ಕಾಲದ ತಾಂತ್ರಿಕತೆಗೆ ಸಾಕ್ಷಿಯಾಗಿದೆ.

andolana

Recent Posts

ಸೋಮವಾರಪೇಟೆಯಲ್ಲಿ ಗ್ಯಾಸ್ ಸೋರಿಕೆಗೆ ಯುವತಿ ಸಾವು

ಸೋಮವಾರಪೇಟೆ: ಇಲ್ಲಿನ ಹೋಂಸ್ಟೇ ಒಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್‌ ಸೋರಿಕೆಯಿಂದ ಮೈಸೂರಿನ ಯುವತಿ ಮೃತಪಟ್ಟಿದ್ದಾಳೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ…

10 hours ago

ರಾಜ್ಯದಲ್ಲಿ ಎಂಟು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎಂಟು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ…

11 hours ago

ಚಿರತೆ ದಾಳಿಗೆ ನಾಯಿ ಸಾವು: ಗ್ರಾಮಸ್ಥರಲ್ಲಿ ಭೀತಿ

ಕೊಳ್ಳೇಗಾಲ: ತಾಲ್ಲೂಕಿನ ಜಕ್ಕಳ್ಳಿ ಬಳಿ ಚಿರತೆ ನಾಯಿಯೊಂದನ್ನು ಕೊಂದು ತಿಂದುಹಾಕಿದ್ದು, ಗ್ರಾಮಸ್ಥರು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ. ವೀರಮಾದು ಅವರ ತೋಟದ…

11 hours ago

ಎಲ್‌ಪಿಜಿ ದರ ಭಾರತದಲ್ಲೇ ಅಗ್ಗ: ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಸಮರ್ಥನೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದ್ದರೂ, ಭಾರತದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್…

12 hours ago

ಬಾವಿಗೆ ಬಿದ್ದಿದ್ದ ಹಸು ರಕ್ಷಣೆ

ಮಹಾದೇಶ್‌ ಎಂ ಗೌಡ:  ಹನೂರು ತಾಲ್ಲೂಕು ವರದಿಗಾರರು  ಹನೂರು: ಮೇವು ಮೇಯುವ ವೇಳೆ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ…

12 hours ago

ಭಾರತದ ಜನಸಂಖ್ಯೆಯಲ್ಲಿ ಗಣನೀಯ ಕುಸಿತವಾಗುತ್ತಿದೆ: ಎಲಾನ್‌ ಮಸ್ಕ್‌ ಆತಂಕ

ವಾಷಿಂಗ್ಟನ್:‌ ಭಾರತದ ಜನನ ಪ್ರಮಾಣ ಗಣನೀಯವಾಗಿ ಕುಸಿತವಾಗುತ್ತಿದೆ. ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವ ಜನಸಂಖ್ಯೆಗಿಂತ ಸಂತಾನೋತ್ಪತ್ತಿಯ ದರ ಕಡಿಮೆಯಾಗಿದೆ ಎಂದು…

13 hours ago