ಟೆಕ್‌

ವಿಶೇಷ ವಿನ್ಯಾಸದ ಸ್ಟಾರ್‌ ಬಾಯ್‌ 6

ಉತ್ತಮ ವಿನ್ಯಾಸದ ಇಯರ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ನು-ರಿಪಬ್ಲಿಕ್ ಇತ್ತೀಚೆಗೆ ಸ್ಟಾರ್‌ಬಾಯ್ ೬ ವೈರ್‌ಲೆಸ್ ಹೆಡ್‌ಫೋನ್ ಬಿಡುಗಡೆ ಮಾಡಿದೆ.

ಈ ಹೆಡ್‌ಫೋನ್ ಉತ್ತಮ ಧ್ವನಿ ಹೊರಹೊಮ್ಮಿಸುವ ಸಾಮರ್ಥ್ಯ ಹೊಂದಿದ್ದು ಗೇಮಿಂಗ್ ಪ್ರಿಯರಿಗೂ, ಸಂಗೀತ ಪ್ರಿಯರಿಗೂ ಅನುಕೂಲಕರವಾಗಿದೆ.

ಸ್ಟಾರ್‌ಬಾಯ್ ೬ ವೈರ್‌ಲೆಸ್ ಹೆಡ್ ಫೋನ್‌ನ ವಿನ್ಯಾಸ ಆಕರ್ಷಕವಾಗಿದ್ದು, ಇದರಲ್ಲಿ ಬೇಕಾದಾಗ ಹೊರಗೆಳೆದು ನಂತರ ಮಡಚಬಲ್ಲ ಮೈಕ್ ಪೀಸ್ ಮತ್ತು ಎಲ್‌ಇಡಿ ದೀಪದ ವಿನ್ಯಾಸವನ್ನು ಅಳವಡಿಸಲಾಗಿದೆ. ಈ ಹೆಡ್‌ಫೋನ್ ಹಗುರವಾಗಿದ್ದು, ಫೋನ್ ಕರೆಗಳು, ವಿಡಿಯೋ ಮೀಟಿಂಗ್‌ಗಳ ಸಂದರ್ಭದಲ್ಲಿ ಸ್ಪಷ್ಟವಾದ ಮಾತು ಕೇಳುತ್ತದೆ. ಇನ್ನು ಇದರಲ್ಲಿ ಎಕ್ಸ್-ಬೇಸ್ ತಂತ್ರಜ್ಞಾನದ ಮೂಲಕವಾಗಿ ೩ಡಿ ಎಫೆಕ್ಟ್ ಇರುವ ನಾದವನ್ನು ಹೆಚ್ಚು ಬೇಸ್ ಧ್ವನಿಯ ಮೂಲಕ ಆನಂದಿಸಬಹುದು. ಅಲ್ಲದೆ ಇದರಲ್ಲಿ ಮ್ಯೂಸಿಕ್ ಮತ್ತು ಗೇಮಿಂಗ್‌ಗಾಗಿ ಪ್ರತ್ಯೇಕವಾದ ಮೋಡ್ ಗಳಿವೆ.

ಸುತ್ತಮುತ್ತಲಿನ ಧ್ವನಿಯು ಕಿವಿಗೆ ಕೇಳಿಸದಂತೆ ಇಯರ್‌ಕಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಹೆಡ್ ಫೋನ್ ಉತ್ತಮ ಬ್ಯಾಟರಿ ಮತ್ತು ಸಂಪರ್ಕ ವಿನ್ಯಾಸ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ (ಶೂನ್ಯದಿಂದ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತದೆ. ) ನಿರಂತರವಾಗಿ ಸುಮಾರು ೩೦ ಗಂಟೆಗಳ ಕಾಲ ಬಳಸಬಹುದಾಗಿದೆ. ಬ್ಲೂಟೂತ್ ನೆರವಿನಿಂದ ಎರಡು ಸಾಧನಗಳನ್ನು ಏಕಕಾಲಕ್ಕೆ ಪೇರಿಂಗ್ ಮಾಡುವ ಮೂಲಕ ಈ ಹೆಡ್‌ಫೋನ್‌ಗೆ ಸಂಪರ್ಕಿಸಬಹುದಾಗಿದೆ.

ಇದರ ಈಗಿನ ಬೆಲೆ ೨,೪೯೯ ರೂ. ಗಳಾಗಿದ್ದು, ಪ್ರಮುಖ ಆನ್‌ಲೈನ್ ವಾಣಿಜ್ಯ ತಾಣಗಳಲ್ಲಿ ಲಭ್ಯವಿದೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಉಳುವ ‘ಯೋಗಿ’ ಕೂಗಿಗೆ ಸರ್ಕಾರ ತರ್ತಾಗಿ ಸ್ಪಂದಿಸಲಿ

ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…

9 mins ago

ಓದುಗರ ಪತ್ರ: ರಾಷ್ಟ್ರಕವಿ ಶ್ಲಾಘನೆಯ ಸ್ಮರಣೆ

೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…

11 mins ago

ಓದುಗರ ಪತ್ರ: ಸೈಬರ್ ವಂಚನೆ: ಜಾಗೃತಿಯೂ ಫಲ ನೀಡುತ್ತಿಲ್ಲವಲ್ಲ…

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…

13 mins ago

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

3 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ…

3 hours ago

ಗಾಂಧಿವಾದಕ್ಕೆ ಮರುಳಾಗಿದ್ದ ಮೈಸೂರಿನ ಯಶೋಧರಾ ದಾಸಪ್ಪ

ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…

3 hours ago