ಟೆಕ್‌

ವಿಶೇಷ ವಿನ್ಯಾಸದ ಸ್ಟಾರ್‌ ಬಾಯ್‌ 6

ಉತ್ತಮ ವಿನ್ಯಾಸದ ಇಯರ್‌ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ನು-ರಿಪಬ್ಲಿಕ್ ಇತ್ತೀಚೆಗೆ ಸ್ಟಾರ್‌ಬಾಯ್ ೬ ವೈರ್‌ಲೆಸ್ ಹೆಡ್‌ಫೋನ್ ಬಿಡುಗಡೆ ಮಾಡಿದೆ.

ಈ ಹೆಡ್‌ಫೋನ್ ಉತ್ತಮ ಧ್ವನಿ ಹೊರಹೊಮ್ಮಿಸುವ ಸಾಮರ್ಥ್ಯ ಹೊಂದಿದ್ದು ಗೇಮಿಂಗ್ ಪ್ರಿಯರಿಗೂ, ಸಂಗೀತ ಪ್ರಿಯರಿಗೂ ಅನುಕೂಲಕರವಾಗಿದೆ.

ಸ್ಟಾರ್‌ಬಾಯ್ ೬ ವೈರ್‌ಲೆಸ್ ಹೆಡ್ ಫೋನ್‌ನ ವಿನ್ಯಾಸ ಆಕರ್ಷಕವಾಗಿದ್ದು, ಇದರಲ್ಲಿ ಬೇಕಾದಾಗ ಹೊರಗೆಳೆದು ನಂತರ ಮಡಚಬಲ್ಲ ಮೈಕ್ ಪೀಸ್ ಮತ್ತು ಎಲ್‌ಇಡಿ ದೀಪದ ವಿನ್ಯಾಸವನ್ನು ಅಳವಡಿಸಲಾಗಿದೆ. ಈ ಹೆಡ್‌ಫೋನ್ ಹಗುರವಾಗಿದ್ದು, ಫೋನ್ ಕರೆಗಳು, ವಿಡಿಯೋ ಮೀಟಿಂಗ್‌ಗಳ ಸಂದರ್ಭದಲ್ಲಿ ಸ್ಪಷ್ಟವಾದ ಮಾತು ಕೇಳುತ್ತದೆ. ಇನ್ನು ಇದರಲ್ಲಿ ಎಕ್ಸ್-ಬೇಸ್ ತಂತ್ರಜ್ಞಾನದ ಮೂಲಕವಾಗಿ ೩ಡಿ ಎಫೆಕ್ಟ್ ಇರುವ ನಾದವನ್ನು ಹೆಚ್ಚು ಬೇಸ್ ಧ್ವನಿಯ ಮೂಲಕ ಆನಂದಿಸಬಹುದು. ಅಲ್ಲದೆ ಇದರಲ್ಲಿ ಮ್ಯೂಸಿಕ್ ಮತ್ತು ಗೇಮಿಂಗ್‌ಗಾಗಿ ಪ್ರತ್ಯೇಕವಾದ ಮೋಡ್ ಗಳಿವೆ.

ಸುತ್ತಮುತ್ತಲಿನ ಧ್ವನಿಯು ಕಿವಿಗೆ ಕೇಳಿಸದಂತೆ ಇಯರ್‌ಕಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಹೆಡ್ ಫೋನ್ ಉತ್ತಮ ಬ್ಯಾಟರಿ ಮತ್ತು ಸಂಪರ್ಕ ವಿನ್ಯಾಸ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ (ಶೂನ್ಯದಿಂದ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂವರೆ ಗಂಟೆ ಬೇಕಾಗುತ್ತದೆ. ) ನಿರಂತರವಾಗಿ ಸುಮಾರು ೩೦ ಗಂಟೆಗಳ ಕಾಲ ಬಳಸಬಹುದಾಗಿದೆ. ಬ್ಲೂಟೂತ್ ನೆರವಿನಿಂದ ಎರಡು ಸಾಧನಗಳನ್ನು ಏಕಕಾಲಕ್ಕೆ ಪೇರಿಂಗ್ ಮಾಡುವ ಮೂಲಕ ಈ ಹೆಡ್‌ಫೋನ್‌ಗೆ ಸಂಪರ್ಕಿಸಬಹುದಾಗಿದೆ.

ಇದರ ಈಗಿನ ಬೆಲೆ ೨,೪೯೯ ರೂ. ಗಳಾಗಿದ್ದು, ಪ್ರಮುಖ ಆನ್‌ಲೈನ್ ವಾಣಿಜ್ಯ ತಾಣಗಳಲ್ಲಿ ಲಭ್ಯವಿದೆ.

 

ಆಂದೋಲನ ಡೆಸ್ಕ್

Recent Posts

ಮೈಸೂರು | ಮಳೆ ಅನಾಹುತ ಎದುರಿಸಲು ಚೆಸ್ಕಾಂ ಸನ್ನದ್ಧ

ಮೈಸೂರು : ಮಳೆಯ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಕೂಡ ಸಿದ್ಧತೆ ಮಾಡಕೊಂಡಿದೆ. ಮೈಸೂರು ನಗರದ ಎಂಟು ಸಬ್ ಡಿವಿಸನ್‌ನಲ್ಲಿ…

9 hours ago

ಮತ್ತೆ ಗ್ರಾಹಕರಿಗೆ ಶಾಕ್ ; ಪೆಟ್ರೋಲ್, ಡೀಸೆಲ್ ದರ 95 ಪೈಸೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಮೇಲಿನ ಯುದ್ಧದ ನಡುವೆಯೇ ಇಂಧನ ದರಗಳನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಕೇಂದ್ರ…

10 hours ago

2008ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್‌

ಸಾರ್ಥಕ ಸೇವೆಯ ಸಮರ್ಪಣೆ ಸಮಾವೇಶದಲ್ಲಿ ಡಿಸಿಎಂ ವಿಶ್ವಾಸ ತುಮಕೂರು: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ.…

10 hours ago

ಹಕ್ಕು ಪತ್ರ ವಿತರಣೆಯಲ್ಲಿ ದಾಖಲೆ ನಿರ್ಮಾಣ ಮಾಡಿದ ಕಂದಾಯ ಇಲಾಖೆ

ತುಮಕೂರು : ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆ-ಸಾರ್ಥಕ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಏಕಕಾಲಕ್ಕೆ ಕಂದಾಯ ಇಲಾಖೆಯಿಂದ ಅತ್ಯಧಿಕ ಹಕ್ಕು…

10 hours ago

ಸಂಶೋಧನೆಗೆ ಸಂಕಟ | ಶಿಷ್ಯವೇತನಕ್ಕೆ ಆಗ್ರಹಿಸಿ ಮೈ.ವಿ.ವಿ ಸಂಶೋಧಕರ ಪ್ರತಿಭಟನೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸಂಶೋಧಕರುಗಳಿಗೆ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಶಿಷ್ಯವೇತನರಹಿತ ಸಂಶೋಧಕರ ಬಳಗದ ವತಿಯಿಂದ ಮೈಸೂರು ವಿ.ವಿ…

10 hours ago

ಪ್ರಶ್ನೆ ಪತ್ರಿಕೆ ಸೋರಿಕೆ | ನೀಟ್‌ ರದ್ದು, ವಿದ್ಯಾರ್ಥಿಗಳ ಆತಹತ್ಯೆಗೆ ಮೋದಿ ಕಾರಣ ; ಸಿಎಂ ಆರೋಪ

ತುಮಕೂರು : ನೀಟ್ ಪರೀಕ್ಷೆ ರದ್ದಾಗಿ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿ, ಹಲವು ವಿದ್ಯಾರ್ಥಿಗಳ ಆತಹತ್ಯೆಗೆ…

11 hours ago