Andolana originals

‘ಪ್ರಯಾಣಿಕರ ತಂಗುದಾಣಗಳ ನಿರ್ವಹಣೆಗೆ ಕ್ರಮ’

‘ಆಂದೋಲನ’ ಸಂದರ್ಶನದಲ್ಲಿ ನಗರಪಾಲಿಕೆ ಎಸ್‌ ಇ ಕೆ. ಜಿ. ಸಿಂಧು ಹೇಳಿಕೆ 

ಸಾಲೋಮನ್

ಮೈಸೂರು: ನಗರದ ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ವಹಣೆಗೆ ಕ್ರಮವಹಿಸ ಲಾಗುತ್ತದೆ. ಜಾಹೀರಾತುದಾರರ ಕೋರಿಕೆ ಮೇರೆಗೆ ನಿಗದಿತ ಸ್ಥಳಗಳಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಅಧೀಕ್ಷಕ ಇಂಜಿನಿಯರ್ (ಎಸ್‌ಇ) ಕೆ. ಜಿ. ಸಿಂಧು ಹೇಳಿದ್ದಾರೆ.

‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದ ರ್ಶನದಲ್ಲಿ ಅವರು ಪ್ರಯಾಣಿಕರ ತಂಗುದಾಣ ಗಳ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ.

ಆಂದೋಲನ: ನಗರದಲ್ಲಿ ಬಸ್ ಪ್ರಯಾ ಣಿಕರ ತಂಗುದಾಣಗಳಲ್ಲಿ ಅವ್ಯವಸ್ಥೆ ತುಂಬಿ ತುಳುಕುತ್ತಿರುವ ಬಗ್ಗೆ ಏನು ಹೇಳುತ್ತೀರಿ?

ಸಿಂಧು: ಮಹಾನಗರ ಪಾಲಿಕೆ ಪ್ರಯಾಣಿ ಕರ ತಂಗುದಾಣಗಳನ್ನು ನಿರ್ವಹಣೆ ಮಾಡು ತ್ತದೆ. ಆದರೆ, ಬಹುತೇಕ ತಂಗುದಾಣಗಳನ್ನು ಜಾಹೀರಾತುದಾರರು ಅಥವಾ ಅವುಗಳನ್ನು ನಿರ್ಮಾಣ ಮಾಡಿದವರೇ ನಿರ್ವಹಣೆ ಮಾಡುತ್ತಾರೆ.

ಆಂದೋಲನ: ಹೊಸದಾಗಿ ನಿರ್ಮಿಸಿದ ತಂಗುದಾಣಗಳನ್ನು ಕೆಲ ತಿಂಗಳು ನಿರ್ವಹಣೆ ಮಾಡಲಾಗುತ್ತದೆ. ನಂತರ ಅವುಗಳನ್ನು ನಿರ್ಲಕ್ಷಿಸ ಲಾಗುತ್ತದೆ ಎಂದು ಸಾರ್ವಜನಿಕರ ಆರೋಪ ಇದೆಯಲ್ಲ?

ಸಿಂಧು: ನಗರಪಾಲಿಕೆಯ ಕಂದಾಯ ವಿಭಾಗದವರು ಜಾಹೀರಾತುದಾರರ ಕೋರಿಕೆ ಮೇರೆಗೆ ಎಲ್ಲಿ ನಿರ್ಮಿಸಬೇಕೆಂದು ತಿಳಿಸುತ್ತಾರೆ. ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ವತಿಯಿಂದ ತಂಗುದಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಸಾಮಾನ್ಯವಾಗಿ ಜಾಹೀರಾತುದಾರರು ಅದರ ನಿರ್ವಹಣೆ ಮಾಡುತ್ತಾರೆ.

ಆಂದೋಲನ: ಸ್ವಯಂ ಸೇವಾ ಸಂಸ್ಥೆಗಳು ನಿರ್ಮಿಸಿರುವ ತಂಗುದಾಣಗಳ ನಿರ್ವಹಣೆ ಯಾರ ಹೊಣೆ?

ಸಿಂಧು: ಅದನ್ನು ನಾವೂ ಗುರುತಿಸಿದ್ದೇವೆ. ಖಾಸಗಿಯವರು ಹಾಗೂ ಸಂಘ ಸಂಸ್ಥೆಯವರು ತಂಗು ದಾಣಗಳನ್ನು ಕಟ್ಟುವ ಮೊದಲು ಅನುಮತಿ ಪಡೆಯುತ್ತಾರೆ. ಆ ಪೈಕಿ ಬಹಳಷ್ಟು ಮಂದಿ ಪೂರ್ಣಗೊಳಿಸಿದ ನಂತರ ನಮ್ಮ ಗಮನಕ್ಕೆ ತರುವುದಿಲ್ಲ. ಆದರೂ ಅಂತಹ ತಂಗುದಾಣಗಳನ್ನು ಪಾಲಿಕೆ ವತಿಯಿಂದಲೇ ನಿರ್ವಹಿಸಲಾಗುವುದು. ಕೆಲವೊಮ್ಮೆ ತಂಗು ದಾಣ ನಿರ್ಮಿಸಿದ ಖಾಸಗಿ ಸಂಸ್ಥೆ ಗಳೊಂದಿಗೆ ಜೊತೆ ಚರ್ಚಿಸಿ ಸ್ವಚ್ಛತೆ ಕಾಪಾಡಲು ಹಾಗೂ ನಿರ್ವಹಣೆ ಮಾಡಲು ಸೂಚಿಸಲಾಗುವುದು.

ಆಂದೋಲನ: ಸಿಐಐಎಲ್ ಸೇರಿದಂತೆ ಕೆಲ ಸ್ಥಳಗಳಲ್ಲಿ ಸಾಲು ಸಾಲಾಗಿ ತಂಗುದಾಣಗಳನ್ನು ನಿರ್ಮಿಸಿರುವುದಕ್ಕೆ ಕಾರಣವೇನು?

ಸಿಂಧು: ಆ ರೀತಿ ಸಾಲಾಗಿ ನಿರ್ಮಾಣ ಮಾಡಲು ಜಾಹೀರಾತುದಾರರು ಕಾರಣ. ನಮಗೆ ಇಂಥ ಸ್ಥಳದಲ್ಲೇ ಬಸ್ ನಿಲ್ದಾಣ ಬೇಕು ಎಂದು ಕೇಳಿ ಕೊಂಡಿರುತ್ತಾರೆ. ಇದರಿಂದ ಪಾಲಿಕೆಗೂ ಆದಾಯ ಬರುವು ದರಿಂದ ಅವಕಾಶ ನೀಡಲಾಗು ತ್ತದೆ. ನಿರ್ವಹಣೆ ಮಾಡದಿದ್ದರೆ ಜಾಹೀರಾತುದಾರರನ್ನು ಬದಲಾಯಿಸುತ್ತೇವೆ.

ಆಂದೋಲನ: ಒಂದು ತಂಗುದಾಣ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗುತ್ತದೆ? ಇದಕ್ಕೆ ಎನ್‌ಜಿಒಗಳು ಕೈಜೋಡಿಸಬಹುದಾ?

ಸಿಂಧು: ಅಂದಾಜು ೫ ಲಕ್ಷ ರೂ. ವೆಚ್ಚದಲ್ಲಿ ಸಾಧಾರಣ ತಂಗುದಾಣ ನಿರ್ಮಾಣ ಮಾಡ ಬಹುದು. ೧೦ರಿಂದ ೧೫ ಲಕ್ಷ ರೂ. ಗಳಾದರೆ ಉತ್ತಮ ಸುಸಜ್ಜಿತ ತಂಗುದಾಣ ಕಟ್ಟಬಹುದು. ಬಸ್ ನಿಲ್ದಾಣ ಒಂದು ಸಾಮಾಜಿಕ ಕಾಳಜಿ, ಯಾರು ಬೇಕಾದರೂ ಕೈ ಜೋಡಿಸಬಹುದು. ನಿರ್ಮಾಣ ಮಾಡಲು ಬಯಸುವವರು ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯ.

ಆಂದೋಲನ: ತಂಗುದಾಣವನ್ನು ಸರಿಯಾಗಿ ನಿರ್ವಹಿಸದಿದ್ದರೆ ಇದಕ್ಕೆ ಯಾರು ಹೊಣೆ? ಅಂಥವರ ವಿರುದ್ದ ಕ್ರಮ ಏನು?

ಸಿಂಧು: ನಿರ್ವಹಣೆ ಜವಾಬ್ದಾರಿ ಹೊತ್ತಿರು ವವರು ನಿರ್ವಹಿಸದಿದ್ದರೆ ಪಾಲಿಕೆ ಅವರಿಗೆ ನೋಟಿಸ್ ನೀಡಿ ಖಂಡಿತ ಕ್ರಮ ಜರುಗಿಸುತ್ತದೆ. ಏನು ಕ್ರಮ ಎನ್ನುವುದನ್ನು ಆಯುಕ್ತರು ತೀರ್ಮಾನಿಸುತ್ತಾರೆ.

ಆಂದೋಲನ: ಮೈಸೂರಿನಲ್ಲಿ ಇನ್ನೂ ಎಷ್ಟು ತಂಗುದಾಣಗಳ ಅಗತ್ಯವಿದೆ?

ಸಿಂಧು: ಎಷ್ಟು ತಂಗುದಾಣಗಳು ಎನ್ನುವ ಬಗ್ಗೆ ಸರ್ವೆ ಆಗಬೇಕಿದೆ. ಅದರ ನಂತರ ನಾವು ಪಟ್ಟಿ ಮಾಡಬಹುದು. ಸರ್ವೆ ಮಾಡುವ ಚಿಂತನೆ ಇದೆ. ಸದ್ಯಕ್ಕೆ ೧೯ರಿಂದ ೨೦ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಆರಂಭಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಪಾಲಿಕೆಯ ರೆವಿನ್ಯೂ ಇಲಾಖೆ ಜಾಹೀರಾತುದಾರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿದೆ.

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

13 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

14 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

14 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

14 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

15 hours ago