ಟೆಕ್‌

ಮೊಬೈಲ್‌ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕು ಎಂದರೆ ಹೀಗೆ ಮಾಡಿ…..

ಪ್ರತಿಯೊಬ್ಬರೂ ಈಗ ಸ್ಮಾರ್ಟ್ ಫೋನ್‌ಗಳಿಗೆ ಅಡಿಕ್ಟ್ ಆಗಿ ಹೋಗಿದ್ದಾರೆ. ಪ್ರಯಾಣದಲ್ಲಿರುವಾಗ, ಸುಮ್ಮನೆ ಕುಳಿತಿರುವಾಗ, ಕೆಲಸದ ವೇಳೆ, ಊಟದ ಸಮಯದಲ್ಲೂ ಸ್ಮಾರ್ಟ್ ಫೋನ್ ಬೇಕೇ ಬೇಕು. ಹೀಗೆ ದಿನದ ಬಹುತೇಕ ಸಮಯ ಸ್ಮಾರ್ಟ್ ಫೋನ್ ನೋಡುತ್ತಿದ್ದರೆ, ಅದರ ಬ್ಯಾಟರಿ ಬಾಳಿಕೆ ಬರುವುದಾದರೂ ಹೇಗೆ?

ಎಷ್ಟೇ ಸಂಶೋಧನೆಗಳು ನಡೆದರೂ ಹೆಚ್ಚು ಸಾಮರ್ಥ್ಯದ ಬ್ಯಾಟರಿಗಳಿಗಾಗಿ ಫೋನ್ ಗಾತ್ರವನ್ನೇ ಹಿಗ್ಗಿಸಬೇಕಾದ ಅನಿವಾರ್ಯತೆ ಇದೆ. ಫೋನ್‌ಗಳ ಬ್ಯಾಟರಿ ಬೇಗ ಚಾರ್ಚ್ ಮುಗಿದುಹೋಗಲು ಸಾಕಷ್ಟು ಕಾರಣಗಳಿವೆ. ಸಾಧನಗಳ ಗಾತ್ರ, ತೀಕ್ಷ್ಣ ಪ್ರಖರತೆಯಿರುವ ಸ್ಕ್ರೀನ್, ವೇಗದ ಪ್ರೊಸೆಸರ್‌ಗಳು, ಹಿನ್ನೆಲೆಯಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್‌ಗಳು, ವೇಗದ ಇಂಟರ್ ನೆಟ್, ಹೆಚ್ಚಿನ ಪ್ರಮಾಣದ ಗೇಮಿಂಗ್ ಹೀಗೆ ವಿವಿಧ ಕಾರಣಗಳಿಂದ ಚಾರ್ಚ್ ಬೇಗ ಕಡಿಮೆಯಾಗುತ್ತದೆ. ಬ್ಯಾಟರಿ ಚಾರ್ಜ್ ಹೆಚ್ಚು ಕಾಲ ಉಳಿಯುವಂತೆ ಮಾಡುವ ಕುರಿತು ವಿಜ್ಞಾನಿಗಳು ಸಂಶೋಧನೆಗಳನ್ನು ಮುಂದುವರಿಸುತ್ತಲೇ ಇದ್ದಾರೆ.

ಸ್ಮಾರ್ಟ್ ಫೋನ್ ಅಥವಾ ಯಾವುದೇ ಗ್ಯಾಜೆಟ್ಟನ್ನು ರಾತ್ರಿಯಿಡೀ ಚಾರ್ಜ್ ಇಡಬಹುದೇ? ಶೇ. ೧೦೦ರಷ್ಟು ಚಾರ್ಜ್ ಮಾಡಬಾರದೇ? ಎಂಬೆಲ್ಲ ಪ್ರಶ್ನೆಗಳು ಜನರಲ್ಲಿವೆ. ಈ ಹಿಂದೆ ಚಾರ್ಜ್‌ಗೆ ಇಟ್ಟ ಫೋನ್‌ಗಳು ಓವರ್ ಚಾರ್ಜ್ ಆಗಿ ಸ್ಛೋಟಗೊಂಡಿರುವ ಉದಾಹರಣೆ ಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಡಿಮೆಯಾಗಿದೆ. ಮೊಬೈಲ್ ಬ್ಯಾಟರಿಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈಗ ರಾತ್ರಿಯಿಡೀ ಚಾರ್ಚ್ ಮಾಡಿದರೂ ಏನೂ ಆಗದಂತಹ ತಂತ್ರಜ್ಞಾನವನ್ನು ಬಹುತೇಕ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಗಳು ಅಳವಡಿಸಿಕೊಂಡಿವೆ. ಅಂದರೆ ಶೇ. ೧೦೦ರಷ್ಟು ಚಾರ್ಜ್ ಆದ ಬಳಿಕ ವಿದ್ಯುತ್ ಪ್ರವಾಹವು ಕಡಿತವಾಗುವ ತಂತ್ರಜ್ಞಾನ ಬಂದಿದೆ.

ಚಾರ್ಜ್ ಮಾಡುವಾಗ ಈ ಅಂಶಗಳು ನೆನಪಿರಲಿ

೧. ಚಾರ್ಜ್ ಮಾಡುವಾಗ ಫೋನ್‌ಗೆ ಗಾಳಿಯಾಡುವಂತೆ ನೋಡಿಕೊಳ್ಳಿ. ಗಾಳಿಯಾಡದಿದ್ದರೆ ಫೋನ್ ಬಿಸಿಯಾಗಿ ಬ್ಯಾಟರಿ ಮೇಲೆ ಪರಿಣಾಮ ಬೀರಬಹುದು.
೨. ಶೇ. ೧೦೦ರಷ್ಟು ಚಾರ್ಜ್ ಬದಲು ಶೇ. ೮೦- ಶೇ. ೯೦ರಷ್ಟು ಚಾರ್ಜ್ ಮಾಡಿಕೊಳ್ಳಿ. ಶೇ. ೦ ಆಗದಂತೆ
ನೋಡಿಕೊಳ್ಳಬೇಕು.
೩. ಫೋನ್ ಸ್ಕ್ರೀನ್ ಪ್ರಖರತೆ ಕಡಿಮೆ ಮಾಡಿದಷ್ಟು ಕಣ್ಣಿಗೂ ಹಿತ, ಬ್ಯಾಟರಿಯೂ ಹೆಚ್ಚು ಬಾಳಿಕೆ ಬರಲಿದೆ.
೪. ಕೆಲಸ ಮಾಡುವಾಗ ಅಥವಾ ಮೊಬೈಲ್ ಬಳಸದಿದ್ದಾಗ ಸ್ಕ್ರೀನ್ ಆಫ್ ಆಗುವಂತೆ ಟೈಮ್ ಸೆಟ್ ಮಾಡಿಕೊಳ್ಳಬೇಕು.
೫. ಲೊಕೇಶನ್, ವೈರ್‌ಲೆಸ್, ಬ್ಲೂಟೂತ್ ಸೇವೆಗಳು ಮತ್ತು ಇಂಟರ್‌ನೆಟ್, ವೈಫೈ ಕೂಡ ಸದಾ ಕಾಲ ಆನ್‌ನಲ್ಲಿ ಇದ್ದರೆ ಬ್ಯಾಟರಿ ಚಾರ್ಜ್ ಖರ್ಚಾಗುತ್ತದೆ. ಇದಕ್ಕಾಗಿ ಅಗತ್ಯವಿದ್ದಾಗಲಷ್ಟೇ ಅವುಗಳನ್ನು ಆನ್ ಮಾಡಿಕೊಳ್ಳಿ.
೬. ಬಳಕೆಯಾಗದಿರುವ ಆಪ್‌ಗಳನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಬೇಕು.
೭. ಪವರ್ ಸೇವಿಂಗ್ ಅಥವಾ ಬ್ಯಾಟರಿ ಸೇವರ್ ಮೋಡ್ ಆನ್ ಮಾಡಿಕೊಳ್ಳುವುದು ಉತ್ತಮ.

 

ಆಂದೋಲನ ಡೆಸ್ಕ್

Recent Posts

ಮೈಕ್ರೋ ಫೈನಾನ್ಸ್‌ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ…

7 mins ago

ರಾಜ್ಯದ 101 ತಾಲ್ಲೂಕುಗಳು ಬರ ತಾಲ್ಲೂಕುಗಳೆಂದು ಘೋಷಣೆ: ಡಿಸಿಎಂ ಜಿ.ಪರಮೇಶ್ವರ್‌

ಮೈಸೂರು: ರೈತರಿಗೆ ಬರ ಪರಿಹಾರ ನೀಡುವ ವಿಚಾರವಾಗಿ ಮಾತನಾಡಿರುವ ಡಿಸಿಎಂ ಪರಮೇಶ್ವರ್‌, ರಾಜ್ಯದ 101 ತಾಲೂಕುಗಳನ್ನು ಬರ ತಾಲೂಕುಗಳೆಂದು ಘೋಷಣೆ…

14 mins ago

ಓದುಗರ ಪತ್ರ: ಉಳುವ ‘ಯೋಗಿ’ ಕೂಗಿಗೆ ಸರ್ಕಾರ ತರ್ತಾಗಿ ಸ್ಪಂದಿಸಲಿ

ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…

1 hour ago

ಓದುಗರ ಪತ್ರ: ರಾಷ್ಟ್ರಕವಿ ಶ್ಲಾಘನೆಯ ಸ್ಮರಣೆ

೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…

1 hour ago

ಓದುಗರ ಪತ್ರ: ಸೈಬರ್ ವಂಚನೆ: ಜಾಗೃತಿಯೂ ಫಲ ನೀಡುತ್ತಿಲ್ಲವಲ್ಲ…

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…

1 hour ago

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

4 hours ago