ರಾಜ್ಯ

ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕದ ಎರಡನೇ ಫೈನಲ್‌ ಪಟ್ಟಿ ಸೋರಿಕೆ!: ಮೈಸೂರಿನ ಇಬ್ಬರಿಗೆ ಸ್ಥಾನ?

ಬೆಂಗಳೂರು: ರಾಜ್ಯ ಸರ್ಕಾರ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ 36 ಕಾಂಗ್ರೆಸ್‌ ಶಾಸಕರನ್ನು ಮೊದಲ ಪಟ್ಟಿಯಲ್ಲಿ ನೇಮಿಸಿದ ಬೆನ್ನಲ್ಲೇ ಇದೀಗ 34 ಜನ ಕೈ ಕಾರ್ಯಕರ್ತರನು ಒಳಗೊಂಡ ಎರಡನೇ ಪಟ್ಟಿಯನ್ನು ಸಿದ್ದಪಡಿಸಿದ್ದು, ಒಂದೆರೆಡು ದಿನಗಳಲ್ಲಿ ಯಾವೆಲ್ಲಾ ಕೈ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಬಗ್ಗೆ ಅಧಸೂಚನೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹೈಕಮಾಂಡ್‌ ಒಪ್ಪಿಗೆ ನೀಡಿರುವ 34 ಕಾರ್ಯಕರ್ತರಲ್ಲಿ ಯಾರಿಗೆ ಯಾವ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲದರ ನೆಡುವೆ, ನಿಗಮ-ಮಂಡಳಿಗಳ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದೆ.

ಈ ಪ್ರಕಾರ ಕಾಂತಾ ನಾಯಕ್‌, ವಿನೋದ್‌ ಎಸ್‌ ಅಸೂಟಿ, ಮುಂಡರಗಿ ನಾಗರಾಜ್‌, ಡಾ. ಅಂಶುಮಂಥ್‌, ಬಿ.ಎಚ್‌. ಹರೀಶ, , ಜೆ.ಎಸ್‌. ಆಂಜನೇಯುಲು, ಡಾ. ಬಿ. ಯೋಗೇಶ ಬಾಬು, ಡಾ.ಎಚ್‌ ಕೃಷ್ಣ, ಮರಿಗೌಡ, ದೇವೀಂದ್ರಪ್ಪ ಮರ್ತೂರು, ರಾಜಶೇಖರ್‌ ರಾಮಸ್ವಾಮಿ, ಕೆ.ಮರೀಗೌಡ, ಜಯಣ್ಣ, ಎಸ್‌ ಮನೋಹರ್‌, ಅಯ್ಯೂಬ್‌ ಖಾನ್‌, ಮಮತಾ ಗುಟ್ಟಿ, ಜಿ. ಪಲ್ಲವಿ, ಎಸ್‌.ಇ ಸುಧೀಂದ್ರ, ಡಾ. ನಾಗಲಕ್ಷ್ಮೀ ಚೌಧರಿ, ಎಚ್‌.ಎಸ್‌. ಸುಂದರೇಶ್‌, ಆರ್‌.ಎಂ ಮಂಜುನಾಥ್‌ ಗೌಡ, ಜಯಣ್ಣ, ಸಂಪತ್‌ ರಾಜ್‌, ಸವಿತಾ ರಘು, ಪದ್ಮಾವತಿ, ಶಾಕಿರ್‌ ಸನದಿ, ಸರೋವರ ಶ್ರೀನಿವಾಸ್‌, ಸೋಮಣ್ಣ ಬೇವಿರಮರದ್‌, ಬಿ. ಪುಷ್ಪ ಅಮರನಾಥ್‌, ಮಹಬೂಬ್‌ ಪಾಷ, ಕೀರ್ತಿ ಗಣೇಶ್‌, ಮಝರ್‌ ಖಾನ್‌, ಲಲಿತ್‌ ರಾಘವ್‌, ಜಿ.ಎಸ್‌ ಮಂಜುನಾಥ್‌ ಅವರಿಗೆ ಮಂಡಳಿ ಅಧ್ಯಕ್ಷರ ಸ್ಥಾನ ಖಚಿತ ಎಂದಯ ಹೇಳಲಾಗುತ್ತಿದೆ.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago