ಬೆಂಗಳೂರು : ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA), ಎಫ್.ಎಂ.ಎಸ್.ಸಿ.ಐ ಹಾಗೂ ಇಂಡಿಯಾ ಮೋಟಾರ್ ಸ್ಪೋರ್ಟ್ಸ್ನ ವತಿಯಿಂದ ಇಂದಿನಿಂದ(ಜೂ.21) ರ್ಯಾಲಿ ಆಫ್ ಬೆಂಗಳೂರು ನಡೆಯುತ್ತಿದ್ದು, ನಾಳೆ ಫೈನಲ್ ಹಣಾಹಣೆ ಇರಲಿದೆ.
ಜೂನ್ 21 ಮತ್ತು 22ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಕ್ತಿ ಹಿಲ್ ರೆಸಾರ್ಟ್ನಲ್ಲಿ ನಡೆಯುತ್ತಿದೆ . ಜೆಕೆ ಟೈರ್ ಮೋಟಾರ್ ಸ್ಪೋರ್ಟ್ ಮತ್ತು ವಂಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ನ ಬೆಂಬಲದಿಂದ ಅನೇಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ.
ರ್ಯಾಲಿ ಆಫ್ ಬೆಂಗಳೂರು ಸ್ಪರ್ಧಿಗಳ ಪಟ್ಟಿಯನ್ನು INTSDRC-1 (ಒವರ್ಆಲ್), INTSDRC-2, ಪ್ರೊ ಸ್ಟಾಕ್, ವುಮೆನ್ಸ್, ಕಪಲ್ (INTSDRC-C), ಮತ್ತು ಕಾರ್ಪೊರೇಟ್ (INTSDRC-Corp) ವರ್ಗಗಳು ಸೇರಿವೆ.
ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಚಾಲಕರು ಮತ್ತು ಸಿಬ್ಬಂದಿಗೆ ಸಮಗ್ರ ವೈದ್ಯಕೀಯ ನೆರವನ್ನು ಒದಗಿಸಲು ನ್ಯಾನೋ ಆಸ್ಪತ್ರೆಗಳು ಮತ್ತು ಟ್ರೂಸ್ಕ್ಯಾನ್ ಡಯಾಗ್ನೋಸ್ಟಿಕ್ಸ್ ಆರೋಗ್ಯ ಸಂಸ್ಥೆಗಳು ನೆರವಾಗುತ್ತಿವೆ. ಜೊತೆಗೆ ಕೆಫೆ ಪೆಟ್ರಿಕ್ಕೋರ್, ಆಕ್ಟೇನ್ಪಿಟ್ಸ್ ಮತ್ತು ಗಿಗಾಬೈಟ್ ಇಂಕ್ (ಟೆಕ್ ಪಾರ್ಟ್ನರ್) ಮುಂತಾದ ಪ್ರಮುಖ ಸಹಯೋಗಿಗಳೂ ರ್ಯಾಲಿಗೆ ಬೆಂಬಲ ನೀಡುತ್ತಿವೆ.
ದೇಶದ ಅತಿಪುರಾತನ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಗಳಲ್ಲಿ ಒಂದಾದ ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಈ ವರ್ಷ ತನ್ನ 30ನೇ ವರ್ಷದ ಸಂಭ್ರಮದಲ್ಲಿದ್ದು, ಈ ರ್ಯಾಲಿ ಸಂಸ್ಥೆಯ ಪರಂಪರೆಯ ಹೆಮ್ಮೆಗೂ ಸಾಕ್ಷಿಯಾಗಲಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…
ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…
ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…
ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…
ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…
ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…