ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ಇನ್ನೂ ಕೆಲ ಟ್ಯಾಕ್ಸಿ ಬುಕಿಂಗ್ ಅಪ್ಲಿಕೇಶನ್ಗಳು ಮನಸೋ ಇಚ್ಚೆ ದರ ನಿಗದಿ ಮಾಡುತ್ತಿವೆ. ರಾತ್ರಿ ಹತ್ತು ದಾಟಿದರೆ ಸಾಕು ದರವನ್ನು ಬೇಕಾಬಿಟ್ಟಿ ಏರಿಸಿಬಿಡುತ್ತಾರೆ, ಇನ್ನು ಮಳೆ ಬಂತೆಂದರೆ ಕೇಳುವ ಹಾಗೆ ಇಲ್ಲ ಒಂದೊಂದು ನಗರಗಳಲ್ಲಿ ಡಬಲ್ ರೇಟ್ ಫಿಕ್ಸ್ ಎಂದು ಪ್ರಯಾಣಿಕರು ಕಿಡಿಕಾರುತ್ತಲೇ ಇದ್ದರು.
ಹೀಗೆ ಖಾಸಗಿ ಟ್ಯಾಕ್ಸಿ ಬುಕಿಂಗ್ ಕಂಪನಿಗಳು ನಡೆಸುತ್ತಿದ್ದ ಆಟಟೋಪಕ್ಕೆ ಬ್ರೇಕ್ ಹಾಕಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ರಾಜ್ಯಾದ್ಯಂತ ಏಕರೂಪದ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದೆ. ಫೆಬ್ರವರಿ ತಿಂಗಳಿನಿಂದಲೇ ಈ ಹೊಸ ನಿಯಮ ಅನ್ವಯಿಸಲಿದೆ.
ಏಕರೂಪ ದರದ ಮಾನದಂಡಗಳು
* ಹತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಲೊಮೀಟರ್ವರೆಗೆ ಕನಿಷ್ಟ 100 ರೂ ನಿಗದಿ. 4 ಕಿಲೊಮೀಟರ್ ಬಳಿಕ ಪ್ರತಿ ಕಿ.ಮೀ.ಗೆ ಹೆಚ್ಚುವರಿ 24 ರೂಪಾಯಿ ನಿಗದಿ.
* 10ರಿಂದ 15 ಲಕ್ಷ ರೂಪಾಯಿಗಳ ಮೌಲ್ಯದ ವಾಹನಗಳಿಗೆ 4 ಕಿಲೊಮೀಟರ್ವರೆಗೆ ಕನಿಷ್ಟ 115 ರೂ ನಿಗದಿ. 4 ಕಿಲೊಮೀಟರ್ ಬಳಿಕ ಪ್ರತಿ ಕಿ.ಮೀ.ಗೆ ಹೆಚ್ಚುವರಿ 28 ರೂಪಾಯಿ ನಿಗದಿ.
* 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಲೊಮೀಟರ್ವರೆಗೆ ಕನಿಷ್ಟ 130 ರೂ ನಿಗದಿ. 4 ಕಿಲೊಮೀಟರ್ ಬಳಿಕ ಪ್ರತಿ ಕಿ.ಮೀ.ಗೆ ಹೆಚ್ಚುವರಿ 32 ರೂಪಾಯಿ ನಿಗದಿ.
ಹೊಸ ನಿಯಮಗಳು:
* ವೈಯಕ್ತಿಕ ಲಗೇಜುಗಳಿಗೆ 120 ಕೆಜಿಗಳವರೆಗೆ ವಿನಾಯಿತಿ
* ಮೊದಲ 5 ನಿಮಿಷಗಳ ಕಾಯುವಿಕೆಗೆ ಶುಲ್ಕ ಇಲ್ಲ
* ಪ್ರಯಾಣಿಕರಿಂದ ಜಿಎಸ್ಟಿ, ಟೋಲ್ ವಸೂಲಿಗೆ ಅವಕಾಶ
* ಬೆಳಗಿನ ಜಾವ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ
ಬೆಂಗಳೂರು: ಕಾಂಗ್ರೆಸ್ನಲ್ಲಿ ಡ್ರೈವರ್ ಬದಲಾಗಿದ್ದಾರೆ ಅಷ್ಟೇ. ಬಸ್, ಎಂಜಿನ್ ಕೆಟ್ಟು ಹೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಈ…
ಮಡಿಕೇರಿ: ತಾಲ್ಲೂಕಿನ ಕತ್ತಲೆಕಾಡು ಗ್ರಾಮದಲ್ಲಿ ವನ್ಯಪ್ರಾಣಿ ದಾಳಿಗೆ ಜಾನುವಾರು ಬಲಿಯಾಗಿದ್ದು, ಹುಲಿ ದಾಳಿಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಆನಂದ…
ಮೈಸೂರು: ಡಿಕೆಶಿ ಸಂಪುಟದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡುವಂತೆ ಶಾಸಕ ಹರೀಶ್ ಗೌಡ ಹೇಳಿದ್ದಾರೆ. ಈ…
ನವದೆಹಲಿ: ಕಾಂಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್.6ರಂದು ಭಾರತಕ್ಕೆ ಮರಳಲಿದ್ದು, ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಹೊಸದಾಗಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತಿಂಗಳಿಗೆ 3000 ರೂ ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಅವರು ಶಾಸಕಿಯಾಗಿ ಆಯ್ಕೆಯಾಗಿ, ಸಚಿವೆಯಾಗಿ…
ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಗೆ…