ಕ್ರೀಡೆ

ಜಯದ ಶುಭಾರಂಭ ಕಂಡ ಬೆಂಗಳೂರು ಬುಲ್ಸ್‌

ಬೆಂಗಳೂರು: ವಿವೋ ಪ್ರೋ ಕಬಡ್ಡಿ ಲೀಗ್‌ 9ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 34-29 ಅಂಕಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.

ದಕ್ಷಿಣದ ಡರ್ಬಿ ಎಂದೇ ಪ್ರಚಲಿತವಾದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಪರ ನೀರಜ್‌ ನರ್ವಾಲ್‌ ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಭರತ್‌ ಹಾಗೂ ವಿಕಾಶ್‌ ಕಂಡೋಲಾ ಕೂಡ ರೈಡಿಂಗ್‌ನಲ್ಲಿ ತಲಾ 5 ಅಂಕಗಳನ್ನು ತಂಡದ ರೋಚಕ ಜಯದಲ್ಲಿ ಭಾಗಿಯಾದರು. ನಾಯಕ ಮಹೇಂದರ್‌ ಸಿಂಗ್‌ ಹಾಗೂ ಸೌರಭ್‌ ನಂದಾಲ್‌ ತಲಾ 4 ಅಂಕಗಳೊಂದಿಗೆ ಜವಾಬ್ದಾರಿಯುತ ಪ್ರದರ್ಶನ ನೀಡಿದರು.
ತೆಲುಗು ಟೈಟಾನ್ಸ್‌ ಪರ ವಿನಯ್‌ ಹಾಗೂ ರಜನೀಶ್‌ ತಲಾ 7 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿಂದ ಪಾರುಮಾಡಲಾಗಲಿಲ್ಲ. ಪ್ರಥಮಾರ್ಧ ಕೊನೆಯಲ್ಲಿ ನೀಡಿದ ದಿಟ್ಟ ಹೋರಾಟವನ್ನು ಮರು ಪ್ರದರ್ಶನ ನೀಡುವಲ್ಲಿ ತೆಲುಗು ಟೈಟಾನ್ಸ್‌ ವಿಫಲವಾಯಿತು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದ ಪ್ರಮಾದಗಳನ್ನು ತಿದ್ದಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ದ್ವಿತಿಯಾರ್ಧಲ್ಲಿ ಇತ್ತಂಡಗಳು ಸಮಬಲದ ಹೋರಾಟ ನೀಡಿದವು. ಪಂದ್ಯ 23-23ರಲ್ಲಿ ಹೆಚ್ಚಿನ ಸಮಬ ಮುಂದುವರಿದಿತ್ತು. ಆದರೆ ಬೆಂಗಳೂರು ತಂಡದ ರೈಡರ್‌ ಭರತ್‌ 7 ನಿಮಿಷ ಬಾಕಿ ಇರುವಾಗ ಗಳಿಸಿದ ಎರಡು ಅಂಕ ಪಂದ್ಯಕ್ಕೆ ತಿರುವು ನೀಡಿತು. ಬುಲ್ಸ್‌ 25-23ರಲ್ಲಿ ಮುನ್ನಡೆ ಕಂಡಿತು. ತೆಲುಗು ಟೈಟಾನ್ಸ್‌ ದ್ವಿತಿಯಾರ್ಧದಲ್ಲಿ ಆಲೌಟ್‌ ಆಗುವು ಮೂಲಕ ಬೆಂಗಳೂರು 30-25ರಲ್ಲಿ ಮುನ್ನಡೆ ಕಾಯ್ದುಕೊಂಡಿತು.
ಇತ್ತಂಡಗಳ ನಾಯಕರು ದ್ವಿತಿಯಾರ್ಧದಲ್ಲಿ ಅಂಕಗಳ ಖಾತೆ ತೆರೆದಿರುವುದು ವಿಶೇಷ. ಬೆಂಗಳೂರು ಬುಲ್ಸ್‌ ನಾಯಕ ಮಹೇಂದರ್‌ ಸಿಂಗ್‌ ಎಡ ಭಾಗದ ಡಿಫೆಂಡರ್‌, ತೆಲುಗು ಟೈಟಾನ್ಸ್‌ ತಂಡದ ನಾಯಕ ರವಿಂದರ್‌ ಪಹಲ್‌ ಬಲ ಭಾಗದ ಡಿಫೆಂಡರ್‌ ಪ್ರಥಮಾರ್ಧದಲ್ಲಿ ಇಬ್ಬರೂ ನಾಯಕರು ತಂಡದ ಪರ ಅಂಕ ಗಳಿಸುವಲ್ಲಿ ವಿಫಲರಾಗಿದ್ದರು,
ಸಮಬಲದ ಪ್ರಥಮಾರ್ಧ: ಬೆಂಗಳೂರು ಬುಲ್ಸ್‌ ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರಥಮಾರ್ಧಲ್ಲಿ ಮೇಲುಗೈ ಸಾಧಿಸುತ್ತದೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಕ್ಕ ತಿರುಗೇಟು ನೀಡಿದ ತೆಲುಗು ಟೈಟಾನ್ಸ್‌ 17-17 ಅಂಗಳಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ನಾಯಕ ಮಹೇಂದರ್‌ ಸಿಂಗ್‌ ಮುಂದಾಳತ್ವದಲ್ಲಿ ಅಂಗಣಕ್ಕಿಳಿದ ಬೆಂಗಳೂರು ಬುಲ್ಸ್‌ ತಂಡ ಆರಂಭದಲ್ಲಿ ನಿರಂತರ ಎರಡು ಅಕಂಗಳನ್ನು ಎದುರಾಳಿ ತಂಡಕ್ಕೆ ನೀಡಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು. ಆದರೆ ಈ ನಿರಾಸೆ ಕೆಲ ಕ್ಷಣಗಳಿಗೆ ಮಾತ್ರ ಸೀಮಿತವಾಗಿತ್ತು. ಪ್ರೇಕ್ಷಕರ ಪ್ರೋತ್ಸಾಹದಲ್ಲಿ ಸಿಡಿದೆದ್ದ ತಂಡ ಪ್ರಥಮಾರ್ಧದ ಒಂದು ಹಂತದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆಲೌಟ್‌ ಆಗುವ ಮೂಲಕ ತೆಲುಗು ಟೈಟಾನ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಬೆಂಗಳೂರು ಪರ ವಿಕಾಶ್‌ ಕಂಡೋಲ 4 ಅಂಕಗಳನ್ನು ರೈಡಿಂಗ್‌ ಮೂಲಕ ಗಳಿಸಿದರು. ನೀರಜ್‌ ನರ್ವಾಲ್‌ ಕೂಡ ರೈಡಿಂಗ್‌ನಲ್ಲಿ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾಗಿದ್ದರು. ಆದರೆ ತೆಲುಗು ಟೈಟಾನ್ಸ್‌ ಪರ ರಜನೀಶ್‌ ಹಾಗೂ ವಿನಯ್‌ ತಲಾ 4 ಅಂಕಗಳನ್ನು ಗಳಿಸಿ ತಂಡ ತಿರುಗೇಟು ನೀಡಲು ನೆರವಾದರು.
ಬೆಂಗಳೂರು ಬುಲ್ಸ್‌ನ ನೀರಜ್‌ ನರ್ವಾಲ್‌ 4 ಮತ್ತು ಟ್ಯಾಕಲ್‌ನಲ್ಲಿ ಸೌರಭ್‌ ನರ್ವಾಲ್‌ 3 ಅಂಕಗಳನ್ನು ಗಳಿಸಿ ಒಂದು ಹಂತದವರೆಗೆ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.

andolanait

Recent Posts

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿಯ ರಾಜೀವ್ ಗಾಂಧಿ ನಗರದಲ್ಲಿ ಬಸ್ ತಂಗುದಾಣವಿಲ್ಲದೆ ಸಾರ್ವಜನಿಕರು ಬೇಸಿಗೆಯಲ್ಲಿ ಬಿಸಿಲಿನಲ್ಲಿ ಹಾಗೂ ಮಳೆಗಾಲದಲ್ಲಿ ಮಳೆಯಲ್ಲೇ ನಿಲ್ಲುವುದು…

59 mins ago

ಓದುಗರ ಪತ್ರ: ಜನರ ನಿರೀಕ್ಷೆಗಳಿಂದ ದೂರವಾಗುತ್ತಿರುವ ಶಾಸನಸಭೆಗಳು

ಲೋಕಸಭೆ ಮತ್ತು ವಿಧಾನಸಭೆ ಅಧಿವೇಶನಗಳು ಜನರ ಸಮಸ್ಯೆಗಳನ್ನು ಚರ್ಚಿಸಲು, ನೀತಿಗಳನ್ನು ರೂಪಿಸಲು ಹಾಗೂ ದೇಶ, ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು…

1 hour ago

ಓದುಗರ ಪತ್ರ: ಬೇಸರ ತರಿಸಿದ ಜನಪ್ರತಿನಿಧಿಗಳ ವರ್ತನೆ

ಇತ್ತೀಚೆಗೆ ನಡೆದ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕೆಲವು ಸದಸ್ಯರು ನಡೆದುಕೊಂಡ ರೀತಿ ತಲೆ ತಗ್ಗಿಸುವಂತಿದೆ. ಅವರು ಬಳಸಿದ ಪದ…

1 hour ago

ಸೈನ್ಯ ಯುದ್ಧ ಮಾಡುತ್ತದೆ, ತೀರ್ಮಾನ ಸರ್ಕಾರ ಮಾಡಬೇಕು…!

ಅತ್ಯಂತ ಅಪಾಯಕಾರಿ ಪರಿಸ್ಥಿತಿಯೊಂದನ್ನು ನನಗೆ ಹಸ್ತಾಂತರಿಸಲಾಗಿತ್ತು: ನರವಣೆ ‘ಜವಾಬ್ದಾರಿಯಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದ ಪ್ರಧಾನಿ’ ‘ಇಂದಿರಾ ಗಾಂದಿ, ವಾಜಪೇಯಿ ಪ್ರಧಾನಿಗಳಾಗಿದ್ದಾಗ…

1 hour ago

ಇಂದು ಶನಿವಾರಸಂತೆ ಬಸ್ ನಿಲ್ದಾಣ ಉದ್ಘಾಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಜನತೆಯ ೩೦ ವರ್ಷಗಳ ಕನಸು ಕೊನೆಗೂ ನನಸು; ೧.೦೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನಿಲ್ದಾಣ ಸೋಮವಾರಪೇಟೆ:…

1 hour ago

ಮಡಹಳ್ಳಿ ಬಳಿಯ ಅಕ್ರಮ ಕ್ರಷರ್‌ನಿಂದ ಜನತೆ ಹೈರಾಣ

ಮಹೇಂದ್ರ ಹಸಗೂಲಿ ನಿಯಮಾವಳಿ ಪಾಲಿಸದ ಕ್ರಷರ್; ದೂಳು-ಶಬ್ದ ಮಾಲಿನ್ಯ ಆರೋಪ ಗುಂಡ್ಲುಪೇಟೆ: ತಾಲ್ಲೂಕಿನ ಮಡಹಳ್ಳಿ ಗ್ರಾಮದ ಬಳಿ ಇರುವ ಪಾರ್ವತಿ…

1 hour ago