ಬೆಂಗಳೂರು: ವಿವೋ ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 34-29 ಅಂಕಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.
ತೆಲುಗು ಟೈಟಾನ್ಸ್ ಪರ ವಿನಯ್ ಹಾಗೂ ರಜನೀಶ್ ತಲಾ 7 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿಂದ ಪಾರುಮಾಡಲಾಗಲಿಲ್ಲ. ಪ್ರಥಮಾರ್ಧ ಕೊನೆಯಲ್ಲಿ ನೀಡಿದ ದಿಟ್ಟ ಹೋರಾಟವನ್ನು ಮರು ಪ್ರದರ್ಶನ ನೀಡುವಲ್ಲಿ ತೆಲುಗು ಟೈಟಾನ್ಸ್ ವಿಫಲವಾಯಿತು. ಬೆಂಗಳೂರು ಬುಲ್ಸ್ ಪ್ರಥಮಾರ್ಧದ ಪ್ರಮಾದಗಳನ್ನು ತಿದ್ದಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ದ್ವಿತಿಯಾರ್ಧಲ್ಲಿ ಇತ್ತಂಡಗಳು ಸಮಬಲದ ಹೋರಾಟ ನೀಡಿದವು. ಪಂದ್ಯ 23-23ರಲ್ಲಿ ಹೆಚ್ಚಿನ ಸಮಬ ಮುಂದುವರಿದಿತ್ತು. ಆದರೆ ಬೆಂಗಳೂರು ತಂಡದ ರೈಡರ್ ಭರತ್ 7 ನಿಮಿಷ ಬಾಕಿ ಇರುವಾಗ ಗಳಿಸಿದ ಎರಡು ಅಂಕ ಪಂದ್ಯಕ್ಕೆ ತಿರುವು ನೀಡಿತು. ಬುಲ್ಸ್ 25-23ರಲ್ಲಿ ಮುನ್ನಡೆ ಕಂಡಿತು. ತೆಲುಗು ಟೈಟಾನ್ಸ್ ದ್ವಿತಿಯಾರ್ಧದಲ್ಲಿ ಆಲೌಟ್ ಆಗುವು ಮೂಲಕ ಬೆಂಗಳೂರು 30-25ರಲ್ಲಿ ಮುನ್ನಡೆ ಕಾಯ್ದುಕೊಂಡಿತು.
ಇತ್ತಂಡಗಳ ನಾಯಕರು ದ್ವಿತಿಯಾರ್ಧದಲ್ಲಿ ಅಂಕಗಳ ಖಾತೆ ತೆರೆದಿರುವುದು ವಿಶೇಷ. ಬೆಂಗಳೂರು ಬುಲ್ಸ್ ನಾಯಕ ಮಹೇಂದರ್ ಸಿಂಗ್ ಎಡ ಭಾಗದ ಡಿಫೆಂಡರ್, ತೆಲುಗು ಟೈಟಾನ್ಸ್ ತಂಡದ ನಾಯಕ ರವಿಂದರ್ ಪಹಲ್ ಬಲ ಭಾಗದ ಡಿಫೆಂಡರ್ ಪ್ರಥಮಾರ್ಧದಲ್ಲಿ ಇಬ್ಬರೂ ನಾಯಕರು ತಂಡದ ಪರ ಅಂಕ ಗಳಿಸುವಲ್ಲಿ ವಿಫಲರಾಗಿದ್ದರು,
ಸಮಬಲದ ಪ್ರಥಮಾರ್ಧ: ಬೆಂಗಳೂರು ಬುಲ್ಸ್ ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರಥಮಾರ್ಧಲ್ಲಿ ಮೇಲುಗೈ ಸಾಧಿಸುತ್ತದೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಕ್ಕ ತಿರುಗೇಟು ನೀಡಿದ ತೆಲುಗು ಟೈಟಾನ್ಸ್ 17-17 ಅಂಗಳಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ನಾಯಕ ಮಹೇಂದರ್ ಸಿಂಗ್ ಮುಂದಾಳತ್ವದಲ್ಲಿ ಅಂಗಣಕ್ಕಿಳಿದ ಬೆಂಗಳೂರು ಬುಲ್ಸ್ ತಂಡ ಆರಂಭದಲ್ಲಿ ನಿರಂತರ ಎರಡು ಅಕಂಗಳನ್ನು ಎದುರಾಳಿ ತಂಡಕ್ಕೆ ನೀಡಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು. ಆದರೆ ಈ ನಿರಾಸೆ ಕೆಲ ಕ್ಷಣಗಳಿಗೆ ಮಾತ್ರ ಸೀಮಿತವಾಗಿತ್ತು. ಪ್ರೇಕ್ಷಕರ ಪ್ರೋತ್ಸಾಹದಲ್ಲಿ ಸಿಡಿದೆದ್ದ ತಂಡ ಪ್ರಥಮಾರ್ಧದ ಒಂದು ಹಂತದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆಲೌಟ್ ಆಗುವ ಮೂಲಕ ತೆಲುಗು ಟೈಟಾನ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಬೆಂಗಳೂರು ಪರ ವಿಕಾಶ್ ಕಂಡೋಲ 4 ಅಂಕಗಳನ್ನು ರೈಡಿಂಗ್ ಮೂಲಕ ಗಳಿಸಿದರು. ನೀರಜ್ ನರ್ವಾಲ್ ಕೂಡ ರೈಡಿಂಗ್ನಲ್ಲಿ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾಗಿದ್ದರು. ಆದರೆ ತೆಲುಗು ಟೈಟಾನ್ಸ್ ಪರ ರಜನೀಶ್ ಹಾಗೂ ವಿನಯ್ ತಲಾ 4 ಅಂಕಗಳನ್ನು ಗಳಿಸಿ ತಂಡ ತಿರುಗೇಟು ನೀಡಲು ನೆರವಾದರು.
ಬೆಂಗಳೂರು ಬುಲ್ಸ್ನ ನೀರಜ್ ನರ್ವಾಲ್ 4 ಮತ್ತು ಟ್ಯಾಕಲ್ನಲ್ಲಿ ಸೌರಭ್ ನರ್ವಾಲ್ 3 ಅಂಕಗಳನ್ನು ಗಳಿಸಿ ಒಂದು ಹಂತದವರೆಗೆ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.
ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…
ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…
ಕನ್ನಡದ ಖಾಸಗಿ ಚಾನೆಲ್ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…
ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…