ಕ್ರೀಡೆ

ಹುಬ್ಬಳ್ಳಿ ಟೈಗರ್ಸ್ ಗೆಲುವಿನ ಓಟಕ್ಕೆ ಮೈಸೂರು ಲಗಾಮು: ಕರುಣ್ ಪಡೆಗೆ ಸತತ ನಾಲ್ಕನೇ ಗೆಲುವು

ಬೆಂಗಳೂರು : ಮೈಸೂರು ವಾರಿಯರ್ಸ್‌ ತಂಡವು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸುವ ಮೂಲಕ ಹುಬ್ಬಳ್ಳಿ ಅಜೇಯ ಓಟಕ್ಕೆ ಲಗಾಮು ಹಾಕಿದೆ. ಜತೆಗೆ ಸತತ ನಾಲ್ಕನೇ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ವಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು ಆರಂಭಿಕ ದಾಂಡಿಗ ಲುವ್ನಿತ್ ಸಿಸೋಡಿಯಾ (೬೩ ಎಸೆತಗಳಲ್ಲಿ ೧೦೫ ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೮೫ ರನ್ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ವಾರಿಯರ್ಸ್, ಆರಂಭಿಕ ಬ್ಯಾಟರ್ ಆರ್.ಸಮರ್ಥ್ ಅವರ ಸಮರ್ಥ ಆಟದೊಂದಿಗೆ ೭ ಎಸೆತಗಳು ಬಾಕಿ ಇರುವಂತೆಯೇ ೬ ವಿಕೆಟ್‌ಗಳ ಜಯ ದಾಖಲಿಸಿತು.

ಹುಬ್ಬಳ್ಳಿ ಪರ ಆರಂಬಿಕ ದಾಂಡಿಗ ಸಿಸೋಡಿಯಾ ಶತಕಕ್ಕೆ ನಾಯಕ ಮನೀಶ್ ಪಾಂಡೆ ೩೩(೨೧) ಸಾಥ್ ನೀಡಿದರು. ಪ್ರವೀಣ್ ದುಬೆ ೧೬(೬), ನಾಗ ಭರತ್ ೧೨(೧೭) ಆಟದಿಂದ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವಾರಿಯರ್ಸ್‌ನ ಸಿಎ ಕಾರ್ತಿಕ್ ೪ ಓವರ್ ಬೌಲಿಂಗ್ ವಾಡಿ ೫೦ ರನ್ ನೀಡಿ ಪ್ರಮುಖ ೪ ವಿಕೆಟ್ ಕಬಳಿಸಿದರು. ಶಶಿಕುವಾರ್, ಮನೋಜ್ ಬಾಂಗಡೆ ತಲಾ ೧ ವಿಕೆಟ್ ಪಡೆದರು.

ಬೃಹತ್ ಮೊತ್ತ ಚೇಸ್ ವಾಡಿದ ವಾರಿಯರ್ಸ್‌ಗೆ ಆರಂಭಿಕ ದಾಂಡಿಗ ಆರ್.ಸಮರ್ಥ್ ಉತ್ತಮ ಆರಂಭ ಒದಗಿಸಿದರು, ೪೨ ಎಸೆತಗಳಲ್ಲಿ ೩ ಸಿಕ್ಸರ್ ಮತ್ತು ೬ ಬೌಂಡರಿ ಮೂಲಕ ೭೩ ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು. ನಾುಂಕ ಕರುಣ್ ನಾುಂರ್ ೪೧(೨೫) ಉತ್ತಮ ಇನ್ನಿಂಗ್ಸ್ ಕಟ್ಟಿದರು. ಅಂತಿಮ ಐದು ಓವರ್‌ಗಳಲ್ಲಿ ೪೨ ರನ್‌ಗಳ ಅಗತ್ಯವಿದ್ದಾಗ, ಶೋಯಬ್ ವ್ಯಾನೇಜರ್ (೨೧*) ಮತ್ತು ಶಿವಕುವಾರ್ ರಕ್ಷಿತ್ (೨೨*) ಅವರ ಜೊತೆಯಾಟದಿಂದ ೧೮.೫ ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ತಂಡ ಜಯದ ಮಂದಹಾಸ ಬೀರಿತು.

ಸಂಕ್ಷಿಪ್ತ ಸ್ಕೋರ್ :

ಹುಬ್ಬಳ್ಳಿ ಟೈಗರ್ಸ್ : ೨೦ ಓವರ್‌ಗಳಲ್ಲಿ ೧೮೫-೭: ಲುವಿನಿತ್ ಸಿಸೋಡಿಯಾ ೧೦೫(೬೩), ಮನೀಶ್ ಪಾಂಡೆ ೩೩(೨೧), ಪ್ರವೀಣ್ ದುಬೆ೧೬(೬) ಸಿಎ ಕಾರ್ತಿಕ್ ೪-೫೦, ಶಶಿಕುವಾರ್ ೧-೨೫, ಮನೋಜ್ ಭಾಂಡಗೆ ೧-೨೮

ಮೈಸೂರು ವಾರಿಯರ್ಸ್ : ೧೮.೫ ಓವರ್‌ಗಳಲ್ಲಿ ೧೮೮-೪: ಆರ್. ಸಮರ್ಥ್ ೭೩(೪೨), ಕರುಣ್ ನಾಯರ್ ೪೧(೨೫), ಸಿಎ ಕಾರ್ತಿಕ್ ೨೯(೧೮) ಪ್ರವೀಣ್ ದುಬೆ ೩-೩೮.

ಪಂದ್ಯಶ್ರೇಷ್ಠ : ಆರ್. ಸಮರ್ಥ್

andolanait

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ ಆರ್.‌ಅಶೋಕ್‌

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗಿರುವ ಶೂಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರದ…

4 hours ago

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸರ್ಕಾರ

ಬೆಂಗಳೂರು: ಹಬ್ಬಗಳ ಸೀಸನ್ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಪಿಒಪಿ ಗಣೇಶ ಮೂರ್ತಿಗಳ…

5 hours ago

ರಾಜ್ಯದಲ್ಲಿ ಕೈಕೊಟ್ಟ ಮುಂಗಾರು: ಸಂಕಷ್ಟದತ್ತ ಕೃಷಿ ವಲಯ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕೃಷಿ ವಲಯ ಮತ್ತೊಂದು ಗಂಭೀರ ಸಂಕಷ್ಟದತ್ತ ಸಾಗುತ್ತಿದೆ. ಸತತ ಮೂರು ವಾರಗಳಿಂದ…

5 hours ago

ಮಳೆ ಕೈಕೊಟ್ಟಿದ್ದಕ್ಕೆ ರಾಜ್ಯದಲ್ಲಿ ತಾಪಮಾನ ಏರಿಕೆ – ಮಳೆಗಾಲದಲ್ಲೇ ಬೇಸಿಗೆಯಂತಹ ಬಿಸಿಲು

ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಬೆನ್ನಲ್ಲೇ ತಾಪಮಾನ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲೂ ಬೇಸಿಗೆಯಂತಹ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಸಾಮಾನ್ಯವಾಗಿ…

5 hours ago

SIR ನೋಟಿಸ್: ವಿಚಾರಣೆಗೆ ತೆರಳುವಾಗ ಈ ದಾಖಲೆಗಳು ನಿಮ್ಮ ಬಳಿ ಇರಲಿ

ಬೆಂಗಳೂರು: SIR ನೋಟಿಸ್‌ಗಳ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ. ನಿಮ್ಮ…

7 hours ago

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

12 hours ago