ಕ್ರೀಡೆ

ಇಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್​ಗಳ ಜಯ: ಭಾರತದೊಂದಿಗೆ ಈ ವಿಶ್ವದಾಖಲೆ ಹಂಚಿಕೊಂಡ ಜಿಂಬಾಬ್ವೆ

ಜಿಂಬಾಬ್ವೆ ತಂಡವು ಐಸಿಸಿ ಏಕದಿನ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಮೆಂಟ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್​ ವಿಂಡೀಸ್​ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್​ ತಂಡದ ವಿರುದ್ಧ 304 ರನ್​ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.

ಜಿಂಬಾಬ್ವೆ ಐಸಿಸಿ ಏಕದಿನ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಮೆಂಟ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್​ ವಿಂಡೀಸ್​ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್​ ತಂಡದ ವಿರುದ್ಧ 304 ರನ್​ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್​ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್​ನಲ್ಲಿ 300 (317) ರನ್​ಗಳ ಅಂತರದ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್​ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್​ನಲ್ಲಿ 300 (317) ರನ್​ಗಳ ಅಂತರದ ಜಯ ಸಾಧಿಸಿದೆ.

ಇನ್ನೂ ಈ ಪಂದ್ಯಕ್ಕೆ ಬರುವುದಾದರೆ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 50 ಓವರ್​ಗಳಲ್ಲಿ 408 ರನ್ ​ಗಳಿಸಿತ್ತು. ಇದು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಜಿಂಬಾಬ್ವೆ ತಂಡದ ಮೊದಲ 400 ಪ್ಲಸ್​ ರನ್​ ಆಗಿದೆ.

ತಂಡದ ನಾಯಕ ಸೀನ್ ವಿಲಿಯಮ್ಸನ್​ 101 ಎಸೆತಗಳಲ್ಲಿ 174 ರನ್​ಗಳಿಸಿದರೆ, ಜೋಯ್ಲಾರ್ಡ್​ ಗುಮ್ಬೀ 78, ಸಿಕಂದರ್ ರಾಜಾ 48, ರಿಯಾನ್ ಬರ್ಲ್​ 47 ರನ್​ಗಳಿಸಿದ್ದರು. ಇದಕ್ಕುತ್ತರವಾಗಿ ಯುಎಸ್​ ತಂಡ ಕೇವಲ 104 ರನ್​ಗಳಿಗೆ ಸರ್ವಪತನಗೊಂಡಿತ್ತು. ರಿಚರ್ಡ್​ ನಗರವಾ 25ಕ್ಕೆ2, ಬ್ರಾಡ್ ಇವಾನ್ಸ್ 20ಕ್ಕೆ1, ರಾಜಾ 15ಕ್ಕೆ2, ಲ್ಯೂಕ್ ಜಾಂಗ್ವೆ 21ಕ್ಕೆ1 ಹಾಗೂ ಬರ್ಲ್​18ಕ್ಕೆ 1 ವಿಕೆಟ್ ಪಡೆದಿದ್ದರು.

ಇನ್ನು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ರನ್​ಗಳ ಅಂತರ ಜಯ ಸಾಧಿಸಿದ ಟಾಪ್ 5 ತಂಡಗಳನ್ನು ನೋಡುವುದಾದರೆ, ಭಾರತ 317ರನ್​ಗಳ ಜಯ vs ಶ್ರೀಲಂಕಾ, ಜಿಂಬಾಬ್ವೆ 304 ರನ್​ಗಳ ಜಯ vs ಅಮೆರಿಕಾ, ನ್ಯೂಜಿಲ್ಯಾಂಡ್​ 290ರನ್​ಗಳ ಜಯ vs ಐರ್ಲೆಂಡ್​, ಆಸ್ಟ್ರೇಲಿಯಾ 275 ರನ್​ಗಳ ಜಯ vs ಅಫ್ಭಾನಿಸ್ತಾನ, ದಕ್ಷಿಣ ಆಫ್ರಿಕಾ 272ರನ್​ಗಳ ಜಯ vs ಜಿಂಬಾಬ್ವೆ.

andolanait

Recent Posts

ನಾಪೋಕ್ಲು| ಕಾಡಾನೆ ದಾಳಿ: ಬೈಕ್‌ ಸವಾರನಿಗೆ ಗಂಭೀರ ಗಾಯ

ನಾಪೋಕ್ಲು: ಸಮೀಪದ ಮದನಾಡು ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿದ ಪರಿಣಾಮ ಬೈಕ್‌ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.…

1 hour ago

ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಗಾಯಕ ಸೋನು ನಿಗಮ್‌ ಭೇಟಿ

ಹುಬ್ಬಳ್ಳಿ: ಖ್ಯಾತ ಗಾಯಕ ಸೋನು ನಿಗಮ್‌ ಅವರಿಂದು ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.…

1 hour ago

ಹನೂರು| ಕುಡಿಯುವ ನೀರಿಗಾಗಿ ಪರದಾಟ: ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಾಟಳ್ಳಿ ಗ್ರಾಮ ಪಂಚಾಯಿತಿ…

2 hours ago

ಕೆನಡಾದಲ್ಲಿ ಕನ್ನಡಿಗನ ಬರ್ಬರ ಹತ್ಯೆ

ಟೊರೆಂಟೊ: ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಮೂಲದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಚಂದನ್‍ಕುಮಾರ್(37) ಹತ್ಯೆಯಾದ ವ್ಯಕ್ತಿ. ಕಳೆದ ಆರು…

3 hours ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ಗೆ ಸಿಗುತ್ತಾ ಅನುಮತಿ?: ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗೆ ಅನುಮತಿ ನೀಡುವ ಸಂಬಂಧ ಪಟ್ಟಂತೆ ಬುಧವಾರ ಹಿರಿಯ ಅಧಿಕಾರಿಗಳು ಹಾಗೂ ಕಾನೂನು…

3 hours ago

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್‌ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ಮುಂದೆ ಸಂಸದ ತೇಜಸ್ವಿ ಸೂರ್ಯ ತಮ್ಮ ಎದೆಗಾರಿಕೆ ತೋರಿಸಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಕಿಡಿಕಾರಿದ್ದಾರೆ.…

4 hours ago