ಸೆಂಚುರಿಯನ್: ಇಲ್ಲಿನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಸೌಥ್ ಆಫ್ರಿಕಾ ತಂಡ ಗೆಲುವಿನ ಸಿಹಿ ಕಂಡಿದೆ.
ಟೀಂ ಇಂಡಿಯಾ ವಿರುದ್ಧ ತವರು ನೆಲದಲ್ಲಿ ಏಕದಿನ ಸರಣಿ ಸೋತಿದ್ದ ಹರಿಣ ಪಡೆ, ಮೊಲದ ಟೆಸ್ಟ್ನಲ್ಲಿ ಭಾರತ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ನ ಮೂರನೇ ದಿನದಲ್ಲಿ ದಕ್ಷಿಣ ಆಫ್ರಿಕಾ ತಂಡ 408 ಪೇರಿಸಿ ಟೀಂ ಇಂಡಿಯಾಗೆ 163 ರನ್ ಗಳ ಟ್ರಯಲ್ ನೀಡಿತು. ಅದರಂತೆ ಎರಡನೇ ಇನ್ನಿಂಗ್ಸ್ಗೆ ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಆರಂಭದಿಂದಲೇ ಕುಸಿತ ಅನುಭವಿಸಿತು. ಸತತ ಎರಡನೇ ಇನ್ನಿಂಗ್ಸ್ ನಲ್ಲಿಯೂ ರಬಾಡ ಎಸೆತಕ್ಕೆ ಕ್ಷೀನ್ ಬೋಲ್ಡ್ ಆಗುವ ಮೂಲಕ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಓಟಾಗಿ ಹೊರನಡೆದರು. ಯಶಸ್ವಿ ಜೈಸ್ವಾಲ್ (5) ಕೂಡಾ ಹೆಚ್ಚುಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ.
ವಿರಾಟ್ ಕೊಹ್ಲಿ (76) ಜಾಗೃತಿಯ ಆಟವಾಡಿದರು ಸಹಾ ತಂಡವನ್ನು ಸಂಕಷ್ಟದಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಶುಭಮನ್ ಗಿಲ್ (26) ಹೊರತುಪಡಿಸಿ ಟೀಂ ಇಂಡಿಯಾದ ಬೇರೊಬ್ಬ ಆಟಗಾರರು ಎರಡಂಕಿ ದಾಟಲಿಲ್ಲ. ಅಂತಿಮವಾಗಿ ಭಾರತ ತಂಡ 34.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 131 ಗಳಿಸಿ 32 ರನ್ ಹಾಗೂ ಇನ್ನಿಂಗ್ಸ್ ಸೋಲು ಅನುಭವಿಸಿತು.
ಇತ್ತ ಪ್ರಬಲ ಬೌಲಿಂಗ್ ದಾಳಿ ನಡೆಸಿದ ಆಫ್ರಿಕಾ ತಂಡದ ಪರ ಕಗಿಸೋ ರಬಾಡ 2, ಬರ್ಜರ್ 4 ಮತ್ತು ಮಾರ್ಕೋ ಎನ್ಸನ್ 3 ವಿಕೆಟ್ ಕಬಳಿಸಿದರು.
ಆ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 245 ರನ್ ಗಳಿಗೆ ಸರ್ವಪತನ ಕಂಡಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ 5 ವಿಕೆಟ್ಗೆ 266 ರನ್ ಗಳಿಸಿ 11ರನ್ ಗಳ ಮುನ್ನಡೆ ಕಾಯುಕೊಂಡು ಮೂರನೇ ದಿನಕ್ಕೆ ಕಾಲಿಟ್ಟಿತು.
ಇಂದು ಭಾರತ ತಂಡದ ದಿಟ್ಟ ಬೌಲಿಂಗ್ ಪಡೆ 138 ರನ್ ಗಳಿಗೆ ಹರಿಣ ಪಡೆಯನ್ನು ಕಟ್ಟಿಹಾಕಿತು. ಸೌಥ್ ಆಫ್ರಿಕಾ ಪರ ಡೀನ್ ಎಲ್ಗರ್ 185 ರನ್ ಗಳಿಸಿದರು. ಇನ್ನು ಆಲ್ರೌಂಡರ್ ಮಾರ್ಕೊ ಎನ್ಸೆನ್ 84 ರನ್ ಗಳಿಸಿ ಭಾರತ ಬೌಲರ್ ಗಳನ್ನು ಕಾಡಿದರು. ಬೇರೆ ಯಾರಿಂದಲೂ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 108.4 ಓವರ್ಗಳಲ್ಲಿ 408 ರನ್ ಗಳಿಸಿ ಸರ್ವಪತನ ಕಂಡಿತು. ಭಾರತಕ್ಕೆ 163 ರನ್ ಗಳ ಟ್ರಯಲ್ ನೀಡಿತು.
ಟೀಂ ಇಂಡಿಯಾ ಪರ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರು. ಸಿರಾಜ್ ಎರಡು ವಿಕೆಟ್ ಪಡೆದರೇ, ಅಶ್ವಿನ್, ಠಾಕೂರ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಡೀನ್ ಎಲ್ಗರ್
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್: ಕೆ.ಎಲ್ ರಾಹುಲ್ (101), ವಿರಾಟ್ ಕೊಹ್ಲಿ (38), ಶ್ರೇಯಸ್ ಅಯ್ಯರ್ (34); ರಬಾಡ 59/5, ಬರ್ಜರ್50/3
ದ. ಆಫ್ರಿಕಾ ಮೊದಲ ಇನ್ನಿಂಗ್ಸ್: ಡೀನ್ ಎಲ್ಗರ್ (185), ಮಾರ್ಕೋ ಎನ್ಸನ್ (84); ಬುಮ್ರಾ 69/4, ಸಿರಾಜ್ 91/2
ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್: ವಿರಾಟ್ ಕೊಹ್ಲಿ (76), ಶುಭ್ಮನ್ ಗಿಲ್ (26); ರಬಾಡ 32/2, ಬರ್ಜರ್ 33/4, ಎನ್ಸನ್ 36/3
ಹುಣಸೂರು: ರಸ್ತೆ ಮಣ್ಣಿನ ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ…
ಹುಣಸೂರು: ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ…
ನವದೆಹಲಿ: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಮೇ.1ರಿಂದ ಜಾರಿಗೆ ಬರುವಂತೆ 993ರೂ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 991…
ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…
ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…
ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…