ಕ್ರೀಡೆ

ಫಿಫಾ ಮಹಿಳಾ ವಿಶ್ವಕಪ್ ಫೈನಲ್: ಇಂಗ್ಲೆಂಡ್ ವಿರುದ್ಧ ಗೆದ್ದ ಸ್ಪೇನ್ ವಿಶ್ವ ಚಾಂಪಿಯನ್!

ಸಿಡ್ನಿ : ಸಿಡ್ನಿಯಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್‌ನ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ ಸ್ಪೇನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸ್ಪೇನ್ ತಂಡದ ನಾಯಕಿ ಓಲ್ಗಾ ಕಾರ್ಮೋನಾ ಏಕೈಕ ಗೋಲು ದಾಖಲಿಸಿದ್ದರು. ಈ ಗೋಲಿನೊಂದಿಗೆ ಸ್ಪ್ಯಾನಿಷ್ ಪಡೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು ವಿಶೇಷ.

ಉಭಯ ತಂಡಗಳು ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಫುಟ್​ಬಾಲ್​ನಲ್ಲಿ ಫೈನಲ್ ಆಡಿದ್ದು, ಇದಾಗ್ಯೂ ಹೀಗಾಗಿ ಹೊಸ ಚಾಂಪಿಯನ್ ತಂಡವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಪಂದ್ಯದ 29ನೇ ನಿಮಿಷಲ್ಲಿ ಕಾರ್ಮೋನಾ ಬಾರಿಸಿದ ಚೆಂಡು ಇಂಗ್ಲೆಂಡ್ ಗೋಲಿಯನ್ನು ವಂಚಿಸಿ ಬಲೆಯೊಳಗೆ ಸೇರಿತು.

ಇದಾದ ಬಳಿಕ ಇಂಗ್ಲೆಂಡ್ ಆಟಗಾರ್ತಿಯರು ಸಮಬಲ ಸಾಧಿಸಲು ಕೊನೆಯವರೆಗೆ ಹೋರಾಟ ನಡೆಸಿದರು. ಆದರೆ ದ್ವಿತಿಯಾರ್ಧದಲ್ಲೇ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದ ಸ್ಪೇನ್ ಪಡೆಯು ಮೊದಲಾರ್ಧದ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ್ತಿಯರಿಗಿಂತ ಸ್ಪೇನ್ ತಂಡ ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದರು. ಇಂಗ್ಲೆಂಡ್ ಶೇ.70 ರಷ್ಟು ನಿಖರ ಪಾಸ್​ಗಳ ಮೂಲಕ ಗಮನ ಸೆಳೆದರೆ, ಸ್ಪೇನ್ ಆಟಗಾರ್ತಿಯರು ಶೇ.81 ರಷ್ಟು ಪಾಸ್​ಗಳ ಮೂಲಕ ಪಂದ್ಯವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಈ ಮೂಲಕ ಪೂರ್ಣ ಸಮಯದವರೆಗೆ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಸ್ಪೇನ್ ತಂಡವು ಅಂತಿಮವಾಗಿ  1-0 ಅಂತರದ ಮುನ್ನಡೆಯೊಂದಿಗೆ ಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಸ್ಪೇನ್​ನ ಐತಾನಾ ಬೊನ್ಮಾಟಿಗೆ ಗೋಲ್ಡನ್ ಬಾಲ್ ಪ್ರಶಸ್ತಿ ಲಭಿಸಿದರೆ, ಇಂಗ್ಲೆಂಡ್ ಗೋಲ್ ಕೀಪರ್ ಮೇರಿ ಇಯರ್ಪ್ಸ್ ಗೋಲ್ಡನ್ ಗ್ಲೋವ್ ಅವಾರ್ಡ್ ಪಡೆದರು.

ಹಾಗೆಯೇ ಬೆಸ್ಟ್ ಯಂಗ್ ಪ್ಲೇಯರ್ ಪ್ರಶಸ್ತಿ ಸ್ಪೇನ್​ನ ಸಲ್ಮಾ ಪ್ಯಾರಲ್ಯುಲೋಗೆ ನೀಡಲಾಗಿದೆ. ಇನ್ನು ಟೂರ್ನಿಯಲ್ಲಿ ಅತ್ಯಧಿಕ ಗೋಲು ಬಾರಿಸಿದ ಗೋಲ್ಡನ್ ಬೂಟ್ ಪ್ರಶಸ್ತಿಯು ಜಪಾನಿನ ಹಿನಾತಾ ಪಾಲಾಗಿದೆ.

ಮಹಿಳಾ ವಿಶ್ವಕಪ್ ಗೆದ್ದ ರಾಷ್ಟ್ರಗಳು :

  1. 1991- ಯುಎಸ್​ಎ
  2. 1995- ನಾರ್ವೆ
  3. 1999- ಯುಎಸ್​ಎ
  4. 2003- ಜರ್ಮನಿ
  5. 2007- ಜರ್ಮನಿ
  6. 2011- ಜಪಾನ್
  7. 2015- ಯುಎಸ್​ಎ
  8. 2019- ಯುಎಸ್​ಎ
  9. 2023- ಸ್ಪೇನ್
andolanait

Recent Posts

ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಸಾವು

ಮಂಡ್ಯ: ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ…

10 hours ago

ಬಸ್-ಲಾರಿ ನಡುವೆ ಡಿಕ್ಕಿ; ಹಲವರಿಗೆ ಗಾಯ

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಮೈಸೂರು-ಊಟಿ ರಸ್ತೆಯ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗೇಟ್ ಬಳಿ ಗೂಡ್ಸ್ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್…

10 hours ago

ಸಿಡಿಲು ಬಡಿದು ರೈತ ಸಾವು

ಬೆಟ್ಟದಪುರ: ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಎಸ್.ಟಿ.ಆನಂದ್ (೬೦)…

11 hours ago

ಟಾಟಾ ಏಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ: ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ…

11 hours ago

ಒಂದು ವಾರ ವಿದೇಶಕ್ಕೆ ಹಾರಿದ ಪ್ರಧಾನಿ ಮೋದಿ: ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಫ್ರಾನ್ಸ್ ಮತ್ತು ಸ್ಲೊವಾಕಿಯಾಕ್ಕೆ ಒಂದು ವಾರದ ಭೇಟಿಗಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ…

12 hours ago

ಉಡುಪಿ ಶ್ರೀಕೃಷ್ಣಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ…

13 hours ago