ಕ್ರೀಡೆ

ಕ್ರಿಶ್ಚಿಯಾನೊ ರೊನಾಲ್ಡೊಗೆ ಫಿಫಾ ವಿಶೇಷ ಗೌರವ

ದೋಹಾ(ಕತಾರ್​): ಕ್ರಿಶ್ಚಿಯಾನೊ ರೊನಾಲ್ಡೊ ಈ ಪೀಳಿಗೆಯ ವಿಶ್ವಶ್ರೇಷ್ಠ ಫುಟ್ಬಾಲಿಗ. ಚಿರತೆ ವೇಗವೇ ಆತನ ಬಲ. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವೆಂಬ ಗೋಲುಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ ಆಟಗಾರನಿಗೆ ಫಿಫಾ ವಿಶೇಷ ರೀತಿಯಲ್ಲಿ ಧನ್ಯವಾದ ಹೇಳಿದೆ.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೊ, ತಾವಾಡಿದ 5 ವಿಶ್ವಕಪ್​ಗಳಲ್ಲಿ ಗಳಿಸಿದ 8 ಗೋಲುಗಳ ವಿಡಿಯೋವನ್ನು ಫಿಫಾ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಒಬ್ರಿಗಾಡ್​(ಧನ್ಯವಾದ) ಅರ್ಪಿಸಿತು. ರೊನಾಲ್ಡೊ 2006 ರಲ್ಲಿ ತಾವಾಡಿದ ಮೊದಲ ವಿಶ್ವಕಪ್​ನಲ್ಲಿ ಇರಾನ್​ ವಿರುದ್ಧ ಪ್ರಥಮ ಗೋಲು ಗಳಿಸಿದ್ದರು.

2014 ರಲ್ಲಿ ಘಾನಾ ವಿರುದ್ಧ ಒಂದು ಗೋಲು ಬಾರಿಸಿದ್ದರು. ಇದಾದ ಬಳಿಕ 2018 ರಲ್ಲಿ ನಡೆದ ವಿಶ್ವಕಪ್​ ರೊನಾಲ್ಡೊರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸ್ಪೇನ್​ ವಿರುದ್ಧ ಹ್ಯಾಟ್ರಿಕ್​​ ಗೋಲು ಮತ್ತು ಮೊರಾಕ್ಕೊ ವಿರುದ್ಧ ಹೆಡ್ಡರ್​ ಮೂಲಕ ದಾಖಲಾದ ವಿಶ್ವದಾಖಲೆಯ ಗೋಲೂ ಒಂದಾಗಿದೆ. 2022 ರ ಈ ಸಲದ ವಿಶ್ವಕಪ್​ನಲ್ಲಿ ರೊನಾಲ್ಡೊ ಘಾನಾ ವಿರುದ್ಧ ಒಂದು ಗೋಲು ಮಾತ್ರ ಗಳಿಸಿದ್ದಾರೆ.

ಬಹುತೇಕ ಕೊನೆಯ ವಿಶ್ವಕಪ್​ ಆಡುತ್ತಿರುವ ರೊನಾಲ್ಡೊ ವೃತ್ತಿಜೀವನದಲ್ಲಿ ಅತಿಹೆಚ್ಚು ಸವಾಲನ್ನು ಎದುರಿಸುತ್ತಿದ್ದಾರೆ. ಮ್ಯಾಂಚೆಸ್ಟರ್​ ಫುಟ್ಬಾಲ್​ ಸಂಸ್ಥೆಯಿಂದ ಹೊರಕ್ಕೆ, ಪೋರ್ಚುಗಲ್​ ತಂಡದ ಕೋಚ್​ ಫೆರ್ನಾಂಡೋ ಸ್ಯಾಂಟೋಸ್​ರ ಅವಕೃಪೆಗೆ ಒಳಗಾಗಿ ವಿಶ್ವಕಪ್​ನ ಪಂದ್ಯಗಳಿಂದ ಹೊರಗುಳಿದಿರುವುದು ರೊನಾಲ್ಡೊರನ್ನು ಕುಗ್ಗಿಸಿದೆ.

ನಿವೃತ್ತಿಯ ಅಂಚಿನಲ್ಲಿರುವ ರೊನಾಲ್ಡೊಗೆ ಗಾಯದ ಮೇಲೆ ಬರೆ ಎಳೆದಂತೆ ಶನಿವಾರ ರಾತ್ರಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಪೋರ್ಚುಗಲ್​ 1-0 ಗೋಲಿನಿಂದ ಸೋತು ವಿಶ್ವಕಪ್​ನಿಂದ ಹೊರಬಿತ್ತು. ಹೀಗಾಗಿ ವಿಶ್ವಕಪ್​ ಗೆಲ್ಲದೇ ರೊನಾಲ್ಡೊ ವೃತ್ತಿಜೀವನ ಮುಗಿಸುವ ಸಾಧ್ಯತೆಗಳಿವೆ.

andolanait

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

3 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

12 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

12 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

12 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

14 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

15 hours ago