ಕ್ರೀಡೆ

ಕ್ರಿಕೆಟ್‌ ವಿಶ್ವಕಪ್: ಕ್ವಾಲಿಫೈಯರ್ ಕೂಟದ ಮಧ್ಯೆಯೇ ಅಮೆರಿಕದ ಬೌಲರ್ ಅಮಾನತು!

ಹರಾರೆ: ಅಮೆರಿಕದ ವೇಗದ ಬೌಲರ್ ಕೈಲ್ ಫಿಲಿಪ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೌಲಿಂಗ್ ನಿಂದ ಅಮಾನತು ಮಾಡಲಾಗಿದೆ.

ಹರಾರೆಯಲ್ಲಿ ನಡೆದ ವಿಶ್ವ ಕಪ್ ಅರ್ಹತಾ ಕೂಟದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 26 ವರ್ಷದ ಫಿಲಿಪ್ ಸಂಶಯಾಸ್ಪದ ಶೈಲಿಯ ಬೌಲಿಂಗ್ ಮಾಡಿದ್ದು ಬೆಳಕಿಗೆ ಬಂದಿತ್ತು. ಆ ಪಂದ್ಯದಲ್ಲಿ ಫಿಲಿಪ್ 56 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.

ಯುಎಸ್ ಕ್ಯಾಂಪ್ ನ ಬಹುಪಾಲು ಆಟಗಾರರು ಅಸ್ವಸ್ಥರಾಗಿದ್ದಾರೆ. ಏಕಾಏಕಿ ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲೇ ಫಿಲಿಪ್ ಅವರನ್ನು ಅಮಾನತು ಮಾಡಲಾಗಿದೆ.

ಫಿಲಿಪ್ ಅವರು ನೇಪಾಳದ ವಿರುದ್ಧ ಯುಎಸ್ಎ ನ ಎರಡನೇ ಪಂದ್ಯದಲ್ಲಿ ಆಡಿದ್ದರು. ಐಸಿಸಿ ಈವೆಂಟ್ ಪ್ಯಾನೆಲ್ ಅವರ ಬೌಲಿಂಗ್ ಕ್ರಮವನ್ನು ನಿಯಮಾವಳಿಗಳ 6.7 ರ ಪ್ರಕಾರ ಕಾನೂನು ಬಾಹಿರವೆಂದು ಪರಿಗಣಿಸಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಫಿಲಿಪ್ ಅವರ ಅಮಾನತು ಐಸಿಸಿಯ ಪರಿಣಿತ ಸಮಿತಿ ಅಥವಾ ಐಸಿಸಿ ಅನುಮೋದಿತ ಪರೀಕ್ಷಾ ಕೇಂದ್ರದಿಂದ ಅವರ ಕ್ರಮವನ್ನು ಪರಿಶೀಲಿಸುವವರೆಗೆ ಹಾಗೇ ಇರುತ್ತದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಫಿಲಿಪ್ ಅವರ ಅಮಾನತು ಐಸಿಸಿಯ ಪರಿಣಿತ ಸಮಿತಿ ಅಥವಾ ಐಸಿಸಿ ಅನುಮೋದಿತ ಪರೀಕ್ಷಾ ಕೇಂದ್ರದಿಂದ ಅವರ ಕ್ರಮವನ್ನು ಪರಿಶೀಲಿಸುವವರೆಗೆ ಹಾಗೇ ಇರುತ್ತದೆ.

andolanait

Recent Posts

ಪಣ್ಣೇದೊಡ್ಡಿ ಡೇರಿ ಆಡಳಿತ-ಹಾಲು ಉತ್ಪಾದಕರ ಮಾರಾಮಾರಿ

ಎಂ.ಆರ್.ಚಕ್ರಪಾಣಿ ಜಗಳದಿಂದಾಗಿ ಡೇರಿಗೆ ಬೀಗ: ದೂರು-ಪ್ರತಿ ದೂರು ದಾಖಲು; ಖಾಸಗಿ ಡೇರಿಗೆ ಹಾಲು ಸರಬರಾಜು ಮದ್ದೂರು: ತಾಲ್ಲೂಕಿನ ಪಣ್ಣೇದೊಡ್ಡಿ ಗ್ರಾಮದ…

51 seconds ago

ಎಸ್‌ಸಿ, ಎಸ್‌ಟಿಗಳ ಹಕ್ಕು ರಕ್ಷಣೆಗೆ ಕ್ರಮ : ಡಾ.ಮೂರ್ತಿ

ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು…

12 hours ago

ಬೆಂಕಿ ಅವಘಡ | ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲು ಸೂಚನೆ ಕೊಟ್ಟ ಯತೀಂದ್ರ ಸಿದ್ದರಾಮಯ್ಯ!

ಮೈಸೂರು : ಸೋಮವಾರ ಪಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ…

13 hours ago

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ತಮಿಳುನಾಡು ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್‌ ಬಂಪರ್‌ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ…

17 hours ago

ಮುಂಗಾರು ಕೊರತೆ: ಹಾರಂಗಿ ಜಲಾಶಯದ ಒಳಹರಿವು ತೀವ್ರ ಕುಸಿತ

ಮಡಿಕೇರಿ: ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲವಾದರೂ ಜಿಲ್ಲೆಯಲ್ಲಿ ಮಳೆ…

18 hours ago