ಕ್ರೀಡೆ

ಕ್ರಿಕೆಟ್‌ ವಿಶ್ವಕಪ್: ಕ್ವಾಲಿಫೈಯರ್ ಕೂಟದ ಮಧ್ಯೆಯೇ ಅಮೆರಿಕದ ಬೌಲರ್ ಅಮಾನತು!

ಹರಾರೆ: ಅಮೆರಿಕದ ವೇಗದ ಬೌಲರ್ ಕೈಲ್ ಫಿಲಿಪ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೌಲಿಂಗ್ ನಿಂದ ಅಮಾನತು ಮಾಡಲಾಗಿದೆ.

ಹರಾರೆಯಲ್ಲಿ ನಡೆದ ವಿಶ್ವ ಕಪ್ ಅರ್ಹತಾ ಕೂಟದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 26 ವರ್ಷದ ಫಿಲಿಪ್ ಸಂಶಯಾಸ್ಪದ ಶೈಲಿಯ ಬೌಲಿಂಗ್ ಮಾಡಿದ್ದು ಬೆಳಕಿಗೆ ಬಂದಿತ್ತು. ಆ ಪಂದ್ಯದಲ್ಲಿ ಫಿಲಿಪ್ 56 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು.

ಯುಎಸ್ ಕ್ಯಾಂಪ್ ನ ಬಹುಪಾಲು ಆಟಗಾರರು ಅಸ್ವಸ್ಥರಾಗಿದ್ದಾರೆ. ಏಕಾಏಕಿ ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲೇ ಫಿಲಿಪ್ ಅವರನ್ನು ಅಮಾನತು ಮಾಡಲಾಗಿದೆ.

ಫಿಲಿಪ್ ಅವರು ನೇಪಾಳದ ವಿರುದ್ಧ ಯುಎಸ್ಎ ನ ಎರಡನೇ ಪಂದ್ಯದಲ್ಲಿ ಆಡಿದ್ದರು. ಐಸಿಸಿ ಈವೆಂಟ್ ಪ್ಯಾನೆಲ್ ಅವರ ಬೌಲಿಂಗ್ ಕ್ರಮವನ್ನು ನಿಯಮಾವಳಿಗಳ 6.7 ರ ಪ್ರಕಾರ ಕಾನೂನು ಬಾಹಿರವೆಂದು ಪರಿಗಣಿಸಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಫಿಲಿಪ್ ಅವರ ಅಮಾನತು ಐಸಿಸಿಯ ಪರಿಣಿತ ಸಮಿತಿ ಅಥವಾ ಐಸಿಸಿ ಅನುಮೋದಿತ ಪರೀಕ್ಷಾ ಕೇಂದ್ರದಿಂದ ಅವರ ಕ್ರಮವನ್ನು ಪರಿಶೀಲಿಸುವವರೆಗೆ ಹಾಗೇ ಇರುತ್ತದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ನಿಂದ ಫಿಲಿಪ್ ಅವರ ಅಮಾನತು ಐಸಿಸಿಯ ಪರಿಣಿತ ಸಮಿತಿ ಅಥವಾ ಐಸಿಸಿ ಅನುಮೋದಿತ ಪರೀಕ್ಷಾ ಕೇಂದ್ರದಿಂದ ಅವರ ಕ್ರಮವನ್ನು ಪರಿಶೀಲಿಸುವವರೆಗೆ ಹಾಗೇ ಇರುತ್ತದೆ.

andolanait

Recent Posts

ವಸ್ತುಸಂಗ್ರಹಾಲಯ ದಿನಾಚರಣೆ : ಗಮನಸೆಳೆದ ಸ್ಮಾರಕಗಳು ಮತ್ತು ಪ್ರಾಚ್ಯವಸ್ತುಗಳು

ಮೈಸೂರು : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ…

15 mins ago

ಕೃಷಿ ಕ್ಷೇತ್ರ ಕುಸಿತದ ನಡುವೆಯೂ ಕೋಟಿ ಕೋಟಿ ವೆಚ್ಚದಲ್ಲಿ ಕಾಂಗ್ರೆಸ್ ಸಮಾವೇಶ‌ : ಅಶೋಕ ಆರೋಪ

ಬೆಂಗಳೂರು : ರಾಜ್ಯದಲ್ಲಿ ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ…

1 hour ago

ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲು ಆದೇಶ

ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮಹಿಳೆ ಸಾವು : ಈಶ್ವರ ಖಂಡ್ವೆ ಸಂತಾಪ ಬೆಂಗಳೂರು : ಕೊಡಗು ಜಿಲ್ಲೆ ದುಬಾರೆ…

4 hours ago

ಸಾಕಾನೆಗಳ ಕಾಳಗದ ನಡುವೆ ಸಿಲುಕಿ ಪ್ರವಾಸಿ ಮಹಿಳೆ ಸಾವು

ಕೊಡಗು: ಎಲಿಫೆಂಟ್‌ ಬಾತಿಂಗ್‌ ವೇಳೆ ಆನೆಯ ಅಡಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ. ಚೆನ್ನೈ…

5 hours ago

ಆಫ್ರಿಕಾದಲ್ಲಿ ಎಬೋಲಾಕ್ಕೆ 88 ಮಂದಿ ಬಲಿ: ತುರ್ತು ಪರಿಸ್ಥಿತಿ ಘೋಷಿಸಿದ WHO

ಕಾಂಗೋ: ಆಫ್ರಿಕಾದಲ್ಲಿ ಎಬೋಲಾಕ್ಕೆ 88 ಮಂದಿ ಬಲಿಯಾಗಿದ್ದು, WHO ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಆಫ್ರಿಕಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ…

6 hours ago

ತಾಯಿಯನ್ನೇ ಕೊಲೆಗೈದ ಪಾಪಿ ಮಗ

ಮೈಸೂರು: ಪರಪುರುಷನ ಸಂಗ ಮಾಡಿದ್ದ ತಾಯಿಯನ್ನು ಮಗ ಕೊಲೆ ಮಾಡಿರುವ ಘಟನೆ ಮೈಸೂರು ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಧಾ…

7 hours ago