ವಿಜ್ಞಾನ ತಂತ್ರಜ್ಞಾನ

ಮಿಲಿಟರಿ ವಿಮಾನ ಸೇನೆ ಸೇರಲು B-21 ರೈಡರ್ ಫೈಟರ್‌ಜೆಟ್‌ ಸಿದ್ದ!

ವಾಷಿಂಗ್ಟನ್​: ಅಮೆರಿಕ ಏರ್‌ಫೋರ್ಸ್ ತನ್ನ ಹೊಸ ಅತ್ಯಾಧುನಿಕ ವಿಮಾನ B-21 ರೈಡರ್ ಫೈಟರ್‌ಜೆಟ್‌ ಅನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ನಾರ್ತ್‌ರಾಪ್ ಗ್ರುಮ್ಮನ್ ಕಂಪನಿಯು ತಯಾರಿಸಿದ ಈ ಸ್ಟೆಲ್ತ್ ವಿಮಾನವು B-1 ಮತ್ತು B-2 ಸ್ಥಾನಗಳನ್ನು ತುಂಬಲಿದೆ. ಈ ಯುದ್ಧ ವಿಮಾನ ಶುಕ್ರವಾರ ಅನಾವರಣಗೊಳ್ಳಲಿದೆ. ಇದೊಂದು ಅತ್ಯಂತ ಸುಧಾರಿತ ಮಿಲಿಟರಿ ವಿಮಾನವೆಂದು ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯ ವೆಬ್‌ಸೈಟ್ ಪ್ರಕಾರ, ಕ್ಯಾಲಿಫೋರ್ನಿಯಾದ ಪಾಮ್‌ಡೇಲ್‌ನಲ್ಲಿರುವ ಸಂಕೀರ್ಣದಲ್ಲಿ ಆರು B-21 ಬಾಂಬರ್‌ಗಳನ್ನು ನಿರ್ಮಿಸಲಾಗುತ್ತಿದೆ. ವಿಶ್ವದ ಅತ್ಯಾಧುನಿಕ ಸ್ಟ್ರೈಕ್ ವಿಮಾನವನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು 2015 ರಲ್ಲಿ ನಾರ್ತ್‌ರಾಪ್‌ಗೆ ಗುತ್ತಿಗೆ ನೀಡಲಾಗಿತ್ತು.ವಿಮಾನವನ್ನು ದೀರ್ಘ-ಶ್ರೇಣಿಯ ಸಾಂಪ್ರದಾಯಿಕ ಮತ್ತು ಪರಮಾಣು ಕಾರ್ಯಾಚರಣೆಗಳನ್ನು ನಿರ್ವಹಿಸುವಂತೆ ತಯಾರು ಮಾಡಲಾಗಿದೆ. ಪ್ರತಿ ವಿಮಾನದ ಅಂದಾಜು ವೆಚ್ಚ 2 ಬಿಲಿಯನ್ (16,200 ಕೋಟಿ ರೂಪಾಯಿ) ಯುಎಸ್‌ ಡಾಲರ್​ಗಳಾಗಿದೆ. ಈ ವಿಮಾನವು 2023 ರ ಆರಂಭದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಆರನೇ ತಲೆಮಾರಿನ ವಿಮಾನವು ಸ್ಟೆಲ್ತ್ ತಂತ್ರಜ್ಞಾನ, ಸುಧಾರಿತ ನೆಟ್‌ವರ್ಕಿಂಗ್ ಸಾಮರ್ಥ್ಯಗಳು ಮತ್ತು ಓಪನ್ ಸಿಸ್ಟಮ್ ಆರ್ಕಿಟೆಕ್ಚರ್ ಹೊಂದಿದೆ. B-21 ಅನ್ನು ಉನ್ನತ ಮಟ್ಟದ ಬೆದರಿಕೆಗೆ ತಡೆಯೊಡ್ಡುವ ಪರಿಸರಕ್ಕೆ ಹೊಂದುವಂತೆ ಮಾಡಲಾಗಿದೆ.

andolanait

Share
Published by
andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

14 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago