ದೇಶ- ವಿದೇಶ

ತಮಿಳುನಾಡು ನೂತನ ಸಿಎಂ ವಿಜಯ್‌ ಮುಂದಿವೆ ಬೆಟ್ಟದಂತಹ ಸವಾಲುಗಳು! ಮೆಟ್ಟಿ ನಿಲ್ಲುತ್ತಾರಾ ದಳಪತಿ?

ಚೆನ್ನೈ : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ 60 ವರ್ಷಗಳ ದ್ರಾವಿಡ ಯುಗಕ್ಕೆ ತೆರೆ ಎಳೆದು, ಮೊದಲ ಬಾರಿಗೆ ಸಿನಿತಾರೆ-ರಾಜಕಾರಣಿ ಸಿ.ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

108 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬಹುಮತಕ್ಕೆ 10 ಸ್ಥಾನ ಕಡಿಮೆ ಇದ್ದರೂ, ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಎಂ, ಐಯುಎಂಎಲ್ ಬೆಂಬಲದೊಂದಿಗೆ 120ರ ಬಲ ಪಡೆದು ಸರ್ಕಾರ ರಚಿಸಿದೆ. ಆದರೆ ವಿಜಯ್‌ ಸರ್ಕಾರದ ಮುಂದೆ ಬೆಟ್ಟದಂತಹ ಸವಾಲುಗಳಿವೆ. ಇವುಗಳನ್ನು ದಳಪತಿ ವಿಜಯ್ ಮೆಟ್ಟಿ ನಿಲ್ಲುತಾರಾ‌ ಎಂಬ ಪ್ರಶ್ನೆಗಳಿವೆ.

1.ಬಹುಮತದ ಅಂಚಿನ ಸರ್ಕಾರ : ಪ್ರತಿ ಮತವೂ ಮುಖ್ಯ
234 ಸದಸ್ಯ ಬಲದ ಸದನದಲ್ಲಿ ಬಹುಮತಕ್ಕೆ 118 ಬೇಕು. ಟಿವಿಕೆ-ಮಿತ್ರಪಕ್ಷಗಳ ಒಟ್ಟು ಬಲ 120. ವಿಜಯ್ 2 ಕ್ಷೇತ್ರದಲ್ಲಿ ಗೆದ್ದು 1 ಸ್ಥಾನ ತೆರವು ಮಾಡಿರುವುದರಿಂದ ಪರಿಣಾಮಕಾರಿ ಬಲ 107. ಸ್ಪೀಕರ್ ಮತ ಚಲಾಯಿಸದ ಸಂಪ್ರದಾಯದಿಂದ ಮತ್ತೊಂದು ಇಳಿಕೆ. ಅಂದರೆ ನಿಜವಾದ ‘ವರ್ಕಿಂಗ್ ಮೇಜಾರಿಟಿ’ ಕೇವಲ 2-3 ಮತಗಳು. ಒಬ್ಬ ಶಾಸಕ ಅತ್ತ-ಇತ್ತ ಆಡಿದರೂ ಸರ್ಕಾರ ಉರುಳುವ ಭೀತಿ.

2. ಆಡಳಿತ ಅನುಭವ ಶೂನ್ಯ
ಟಿವಿಕೆಯ 108 ಶಾಸಕರಲ್ಲಿ 90% ಮೊದಲ ಬಾರಿಗೆ ಗೆದ್ದವರೇ. ವಿಜಯ್ ಅವರಿಗೂ ಆಡಳಿತ ಅನುಭವ ಇಲ್ಲ. ಬ್ಯೂರೋಕ್ರಸಿ, ಹಣಕಾಸು ನಿರ್ವಹಣೆ, ಬಿಕ್ಕಟ್ಟು ನಿಭಾಯಿಸುವುದು ಬೇರೆ ಸವಾಲು.

3. ಮಿತ್ರಪಕ್ಷಗಳ ಒತ್ತಡ : ಕಾಂಗ್ರೆಸ್‌ಗೆ 2 ಸಚಿವ ಸ್ಥಾನ, 1 ರಾಜ್ಯಸಭೆ
ಕಾಂಗ್ರೆಸ್ 5 ಶಾಸಕರ ಬೆಂಬಲಕ್ಕೆ 2 ಸಚಿವ ಸ್ಥಾನ, 1 ರಾಜ್ಯಸಭೆ ಸ್ಥಾನ ಕೇಳಿದೆ. ವಿಸಿಕೆ, ಎಡಪಕ್ಷಗಳು ಹೊರಗಿನಿಂದ ಬೆಂಬಲ ನೀಡಿ ಒಳಗೆ ಬರುವುದಿಲ್ಲ. ಪ್ರತಿಯೊಂದು ಖಾತೆ ಹಂಚಿಕೆ, ನಿರ್ಧಾರದಲ್ಲೂ ಮೈತ್ರಿ ಪಕ್ಷಗಳ ಜೊತೆ ಸಂಘರ್ಷ ಸಾಧ್ಯತೆ.

4. ಆಡಳಿತಾತ್ಮಕ ಅನುಭವ ಮತ್ತು ಅಧಿಕಾರಿಗಳ ವಿಶ್ವಾಸ
ವಿಜಯ್ ಅವರು ಚಿತ್ರರಂಗದಿಂದ ನೇರವಾಗಿ ರಾಜಕೀಯದ ಉನ್ನತ ಸ್ಥಾನಕ್ಕೆ ಬಂದಿದ್ದಾರೆ. ಆರಂಭದಿಂದ, ರಾಜಕೀಯದ ಅನುಭವ ಇಲ್ಲದ ಕಾರಣ, ಅವರಿಗೆ ಶಾಸನಸಭೆಯ ಅಥವಾ ಆಡಳಿತಾತ್ಮಕ ವ್ಯವಸ್ಥೆಯ ಪೂರ್ವಾಪರ ಅನುಭವವಿಲ್ಲ. ಹೀಗಾಗಿ ಹಿರಿಯ ಶಾಸಕರನ್ನು ಮ್ಯಾನೇಜ್ ಮಾಡುವುದು, ಆಡಳಿತದಲ್ಲಿ ಬರುವಂತಹ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು, ಜನರ ಜೊತೆಗೆ ಅಧಿಕಾರಿಗಳ ವಿಶ್ವಾಸ ಗಳಿಸಿಕೊಂಡು ಆಡಳಿತ ನಡೆಸಿಕೊಂಡು ಹೋಗುವುದು ಸವಾಲಾಗಿದೆ. ಅಲ್ಲದೆ ಭ್ರಷ್ಟಾಚಾರ ಮುಕ್ತ ಆಡಳಿತ ಭರವಸೆ ಕೊಟ್ಟಿರುವ ವಿಜಯ್, ಹಳೆಯ ಕೊಳಕು ಲಂಚ ಪದ್ಧತಿಯನ್ನು ಸಂಪೂರ್ಣ ಗುಡಿಸಿ ಸ್ವಚ್ಛಗೊಳಿಸುವುದು ಸವಾಲಾಗಿದೆ.

5. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಬಲ ವಿರೋಧ ಪಕ್ಷಗಳ ಎದುರಾಳಿ
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಕಳೆದ 59 ದಶಕಗಳಿಂದ ಬೇರೂರಿವೆ. ಈ ಪಕ್ಷಗಳ ಕಾರ್ಯಕರ್ತರ ಪಡೆ ಮತ್ತು ಅನುಭವಿ ನಾಯಕರು ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ.

6. ಮಾದಕ ದ್ರವ್ಯ ಮುಕ್ತ ರಾಜ್ಯ ಮತ್ತು ಕಾನೂನು ಸುವ್ಯವಸ್ಥೆ
ವಿಜಯ್ ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಮಾಡಿದ ಮೊದಲ ಭಾಷಣದಲ್ಲಿ ಮಾದಕ ದ್ರವ್ಯಗಳ ವಿರುದ್ಧ ಸಮರ ಸಾರಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪವಿದೆ. ಆದರೆ ಆನ್‌ಲೈನ್ ಮಾಧ್ಯಮಗಳಲ್ಲೂ ಹಬ್ಬಿರುವ ಡ್ರಗ್ ಮಾಫಿಯಾವನ್ನು ಬುಡಸಮೇತ ಕಿತ್ತೊಗೆಯುವುದು ಅಷ್ಟು ಸುಲಭವಲ್ಲ. ಇದು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಹಿಡಿತವನ್ನು ಬಯಸುತ್ತದೆ. ರಾಜಕೀಯ ಹಸ್ತಕ್ಷೇಪವಿಲ್ಲದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ವಿಜಯ್ ಮುಂದಿರುವ ಸವಾಲಾಗಿದೆ.

ಆಂದೋಲನ ಡೆಸ್ಕ್

Recent Posts

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

20 mins ago

ಮಡಿಕೇರಿ | ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ : ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

35 mins ago

ಗಡಿ ಜಿಲ್ಲೆಯಲ್ಲೂ ತಮಿಳು ಸಿಎಂ ವಿಜಯ್‌ ಹವಾ!

ಹನೂರು : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಪಟ್ಟಣದಲ್ಲಿ…

46 mins ago

ಪ್ರಧಾನಿ ಸಂಚಾರ ಮಾರ್ಗದಲ್ಲಿ ಜಿಲಿಟೆನ್ ಕಡ್ಡಿ ಪತ್ತೆ ; ಕೆಲಕಾಲ ಆತಂಕ ; ಓರ್ವ ವಶಕ್ಕೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ…

1 hour ago

ತಮಿಳುನಾಡು | ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಚೆನ್ನೈ : ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ…

2 hours ago

ಹುಣಸೂರು | ಭಾರೀ ಗಾಳಿ-ಮಳೆಗೆ ಹಾರಿಹೋದ ಚಾವಣಿ

ಹುಣಸೂರು : ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿದ್ದು,…

3 hours ago