ಶ್ರೀಹರಿಕೋಟ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಂಸ್ಥೆಯೂ ೧೦೦ನೇ ಉಪಗ್ರಹ ಉಡಾಯಿಸುತ್ತಿದ್ದು, ನಾಳೆ ಬೆಳಿಗ್ಗೆ 6.23ಕ್ಕೆ ನಾವಿಕ್-02(ಎನ್ವಿಎಸ್-2) ಉಪಗ್ರಹ ಉಡಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಸ್ರೋ ಸಂಸ್ಥೆಯೂ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಜಿಎಸ್ಎಲ್ವಿ) ಎಂಕೆ 2 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತಿದೆ. ಈ ಉಡಾವಣೆಯೂ ಇಸ್ರೋದ 100ನೇ ಯೋಜನೆಯಾಗಿದೆ. ನೂತನ ಮೈಲುಗಲ್ಲನ್ನು ಸ್ಥಾಪಿಸಲಿದೆ.
ಈ ಹಿಂದೆ ಇಸ್ರೋ ಸಂಸ್ಥೆಯೂ 2023ರ ಮೇ 29 ರಂದು ಜಿಎಸ್ಎಲ್ವಿ-ಎಫ್12 ರಾಕೆಟ್ ಉಡಾಯಿಸಿತ್ತು. ಈ ರಾಕೆಟ್ಗೆ ಸುಮಾರು ̧2232 ಕೆಜಿ ತೂಕದ ಎನ್ವಿಎಸ್ಉ-01 ಪಗ್ರಹವನ್ನು ಜಿಯೋಸಿಂಕ್ರನಸ್ ಟ್ರಾನ್ಸ್ಫರ್ ಕಕ್ಷೆಗೆ ಅಳವಡಿಕೆ ಮಾಡಿತ್ತು. ಈ ಉಪಗ್ರಹದ ಬಗ್ಗೆ ಇಸ್ರೋ ಸಂಸ್ಥೆಯೂ ವಿವರಿಸುವಾಗ ಇದರಲ್ಲಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಳವಡಿಸಲಾಗಿದೆ ಎಂದು ವರದಿ ನೀಡಿತ್ತು.
ಒಟ್ಟಾರೆಯಾಗಿ ಎನ್ವಿಎಸ್-02 ಭಾರತದ ನಾವಿಕ್ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದನ್ನು ಇಸ್ರೋ ಸಂಸ್ಥೆಯೂ ಎನ್ವಿಎಸ್-೦೧ರ ಯಶಸ್ಸಿನ ಆಧಾರದಲ್ಲಿ ನಿರ್ಮಾಣ ಮಾಡಿದ್ದು, ಅನೇಕ ತಾಂತ್ರಿಕ ಅಭಿವೃದ್ಧಿಗಳನ್ನು ಅಳವಡಿಸಿದೆ. ಹೀಗಾಗಿ ನಾವಿಕ್ ವ್ಯವಸ್ಥೆಯ ಸಾಮರ್ಥ್ಯ ಹಾಗೂ ಪ್ರದರ್ಶನಗಳನ್ನು ಬಹಳಷ್ಟು ಹೆಚ್ಚಿಸಲಿದೆ.
ನಾವಿಕ್-02 (ಎನ್ವಿಎಸ್-02) ಉಪಗ್ರಹದ ಬಗ್ಗೆ ಮಾಹಿತಿ
* ಈ ಉಪಗ್ರಹದ ತೂಕ ಎನ್ವಿಎಸ್-೦೧ರಷ್ಟು ಹೊಂದಿರಬಹುದು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
* ಎನ್ವಿಎಸ್-02 ಕಕ್ಷೆಯನ್ನು ಸೇರಲು ಜಿಯೋಸಿಂಕ್ರನಸ್ ಟ್ರಾನ್ಸ್ಫರ್ಆರ್ಬಿಟ್(ಜಿಟಿಒ)ಗಳನ್ನು ಅಳವಡಿಸುವ ನಿರೀಕ್ಷೆಗಳಿವೆ.
* ಈ ಉಪಗ್ರಹದ ಯೋಜನಾ ಅವಧಿಯ 12 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯಾಚರಿಸುವ ನಿರೀಕ್ಷೆ ಇದೆ.
ನಾವಿಕ್-02 ವಿಶೇಷತೆ ಏನು?
* ನಾವಿಕ್-02 ಉಪಗ್ರಹವು ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಂದರೆ ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕ್ಅನ್ನು ಹೊಂದಿದೆ. ಅಲ್ಲದೇ ತನ್ನ ಸಂಕೇತಗಳನ್ನು ಎಲ್1 ಬ್ಯಾಂಡಿನಲ್ಲಿ ರವಾನಿಸುತ್ತದೆ.
* ಈ ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಗಳೊಡನೆ ನಾವಿಕ್ನ ಹೊಂದಾಣಿಕೆಯನ್ನು ಕೂಡ ಅಧಿಕಗೊಳಿಸುತ್ತದೆ.
* ಎನ್ವಿಎಸ್-02 ಭಾರತದ ಯೋಜನೆಯ ಜಿಎಸ್ಎಲ್ವಿ-ಎಫ್ 15ನೇ ಹಾರಾಟವಾಗಲಿದೆ.
* ಭಾರತೀಯ ನಿರ್ಮಾಣದ ಕ್ರಯೋಜನಿಕ್ ಇಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ ಹಾರಾಟವಾಗಲಿದೆ.
* ಎನ್ವಿಎಸ್-02 ಉಪಗ್ರಹವನ್ನು ಜಿಎಸ್ಎಲ್ವಿ-ಎಫ್ 15ನೇ ಮೂಲಕ ಹಾರಾಟ ಮಾಡುವುದರಿಂದ ನಿಖರವಾಗಿ ಮಿಲಿಟರಿ ಕಾರ್ಯಾಚರಣೆಗಳು ಹಾಗೂ ಕಾರ್ಯತಂತ್ರದ ಉದ್ದೇಶಗಳಿಗೆ ಪ್ರಯೋಜನವಾಗಲಿದೆ.
* ಎನ್ವಿಎಸ್-02ನಲ್ಲಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅತ್ಯಂತ ನಿಖರವಾದ ಒಂದು ಉಪಕರಣವಾಗಿದೆ. ಇದು ರುಬಿಡಿಯಂ-87 ಅಣುಗಳ ಕಂಪನವನ್ನು ಅಳೆಯುವ ಮೂಲಕ ಸಮಯವನ್ನು ಲೆಕ್ಕಾಚಾರ ಮಾಡುತ್ತದೆ.
* ಎನ್ವಿಎಸ್-02 ಉಪಗ್ರಹವೂ ಎರಡನೇ ತಲೆಮಾರಿನ ನಾವಿಕ್ ವ್ಯವಸ್ಥೆಗಳನ್ನು ಹೊಂದಿದ್ದು, ಬಲವಾದ ಎನ್ಕ್ರಿಪ್ಷನ್ ವ್ಯವಸ್ಥೆಯನ್ನು ಹೊಂದಿದೆ.
೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…
ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…
ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…
‘ಸಪೋರ್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…
ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್ವೇ ಯೋಜನೆಗೆ ವೇಗ ದೊರೆತಿದೆ.…
ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…