ದೇಶ- ವಿದೇಶ

10 ದಿನ ಚಂದ್ರನ ಸುತ್ತಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಆರ್ಟೆಮಿಸ್‌-2 ಗಗನಯಾತ್ರಿಗಳು

ವಾಷಿಂಗ್ಟನ್ : ನಾಸಾದ ಐತಿಹಾಸಿಕ ಆರ್ಟೆಮಿಸ್‌-2 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರನನ್ನು ಸುತ್ತುವಳಿ ಮಾಡಿ ಭೂಮಿಗೆ ವಾಪಸಾಗುವ ಮೊದಲ ಕ್ರೂಡ್ ಮಿಷನ್‌ನ ನಾಲ್ವರು ಗಗನಯಾತ್ರಿಗಳು ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ.

ಸುಮಾರು 50 ವರ್ಷಗಳ ಬಳಿಕ ಚಂದ್ರನತ್ತ ಪ್ರಯಾಣ ಮಾಡಿ, 10 ದಿನಗಳ ಸುತ್ತಾಟ ನಡೆಸಿ ಭೂಮಿಗೆ ವಾಪಸ್‌ ಆಗುವ ನಾಸಾ ಯೋಜನೆ ‘ಆರ್ಟಿಮಿಸ್‌ 2’ ಯಶಸ್ವಿಯಾಗಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತು ಸಾಗಿದ್ದ ಓರಿಯನ್‌ ನೌಕೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಇಂದು ಮುಂಜಾನೆ 5:37ರ ಸುಮಾರಿಗೆ ಇಳಿಯಿತು.

ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಮಾಕ್ 33 – ಅಥವಾ ಶಬ್ದದ ವೇಗಕ್ಕಿಂತ 33 ಪಟ್ಟು ವೇಗದಲ್ಲಿ ಪ್ರಯಾಣಿಸುತ್ತಾ ಭೂಮಿಯ ವಾತಾವರಣದಲ್ಲಿ ಲ್ಯಾಂಡ್‌ ಆಗಿದ್ದಾರೆ.

ಈ ಮಿಷನ್ ಅಪೋಲೋ 17 ನಂತರ (1972) 50 ವರ್ಷಗಳ ಬಳಿಕ ಚಂದ್ರನತ್ತ ಮಾನವರು ಕಳುಹಿಸಲಾದ ಮೊದಲ ಮಿಷನ್ ಆಗಿದೆ. ಏಪ್ರಿಲ್ 1ರಂದು ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ SLS ರಾಕೆಟ್ ಮೂಲಕ ಉಡಾವಣೆಯಾದ ಓರಿಯನ್ ನೌಕೆ, ಚಂದ್ರನ ದೂರದ ಕಕ್ಷೆಯನ್ನು ತಲುಪಿ, ಭೂಮಿಯಿಂದ ಇದುವರೆಗಿನ ಅತ್ಯಧಿಕ ದೂರಕ್ಕೆ (ಲೂನಾರ್ ಫ್ಲೈಬೈ) ಮಾನವರನ್ನು ಕಳುಹಿಸಿತು.

ಈ ಮಿಷನ್ ಆರ್ಟೆಮಿಸ್ ಕಾರ್ಯಕ್ರಮದ ಮುಂದಿನ ಹಂತಕ್ಕೆ ಅಡಿಪಾಯ ಹಾಕಿದೆ. ಆರ್ಟೆಮಿಸ್ 3 ಮೂಲಕ 2028ರಲ್ಲಿ ಚಂದ್ರನ ಮೇಲ್ಮೈಗೆ ಮಾನವರು ಇಳಿಯುವ ಗುರಿ ಹೊಂದಲಾಗಿದೆ. ಇದು ಮುಂದೆ ಮಂಗಳ ಗ್ರಹದತ್ತ ಮಾನವ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಾಸಾ ಹೇಳಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

29 mins ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

31 mins ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

33 mins ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

35 mins ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

39 mins ago