ಅಸ್ಸಾಂ: ಅಸ್ಸಾಂನಲ್ಲಿ ಮುಂಗಾರು ಭಾರೀ ಚುರುಕಾಗಿದ್ದು, ವಿಪರೀತ ಗಾಳಿ ಮಳೆ ಉಂಟಾಗಿದೆ. ವರುಣನ ಆರ್ಭಟಕ್ಕೆ ಇಡೀ ಅಸ್ಸಾಂ ಬೆಚ್ಚಿ ಬಿದ್ದಿದೆ.
ಅಸ್ಸಾಂನಲ್ಲಿ ಭಾರೀ ಮಳೆಯಿಂದಾಗಿ ದೇಶದ ಪ್ರಮುಖ ಉದ್ಯಾನವನಗಲ್ಲಿ ಒಂದಾದ ಕಾಜಿರಂಗ ಉದ್ಯಾನವನ ಭಾಗಶಃ ಮುಳುಗಡೆಯಾಗಿದೆ. ಈ ಉದ್ಯಾನವನದಲ್ಲಿ ಕನಿಷ್ಠ 132 ಪ್ರಾಣಿಗಳು ಮರಣಹೊಂದಿದ್ದು, ಅದರಲ್ಲಿ 6 ಘೇಂಡಾಮೃಗ ಹಾಗೂ 117 ಜಿಂಕೆಗಳು ನಿಧನವಾಗಿದೆ ಎಂದು ಹೇಳಲಾಗಿದೆ. ಜತೆಗೆ 96 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಪೈಕಿ 98 ಪ್ರಾಣಿಗಳು ಜಲಾವೃತವಾಗಿ ಮರಣ ಹೊಂದಿದರೇ, 2 ಪ್ರಾಣಿಗಳು ವಾಹನದಲ್ಲಿ ಮೃತಪಟ್ಟಿವೆ. ಇನ್ನು 25 ಪ್ರಾಣಿಗಳು ಚಿಕಿತ್ಸೆ ಪಡೆಯುವಾಗ ಸಾವು ಕಂಡಿವೆ ಎಂದು ಹೇಳಲಾಗಿದೆ. ಇದರ ಜೊತೆಗೆ 25 ಪ್ರಾಣಿಗಳು ವೈದ್ಯಕೀಯ ಹಾರೈಕೆಯಲ್ಲಿವೆ ಎಂದು ತಿಳಿಸಿದೆ.
ಇದೇ ಅಸ್ಸಾಂನಲ್ಲಿ 2017ರಲ್ಲಿ ಸಂಭವಿಸಿದ ಭಾರೀ ಪ್ರವಾಹದಲ್ಲಿ 350ಕ್ಕೂ ಹೆಚ್ಚಿನ ಪ್ರಾಣಿಗಳು ಸಾವನ್ನಪ್ಪಿದ್ದವು. ಇದಾದ ಬಳಿಕ ಈಗ ಪ್ರವಾಹದಿಂದ ಪ್ರಾಣಿಗಳು ಸಾಯುತ್ತಿದ್ದು, ಪ್ರಾಣಿಗಳ ಮರಣ ಸಂಖ್ಯೆ 150ರ ಗಡಿ ತಲುಪಿದೆ.
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…
ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…
ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…
ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…
ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…
ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…