ನಮ್ಮ ಮೈಸೂರ ದಸರಾ 2025

ಯುವ ಸಂಭ್ರಮ | ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿದ ನೃತ್ಯ ರೂಪಕ

ಮೈಸೂರು : ಯುವ ಸಮೂಹ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವ ಸಂಗತಿ ಯುವ ಸಂಭ್ರಮದಲ್ಲಿ ನೃತ್ಯದ ಸ್ವರೂಪ ಪಡೆಯಿತು.

ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಯುವ ಸಂಭ್ರಮದ ೭ನೇ ದಿನವಾದ ಮಂಗಳವಾರ ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಕುಟುಂಬಕ್ಕೆ ಶಾಪವಾಗಿ, ಬದುಕಿಗೆ ಮುಳುವಾಗುವ ಸಂಗತಿಯನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು. ನೆರೆದಿದ್ದ ಯುವ ಸಮೂಹ ಎದ್ದು ನಿಂತು ಚಪ್ಪಾಳೆ ತಟ್ಟಿ ನೃತ್ಯದ ಸಂದೇಶವನ್ನು ಸ್ವೀಕರಿಸಿದರು.

ಎಸ್‌ಎಸ್‌ಎಲ್‌ಸಿ ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕೆ ನಗರದ ಕಾಲೇಜಿಗೆ ಸೇರುವ ಯುವಕನೊಬ್ಬ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ದುಶ್ಚಟಕ್ಕೆ ಬಿದ್ದು ತನ್ನ ತಾಯಿಯನ್ನು ಕಳೆದುಕೊಂಡು ರೋಧಿಸುವ ಘಟನೆಯನ್ನು ನೃತ್ಯದ ಮೂಲಕ ಸೊಗಸಾಗಿ ವೇದಿಕೆ ಮೇಲೆ ತಂದು ನೆರೆದಿದ್ದವರ ಮನ ಗೆದ್ದರು. ಇದರೊಂದಿಗೆ ಕನ್ನಡ ಪ್ರೇಮ, ನಾಡಿನ ಸಂಸ್ಕೃತಿ, ಜಾನಪದ ನೃತ್ಯದ ಸೊಬಗು, ಸಂವಿಧಾನದ ಮಹತ್ವ, ರೈತರ ಕೆಚ್ಚೆದೆಯ ಸೇವೆ, ಯೋಧರ ಬಲಿದಾನ, ರಾಷ್ಟ್ರೀಯ ಭಾವೈಕ್ಯತೆಗೆ ಯುವಸಂಭ್ರಮದ ವೇದಿಕೆ ಸಾಕ್ಷಿಯಾಯಿತು. ಕರುನಾಡಿನ ದಸರಾ ವೈಭವದೊಂದಿಗೆ ಜೈ ಜವಾನ್ ಜೈ ಕಿಸಾನ್, ಜೈ ಭೀಮ್ ಘೋಷಣೆಗಳು ಮೊಳಗಿದವು.

ಕಳೆದರೆಡು ದಿನಗಳಿಂದ ಯುವ ಸಂಭ್ರಮ ವೇದಿಕೆ ಸಂಜೆ ೬ ಗಂಟೆಯೊಳಗೆ ಭರ್ತಿಯಾಗುತ್ತಿದ್ದು, ಕಿಕ್ಕಿರಿದು ನೆರೆದಿದ್ದ ಯುವ ಸಮೂಹ ಕುಣಿದು ಕುಪ್ಪಳಿಸಿ ಜೋಷ್ ನೀಡಿದರು. ಸ್ವಚ್ಚತೆಯಲ್ಲಿ ಮೈಸೂರು ಪ್ರಶಸ್ತಿಗೆ ಭಾಜನವಾಗಲು ಕಾರಣೀಭೂತರಾದ ಸ್ವಚ್ಚತಾ ಕಾರ್ಮಿಕರನ್ನು ಸನ್ಮಾನಿಸಿ, ಅವರ ಶ್ರಮವನ್ನು ಯುವ ಸಮೂಹದ ಎದೆಗೆ ತಲುಪಿಸಿದರು.

ದಟ್ಟಗಳ್ಳಿಯ ಶ್ರೀ ಲಕ್ಷ್ಮಿಹಯಗ್ರೀವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪೌರಾಣಿಕತೆಯ ಪ್ರಸಂಗವನ್ನು ನೃತ್ಯದ ಮೂಲಕ ಊಣಬಡಿಸಿದರು. ನಂಜನಗೂಡಿನ ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ದೇವ ಶ್ರೀ ಗಣೇಶ’ ಹಾಡಿನಲ್ಲಿ ಗಣಪತಿ ಹಬ್ಬದ ಸಂಭ್ರಮ ಸಾರಿದರು. ಹೊಳೆ ನರಸೀಪುರದ ಸರ್ಕಾರಿ ಪಾಲಿಟೆಕ್ನಿಕ್ ತಂಡ ಕನ್ನಡ ನಟರನ್ನು ಪರಿಚಯಿಸುವ ಸಿನಿಮಾ ಆಧಾರಿತ ನೃತ್ಯ ಪ್ರದರ್ಶಿಸಿದರು.

ಗಂಗೋತ್ರಿಯ ಜ್ಞಾನ ದೀಪ ಪ್ರಥಮ ದರ್ಜೆ ಕಾಲೇಜಿನ ತಂಡ ಹಿರಣ್ಯ ಕಶ್ಯಪನ ಜೀವನ ಚರಿತ್ರೆಯನ್ನು ಭಕ್ತ ಪ್ರಹ್ಲಾದ ಸಿನಿಮಾದ ತುಣುಕು ಮತ್ತು ಸಂಭಾಷಣೆಗಳನ್ನು ಒಳಗೊಂಡ ನೃತ್ಯ ರೂಪಕದ ಮೂಲಕ ಹರಿ ನಾರಾಯಣ ದೇವರ ಭಕ್ತಿ ಸಿಂಚನ ಗೈದರು.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ‘ನಾಯಕ ನೀನು ಭೀಮ ರಾವ್’ ಹಾಡಿನ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಸಂವಿಧಾನದ ಮಹತ್ವವನ್ನು ಸಾರಿದರು. ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಜಾನಪದ ನೃತ್ಯ ಸೊಬಗನ್ನು ಉಣಬಡಿಸಿದರು.

ಆಂದೋಲನ ಡೆಸ್ಕ್

Recent Posts

ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ

ಅಮರಾವತಿ: ಇಂದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಇದೇ ಹೊತ್ತಿನಲ್ಲಿ ನಟಿ…

7 mins ago

ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಲಿದೆಯೇ ಈ ಅವಧಿಯ ಮೊದಲ ಬಂಡಾಯ?

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ  ಪಂಚರಾಜ್ಯ ಚುನಾವಣೆ, ಉಪಚುನಾವಣೆ ಫಲಿತಾಂಶದ ನಂತರ ಸಿಎಂ ಪಟ್ಟಕ್ಕಾಗಿ ಡಿಕೆಶಿ ತಂತ್ರ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು…

18 mins ago

ತಮಿಳುನಾಡಿನಲ್ಲಿ ಕಮಾಲ್‌ ಮಾಡಿದ ಟಿವಿಕೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಡಿಎಂಕೆಗೆ ಟಿವಿಕೆ ಟಾಂಗ್‌ ಕೊಟ್ಟಿದೆ. ತಮಿಳುನಾಡಿನಲ್ಲಿ ಟಿವಿಕೆ 58ಕ್ಕೂ ಹೆಚ್ಚು…

31 mins ago

ಸಂಜೀವಿನಿ ಒಕ್ಕೂಟದಿಂದ ಜೇನು ಉತ್ಪಾದನೆ

ಕೃಷ್ಣ ಸಿದ್ದಾಪುರ ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ: ಮಹಿಳೆಯರಿಂದ ಉತ್ಕೃಷ್ಟ ದರ್ಜೆಯ ಜೇನು ಸಂಗ್ರಹ ಸಿದ್ದಾಪುರ: ಪ್ರಧಾನ ಮಂತ್ರಿ…

37 mins ago

ತಮಿಳುನಾಡಿನಲ್ಲಿ ಡಿಎಂಕೆಗೆ ಆರಂಭಿಕ ಮುನ್ನಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಡಿಎಂಕೆ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ತಮಿಳುನಾಡಿನಲ್ಲಿ ಡಿಎಂಕೆ 71ಕ್ಕೂ ಹೆಚ್ಚು…

1 hour ago

ಸೊಳ್ಳೆಗಳ ಕಾಟ; ಸಾಂಕ್ರಾಮಿಕ ರೋಗದ ಭೀತಿ

ಪ್ರಶಾಂತ್ ಎಸ್. ಮನೆಗಳ ಮುಂದೆ ನಿಲ್ಲುವ ಚರಂಡಿ ನೀರು! ವಾರ್ಡ್ ಸಂಖ್ಯೆ ೬೫ರ ನಿವಾಸಿಗಳಿಗೆ ತಪ್ಪದ ಸಂಕಷ್ಟ  ಮೈಸೂರು: ಸಣ್ಣ…

1 hour ago