ಮೈಸೂರು ನಗರ

ಡಿಕೆಶಿಯನ್ನು ಹದ್ದು ಬಸ್ತಿನಲ್ಲಿನಲ್ಲಿಡೋಕೆ ತಂತ್ರ ಮಾಡಿದ್ದೆ ಸಿಎಂ ಸಾಧನೆ: ಪ್ರತಾಪ್‌ ಸಿಂಹ

ಮೈಸೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಹದ್ದುಬಸ್ತಿನಲ್ಲಿಡೋಕೆ ತಂತ್ರ ಮಾಡಿದ್ದೇ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಜುಲೈ.19ರಂದು ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ ನಡೆಯಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂಗೆ ಹ್ಯಾಟ್ಸ್ ಆಫ್‌. ಎರಡು ಕಾಲು ವರ್ಷದಿಂದ ಏನೇನೂ ಸಾಧನೆ ಮಾಡದೇ ಸಾಧನಾ ಸಮಾವೇಶ ಮಾಡುತ್ತಿರುವ ಇವರ ಭಂಡತನಕ್ಕೆ ಹ್ಯಾಟ್ಸ್ ಆಫ್ ಎಂದು ವ್ಯಂಗ್ಯವಾಡಿದರು.

ಇನ್ನು ಮೈಸೂರಿಗೆ ಸಿಎಂ ಏನು ಕೊಟ್ಟಿದ್ದಾರೆ? ಏನ್ ಸಾಧನೆ ಹೇಳಿ? ಎರಡು ಕಾಲು ವರ್ಷದಲ್ಲಿ ನಿಮ್ಮ ಕೆಲಸ ಏನೂ ಹೇಳಿ ಸಿಎಂ? ಮದುವೆ ಹಾಗೂ ಮುಂಜಿಗೆಂದು ಮೈಸೂರಿಗೆ ಬಂದಿದ್ದೆ ಸಿಎಂ ಸಾಧನೆನಾ? ಏಳು ಕಾಲು ವರ್ಷ ಸಿಎಂ ಆದರು ಮೈಸೂರಿಗೆ ಒಂದು ಸರಿಯಾದ ದಿಕ್ಕು ತೋರಿಸಿಲ್ಲ ನೀವು. ಫಿಲಂ ಸಿಟಿ ಮಾಡಿದ್ರಾ? ಪ್ರವಾಸೋದ್ಯಮ ಸರ್ಕ್ಯೂಟ್ ಆಯ್ತಾ? ಎಲ್ಲದರ ದರ ಜಾಸ್ತಿ ಮಾಡಿದ್ದೆ ನಿಮ್ಮ ಸಾಧನೆ. ಯಾವ ಕೆಲಸವೂ ಮಾಡಿಲ್ಲ. ಬರೀ ಉಡಾಫೆ ಮಾತನಾಡುತ್ತಾ? ಡಿ.ಕೆ.ಶಿವಕುಮಾರ್ ಅವರನ್ನು ಹದ್ದು ಬಸ್ತಿನಲ್ಲಿ ಇಡೋಕೆ ತಂತ್ರ ಮಾಡಿದ್ದೆ ನಿಮ್ಮ ಸಾಧನೆ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ಮಾಡುತ್ತಾ, ರಾಜಣ್ಣ, ಜಾರಕಿಹೊಳಿ, ಶಾಮನೂರು ಅವರನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಎತ್ತಿ ಕಟ್ಟಿದ್ದೆ ಸಿಎಂ ಸಾಧನೆ. ಡಿ.ಕೆ.ಶಿವಕುಮಾರ್‌ಗೆ ನ್ಯಾಯಯುತವಾಗಿ ಸಲ್ಲಬೇಕಾದ ಕುರ್ಚಿ ಬಿಟ್ಟು ಕೊಡದೆ ಇರುವುದೆ ನಿಮ್ಮ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಸಿಲಬಸ್ ಬಿಟ್ಟು ಬರೀ ಔಟ್ ಆಫ್ ಸಿಲಬಸ್ ಮಾತಾಡುತ್ತಾರೆ. ತಮ್ಮ ಖಾತೆ ಬಗ್ಗೆ ಒಂದು ಸುದ್ದಿಗೋಷ್ಠಿ ಮಾಡಿ ಎಂದು ಕೇಳಿದರೆ ಬೇರೆ ಏನೇನೋ ಮಾತಾಡುತ್ತಾರೆ. ಪ್ರಿಯಾಂಕ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಹಾಗೂ ಮೈನಿಂಗ್ ದೊರೆ ಸಂತೋಷ್ ಲಾಡ್‌ಗೆ ಮುಂದಿನ ವಾರ ಬಡ್ಡಿ ಸಮೇತ ಎಲ್ಲವನ್ನೂ ಚುಕ್ತಾ ಮಾಡ್ತಿನಿ. ಪ್ರಿಯಾಂಕಾ ಖರ್ಗೆ ಹಾಗೂ ಸಂತೋಷ ಲಾಡ್‌ನನ್ನು ಮುಂದಿನವಾರ ಎಕ್ಸ್ ಫೋಸ್ ಮಾಡ್ತಿನಿ ಎಂದು ಲೇವಡಿ ಮಾಡಿದರು.

ಆಂದೋಲನ ಡೆಸ್ಕ್

Recent Posts

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

1 hour ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

3 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

3 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

5 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

8 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

8 hours ago