ಮೈಸೂರು: ಅಗ್ನಿ ಬನ್ನಿರಾಯ ಸಮುದಾಯದವರು ಯಾರೂ ಕೂಡ ಮಣ್ಣನ್ನು ನಂಬಿ ಕೆಟ್ಟಿಲ್ಲ. ಈ ಜಗತ್ತು ಪ್ರೀತಿಸುವಂತಹ ಅಗ್ನಿ ಸಮುದಾಯದವರಾಗಿಯೇ ಉತ್ತಮವಾಗಿ ಬೆಳೆಯುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತದಲ್ಲಿ ಬನ್ನಿಯನ್ನು ವಹನಿ ಎಂದು ಕರೆಯುತ್ತಾರೆ. ಸಂಸ್ಕೃತದ ತದ್ಭವ ಅರ್ಥವಾಗಿದೆ. ಅಗ್ನಿ ಕುಲದಿಂದಲೇ ಅದರ ಸಂಕೇತವಾಗಿದೆ ಎಂದು ಹೇಳಿದರು.
ಪಾಂಡವರ ವನವಾಸದ ಸಂದರ್ಭದಲ್ಲಿ ಕೌರವರು ಕೊಟ್ಟ ಕಷ್ಟವನ್ನು ನೆನೆದು ಭೀಮ ಆ ಸಂದರ್ಭದಲ್ಲಿ ಅಗ್ನಿ ಪುತ್ರಿ ನೀನು, ನಾನು ವಾಯುಪುತ್ರ, ಬೆಂಕಿ ಗಾಳಿ ಎರಡು ಸೇರಿದರೆ ಈ ಕುರು ಕುಲದವರನ್ನು ಸುಟ್ಟು ಹಾಕದೇ ಬಿಡುವುದಿಲ್ಲ ಎಂದು ಭೀಮ ಹೇಳುತ್ತಾನೆ. ಇಂತಹ ವಂಶದ ಮೂಲ ಪುತ್ರರು ಅಗ್ನಿಬನ್ನಿರಾಯ ಎಂದು ತಿಳಿಸಿದರು.
ಸಂಶೋಧಕರಾದ ಮಧುಸೂದನ್ ಕೆ .ಆರ್ ಅವರು ಮಾತನಾಡಿ, ಅಗ್ನಿ ಬನ್ನಿರಾಯ ಜನಾಂಗದವರು ಸುಮಾರು 14 ಪಂಗಡಗಳನ್ನು ಒಳಗೊಂಡಿರುವ ಒಕ್ಕೂಟದ ಸಮಾಜ. ಈ ಒಂದು ಜನಾಂಗದಲ್ಲಿ ಇರುವವರು ಎಲ್ಲರೂ ಕೂಡ ಅಗ್ನಿಯ ಆರಾಧಕರು. ಅಗ್ನಿಯನ್ನೆ ಮೂಲವಾಗಿ ನಂಬಿಕೊಂಡು ಆರಾಧಿಸಿಕೊಂಡು ಬರುತ್ತಿರುವವರು ಎಂದು ಹೇಳಿದರು.
ನಮ್ಮ ಕರ್ನಾಟಕ ಭಾಗದಲ್ಲಿ ಅಗ್ನಿ ಬನ್ನಿರಾಯ ಎಂದು ಕರೆಯುತ್ತಾರೆ. ಅದೇ ತಮಿಳುನಾಡು ಭಾಗಗಳಲ್ಲಿ ವನ್ನಿ ಮಹಾರಾಜ ಎಂದು ಕರೆಯುತ್ತಾರೆ. ಆಂಧ್ರಪ್ರದೇಶದಲ್ಲೂ ಕೂಡ ವನ್ನಿ ಮಹಾರಾಜ ಎಂದು ಪೂಜಿಸುತ್ತಾರೆ. ಎಂದು ತಿಳಿಸಿದರು.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…
ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…
ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…
ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್ಕೌಂಟರ್ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…
ಮಂಡ್ಯ: ಟೋಲ್ ಬಳಿಯ ಸೈನ್ ಬೋರ್ಡ್ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ…