ಮುಂದುವರಿದ ರಕ್ಷಣಾ ಕಾರ್ಯಾಚರಣೆ
ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ ಪರಿಣಾಮವಾಗಿ ಮೃತರ ಸಂಖ್ಯೆ ೨೩೫ಕ್ಕೆ ಏರಿಕೆಯಾಗಿದೆ. ಸುಮಾರು ೪,೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ವೆನಿಜುವೆಲಾದ ಆರೋಗ್ಯ ಸಚಿವ ಕಾರ್ಲೋಸ ಅಲ್ವಾರಾಡೊ ನೀಡಿದ ಮಾಹಿತಿ ಪ್ರಕಾರ, ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ಹೊರತೆಗೆದು ರಕ್ಷಿಸಲು ಯತ್ನಿಸಲಾಗುತ್ತಿದೆ.
ಬುಧವಾರ ಸಂಜೆ ಸಂಭವಿಸಿದ ೭.೨ ಮತ್ತು ೭.೫ ರಷ್ಟು ಭೂಕಂಪ ತೀವ್ರತೆಯ ಎರಡು ಭೂಕಂಪಗಳು ಕಳೆದ ಶತಮಾನದಲ್ಲಿ ವೆನಿಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿದ್ದು, ದೇಶದ ಹಲವು ಭಾಗಗಳಲ್ಲಿ ಅದರ ಕಂಪನ ಅನುಭವಿಸಲಾಯಿತು.
ಧೂಳು ಹಾಗೂ ರಕ್ತದಲ್ಲಿ ಮುಳುಗಿದ್ದ ಗಾಯಾಳುಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗುತ್ತಿದ್ದು, ಮಕ್ಕಳೂ ಸೇರಿದಂತೆ ಸಾಕು ಪ್ರಾಣಿಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿವೆ.
ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ ದೃಶ್ಯಗಳಲ್ಲಿ, ಕಾಂಕ್ರೀಟ್ಗಳ ಅಡಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದ ದೃಶ್ಯ ಗಮನ ಸೆಳೆಯಿತು.
ಲಾ ಗುವೈರಾದಲ್ಲಿ ಭಾರೀ ಹಾನಿ:
ರಾಜಧಾನಿ ಕಾರಕಾಸ ಉತ್ತರದಲ್ಲಿರುವ ಕರಾವಳಿ ಪ್ರದೇಶ ಲಾ ಗುವೈರಾ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ವೆನಿಜುವೆಲಾದ ಪ್ರಮುಖ ವಿಮಾನ ನಿಲ್ದಾಣವೂ ಇದೇ ಪ್ರದೇಶದಲ್ಲಿದ್ದು, ಭೂಕಂಪದಿಂದ ಹಾನಿಗೊಳಗಾದ ಕಾರಣ ಮುಚ್ಚಲಾಗಿದೆ. ಇದರಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.
ನಗರಗಳಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಹಲವೆಡೆ ಕಟ್ಟಡಗಳ ಗೋಡೆಗಳು ಮಾತ್ರ ಉಳಿದು, ಮನೆಯೊಳಗಿನ ಪೀಠೋಪಕರಣಗಳು ಕಿಟಕಿಗಳ ಮೂಲಕ ಹೊರಗೆ ಕಾಣಿಸುತ್ತಿವೆ.
ನಾಪತ್ತೆಯಾದವರಿಗಾಗಿ ಕುಟುಂಬಸ್ಥರು ಅವರ ಛಾಯಾಚಿತ್ರಗಳಿರುವ ಪೋಸ್ಟರ್ಗಳನ್ನು ಅಂಟಿಸಿ ಹುಡುಕಾಟ ನಡೆಸುತ್ತಿದ್ದಾರೆ. ವಿದೇಶದಲ್ಲಿರುವ ವೆನೆಜುವೆಲಾ ಮೂಲದ ಜನರು ದೂರವಾಣಿ ಸಂಪರ್ಕ ಕಡಿತಗೊಂಡಿರುವುದರಿಂದ ತಮ ಕುಟುಂಬದವರ ಸಂಪರ್ಕಕ್ಕೆ ಬರಲು ಹರ ಸಾಹಸ ಪಡುತ್ತಿದ್ದಾರೆ.
ಕಾರಕಾಸ್ ನಗರದಲ್ಲಿ ನೂರಾರು ಜನರು ಭೂಕಂಪದ ಭೀತಿಯಿಂದ ಉದ್ಯಾನಗಳು, ವಾಹನ ನಿಲುಗಡೆ ಪ್ರದೇಶಗಳು ಹಾಗೂ ತೆರೆದ ಸ್ಥಳಗಳಲ್ಲಿ ರಾತ್ರಿ ಕಳೆದಿದ್ದಾರೆ.
ನನ್ನ ಮಗ ಎಲ್ಲಿದ್ದಾನೆ? ತಾಯಿಯ ಕಣ್ಣೀರು:
ಮೂರು ಮಕ್ಕಳ ತಾಯಿ ಡಯಾನಾ ಡೆಲ್ಗಾಡೊ ತಮ ಎಂಟು ವರ್ಷದ ಮಗ ಕಾಣೆಯಾಗಿದ್ದು, ಅವನು ಅವಶೇಷಗಳಡಿ ಸಿಲುಕಿದ್ದಾನೆಯೋ ಅಥವಾ ಸುರಕ್ಷಿತ ಆಶ್ರಯ ಕೇಂದ್ರದಲ್ಲಿದ್ದಾನೆಯೋ ತಿಳಿಯುತ್ತಿಲ್ಲ ಎಂದು ಅಲವತ್ತುಕೊಂಡರು.
ಮತ್ತೊಬ್ಬ ತಾಯಿ ತನ್ನ ೩ ಮತ್ತು ೧೦ ವರ್ಷದ ಮಕ್ಕಳ ಮೃತದೇಹಗಳನ್ನು ಹೊದಿಕೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಕುಸಿದು ಅತ್ತರೆ, ಹಲವರು ತಮ್ಮ ಪ್ರೀತಿಪಾತ್ರರ ಹೆಸರನ್ನು ಕೂಗಿ ಹುಡುಕುತ್ತಿರುವ ದೃಶ್ಯಗಳು ಮನಕಲಕುವಂತಿದ್ದವು.
ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಹಾನಿಗೊಳಗಾದ ಆಸ್ಪತ್ರೆಗಳು ಮತ್ತು ಮನೆಗಳು ಪುನಃ ನಿರ್ಮಾಣಕ್ಕಾಗಿ ೨೦೦ ಮಿಲಿಯನ್ ಅಮೆರಿಕನ್ ಡಾಲರ್ಗಳ ವಿಶೇಷ ನಿಽ ರಚಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಭಾರೀ ನಿರ್ಮಾಣ ಯಂತ್ರೋಪಕರಣಗಳನ್ನು ಒದಗಿಸುವಂತೆ ಖಾಸಗಿ ಸಂಸ್ಥೆಗಳಿಗೆ ಅವರು ಮನವಿ ಮಾಡಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸಜಿಎಸ ) ಪ್ರಕಾರ, ಎರಡೂ ಭೂಕಂಪಗಳ ಕೇಂದ್ರಬಿಂದು ಕ್ಯಾರಿಬಿಯನ್ ಕರಾವಳಿಯ ಮೊರೊನ್ ಸಮೀಪವಾಗಿದ್ದು, ಕಾರಕಾಸ್ನಿಂದ ಸುಮಾರು ೧೭೦ ಕಿ.ಮೀ. ದೂರದಲ್ಲಿತ್ತು.
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…
ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ…
‘ವೆನ್ ಯು ವಾಂಟ್ ಟು ಡು ಸಮ್ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್ಇಟ್’ ಇದು ಅತ್ಯಂತ ಪ್ರಚಲಿತವಿರುವ…
ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಶಿಕ್ಷಣತಜ್ಞ, ವಿಜ್ಞಾನಿ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.…