kishor
ಮೈಸೂರು: ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಿರುವುದಕ್ಕಿಂತ ದೇಶದೊಳಗೆ ನಡೆದದ್ದೇ ಹೆಚ್ಚು ಎಂದು ಬಹುಭಾಷಾ ನಟ ಕಿಶೋರ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಿರುವುದಕ್ಕಿಂತ ದೇಶದೊಳಗೆ ನಡೆದದ್ದು ಹೆಚ್ಚು. ದೇಶದಲ್ಲಿ ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ವೀಕ್ ಆಗುತ್ತಿದೆ. ಜಾತಿ, ಧರ್ಮ, ಭಾಷೆ ಬಗ್ಗೆ ಅಂಧಾಭಿಮಾನ ಎಲ್ಲಿ ತನಕ ಇರುತ್ತದೋ ಅಲ್ಲಿಯ ತನಕ ಬಳಸಿಕೊಳ್ಳೋರು ಇರುತ್ತಾರೆ. ಎಲ್ಲರೂ ನಿಜವಾದ ಸಮಸ್ಯೆ ಬಗೆಹರಿಸಿಕೊಳ್ಳುವ ಕಡೆ ನೋಡಬೇಕು ಎಂದು ಸಲಹೆ ನೀಡಿದರು.
ಇನ್ನು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಘಟನೆ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ರಾಜಕೀಯ ಲಾಭಕ್ಕಾಗಿ ನಾವು ಬಿಟ್ಟು ಕೊಡಬಾರದು. ಈ ಹಿಂದಿನ ಘಟನೆಗಳ ಬಗ್ಗೆ ಸತ್ಯಾ-ಸತ್ಯತೆಗಳು ಹೊರ ಬಂದಿಲ್ಲ. ಅಲ್ಲಿನ ಗವರ್ನರ್ ಸತ್ಯಪಾಲ್ ಮಲ್ಲಿಕ್ ಅವರ ಆರೋಪಗಳು ಚರ್ಚೆಯಾಗಬೇಕು. ಅವರ ಆರೋಪಗಳ ಬಗ್ಗೆ ತನಿಖೆಯಾಗಿಲ್ಲ. ಧ್ವನಿ ಎತ್ತಿದರು ಅದನ್ನು ಅಡಗಿಸುತ್ತಾರೆ. ಆಪರೇಷನ್ ಸಿಂಧೂರ ದೇಶದ ಹೊರಗೆ ನಡೆದಿರುವುದಕ್ಕಿಂತ ದೇಶದೊಳಗೆ ನಡೆದಿದೆ. ಮಾಧ್ಯಮಗಳ ಹುಟ್ಟಡಗಿಸುವ ಕೆಲಸವಾಗಿದೆ. ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ವೀಕ್ ಆಗುತ್ತಿದೆ. ಪ್ರಶ್ನೆ ಕೇಳೋದು ಪ್ರಜಾಪ್ರಭುತ್ವದ ಲಕ್ಷಣ. ಉತ್ತರವನ್ನು ಬಡಿದು ಕೇಳಬೇಕು. ನಾವು ಜಾತಿ ಧರ್ಮದಲ್ಲಿ ಅಂಧರಾಗಿ ಕುಳಿತಿದ್ದೇವೆ. ದೇಶದ ವಿಚಾರದಲ್ಲೂ ಅಂಧರಾಗಬಾರದು. ಜನ ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡುವವರೆಗೂ ಬಿಡಬಾರದು. ಪ್ರಧಾನಿಗಳು ಆರ್ಮಿ ಜೆರ್ಸಿ ಹಾಕಿಕೊಂಡು ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…
ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…