ಅಂತಾರಾಷ್ಟ್ರೀಯ

ಪುಟಿನ್ ಆರೋಗ್ಯ ಕುರಿತ ಸುಳ್ಳು ಸುದ್ದಿ ಹರಡಿದ ಟೆಲಿಗ್ರಾಂ ಚಾನಲ್

ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿದೆ ಎಂದು ಟೆಲಿಗ್ರಾಮ್‌ ಚಾನಲ್‌ ಜನರಲ್‌ ಎಸ್‌ವಿಆರ್‌ ಸುಳ್ಳು ಸುದ್ದಿ ಹರಡಿರುವುದು ಬಯಲಾಗಿದೆ. ಈ ಟೆಲಿಗ್ರಾಮ್‌ ಚಾನಲ್‌ನ ಸುದ್ದಿಯನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ಪುಟಿನ್‌ಗೆ ಹೃದಯಾಘಾತ ಎಂದು ವರದಿ ಮಾಡಿದ್ದವು. ಈ ಚಾನಲ್‌ ಅನ್ನು ಮಾಜಿ ಕ್ರೆಮ್ಲಿನ್‌ ಉದ್ಯೋಗಿಯೊಬ್ಬರು ನಡೆಸುತ್ತಿದ್ದಾರೆ.

ಈ ವದಂತಿ ಕುರಿತು ಸತ್ಯಶೋಧನಾ ಸಂಸ್ಥೆ ಆಲ್ಟ್‌ ನ್ಯೂಸ್‌ ಸಹಸ್ಥಾಪಕ ಮುಹಮ್ಮದ್‌ ಝುಬೇರ್‌ ಟ್ವೀಟ್‌ ಮಾಡಿ, ಪುಟಿನ್‌ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡುವುದಕ್ಕೆ ಕುಖ್ಯಾತಿ ಪಡೆದ ಚಾನಲ್‌ ವರದಿಯನ್ನಾಧರಿಸಿ ಅದರ ಹೇಳಿಕೆಯನ್ನು ಪರಾಮರ್ಶಿಸದೆ ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ಕೂಡ ಪುಟಿನ್‌ಗೆ ಹೃದಯಾಘಾತ ಎಂಬ ಸುಳ್ಳು ಸುದ್ದಿಯನ್ನೇ ವರದಿ ಮಾಡಿವೆ ಎಂದು ಬರೆದಿದ್ದಾರೆ.

ಈ ಚಾನಲ್‌ ಪ್ರಕಾರ ಭಾನುವಾರ ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಪುಟಿನ್‌ ಅವರ ಭದ್ರತಾ ಅಧಿಕಾರಿಗಳು ಅವರು ತಮ್ಮ ಬೆಡ್‌ರೂಂ ನೆಲದಲ್ಲಿ ಬಿದ್ದಿರುವುದನ್ನು ಗಮನಿಸಿದ್ದರು. ಪುಟಿನ್‌ ಪಕ್ಕದಲ್ಲೇ ಇದ್ದ ಆಹಾರ ಮತ್ತು ಪಾನೀಯಗಳಿದ್ದ ಮೇಜು ಕೂಡ ನೆಲಕ್ಕುರುಳಿತ್ತು ಎಂದು ಚಾನಲ್‌ ಹೇಳಿಕೊಂಡಿತ್ತು.

“ವೈದ್ಯರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ನಂತರ ಪುಟಿನ್‌ ಅಧಿಕೃತ ನಿವಾಸದಲ್ಲಿರುವ ವಿಶೇಷ ಐಸಿಯುಗೆ ಅವರನ್ನು ವರ್ಗಾಯಿಸಿದ್ದರಿಂದ ಪುಟಿನ್‌ ಹೃದಯ ಬಡಿತ ಮತ್ತೆ ಆರಂಭವಾಗಿ ಅವರಿಗೆ ಪ್ರಜ್ಞೆ ಮರುಕಳಿಸಿತು,” ಎಂದು ಚಾನಲ್‌ ವರದಿ ಮಾಡಿತ್ತು.

https://x.com/zoo_bear/status/1716726915388858373?s=20

https://x.com/zoo_bear/status/1716727445716713533?s=20

 

andolanait

Share
Published by
andolanait

Recent Posts

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

5 mins ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

11 mins ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

8 hours ago

ಓದುಗರ ಪತ್ರ: ಬದಲಾಗುತ್ತಿದೆ ಚಾತುರ್ಮಾಸ ಪದದ ಅರ್ಥ

ಪ್ರತಿವರ್ಷ ಆಷಾಢ, ಶ್ರಾವಣ ಮಾಸದ ಸಮಯದಲ್ಲಿ ಎಲ್ಲ ಮಠಾಧೀಶರೂ ಚಾತುರ್ಮಾಸ ವ್ರತವನ್ನು ಆಚರಿಸುವುದು ವಾಡಿಕೆ. ಚಾತುರ್ಮಾಸ ಎಂದರೆ ನಾಲ್ಕು ತಿಂಗಳು.…

8 hours ago

ಓದುಗರ ಪತ್ರ: ದಸರಾ ಮಹೋತ್ಸವ ಸರಳವಾಗಿರಲಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಿನ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ…

8 hours ago

ಓದುಗರ ಪತ್ರ: ಗೃಹಲಕ್ಷ್ಮಿ: ಅರ್ಹರಿಗೆ ಅನ್ಯಾಯವಾಗದಿರಲಿ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಆರ್ಥಿಕತೆಗೆ ನವಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ…

8 hours ago