ಮಾಸ್ಕೊ: ಅಮೆರಿಕಾದ ಜಾಗತಿಕ ವ್ಯವಸ್ಥೆ ದುರ್ಬಲಗೊಳ್ಳುತ್ತಾ ಬರುತ್ತಿದೆ. ಆದರೆ, ನಮ್ಮ ದೇಶವು ಈಗ ಹೆಚ್ಚು ಸಮಾನವಾದ ಜಾಗತಿಕ ವ್ಯವಸ್ಥೆಯನ್ನು ರಚಿಸುವಲ್ಲಿ ಮುಂಚೂಣಿಯಲ್ಲಿದೆ. ಸಾರ್ವಭೌಮ, ಬಲಿಷ್ಟ ರಷ್ಯಾ ಇಲ್ಲದೆ ಶಾಶ್ವತ, ಸ್ಥಿರ ಜಾಗತಿಕ ಸುವ್ಯವಸ್ಥೆ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.
ರಾಜ್ಯ ಉಕೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿರುವುದು ನಮ್ಮ ದೇಶವನ್ನು ನಾಶಮಾಡುವ ಪಾಶ್ಚಿಮಾತ್ಯರ ವಿರುದ್ಧದ ಸಂಘರ್ಷವಾಗಿದೆ. ರಷ್ಯಾವನ್ನು ಬಲಿಷ್ಟ, ಸ್ವತಂತ್ರ ಶಕ್ತಿಯನ್ನಾಗಿ, ನಾಗರಿಕ ದೇಶವನ್ನಾಗಿ ಉಳಿಸುವ ನಮ್ಮ ಉನ್ನತ ಐತಿಹಾಸಿಕ ಹಕ್ಕನ್ನು ರಕ್ಷಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕ ಮತ್ತು ಅದರ ಮಿತ್ರರಾಷ್ಟಗಳು ರಷ್ಯಾವನ್ನು ಛಿದ್ರಗೊಳಿಸಲು ಮತ್ತು ಲೂಟಿ ಮಾಡಲು ಪ್ರಯತ್ನಿಸುತ್ತಿವೆ. ಆದರೆ ನಾವು ರಷ್ಯಾ ಮಾತ್ರವಲ್ಲದೇ ಇಡೀ ಪ್ರಪಂಚದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಪಾಶ್ಚಿಮಾತ್ಯರಿಗೆ ರುಸೋಫೋಬಿಯಾ(ರಷ್ಯಾ ಕುರಿತು ಭಯ) ಕಾಡುತ್ತಿದೆ.
ನಮ್ಮ ವೈವಿಧ್ಯತೆ ಮತ್ತು ಸಂಸ್ಕೃತಿ, ಸಂಪ್ರದಾಯ, ಭಾಷೆಗಳು, ಜನಾಂಗೀಯ ಗುಂಪುಗಳ ಏಕತೆಯು ಪಾಶ್ಚಿಮಾತ್ಯ ಜನಾಂಗೀಯ ವಾದಿಗಳು ಮತ್ತು ವಸಾಹತುಶಾಹಿಗಳ ನಿಲುವುಗಳನ್ನು ಒಡೆಯುವ ಮತ್ತು ಬೇರ್ಪಡಿಸುವ ಅವರ ನಿಗ್ರಹ ಮತ್ತು ಶೋಷಣೆಯ ಕ್ರೂರ ಯೋಜನೆ ಹೊಂದಿಕೆಯಾಗುವುದಿಲ್ಲ. ಇದರಿಂದಾಗಿ ಕಲಹ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ.
ನಮ್ಮ ದೇಶದ ವಿರುದ್ಧ ನಡೆಯುವ ಆಕ್ರಮಣಕಾರಿ ಭಯೋತ್ಪಾದನೆ ಮತ್ತು ಉಗ್ರವಾದ, ಅಂತರ್ ಧರ್ಮೀಯ ಘರ್ಷಣೆ ಸೇರಿದಂತೆ ಯಾವುದೇ ಬಾಹ್ಯ ಹಸ್ತಕ್ಷೇಪ, ಪ್ರಚೋದನೆಗಳನ್ನು ಒಡ್ಡಿದರು ಅದನ್ನು ನಿಗ್ರಹಿಸುವ ಸಾಮಥ್ಯ ರಷ್ಯಾಗಿದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.
ಮೈಸೂರು : ಶಿಷ್ಯವೇತನಕ್ಕೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಭಾನುವಾರ ಬೆಳಿಗ್ಗೆ 11ಕ್ಕೆ ವಿಶ್ವವಿದ್ಯಾನಿಲಯದ ಕ್ರಾಫರ್ಡ್…
ಮುಂಬೈ : ಇಲ್ಲಿನ ಪರ್ಭಾನಿಯಲ್ಲಿರುವ ನಿರ್ಮಾಣ ಹಂತದ ಹನುಮನ ದೇವಾಲಯದ ಛಾವಣಿ ಕುಸಿದು 7 ಭಕ್ತರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ…
ಸಿದ್ದಾಪುರ : ಟಿಂಬರ್ ಯೂನಿಯನ್ ಸಭೆಯಲ್ಲಿ ಮಾರಾಮಾರಿ ನಡೆದು ಇಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಆರೋಪದಡಿ ಐವರ ವಿರುದ್ಧ ಸಿದ್ದಾಪುರ…
ಹನೂರು : ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಕೊಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಚಿರತೆಯನ್ನು ಕೊನೆಗೂ ಸೆರೆ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದ ಮಳೆ ಬಾರದೇ ಇದ್ದರೂ, ಮುಂದಿನ ಎರಡು ತಿಂಗಳ ಕಾಲ ಕುಡಿಯುವ ನೀರಿಗೆ…
ಬೈರುತ್: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಬ್ಜೊಲ್ಲಾ ನಡುವೆ ಕದನ ವಿರಾಮ ಜಾರಿಗೆ…