ಮನರಂಜನೆ

ವರ್ಷಾಂತ್ಯಕ್ಕೆ ‘ರಿಚರ್ಡ್ ಆ್ಯಂಟೋನಿ’ ಪ್ರಾರಂಭ; ರಕ್ಷಿತ್‍ ಸ್ಪಷ್ಟನೆ

ರಕ್ಷಿತ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಯಾವಾಗ? ಇಂಥದ್ದೊಂದು ಪ್ರಶ್ನೆ ಒಂದು ವರ್ಷದಿಂದ ಕೇಳಿ ಬರುತ್ತಲೇ ಇದೆ. ಈ ಚಿತ್ರ ಘೋಷಣೆಯಾಗಿಯೇ ಮೂರು ವರ್ಷಗಳೇ ಆಗಿವೆ. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳಲ್ಲಿ ರಿಷಭ್‍ ಬ್ಯುಸಿ ಇದ್ದ ಕಾರಣ, ಚಿತ್ರ ಪ್ರಾರಂಭವಾಗಿರಲಿಲ್ಲ. ಈಗ ಆ ಚಿತ್ರಗಳು ಮುಗಿದೇ ಒಂದು ವರ್ಷವಾಗಿದೆ. ಆದರೆ, ಇನ್ನೂ ‘ರಿಚರ್ಡ್ ಆ್ಯಂಟೋನಿ’ ಬಗ್ಗೆ ಯಾವುದೇ ಸುದ್ದಿ ಇಲ್ಲ. ಇನ್ನು, ಚಿತ್ರ ಯಾವಾಗ ಶುರು ಎಂದು ಅಭಿಮಾನಿಗಳು ಕೇಳಿ ಕೇಳಿ ಸುಸ್ತಾಗಿದ್ದರು. ಈಗ ಕೊನೆಗೂ ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ಗುರುವಾರ, ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿರುವ ಅವರು, ‘ರಿಚರ್ಡ್ ಆ್ಯಂಟೋನಿ’ ವರ್ಷಾಂತ್ತಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಬಹಳಷ್ಟು ಜನ ಚಿತ್ರ ಯಾವಾಗ ಎಂದು ಕೇಳುತ್ತಿದ್ದಾರೆ. ಆದರೆ, ನನಗೆ ಅವಸರವಿಲ್ಲ. ದೊಡ್ಡ ಕನಸಿಗೆ ಸಮಯ ಜಾಸ್ತಿ ಬೇಕಾಗುತ್ತದೆ. ಸದ್ಯ ನಾನು ಸ್ಕ್ರಿಪ್‍ನಲ್ಲಿ ತೊಡಗಿಸಿಕೊಂಡಿದ್ದೇನೆ. ಬಹುತೇಕ ಮುಗಿದಿದೆ. ಈಗಾಗಲೇ ಒಮ್ಮೆ ದುಬೈಗೆ ಹೋಗಿ ಲೊಕೇಶನ್‍ ನೋಡಿಕೊಂಡು ಬಂದಿದ್ದೇನೆ. ಸೆಪ್ಟೆಂಬರ್‍ನಲ್ಲಿ ಅಮೇರಿಕಾಗೆ ಲೊಕೇಶನ್‍ ನೋಡುವುದಕ್ಕೆ ಹೋಗುತ್ತಿದ್ದೇನೆ. ಚಿತ್ರದಲ್ಲಿ ಸುಮಾರು 20 ನಿಮಿಷಗಳ ಕಾಲ ವಿದೇಶ ಭಾಗ ಬರುತ್ತದೆ. ಹಾಗಾಗಿ, ಅವೆರಡೂ ಕಡೆ ಚಿತ್ರೀಕರಣ ನಡೆಯಲಿದೆ’ ಎಂದರು.

ಬರೀ ‘ರಿಚರ್ಡ್ ಆ್ಯಂಟೋನಿ’ಯಷ್ಟೇ ಅಲ್ಲ, ಇನ್ನೂ ಎರಡು ಕಥೆಗಳು ತಮ್ಮೊಳಗೆ ರೆಡಿ ಇವೆ ಎನ್ನುವ ಅವರು, ‘ಸಾಮಾನ್ಯವಾಗಿ ನನ್ನ ಪ್ರತಿ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೂ ಒಂದೂವರೆ ವರ್ಷ ಬೇಕು. ಈ ಬಾರಿ ಬರೀ ‘ರಿಚರ್ಡ್ ಆ್ಯಂಟೋನಿ’ ಅಷ್ಟೇ ಅಲ್ಲ, ‘ಮಿಡ್‍ವೇ ಟು ಮೋಕ್ಷ’ ಮತ್ತು ‘ಪುಣ್ಯಕೋಟಿ 1 ಮತ್ತು 2’ ಚಿತ್ರಗಳ ಚಿತ್ರಕಥೆಯನ್ನೂ ಜೊತೆಗೆ ಬರೆಯುತ್ತಿದ್ದೇನೆ. ಆ ಮೂರೂ ಕಥೆಗಳು ನನ್ನೊಳಗೆ ರೆಡಿ ಇವೆ. ಈ ಎಲ್ಲಾ ಚಿತ್ರಗಳು ಒಂದರಹಿಂದೊಂದು ಬರಲಿವೆ. ಮೊದಲಿಗೆ ಈ ವರ್ಷಾಂತ್ಯಕ್ಕೆ ‘ರಿಚರ್ಡ್ ಆ್ಯಂಟೋನಿ’ ಶುರು ಆಗಲಿದೆ. ಮುಂದಿನ ವರ್ಷದ ಕೊನೆಗೆ ಆ ಚಿತ್ರ ಬಿಡುಗಡೆ ಆಗಲಿದೆ. ಅದು ತಪ್ಪಿದರೂ, 2026ರಕ್ಕೆ ನನ್ನ ಎರಡು ಸಿನಿಮಾಗಳು ಬರುವುದು ಖಂಡಿತಾ, ‘ರಿಚರ್ಡ್ ಆ್ಯಂಟೋನಿ’ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ‘ಮಿಡ್ವೇ ಟು ಮೋಕ್ಷ’ ಪ್ರಾರಂಭವಾಗಲಿದೆ’ ಎಂದರು ರಕ್ಷಿತ್.

ಇನ್ನು, ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ ಎಂಬ ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಈ ಹಿಂದೆ ಹೊಂಬಾಳೆ ಫಿಲಂಸ್‍ ಸಂಸ್ಥೆಯು ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿತ್ತು. ಆದರೆ, ಇದೀಗ ನಿರ್ಮಾಣದಿಂದ ಹೊಂಬಾಳೆ ಫಿಲಂಸ್‍ ಹಿಂದೆ ಸರಿದಿದೆ ಎಂಬ ಗುಸುಗುಸ ಇದೆ. ಈ ಕುರಿತು ಹೊಂಬಾಳೆಯ ವಿಜಯ್‍ ಕಿರಗಂದೂರು ಆಗಲೀ, ರಕ್ಷಿತ್‍ ಆಗಲೀ ಇದುವರೆಗೂ ಸ್ಪಷ್ಟನೆ ನೀಡಿಲ್ಲ.

‘ರಿಚರ್ಡ್ ಆ್ಯಂಟೋನಿ’ ಚಿತ್ರದಲ್ಲಿ ಬಹಳಷ್ಟು ಸ್ಥಳೀಯ ಪ್ರತಿಭೆಗಳೇ ಇರುತ್ತಾರೆ ಎಂದು ಅವರು ಈ ಹಿಂದೆಯೇ ಹೇಳಿದ್ದರು. ‘ಬಹಳಷ್ಟು ಜನ ಸ್ಥಳೀಯ ಪ್ರತಿಭೆಗಳಿರುತ್ತಾರೆ. ಚಿತ್ರದಲ್ಲಿ ಉಡುಪಿಯ ಸೊಗಡು ಇರುತ್ತದೆ. ಇಲ್ಲಿನ ಸೊಗಡ ಬಗ್ಗೆ ಗೊತ್ತಿಲ್ಲದವರು ಮಾತಾಡಿದರೆ ಅನುಕರಣೆ ಮಾಡಿದಂತಾಗುತ್ತದೆ. ಹಾಗಾಗಿ, ಪ್ರತಿಯೊಬ್ಬ ಕಲಾವಿದರೂ ಉಡುಪಿಯವರೇ ಆಗಿರುತ್ತಾರೆ’ ಎಂದು ರಕ್ಷಿತ್‍ ಹೇಳಿದ್ದರು.

ಭೂಮಿಕಾ

Recent Posts

ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರ: ಈಶ್ವರ್‌ ಖಂಡ್ರೆ

ಬೀದರ್:‌ ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ…

16 mins ago

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ, ನಾಯಕತ್ವ ಬದಲಾವಣೆ ವಿಚಾರ ತಣ್ಣಗಾಗಿರುವ ಬೆನ್ನಲ್ಲೇ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ…

21 mins ago

ಕಿಚ್ಚ ಸುದೀಪ್‌ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್‌ ದೂರು: ಕಾರಣ ಇಷ್ಟೇ.!

ಬೆಂಗಳೂರು: ಬಿಗ್‌ಬಾಸ್-‌12 ರಿಯಾಲಿಟಿ ಶೋನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್‌ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ…

31 mins ago

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಮುಹೂರ್ತ ಫಿಕ್ಸ್‌

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ಮುಹೂರ್ತ ಫಿಕ್ಸ್‌ ಆಗಿದ್ದು, ಜೂನ್.‌30ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ…

1 hour ago

ಮೈಸೂರು| ಹುಬ್ಬಳ್ಳಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮೈಸೂರು ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಯಿತು.…

2 hours ago

ಆಂದೋಲನ ವರದಿ ಫಲಶೃತಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರಿಗೆ ಸರತಿ ಸಾಲಿನ ಶೆಡ್ ನಿರ್ಮಾಣಕ್ಕೆ ಗುದ್ದಲಿಪೂಜೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಪ್ರೇಕ್ಷಣಿಯ ಕ್ಷೇತ್ರ ಹಾಗೂ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ…

2 hours ago