manju vishnuvardhan
ಬೆಂಗಳೂರು : ವಿಷ್ಣುವರ್ಧನ್ ಅವರ ಸ್ಮಾರಕ ಮತ್ತು ಪುಣ್ಯಭೂಮಿಯ ಕುರಿತು ದಿನಕ್ಕೊಂದು ಬೆಳವಣಿಗೆಗಳಾಗುತ್ತಿವೆ.
ಸೋಮವಾರವಷ್ಟೇ, ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಕೆಂಗೇರಿ ಬಳಿಯಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ಕಟ್ಟಲಾಗುವುದು ಮತ್ತು ಸೆ.18ರಂದು ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದ್ದರು. ಅದರ ಜೊತೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ವಾಪಸ್ಸು ಪಡೆಯುವುದಕ್ಕೆ ಕಾನೂನು ರೀತಿ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಈಗ ಹಿರಿಯ ನಿರ್ಮಾಪಕ ಕೆ. ಮಂಜು ಸಹ ಆ ಜಾಗಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರವ ಕೆ.ಮಂಜು, ‘ಸಮಾಧಿ ಜಾಗ ನಮಗೆ ಬೇಕೇ ಬೇಕು. ಕಾನೂನು ರೀತಿಯಲ್ಲಿ ಆ ಜಾಗಕ್ಕೆ ಹೋರಾಟ ಮಾಡುತ್ತೇವೆ. ಸರಕಾರದ ಗಮನಕ್ಕೆ ತಂದು ನಾವು ಹೋರಾಟ ಮಾಡುತ್ತೇವೆ. ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಅವರನ್ನ ಭೇಟಿ ಆಗಿ ಮಾತಾಡಿದ್ದೇನೆ. ನಮಗೆ ಆ 10 ಗುಂಟೆ ಜಾಗ ಬೇಕೇಬೇಕು ಅಂತ ಮನವಿ ಮಾಡಿದ್ದೇನೆ. ಅಂತ್ಯಕ್ರಿಯೆ ಆದ ಜಾಗ ನಮಗೆ ಪವಿತ್ರವಾದ ಜಾಗ ಅಂತ ಕೇಳಿಕೊಂಡಿದ್ದೇನೆ. ಅಭಿಮಾನ್ ಸ್ಟುಡಿಯೋ ಸರಕಾರದ ಜಾಗ. ನಮಗೆ 10 ಗುಂಟೆ ಜಾಗ ಬೇಕು’ ಎಂದರು. ವಿಷ್ಣುವರ್ಧನ್ ಮನೆಯ ಅನ್ನ ತಿಂದಿದ್ದೇನೆ ಎಂದಿರುವ ಅವರು, ‘ಅಭಿಮಾನಿಗಳ ಅಭಿಮಾನ ನೋಡಿ ವಿಷ್ಣುವರ್ಧನ್ ಕಣ್ಣೀರು ಹಾಕುತ್ತಿದ್ದರು. ನಾನು ಇದುವರೆಗೂ ಮೈಸೂರಿಗೆ ಹೋಗಿಲ್ಲ. ಪ್ರತೀ ವರ್ಷ ಹೋಗೋದೇ ಅಭಿಮಾನ್ ಸ್ಟುಡಿಯೋಗೆ. ಹಾಗಾಗಿ, ನಮಗೆ ಅಲ್ಲೇ ಜಾಗ ಬೇಕು ಮತ್ತು ಅದಕ್ಕೆ ಏನೆಲ್ಲಾ ಹೋರಾಟ ಮಾಡಬೇಕೋ, ಕಾನೂನು ರೀತಿಯಲ್ಲಿ ಖಂಡಿತಾ ಹೋರಾಡುತ್ತೇವೆ’ ಎಂದು ಹೇಳಿದರು.
ನವದೆಹಲಿ: ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್ಗೆ…
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಜುಲೈನಲ್ಲಿ…
ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…
ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…
ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…
ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…