ಮನರಂಜನೆ

‘ಕಪಟಿ’ಯೊಂದಿಗೆ ಬಂದ ದಯಾಳ್‍; ಆ. 23ಕ್ಕೆ ಚಿತ್ರ ಬಿಡುಗಡೆ

ದಯಾಳ್‍ ಪದ್ಮನಾಭನ್‍ ಇದುವರೆಗೂ ತಮ್ಮ ಸಂಸ್ಥೆ ಡಿ ಪಿಕ್ಚರ್ಸ್‍ನಿಂದ ನಿರ್ಮಿಸಿದ ಚಿತ್ರಗಳನ್ನು ತಾವೇ ನಿರ್ದೇಶನ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರ ನಿರ್ಮಾಣದ ಚಿತ್ರವೊಂದನ್ನು ಬೇರೆಯವರು ನಿರ್ದೇಶನ ಮಾಡಿದ್ದಾರೆ. ಅದೇ ‘ಕಪಟಿ’.

ಡಿ ಪಿಕ್ಚರ್ಸ್ ಸಂಸ್ಥೆಯ 12ನೇ ಚಿತ್ರ ‘ಕಪಟಿ’ ಆಗಿದ್ದು, ಈ ಚಿತ್ರವನ್ನು ರವಿ ಮತ್ತು ಚೇತನ್‍ ಜೊತೆಯಾಗಿ ನಿರ್ದೇಶನ ಮಾಡಿದ್ದಾರೆ. ಸುಕೃತಾ ವಾಗ್ಲೆ, ದೇವ್‍ ದೇವಯ್ಯ, ಸಾತ್ವಿಕ್‍ ಕೃಷ್ಣನ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಆಗಸ್ಟ್ 23ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ.

‘ಕಪಟಿ’ ಚಿತ್ರದ ಕುರಿತು ಮಾತನಾಡುವ ದಯಾಳ್, ‘ರವಿ ಮತ್ತು ಚೇತನ್‍ ನನ್ನ ಹತ್ತಿರ ಬಂದಿದ್ದು ಮಾರ್ಗದರ್ಶನಕ್ಕಾಗಿ. ಅವರು ಅಷ್ಟರಲ್ಲಾಗಲೇ ಆರು ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿದ್ದರು. ಅವರು ತೋರಿಸಿದ ದೃಶ್ಯಗಳು ನನಗೆ ಇಷ್ಟವಾಯಿತು. ‘ಗುಳ್ಟೂ’ ನಂತರ ನಮ್ಮಲ್ಲಿ ಡಾರ್ಕ್‍ ನೆಟ್ ಕುರಿತು ಚಿತ್ರ ಬಂದಿರಲಿಲ್ಲ. ಹಾಗಾಗಿ, ಈ ಚಿತ್ರವನ್ನು ನಾನೇ ಏಕೆ ನಿರ್ಮಿಸಬಾರದು ಅಂತಂದುಕೊಂಡು, ಅವರನ್ನು ಕೇಳಿದೆ. ಅವರು ಒಪ್ಪಿದರು. ಚಿತ್ರ ಚೆನ್ನಾಗಿ ಮಾಡಿದ್ದಾರೆ. ಇತ್ತೀಚೆಗೆ ನಮ್ಮ ಚಿತ್ರತಂಡದವರೆಲ್ಲಾ ಚಿತ್ರ ನೋಡಿದ್ದೇವೆ. ಖುಷಿಯಾಗಿದೆ’ ಎಂದರು.

ರವಿ-ಚೇತನ್‍ ಈ ಹಿಂದೆ ‘ಕೋಮ’ ಎಂಬ ಚಿತ್ರ ಮಾಡಿದ್ದರು. ‘ಸುಮಾರು ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥೆ ಈ ಚಿತ್ರದಲ್ಲಿದೆ. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಒಂದು ಗಹನವಾದ ವಿಷಯವನ್ನು ಜನರಿಗೆ ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ಥ್ರಿಲ್ಲರ್‍ ಚಿತ್ರ. ಇದು ಎಲ್ಲರಿಗೂ ಅನ್ವಯವಾಗುವ ವಿಷಯ. ಏಕೆಂದರೆ, ಇವತ್ತು ಎಲ್ಲರ ಮಾಹಿತಿಯನ್ನು ಬಹಳ ಸುಲಭವಾಗಿ ಹ್ಯಾಕ್‍ ಮಾಡಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಚಿತ್ರ ಮಾಡಿದ್ದೇವೆ’ ಎಂದರು.

ಸುಕೃತಾ ವಾಗ್ಲೆ ಚಿತ್ರರಂಗದಿಂದ ದೂರವಾಗಿ ಉಡುಪಿಯಲ್ಲಿ ಎಲ್‍.ಎಲ್‍.ಬಿ ಮಾಡುತ್ತಿದ್ದರಂತೆ. ‘ಈ ಸಂದರ್ಭದಲ್ಲಿ ನಿರ್ದೇಶಕರು ಫೋನ್‍ ಮಾಡಿದರು. ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹು ದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಇದೊಂದು ಕ್ರೈಮ್‍ ಚಿತ್ರ. ಕೆಲವೇ ಪಾತ್ರಗಳ ಸುತ್ತ ಸುತ್ತುತ್ತದೆ’ ಎಂದರು.

‘ಕಪಟಿ’ ಚಿತ್ರಕ್ಕೆ ಜೋಹನ್‍ ಶೆವನೇಶ್‍ ಸಂಗೀತ ಸಂಯೋಜಿಸಿದರೆ, ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣ ಮಾಡಿದ್ದಾರೆ.

ಭೂಮಿಕಾ

Recent Posts

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

4 hours ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

12 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

12 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

12 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

12 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

12 hours ago