ಮನರಂಜನೆ

‘ಕಪಟಿ’ಯೊಂದಿಗೆ ಬಂದ ದಯಾಳ್‍; ಆ. 23ಕ್ಕೆ ಚಿತ್ರ ಬಿಡುಗಡೆ

ದಯಾಳ್‍ ಪದ್ಮನಾಭನ್‍ ಇದುವರೆಗೂ ತಮ್ಮ ಸಂಸ್ಥೆ ಡಿ ಪಿಕ್ಚರ್ಸ್‍ನಿಂದ ನಿರ್ಮಿಸಿದ ಚಿತ್ರಗಳನ್ನು ತಾವೇ ನಿರ್ದೇಶನ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರ ನಿರ್ಮಾಣದ ಚಿತ್ರವೊಂದನ್ನು ಬೇರೆಯವರು ನಿರ್ದೇಶನ ಮಾಡಿದ್ದಾರೆ. ಅದೇ ‘ಕಪಟಿ’.

ಡಿ ಪಿಕ್ಚರ್ಸ್ ಸಂಸ್ಥೆಯ 12ನೇ ಚಿತ್ರ ‘ಕಪಟಿ’ ಆಗಿದ್ದು, ಈ ಚಿತ್ರವನ್ನು ರವಿ ಮತ್ತು ಚೇತನ್‍ ಜೊತೆಯಾಗಿ ನಿರ್ದೇಶನ ಮಾಡಿದ್ದಾರೆ. ಸುಕೃತಾ ವಾಗ್ಲೆ, ದೇವ್‍ ದೇವಯ್ಯ, ಸಾತ್ವಿಕ್‍ ಕೃಷ್ಣನ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಆಗಸ್ಟ್ 23ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ.

‘ಕಪಟಿ’ ಚಿತ್ರದ ಕುರಿತು ಮಾತನಾಡುವ ದಯಾಳ್, ‘ರವಿ ಮತ್ತು ಚೇತನ್‍ ನನ್ನ ಹತ್ತಿರ ಬಂದಿದ್ದು ಮಾರ್ಗದರ್ಶನಕ್ಕಾಗಿ. ಅವರು ಅಷ್ಟರಲ್ಲಾಗಲೇ ಆರು ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿದ್ದರು. ಅವರು ತೋರಿಸಿದ ದೃಶ್ಯಗಳು ನನಗೆ ಇಷ್ಟವಾಯಿತು. ‘ಗುಳ್ಟೂ’ ನಂತರ ನಮ್ಮಲ್ಲಿ ಡಾರ್ಕ್‍ ನೆಟ್ ಕುರಿತು ಚಿತ್ರ ಬಂದಿರಲಿಲ್ಲ. ಹಾಗಾಗಿ, ಈ ಚಿತ್ರವನ್ನು ನಾನೇ ಏಕೆ ನಿರ್ಮಿಸಬಾರದು ಅಂತಂದುಕೊಂಡು, ಅವರನ್ನು ಕೇಳಿದೆ. ಅವರು ಒಪ್ಪಿದರು. ಚಿತ್ರ ಚೆನ್ನಾಗಿ ಮಾಡಿದ್ದಾರೆ. ಇತ್ತೀಚೆಗೆ ನಮ್ಮ ಚಿತ್ರತಂಡದವರೆಲ್ಲಾ ಚಿತ್ರ ನೋಡಿದ್ದೇವೆ. ಖುಷಿಯಾಗಿದೆ’ ಎಂದರು.

ರವಿ-ಚೇತನ್‍ ಈ ಹಿಂದೆ ‘ಕೋಮ’ ಎಂಬ ಚಿತ್ರ ಮಾಡಿದ್ದರು. ‘ಸುಮಾರು ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥೆ ಈ ಚಿತ್ರದಲ್ಲಿದೆ. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಒಂದು ಗಹನವಾದ ವಿಷಯವನ್ನು ಜನರಿಗೆ ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ಥ್ರಿಲ್ಲರ್‍ ಚಿತ್ರ. ಇದು ಎಲ್ಲರಿಗೂ ಅನ್ವಯವಾಗುವ ವಿಷಯ. ಏಕೆಂದರೆ, ಇವತ್ತು ಎಲ್ಲರ ಮಾಹಿತಿಯನ್ನು ಬಹಳ ಸುಲಭವಾಗಿ ಹ್ಯಾಕ್‍ ಮಾಡಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಚಿತ್ರ ಮಾಡಿದ್ದೇವೆ’ ಎಂದರು.

ಸುಕೃತಾ ವಾಗ್ಲೆ ಚಿತ್ರರಂಗದಿಂದ ದೂರವಾಗಿ ಉಡುಪಿಯಲ್ಲಿ ಎಲ್‍.ಎಲ್‍.ಬಿ ಮಾಡುತ್ತಿದ್ದರಂತೆ. ‘ಈ ಸಂದರ್ಭದಲ್ಲಿ ನಿರ್ದೇಶಕರು ಫೋನ್‍ ಮಾಡಿದರು. ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹು ದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಇದೊಂದು ಕ್ರೈಮ್‍ ಚಿತ್ರ. ಕೆಲವೇ ಪಾತ್ರಗಳ ಸುತ್ತ ಸುತ್ತುತ್ತದೆ’ ಎಂದರು.

‘ಕಪಟಿ’ ಚಿತ್ರಕ್ಕೆ ಜೋಹನ್‍ ಶೆವನೇಶ್‍ ಸಂಗೀತ ಸಂಯೋಜಿಸಿದರೆ, ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣ ಮಾಡಿದ್ದಾರೆ.

ಭೂಮಿಕಾ

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

10 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

10 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

10 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

10 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

10 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

10 hours ago