ಮನರಂಜನೆ

ಸಂಜನಾ ಜೊತೆಗೆ ಡ್ಯಾನ್ಸ್ ಮಾಡಿ, ನನ್ನ ಜೀವನದಲ್ಲಿ ಏನೇನೋ ಆಯ್ತು: ಚಂದನ್‍ ಶೆಟ್ಟಿ

ಚಂದನ್‍ ಶೆಟ್ಟಿ ಅಭಿನಯದ ‘ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಮುಗಿದೇ ಒಂದೂವರೆ ವರ್ಷಗಳಾಗಿವೆ. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ಆಗಿರಲಿಲ್ಲ. ಇದೀಗ ಕೊನೆಗೂ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ.9ರಂದು ಬಿಡುಗಡೆಯಾಗುತ್ತಿದೆ.

ಈ ಚಿತ್ರದ ‘ಡ್ಯಾಶ್‍’ ಎಂಬ ಹಾಡಿನಲ್ಲಿ ಚಂದನ್‍ ಮತ್ತು ಸಂಜನಾ ಜೊತೆಯಾಗಿ ಕಾಣಿಸಿಕೊಂಡಿದ್ದು ನೆನಪಿರಬಹುದು. ಈ ಹಾಡು ಬಿಡುಗಡೆಯಾಗಿ 26 ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಕಂಡಿದೆ. ಒಂದು ಕಡೆ ಹಾಡು ಯಶಸ್ವಿಯಾದ ಖುಷಿಯಲ್ಲಿ ಚಂದನ್‍ ಇದ್ದರೆ, ಇನ್ನೊಂದು ಕಡೆ ಚಂದನ್‍ ಮತ್ತು ಸಂಜನಾ ಪರಸ್ಪರ ಪ್ರೀತಿಸುತ್ತಿದ್ದಾರೆ, ಅವರ ನಿಶ್ಚಿತಾರ್ಥವಾಗಿದೆ ಎಂಬೆಲ್ಲಾ ಸುದ್ದಿಗಳು ಕೇಳಿಬಂದಿದ್ದವು. ಆದರೆ, ಇವೆಲ್ಲವೂ ಸುಳ್ಳು, ತಮ್ಮ ಹಾಗೂ ಸಂಜನಾ ನಡುವೆ ಏನೂ ಇಲ್ಲ ಎಂದು ಚಂದನ್‍ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ‘ಸೂತ್ರಧಾರಿ’ ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿರುವ ಚಂದನ್‍, ‘ಸಂಜನಾ ಜೊತೆಗೆ ಡ್ಯಾಶ್‍ ಹಾಡು ಮಾಡಿ, ನನ್ನ ಜೀವನದಲ್ಲಿ ಏನೇನೋ ಆಯ್ತು. ಇಷ್ಟು ದಿನ ನಾವು ವೇದಿಕೆ ಮೇಲೆ ಕಾಣಿಸಿಕೊಳ್ಳದಿದ್ದರೂ, ನಾವು ಮದುವೆಯಾಗುತ್ತಿದ್ದೇವೆ ಅಂತೆಲ್ಲಾ ಸುದ್ದಿಯಾಗಿತ್ತು. ನನ್ನ ಪರಿಚಯದವರೊಬ್ಬರು ಫೋನ್‍ ಮಾಡಿ, ಸಂಜನಾ ಜೊತೆಗೆ ಮದುವೆಯಂತೆ ಎಂದರು. ನಾನು ಇಲ್ಲ ಎಂದರೂ ಅವರು ನಂಬುತ್ತಿಲ್ಲ. ತನಗೆಲ್ಲವೂ ಗೊತ್ತಿದೆ ಎಂದರು. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲದಿದ್ದರೂ, ಅವರಿಗೆ ಗೊತ್ತಿತ್ತು. ನಮ್ಮ ನಡುವೆ ಏನಿಲ್ಲ’ ಎಂದು ವ್ಯಂಗ್ಯ ಮಾಡಿದರು ಚಂದನ್‍.

‘ಡ್ಯಾಶ್‍’ ಹಾಡಿಗೆ ಬಿಟ್ಟರೆ, ನಾವಿಬ್ಬರೂ ಮಾತಾಡಿದ್ದೇ ಕಡಿಮೆ ಎನ್ನುವ ಸಂಜನಾ, ‘ಚಂದನ್‍ ನನ್ನ ಸ್ನೇಹಿತ ಎನ್ನುವುದಕ್ಕಿಂತ ಹೆಚ್ಚಾಗಿ, ಅವರು ನನ್ನ ಸಹೋದರನಿದ್ದಂತೆ. ನಮ್ಮ ನಡುವೆ ಏನೂ ಇಲ್ಲ. ಡ್ಯಾಶ್‍ ಹಾಡಿಗೆ ಬಿಟ್ಟರೆ, ನಾವಿಬ್ಬರೂ ಮಾತಾಡಿದ್ದೇ ಕಡಿಮೆ. ಹಾಗಾಗಿ, ಇವೆಲ್ಲವೂ ಸುಳ್ಳು’ ಎಂದರು.

‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನವರಸನ್‍ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್‍ ಶೆಟ್ಟಿ, ಸಂಜನಾ ಆನಂದ್‍, ಅಪೂರ್ವ, ಪ್ರಶಾಂತ್ ನಟನ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಪಿ.ಕೆ.ಎಚ್‍. ದಾಸ್ ಛಾಯಾಗ್ರಹಣವಿದೆ.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಶಿಕ್ಷಣವೇ ದೇಶ ಕಟ್ಟುವ ಹಾದಿ ಎಂದು ತಿಳಿದಿದ್ದ ದೇಶಪಾಂಡೆಯವರು

ಡಾ.ಎಂ.ಡಿ.ಉಮೇಶ್‌, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…

22 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಇಂಗ್ಲೆಂಡಿನಲ್ಲಿ ಶಾಕಾಹಾರದ ದಿನಗಳು

ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು.…

27 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 18 ಶನಿವಾರ

50 mins ago

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

14 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

16 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

19 hours ago