ಚಂದನ್ ಶೆಟ್ಟಿ ಅಭಿನಯದ ‘ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಮುಗಿದೇ ಒಂದೂವರೆ ವರ್ಷಗಳಾಗಿವೆ. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ಆಗಿರಲಿಲ್ಲ. ಇದೀಗ ಕೊನೆಗೂ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ.9ರಂದು ಬಿಡುಗಡೆಯಾಗುತ್ತಿದೆ.
ಈ ಚಿತ್ರದ ‘ಡ್ಯಾಶ್’ ಎಂಬ ಹಾಡಿನಲ್ಲಿ ಚಂದನ್ ಮತ್ತು ಸಂಜನಾ ಜೊತೆಯಾಗಿ ಕಾಣಿಸಿಕೊಂಡಿದ್ದು ನೆನಪಿರಬಹುದು. ಈ ಹಾಡು ಬಿಡುಗಡೆಯಾಗಿ 26 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದೆ. ಒಂದು ಕಡೆ ಹಾಡು ಯಶಸ್ವಿಯಾದ ಖುಷಿಯಲ್ಲಿ ಚಂದನ್ ಇದ್ದರೆ, ಇನ್ನೊಂದು ಕಡೆ ಚಂದನ್ ಮತ್ತು ಸಂಜನಾ ಪರಸ್ಪರ ಪ್ರೀತಿಸುತ್ತಿದ್ದಾರೆ, ಅವರ ನಿಶ್ಚಿತಾರ್ಥವಾಗಿದೆ ಎಂಬೆಲ್ಲಾ ಸುದ್ದಿಗಳು ಕೇಳಿಬಂದಿದ್ದವು. ಆದರೆ, ಇವೆಲ್ಲವೂ ಸುಳ್ಳು, ತಮ್ಮ ಹಾಗೂ ಸಂಜನಾ ನಡುವೆ ಏನೂ ಇಲ್ಲ ಎಂದು ಚಂದನ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ‘ಸೂತ್ರಧಾರಿ’ ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿರುವ ಚಂದನ್, ‘ಸಂಜನಾ ಜೊತೆಗೆ ಡ್ಯಾಶ್ ಹಾಡು ಮಾಡಿ, ನನ್ನ ಜೀವನದಲ್ಲಿ ಏನೇನೋ ಆಯ್ತು. ಇಷ್ಟು ದಿನ ನಾವು ವೇದಿಕೆ ಮೇಲೆ ಕಾಣಿಸಿಕೊಳ್ಳದಿದ್ದರೂ, ನಾವು ಮದುವೆಯಾಗುತ್ತಿದ್ದೇವೆ ಅಂತೆಲ್ಲಾ ಸುದ್ದಿಯಾಗಿತ್ತು. ನನ್ನ ಪರಿಚಯದವರೊಬ್ಬರು ಫೋನ್ ಮಾಡಿ, ಸಂಜನಾ ಜೊತೆಗೆ ಮದುವೆಯಂತೆ ಎಂದರು. ನಾನು ಇಲ್ಲ ಎಂದರೂ ಅವರು ನಂಬುತ್ತಿಲ್ಲ. ತನಗೆಲ್ಲವೂ ಗೊತ್ತಿದೆ ಎಂದರು. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲದಿದ್ದರೂ, ಅವರಿಗೆ ಗೊತ್ತಿತ್ತು. ನಮ್ಮ ನಡುವೆ ಏನಿಲ್ಲ’ ಎಂದು ವ್ಯಂಗ್ಯ ಮಾಡಿದರು ಚಂದನ್.
‘ಡ್ಯಾಶ್’ ಹಾಡಿಗೆ ಬಿಟ್ಟರೆ, ನಾವಿಬ್ಬರೂ ಮಾತಾಡಿದ್ದೇ ಕಡಿಮೆ ಎನ್ನುವ ಸಂಜನಾ, ‘ಚಂದನ್ ನನ್ನ ಸ್ನೇಹಿತ ಎನ್ನುವುದಕ್ಕಿಂತ ಹೆಚ್ಚಾಗಿ, ಅವರು ನನ್ನ ಸಹೋದರನಿದ್ದಂತೆ. ನಮ್ಮ ನಡುವೆ ಏನೂ ಇಲ್ಲ. ಡ್ಯಾಶ್ ಹಾಡಿಗೆ ಬಿಟ್ಟರೆ, ನಾವಿಬ್ಬರೂ ಮಾತಾಡಿದ್ದೇ ಕಡಿಮೆ. ಹಾಗಾಗಿ, ಇವೆಲ್ಲವೂ ಸುಳ್ಳು’ ಎಂದರು.
‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನವರಸನ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ, ಪ್ರಶಾಂತ್ ನಟನ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣವಿದೆ.
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ…
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ.…
ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ…
ರಾಜ್ಯದಲ್ಲಿ ಅತ್ಯಂತ ಪ್ರಬಲ ನಾಯಕರಲ್ಲಿ ಸಿದ್ದರಾಮಯ್ಯನವರೂ ಕೂಡ ಒಬ್ಬರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ಅವರ ಆಡಳಿತ…
ಕೆ.ಪಿ.ನಾಗರಾಜ್, ಮೈಸೂರು ಕರ್ನಾಟಕ ರಾಜಕೀಯ ವ್ಯಾಕರಣವನ್ನೇ ಬದಲಾಯಿಸಿದ ಸಿದ್ದರಾಮಯ್ಯ ಮೈಸೂರು ರಾಜಕಾರಣ ಅಂದರೆ ಒಮ್ಮೆ ಒಡೆಯರ್ ಯುಗ, ನಂತರ ದೇವರಾಜ…
ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ…