ಎಡಿಟೋರಿಯಲ್

ಮನೆಯಲ್ಲಿ ಹಿರಿಯರಿದ್ದರೆ ವಿಕಿಪೀಡಿಯ ಯಾಕೆ?

ಶ್ರಾವಣ ಬಂತು ಎಂದರೆ ಹಬ್ಬಗಳ ಸಾಲು. ಹೊಸ ಹೂಗಳ ಪರಿಮಳ, ಸಾಂಪ್ರದಾಯಿಕ ವಸ್ತ್ರಗಳ ಆಡಂಬರ . ಹೌದು, ಮನೆಯಲ್ಲಿ ಹಿರಿಯರೊಬ್ಬರಿದ್ದರೆ ಸಾಕು ನಮ್ಮ ಎಲ್ಲಾ ಹಬ್ಬ ಹುಣ್ಣಿಮೆಯ ವಿವರಣೆಯನ್ನು ಅವರು ಕೊಡುತ್ತಾರೆ . ಅಷ್ಟೇ ಅಲ್ಲದೆ ಸಾಂಪ್ರದಾಯಿಕವಾಗಿ ಹೇಗೆ ತಯಾರಾಗುವುದು ಎಂದೂ ನಮಗೆ ಹೇಳಿಕೊಡುತ್ತಾರೆ.

ಈಗಿನ ಯುವಜನತೆ ಗೂಗಲ್‌ನ ಮೊರೆ ಹೋಗುವ ಬದಲು ನಿಮ್ಮ ಮನೆಯಲ್ಲಿ ಇರುವ ಹಿರಿಯರ ಬಳಿ ಹೋಗಿ ಕುಳಿತು ಮಾತನಾಡಿ. ಕಾರಣ ನಿಮ್ಮ ಮನೆಯ ಪರಂಪರೆ ಹಾಗೂ ಸಂಪ್ರದಾಯ, ಶಾಸ್ತ್ರ ನಿಮಗೆ ತಿಳಿಯುತ್ತದೆ. ಅಷ್ಟೇ ಅಲ್ಲದೆ ಹಿರಿಯರಿಗೆ ಬರುವ ಎಷ್ಟೋ ಸಾಂಪ್ರದಾಯಿಕ ಹಾಡುಗಳು ನಿಮ್ಮ ಗೂಗಲ್‌ಗೆ ಬರುವುದಿಲ್ಲ. ಹಾಗಾಗಿ ಆ ಸಾಂಪ್ರದಾಯಿಕ ಹಾಡುಗಳು ಹಾಗೂ ಆಚರಣೆಗಳನ್ನು ನೀವು ಅವರ ಬಾಯಿಂದಲೇ ಕೇಳಿ ತಿಳಿಯಬೇಕು.

ಹಬ್ಬಗಳೆಂದರೆ ಪ್ರತಿಯೊಬ್ಬರ ಮನೆಯಲ್ಲೂ ಕೇಳಿ ಅವರದೇ ಆದ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳು ಇರುತ್ತವೆ. ಅವುಗಳನ್ನು ನೀವು ಅವರಿಂದ ತಿಳಿದು ಒಂದು ಕಡೆ ಬರೆದಿಟ್ಟುಕೊಳ್ಳಿ. ಅಷ್ಟೇ ಅಲ್ಲದೆ ಮದುವೆ ಹಾಗೂ ಕೆಲವು ಹಬ್ಬಗಳಿಗೆ ಅವರದೇ ಆದಂತಹ ಸಂಪ್ರದಾಯದ ರಂಗೋಲಿಗಳು ಸಹಇರುತ್ತದೆ ನೀವು ಅವನ್ನೂ ಅವರ ಬಳಿ ಕೇಳಿ ತಿಳಿದುಕೊಳ್ಳಬೇಕು.

ಮನೆಯಲ್ಲಿ ಹಿರಿಯರೊಬ್ಬರು ಇದ್ದರೆ ಅವರೊಂದು ವಿಕಿಪೀಡಿಯದ ಹಾಗೆ. ಅವರಿಗೆ ಎಲ್ಲ ವಿಷಯಗಳೂ ಸಾಕಷ್ಟು ಅವರ ಅನುಭವದಿಂದ ತಿಳಿದಿರುತ್ತದೆ. ಯಾವ ಅಂಗಡಿಯಲ್ಲಿ ಸಾಂಪ್ರದಾಯಿಕ ವಸ್ತುಗಳು ಸಿಗುತ್ತವೆ. ಎಲ್ಲಿ ನಿಮಗೆ ಉತ್ತಮವಾದ ರೇಷ್ಮೆ ಸಿಗುತ್ತದೆ ಎಂಬ ಮಾಹಿತಿ ತಿಳಿಯಲಿದೆ. ಅಷ್ಟೇ ಅಲ್ಲ ಸಾಂಪ್ರದಾಯಿಕ ಅಡುಗೆಯ ಭಂಡಾರ ನಮ್ಮ ಹಿರಿಯರು. ಅವರು ಹೇಳಿಕೊಡುವ ಕೆಲವು ಅಡುಗೆಯ ರುಚಿಯೇ ಬೇರೆ ಹಾಗಾಗಿ ಹೇಗಿದ್ದರೂ ಹಬ್ಬದ ಸಾಲುಗಳು ಆರಂಭವಾಗುತ್ತಿವೆ. ದಯಮಾಡಿ ಮನೆಯಲ್ಲಿನ ಹಿರಿಯರ ಬಳಿ ಕುಳಿತು ಅವರಲ್ಲಿ ಇರುವಂತಹ ಜ್ಞಾನವನ್ನು ಪಡೆದುಕೊಳ್ಳಿ.

ದೈಹಿಕವಾಗಿ ಅವರು ಬಳಲಿದ್ದರೂ ಮಾನಸಿಕವಾಗಿ ಅವರು ಸದೃಢರು. ಹಾಗಾಗಿ ಅವರ ಕೈಯಲ್ಲಿ ಕೆಲವು ಅಡುಗೆಗಳನ್ನು ಮಾಡಿಸಿ ಹಾಗೂ ಅವರ ಕೈ ರುಚಿಯನ್ನು ನೀವು ಸವಿಯಿರಿ, ಅಜ್ಜಿ ತಾತನ ಕೈ ರುಚಿ ಸವಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಆ ಪುಣ್ಯ ಲಭ್ಯ. ನಿಮಗೆ ಆ ಅವಕಾಶವಿದ್ದರೆ ಹೇಗಿದ್ದರೂ ಹಬ್ಬದಲ್ಲಿ ರಜಾ ಇರುತ್ತದೆ, ಹಾಗಾಗಿ ಅವರ ಕೈ ರುಚಿ ಹಾಗೂ ಅವರ ರೀತಿಯಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡುವ ಬಗ್ಗೆ ತಿಳಿದು ಒಂದು ಬದಲಾವಣೆಯನ್ನು ನೀವು ಖಂಡಿತಾ ಮಾಡಿಕೊಳ್ಳಬಹುದು.

ಹೂ ಕಟ್ಟುವುದು, ಜಡೆ ಹಾಕುವುದು, ಪೂಜೆಗೆ ಅಣಿ ಮಾಡುವುದು, ಅಷ್ಟೇ ಅಲ್ಲ ಸಂಪ್ರದಾಯವಾಗಿ ಅವರು ಸೀರೆ , ಪಂಚೆಗಳನ್ನು ಉಡುವುದನ್ನು ಅವರಿಂದ ಕಲಿತುಕೊಳ್ಳಬಹುದು . ತಾತನ ಜೊತೆ ಮೊಮ್ಮಕ್ಕಳೂ ಒಂದೇ ರೀತಿ ಕಚ್ಚೆಯನ್ನು ಹಾಕಿ ಫೋಟೋ ತೆಗೆದು ನಿಮ್ಮ ಸ್ಟೇಟಸ್‌ಗೆ ಹಾಕಿಕೊಳ್ಳಿ. ಅಷ್ಟೇ ಅಲ್ಲ ಅಜ್ಜಿಯ ಹಾಗೆ ನೀವೂ ತಯಾರಾದರೆ ಅವರ ಮುಖದಲ್ಲಿ ಮೂಡುವ ನಗುವಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಾವು ಅವರಿಗಾಗಿ ಏನನ್ನು ಕೊಡಲೂ ಸಾಧ್ಯವಿಲ್ಲ.

ಕಾರಣ ಅವರಿಗೆ ಆಸೆ ಬಹಳ ಕಮ್ಮಿ. ಆದರೆ ಅವರ ಬಳಿ ನೀವು ಸಮಯ ಕಳೆದಾಗ ಅವರ ಮುಖದಲ್ಲಿ ಮೂಡುವ ಮಂದಹಾಸಕ್ಕೆ ಎಣೆಯಿಲ್ಲ. ಮುಂದೆ ಬರುವ ಹಬ್ಬಗಳಲ್ಲಿ ಹಾಗೆ ನಡೆದು ಹಿರಿಯರ ಮುಖದಲ್ಲಿ ನಗು ತರುವ ಕೆಲಸವನ್ನು ನಾವು ನೀವೆಲ್ಲರೂ ಮಾಡೋಣ.

-ಸೌಮ್ಯ ಕೋಠಿ, ಮೈಸೂರು

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

3 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಚಿತ್ರೋದ್ಯಮದತ್ತ ಕೇಂದ್ರದ ಗಮನ, ಅಧ್ಯಯನ ತಂಡ ರಚನೆ

ಭಾರತೀಯ ಚಿತ್ರೋದ್ಯಮದ ಉತ್ತೇಜನಕ್ಕಾಗಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿರುವ ಸುದ್ದಿ. ಚಿತ್ರರಂಗಕ್ಕೆ ಸಂಬಂಧಿಸಿದಂತೆ, ಚಿತ್ರಗಳನ್ನು ವರ್ಗೀಕರಿಸಿ, ಪ್ರಮಾಣಪತ್ರ…

3 hours ago

ಕೊಡಗು ಜಿಲ್ಲೆಯಲ್ಲಿ ನಮೂನೆ ವಿತರಣೆ ಕಾರ್ಯ ಪೂರ್ಣ

ನವೀನ್ ಡಿಸೋಜ ತ್ವರಿತಗತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ; ಒಟ್ಟು ೪,೬೮,೬೫೭ ನಮೂನೆ ವಿತರಣೆ ಮೂಲಕ ಶೇ.೧೦೦ ಪ್ರಗತಿ…

3 hours ago

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ

ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡುವಿನದೊಡ್ಡಿ ಮತ್ತು ಅರ್ಧನಾರೀಪುರ ಗ್ರಾಮಗಳಿಗೆ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್…

3 hours ago

ಪುಟ್ಟರಂಗಶೆಟ್ಟಿ, ಎಆರ್‌ಕೆ: ಯಾರಿಗೆ ಮಂತ್ರಿ ಭಾಗ್ಯ?

ರಾಜೇಶ್ ಬೆಂಡರವಾಡಿ ಯಾರೂ ಹೆಚ್ಚು, ಯಾರೂ ಕಮ್ಮಿ ಇಲ್ಲ ಎಂಬಂತೆ ಚಾ.ನಗರದ ಈ ಇಬ್ಬರ ಹೆಸರು ಹೈಕಮಾಂಡ್ ಅಂಗಳದಲ್ಲಿ ಚಾಮರಾಜನಗರ:…

3 hours ago