ಎಡಿಟೋರಿಯಲ್

ವಿ4 : ವಿತ್ತ ; ವಿಜ್ಞಾನ ; ವಿಶೇಷ ; ವಿಹಾರ

ವಿತ್ತ: ಹಿಗ್ಗುತ್ತಿರುವ ವಿತ್ತೀಯ ಕೊರತೆ

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್- ಜೂನ್) ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ.೨೧.೨ಕ್ಕೆ ಏರಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ.೧೮.೨ರಷ್ಟಿತ್ತು. ಆರ್ಥಿಕ ಪರಿಭಾಷೆಯಲ್ಲಿ ಹೇಳುವುದಾದರೆ, ವಿತ್ತೀಯ ಕೊರತೆ – ಆದಾಯ ಮತ್ತು ಎರವಲು ಪಡೆಯುವ ವೆಚ್ಚದ ನಡುವಿನ ಅಂತರ. ಇದು ಜೂನ್ ಅಂತ್ಯದ ವೇಳೆಗೆ ೩.೫೨ ಲಕ್ಷ ಕೋಟಿ ರೂ.ಗಳಷ್ಟಿತ್ತು ಎಂದು ಲೆಕ್ಕಗಳ ಮಹಾನಿಯಂತ್ರಕರು (ಸಿಜಿಎ) ತಿಳಿಸಿದ್ದಾರೆ. ಮೊದಲ ತ್ರೈಮಾಸಿಕದ ಅಂತ್ಯದಲ್ಲಿ ತೆರಿಗೆ ಆದಾಯವು ೫.೦೬ ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕಕ್ಕಿಂತ ೨೨% ಹೆಚ್ಚಾಗಿದೆ. ಆರ್‌ಬಿಐ ಕೇಂದ್ರಕ್ಕೆ ವರ್ಗಾಯಿಸಿದ ಮೊತ್ತವು ಕಳೆದ ಸಾಲಿಗಿಂತ ಶೇ.೬೯.೪ ಕಡಿಮೆಯಾದ ಕಾರಣ ತೆರಿಗೆಯೇತರ ಆದಾಯವು ೫೧.೨% ರಷ್ಟು ತಗ್ಗಿದೆ. ವಿತ್ತೀಯ ಕೊರತೆಯು ದೇಶದ ಆರ್ಥಿಕತೆಯ ಆರೋಗ್ಯದ ಮಾನದಂಡ. ವಿತ್ತೀಯ ಕೊರತೆ ಹೆಚ್ಚಾದಂತೆಲ್ಲ ಆರ್ಥಿಕತೆ ದುರ್ಬಲವಾಗುತ್ತದೆ. ಆದಾಯ ಕುಗ್ಗಿ, ಖರ್ಚು ಹಿಗ್ಗಿದಾಗ ವಿತ್ತೀಯ ಕೊರತೆಯೂ ಹಿಗ್ಗುತ್ತದೆ!


ವಿಜ್ಞಾನ: ಗ್ರಹಗಳಲ್ಲಿ ಸಾರಸಮೃದ್ಧ ಮಣ್ಣು!

ಗಗನಯಾತ್ರಿಗಳು ಮೊಂದೊಂದು ದಿನ ಕ್ಷುದ್ರಗ್ರಹದ ಮಣ್ಣಿನಲ್ಲಿ ಬೆಳೆದ ತರಕಾರಿಗಳಲ್ಲಿ ಸಲಾಡ್ ತಯಾರಿಸಿ ಸೇವಿಸಬಹುದು. ರೊಮೈನ್ ಲೆಟಿಸ್, ಮೆಣಸಿನಕಾಯಿ ಮತ್ತು ಕೆಂಪು ಮೂಲಂಗಿ ಸಸ್ಯಗಳು ಕ್ಷುದ್ರಗ್ರಹ ಮಣ್ಣಿನ ಮಿಶ್ರಣಗಳಲ್ಲಿ ಬೆಳೆದಿವೆ ಎಂದು ಪ್ಲಾನೆಟರಿ ಸೈನ್ಸ್ ಜರ್ನಲ್ ಇತ್ತೀಚಿನ ಸಂಚಿಕೆ ವರದಿ ಮಾಡಿದೆ. ವಿಜ್ಞಾನಿಗಳು ಹಿಂದೆ ಚಂದ್ರನ ಧೂಳಿನಲ್ಲಿ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಹೊಸ ಅಧ್ಯಯನವು ಕಾರ್ಬೊನೇಸಿಯಸ್ ಕಾಂಡ್ರೈಟ್ ಉಲ್ಕೆಗಳು, ಬಾಷ್ಪಶೀಲ ಮೂಲಗಳಲ್ಲಿ ಸಮೃದ್ಧವಾಗಿದೆ ಎಂದು ಗ್ರ್ಯಾಂಡ್ ಫೋರ್ಕ್ಸ್‌ನಲ್ಲಿರುವ ಉತ್ತರ ಡಕೋಟಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಶೆರಿ ಫೈಬರ- ಬೇಯರ್ ಹೇಳುತ್ತಾರೆ. ಈ ಉಲ್ಕೆಗಳು ಮತ್ತು ಅವುಗಳ ಮೂಲವಾದ ಕ್ಷುದ್ರಗ್ರಹಗಳು ಸಾರಜನಕ, ಪೊಟ್ಯಾಸಿಯಮ್ ಮತ್ತು ರಂಜಕದೊಂದಿಗೆ ಸಮೃದ್ಧವಾಗಿವೆ. ಇವು ಕೃಷಿಯ ಪ್ರಮುಖ ಪೋಷಕಾಂಶಗಳು! ಮುಂದೊಂದು ದಿನ ಕ್ಷುದ್ರಗ್ರಹಗಳನ್ನು ಪುಡಿ ಮಾಡಿ ಬಾಹ್ಯಾಕಾಶ ಗಣಿಗಾರಿಕೆ ಮಾಡಬಹುದು. ಬಾಹ್ಯಾಕಾಶದಲ್ಲಿ ಸಮೃದ್ಧವಾಗಿರುವ ಕೃಷಿ ಪೋಷಕಾಂಶಗಳನ್ನು ಭೂಮಿಗೆ ರವಾನಿಸಿಕೊಳ್ಳಬಹುದು!


ವಿಶೇಷ: ಸ್ಕೇಟಿಂಗ್ ನಲ್ಲಿ ಪುಟ್ಟಬಾಲೆ ವಿಶ್ವದಾಖಲೆ!

ಸ್ಕೇಟಿಂಗ್ ಮಾಡುವುದೇ ಕಷ್ಟ. ಇನ್ನು ನಿಂತ ಕಾರುಗಳಡಿ ಸ್ಟೇಟಿಂಗ್ ಮಾಡುವುದು ಮತ್ತಷ್ಟು ಕಷ್ಟವೇ! ಆದರೆ, ಪುಣೆಯ
ಏಳು ವರ್ಷದ ಬಾಲಕಿ ದೇಶನಾ ನಹರ್ ಸ್ಟೇಟಿಂಗ್ ಚತುರೆ. ಏಕಕಾಲದಲ್ಲಿ ೨೦ ಕಾರುಗಳ ಅಡಿಯಲ್ಲಿ ಅತಿ ವೇಗದಲ್ಲಿ ಸ್ಕೇಟಿಂಗ್ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ್ದಾಳೆ. ಏಳು ವರ್ಷದ ಈ ಬಾಲೆ ಚೀನಾದ ೧೪ ವರ್ಷದ ಯುವ ಆಟಗಾರ್ತಿಯ ದಾಖಲೆ ಮುರಿದಿದ್ದಾಳೆ. ಇತ್ತೀಚೆಗೆ ಪುಣೆಯಲ್ಲಿ ನಡೆದ ವಿಶ್ವ ದಾಖಲೆಯ ಪ್ರದರ್ಶನದಲ್ಲಿ ದೇಶ್ನಾ ೨೦ ಕಾರುಗಳ ಕೆಳಗೆ ಸ್ಕೇಟ್ ಮಾಡಿ ೧೩:೭೪ ಸೆಕೆಂಡುಗಳಲ್ಲಿ ೧೯೩ ಅಡಿ ದೂರವನ್ನು ಕ್ರಮಿಸಿದಳು. ಇದಕ್ಕೂ ಮುನ್ನ ಚೀನಾದ ೧೪ ವರ್ಷದ ಬಾಲಕಿ ೨೦೧೫ರಲ್ಲಿ ಇದೇ ದೂರವನ್ನು ೧೪:೧೫ ಸೆಕೆಂಡುಗಳಲ್ಲಿ ಕ್ರಮಿಸಿದ್ದಳು. ಕಳೆದ ಎರಡು ವರ್ಷಗಳಿಂದ ದೇಶನಾ ಸ್ಕೇಟಿಂಗ್ ಕಲಿಯುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ, ಲಿಂಬೋ ಸ್ಕೇಟಿಂಗ್‌ನಲ್ಲಿ ಈ ದಾಖಲೆಗಾಗಿ ತಯಾರಿ ನಡೆಸುತ್ತಿದ್ದಳು. ಎಲ್ಲಾ ಸಮಯದಲ್ಲಿ, ಅವರ ತರಬೇತುದಾರರು ಅವರಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆಂದು ಪೋಷಕರು ಸಂಭ್ರಮದಿಂದ ಹೇಳಿಕೊಂಡಿದ್ದಾರೆ.


ವಿಹಾರ: ಹೊಸಬೂದನೂರಿನಲ್ಲಿ ವಾಸ್ತುಶಿಲ್ಪ ವೈಭವ

ಮಂಡ್ಯ ನಗರದಿಂದ ೬ ಕಿ.ಮೀ. ದೂರದಲ್ಲಿರುವ ಹೊಸಬೂದನೂರು ಗ್ರಾಮದಲ್ಲಿ ೧೩ನೇ ಶತಮಾನದ ಹೊಯ್ಸಳರ ದೊರೆ ೨ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಕಾಶಿ ವಿಶ್ವನಾಥ ಮತ್ತು ಅನಂತ ಪದ್ಮನಾಭ ದೇವಾಲಯಗಳಿವೆ. ಈ ೨ ದೇವಾಲಯಗಳು ಏಕಕೂಟಾಕೃತಿಯ ವಾಸ್ತುಶಿಲ್ಪವನ್ನು ಹೊಂದಿರುತ್ತವೆ. ಈ ದೇವಾಲಯಗಳು ರಾಜ್ಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿರುತ್ತವೆ. ಇಲ್ಲಿಯ ಅನಂತಪದ್ಮನಾಭ (ಶಾಸನೋಕ್ತ ಕೇಶವ) ದೇವಾಲಯವು ಸುಮಾರು ಮೂರು ಅಡಿ ಎತ್ತರದ ಜಗತಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿದ್ದು, ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ರಾಜ್ಯ ಪುರಾತತ್ವ ಇಲಾಖೆಯು ಸುಮಾರು ೧೪ ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಕಾಶಿವಿಶ್ವನಾಥಗುಡಿಯು ಇಲ್ಲಿಯ ಇನ್ನೊಂದು ಹೊಯ್ಸಳ ದೇವಾಲಯವಾಗಿದ್ದು, ಅನಂತಪದ್ಮನಾಭ ಗುಡಿಯ ವಿನ್ಯಾಸವನ್ನೇ ಹೊಂದಿದೆ. ಈ ದೇವಾಲಯದ ನವರಂಗದಲ್ಲಿ ಎರಡಕ್ಕೆ ಬದಲು ನಾಲ್ಕು ದೇವಕೋಷ್ಠಗಳಿದ್ದು, ನಡುವಣ ಛತ್ತು ವೈವಿಧ್ಯಮಯ ಕೆತ್ತನೆಯಿಂದಾಗಿ ಆಕರ್ಷಕವಾಗಿದೆ.

andolana

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

21 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

21 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

21 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

21 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

22 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

22 hours ago