ಎಡಿಟೋರಿಯಲ್

ಉರ್ದು: ದ್ವೇಷ-ಪ್ರೇಮದ ಸಂಬಂಧ

 

  ನ್ನ ಹುಟ್ಟಿದೂರು ಸಮತಳದಲ್ಲಿ ಒಂದು ಉರ್ದು ಶಾಲೆಯಿತ್ತುಅದಕ್ಕೆಂದೇ ಸ್ವಂತ ಕಟ್ಟಡವಿರಲಿಲ್ಲಅದು ಮೊಹರಂ ತಿಂಗಳಲ್ಲಿ ಪಂಜಾ ಕೂರಿಸುವ ಆಶೂರಖಾನೆಯಾಗಿರಂಜಾನ್ ಬಂದಾಗ ನಮಾಜಿನ ಮಸೀದಿಯಾಗಿ ರೂಪಾಂತರ ಪಡೆಯುತ್ತಿತ್ತುಶಾಲೆಯ ದಿನಗಳಲ್ಲಿ ತರಗತಿಗಳು ನಡೆಯುತ್ತಿರಲಿಲ್ಲಗೌರವಧನದ ಮೇಲೆ ಕೆಲಸ ಮಾಡುತ್ತಿದ್ದ ಉಸ್ತಾದರು ಬಿಡುವಾದಾಗ ಬಂದು ಮಕ್ಕಳಿಗೆ ಮುಖ ತೋರಿಸಿ ಹೋಗುತ್ತಿದ್ದರುಅವರಿದ್ದ ದಿನ ಶಾಲೆಯೊಳಗಿಂದ ಅಲೀಫ್‌ಸೆ ಅನಾರ್ಬೇಸೆ ಬದಖ್ ಸಚಿತ್ರ ವರ್ಣಮಾಲೆಯನ್ನೊಏಕ್ ದುವಾ ದೊದೋ ದುವೇ ಚಾರ್ ಮಗ್ಗಿಯನ್ನೊ ಕೋರಸ್ಸಿನಲ್ಲಿ ಘೋಷಿಸುವ ಮಕ್ಕಳ ದನಿ ಕೇಳುತ್ತಿತ್ತುಉಸ್ತಾದರು ಪಾಠಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತರಬೇತುಗೊಳಿಸಿದ್ದರುಇದಕ್ಕೆ ಶಾಲೆಯ ಪಕ್ಕ ಕೆರೆಯಿದ್ದುದೂ ಒಂದು ಪ್ರಚೋದನೆ.

ಕೆರೆಯಲ್ಲಿ ಹಾಪು ತಾವರೆ ಬೆಳೆದು ಮೀನುಗಳು ಸುಪುಷ್ಟವಾಗಿರುತ್ತಿದ್ದವುಗುರುಗಳು ಹುಡುಗರಿಂದ ಕೆರೆ ಕೆಳಗಿನ ಎರೆಮಣ್ಣನ್ನು ಅಗೆಸಿ ಎರೆಹುಳ ಸಂಗ್ರಹಿಸುತ್ತಿದ್ದರುಅವುಗಳ ಮೃದ್ವಂಗದೊಳಗೆ ಗಾಳ ಪೋಣಿಸುವುದುಗಾಳವನ್ನು ಕೆರೆಯ ನೀರಿಗೆಸೆದು ಮೀನು ಕಚ್ಚುವುದನ್ನೇ ಕಾದು ಕೂರುವುದುಕಚ್ಚಿದಾಗ ಚಕ್ಕನೆ ಮೇಲಕ್ಕೆ ಚಿಮ್ಮಿಸಿ ದಡಕ್ಕೆ ಎತ್ತಿಹಾಕುವುದುಮೀನನ್ನು ಗಾಳದಿಂದ ಬಿಡಿಸಿ ಹಸಿಬಳ್ಳಿಯನ್ನು ಕಿವಿರುಗಳ ಮೂಲಕ ನುಗ್ಗಿಸಿ ಜಡೆಯಂತೆ ಮತ್ಸ ಮಾಲೆ ಮಾಡುವುದು ಇತ್ಯಾದಿ ಲೋಕೋಪಯೋಗಿ ವಿದ್ಯೆಗಳನ್ನು ಚೆನ್ನಾಗಿ ಕಲಿಸಿದ್ದರುಸಾರಿಗಾಗುವಷ್ಟು ಮೀನಾದ ಕೂಡಲೆ ಉಸ್ತಾದರು ಅವನ್ನು ವಿದ್ಯಾರ್ಥಿನಿಯರಿಂದ ಉಜ್ಜಿಸಿ ಚೊಕ್ಕಪಡಿಸಿಬ್ಯಾಗಿಗೆ ಹಾಕಿಕೊಂಡು ತರೀಕೆರೆಯಲ್ಲಿದ್ದ ಮನೆಗೆ ಓಡುತ್ತಿದ್ದರುಅವರು ಬಾರದ ದಿನ ವಿದ್ಯಾರ್ಥಿಗಳು ನಿರಂಕುಶಮತಿಗಳಾಗಿ ಕೆರೆಯಲ್ಲಿ ಈಜಾಡುವುದುಅಡುಗೆ ಆಟವಾಡುವುದುಶಾಲೆಯ ಪಕ್ಕವಿದ್ದ ಹುಣಿಸೇ ಮರಕ್ಕೆ ಕಲ್ಲು ಬೀರುವುದುಬೇಲದಹಣ್ಣು ಆರಿಸುವುದೇ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು.

ಗುರುಗಳಿಗೆ ವರ್ತನೆಯ ಪ್ರಕಾರ ಪ್ರತಿ ಮನೆಯಿಂದ ಬುತ್ತಿ ಬರುತ್ತಿತ್ತುಅಕ್ಕಂದಿರನ್ನು ಈ ಶಾಲೆಗೆ ಹಾಕಿದ್ದರಿಂದಉರ್ದು ಶಾಲೆಗೆ ಹಾಕುವುದೇ ಮುಂದಕ್ಕೆ ಓದದಿದ್ದರೆ ಪರವಾಗಿಲ್ಲ ಎಂಬ ಉದ್ದೇಶದಲ್ಲಿ– ಅವರ ಕಲಿಕೆ ಶೀಘ್ರದಲ್ಲಿ ಮೊಟಕುಗೊಂಡಿತುಪೋಷಕರ ಪ್ರಕಾರ ಮಹಿಳೆಯರಿಗೆ ಕುರಾನ್ ಓದಲು ಸಾಕಾಗುವಷ್ಟು ಅರಬ್ಬಿ ಕಲಿತರೆ ಸಾಕಾಗಿತ್ತುನನ್ನನ್ನೂ ಅಣ್ಣನನ್ನೂ ಕನ್ನಡ ಶಾಲೆಗೆ ಹಾಕಲಾಯಿತುತತ್ಪರಿಣಾಮ ಉರ್ದುವಿನ ಜತೆಗೆ ನನಗೆ ಮಾತಿನ ನಂಟುಳಿದುಓದು ಬರೆಹ ತಪ್ಪಿಹೋಯಿತು.

ಉರ್ದು ಶಾಲೆಗೆ ಸೇರಿದ ಬಹುತೇಕ ಮಕ್ಕಳು ಮುಂದೆ ಕಲಿಯಲಾಗದೆ ಡ್ರಾಪ್‌ಔಟ್ ಆಗುವುದು ನಿರೀಕ್ಷಿತವಾಗಿತ್ತುಮೇಲೆ ಬಂದರೂಹೈಸ್ಕೂಲುಪಿಯುಸಿಯಲ್ಲಿ ಉರ್ದು ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ಹೊರಗೆ ಓಡಾಡಿಕೊಂಡು ಇರುತ್ತಿದ್ದರುಕನ್ನಡ ಮಾಧ್ಯಮದಲ್ಲಿ ಕಲಿಯುತ್ತ ಹಿಂದುಕ್ರೈಸ್ತ ಸಹಪಾಠಿಗಳಲ್ಲಿ ಬೆರೆಯುತ್ತ ನಾನು ಉರ್ದುವಿನಿಂದ ಮಾತ್ರವಲ್ಲಮುಸ್ಲಿಂ ಸಹಪಾಠಿಗಳಿಂದಲೂ ದೂರವಾದೆನುಅತ್ತ ಮುಸ್ಲಿಮರಲ್ಲೂ ಕನ್ನಡವೆಂದರೆ ಹಿಂದುವೀಕರಣ ಎಂಬ ಭಾವವಿತ್ತುಈ ಪರಕೀಯತಾ ಭಾವ ವಿದೇಶಿ ಭಾಷೆಯಾದ ಇಂಗ್ಲೀಷಿಗೆ ಅನ್ವಯವಾಗುತ್ತಿರಲಿಲ್ಲಇದು ಮುಖ್ಯವಾಗಿ ಮೈಸೂರು ಕರ್ನಾಟಕದ ಸಮಸ್ಯೆಉತ್ತರ ಕರ್ನಾಟಕದಲ್ಲಿ ಬಹುತೇಕ ಮುಸ್ಲಿಮರ ಮನೆಮಾತು ಕನ್ನಡವೆಂದೂಕೆಲವು ಕುಟುಂಬದವರಿಗೆ ಉರ್ದು ಬರುವುದಿಲ್ಲವೆಂದೂ ನನಗೆ ತಿಳಿಯಿತು.

ಭಾರತದಲ್ಲಿ ಎಲ್ಲ ಮುಸ್ಲಿಮರ ಮನೆಮಾತು ಉರ್ದುವಲ್ಲಪಂಜಾಬಿಬಂಗಾಳಿತಮಿಳುಮಲೆಯಾಳಗುಜರಾತಿಕನ್ನಡಕೊಂಕಣಿಬ್ಯಾರಿ ಮನೆಮಾತಿನ ಮುಸ್ಲಿಮರಿದ್ದಾರೆಮುಸ್ಲಿಮರಾಡುವ ಉರ್ದುವಿನಲ್ಲೂ ಹಲವು ರೂಪಗಳಿವೆಹೊಸದುರ್ಗ ತಾಲ್ಲೂಕಿನಿಂದ ಬರುತ್ತಿದ್ದ ಅಜ್ಜಿ ‘ಛೋರೇನಕೊ ನ್ಹಾಟ್‌ರೆಧೋಂಡೇ ಹೈ ರಸ್ತೇಮೆ’ ಎಂದು ಮಾತಾಡಿದರೆನಾವು ಗೇಲಿ ಮಾಡುತ್ತಿದ್ದೆವುಈ ವೈವಿಧ್ಯ ಮತ್ತು ಶ್ರೇಣೀಕರಣ ಭಾರತದ ಮಟ್ಟಿಗೂ ನಿಜದಕ್ಷಿಣ ಭಾರತದಲ್ಲಿರುವುದು ದಖನಿಇದು ಲಖನೋವಿಗಿಂತ ಭಿನ್ನಆದರೆ ಸಾಮಾಜಿಕ ಪ್ರತಿಷ್ಠೆಗಾಗಿ ದಖನಿಗರು ಲಖನೋವಿ ಬಳಸುವರುಒಮ್ಮೆ ನಾನು ಕಾಲೇಜಿಗೆ ಹೋಗಲೆಂದು ರೈಲೇರಿ ಕೂತೆಎದುರುಗಡೆ ಗಡ್ಡಬಿಟ್ಟು ಟೋಪಿ ಧರಿಸಿ ಶುಭ್ರವಸನಧಾರಿಯಾಗಿ ಹಿರಿಯರು ಕೂತಿದ್ದರುಸಲಾಂ ಅಲೈಕುಂ ಎಂದೆಅವರ ಫಾರಸಿಯುಕ್ತ ಉರ್ದುವಿನಲ್ಲಿ ‘ವಾಲೇಕುಂ ಸಲಾಂಆಪಕೆ ಇಸ್ಮೆ ಶರೀಫ್ ಕ್ಯಾಆಪ್ ಕಿಸಕೆ ಫರ್ಜನಂದ್?’ ಎಂದು ಕೇಳಿದರುಅದರರ್ಥ ನಿನ್ನ ಹೆಸರೇನುಯಾರ ಮಗ ಎಂದುಎಲೈ ರಾಜನೇನಿನ್ನ ಅಗಲಿಕೆಯಿಂದ ಯಾವ ದೇಶದ ವಿರಹ ಅನುಭವಿಸುವರು ಎಂಬಂತಹ ಸಂಸ್ಕ ತ ನಾಟಕಗಳಲ್ಲಿ ಬರುವ ಪ್ರಶ್ನೆಯದುನನಗದು ತಿಳಿಯಲಿಲ್ಲಆಗ ವೃದ್ಧರು ತಿರಸ್ಕಾರದಿಂದ ‘ಎಂಥ ಮುಸ್ಲಿಮನಪ್ಪ ನೀನುಉರ್ದು ಭಾಷೆಯೇ ಗೊತ್ತಿಲ್ಲಈಗಿನ ಹುಡುಗರಲ್ಲಿ ಧಾರ್ಮಿಕ ಸಂಸ್ಕಾರವೇ ಇಲ್ಲ’ ಎಂದು ಪ್ರವಚನ ಆರಂಭಿಸಿದರುನಾನು ಉಪಾಯವಾಗಿ ಎದ್ದು ಡೋರಿನ ಬಳಿ ನಿಂತವನು ಸೀಟಿಗೆ ಮರಳಿ ಬರಲಿಲ್ಲ.

ಲೇಖಕನಾದ ಬಳಿಕವೂ ಕರ್ನಾಟಕದ ಉರ್ದು ಲೇಖಕರ ಜತೆ ತಕ್ಕ ಸಂವಾದ ಏರ್ಪಡಲಿಲ್ಲಉರ್ದುವನ್ನು ಬಲಗಡೆಯಿಂದ ಬರೆಯುವುದನ್ನು ಉಲ್ಲೇಖಿಸಿಕನ್ನಡದ ಗೆಳೆಯರು ನಾವು ಎಡ ನೀವು ಬಲ ಎನ್ನುತ್ತಿದ್ದರುನನ್ನ ಕನ್ನಡವನ್ನು ಪ್ರಶಂಸಿಸುವರು ಕನ್ನಡ ಮಾತಾಡದ ಮುಸ್ಲಿಮರನ್ನು ತೆಗಳಲು ನನ್ನನ್ನು ಅಸ್ತ್ರಮಾಡಿಕೊಳ್ಳುತ್ತಿದ್ದರುವೈಚಾರಿಕ ಚಳವಳಿಗಳಲ್ಲಿ ಭಾಗವಹಿಸುತ್ತವೈಚಾರಿಕ ಸಾಹಿತ್ಯ ಓದುತ್ತಧರ್ಮವು ಅಫೀಮು ಎಂದು ನಂಬಿದೆಉರ್ದು ಇಸ್ಲಾಂಗಳನ್ನೂ ದೂರೀಕರಿಸುವುದರಲ್ಲೇ ನನ್ನ ಏಳಿಗೆಯಿದೆಉರ್ದುವಿನೊಳಗೆ ಶ್ರೇಷ್ಠ ಸಾಹಿತ್ಯವಿರಲಿಕ್ಕಿಲ್ಲಇಸ್ಲಾಮನೊಳಗೆ ಆಧುನಿಕತೆಯಿಲ್ಲಒಳ್ಳೆಯ ಮುಸ್ಲಿಂ ಆಗಬೇಕಾದರೆಹಿಂದೂಧರ್ಮಕ್ಕೆಕನ್ನಡಕ್ಕೆ ಹತ್ತಿರವಾಗಿರಬೇಕು ಇತ್ಯಾದಿ ಗ್ರಹಿಕೆಗಳನ್ನು ಇದು ಬೆಳೆಸಿತು.

ಮುಸ್ಲಿಂ ಲೇಖಕರುವಕೀಲರುಬುದ್ಧಿಜೀವಿಗಳುಪತ್ರಕರ್ತರು ಸೇರಿ ಸಮುದಾಯದ ಮುಸ್ಲಿಮರ ರಾಜಕೀಯ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಲು ಒಂದು ಸಂಘಟನೆ ಮಾಡಿದೆವುಅದರಲ್ಲಿ ಬ್ಯಾರಿಮಾಪ್ಳಾಪಿಂಜಾರನವಾಯತಿ ಮುಂತಾದ ಪಂಗಡದ ಮುಸ್ಲಿಮರಿದ್ದರುಅವರು ಕ್ರಮವಾಗಿ ಬ್ಯಾರಿಮಲೆಯಾಳಕನ್ನಡಕೊಂಕಣಿ ಆಡುವವರುಆಗ ಯಾವ ಭಾಷೆಯಲ್ಲಿ ಸಭೆಯ ಕಲಾಪಗಳು ಇರಬೇಕೆಂಬ ಪ್ರಶ್ನೆ ಎದುರಾಯಿತುಎಲ್ಲರಿಗೂ ಸಮಾನವಾಗಿ ಅರ್ಥವಾಗುತ್ತಿದ್ದ ಭಾಷೆ ಕನ್ನಡವಾಗಿತ್ತುಕನ್ನಡದಲ್ಲಿ ಕಲಾಪ ಜರುಗಿತುಒಬ್ಬ ಸದಸ್ಯರು ಹೇಳಿದರು: ‘ನೀವು ಎಲ್ಲಿಯವರೆಗೆ ಉರ್ದುವಿನಲ್ಲಿ ಚರ್ಚೆ ಮಾಡುವುದಿಲ್ಲವೊಅಲ್ಲೀತನಕ ಸಮುದಾಯದೊಳಗೆ ಭಾವನಾತ್ಮಕವಾಗಿ ಹೋಗುವುದಿಲ್ಲ’ಅವರ ಈ ವಾಕ್ಯದಲ್ಲಿದ್ದ ‘ನೀವು’ ಶಬ್ದವೇ ಕನ್ನಡದ ನಮ್ಮನ್ನು ಹೊರಗಿಟ್ಟಿರುವುದು ಸ್ಪಷ್ಟವಾಗಿತ್ತುಉರ್ದುವಾಡದ ಮುಸ್ಲಿಮರನ್ನು ಕೀಳಾಗಿ ನೋಡುವ ಪದ್ಧತಿ ವ್ಯಾಪಕವಾಗಿದೆ.

ಇದೇ ಕಾಲಕ್ಕೆ ಉರ್ದುಮುಸ್ಲಿಂ ಹಿನ್ನೆಲೆಯ ಕಾರಣಕ್ಕಾಗಿಯೇ ನನ್ನ ಕನ್ನಡತನವನ್ನು ಶಂಕಿಸುವ ಘಟನೆ ನಡೆಯಿತುಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಾದ ನಾವು ಗೋಕಾಕ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದೆವುಮೆರವಣಿಗೆಯಲ್ಲಿ ಗೋಕಾಕ ವರದಿ ಜಾರಿಗೆ ಬರಲಿಕನ್ನಡ ವಿರೋಧಿಗಳಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಿದ್ದೆವುಮೆರವಣಿಗೆಯಲ್ಲಿ ಕನ್ನಡ ವಿರೋಧಿ ಮುಸ್ಲಿಮರಿಗೆ ಧಿಕ್ಕಾರಉರ್ದು ಮುರ್ದಾಬಾದ್ಅಜೀಜ್ ಸೇಟ್ ಪಾಕಿಸ್ತಾನಕ್ಕೆ ಹೋಗಲಿ ಎಂಬ ಘೋಷಣೆಗಳೂ ಕೇಳಿಬಂದವುಗೋಕಾಕ ವರದಿಯಿದ್ದುದು ಕನ್ನಡಸಂಸ್ಕ ತ ಸಂಘರ್ಷದ ನಡುವೆಅದು ಕನ್ನಡಉರ್ದುವಾಗಿ ಬದಲಿಸುವಲ್ಲಿ ಮತೀಯವಾದ ಯಶಸ್ವಿಯಾಗಿತ್ತು.

ಉರ್ದು ಪ್ರಾಣಘಾತಕ ಆಗಬಹುದು ಎಂದು ಕೆಲವು ಘಟನೆಗಳು ಕಾಣಿಸಿದವುಒಂದು ಸಂಜೆನಾನೂ ಲಂಕೇಶ್ ಪತ್ರಿಕೆಯ ಬಿ.ಚಂದ್ರೇಗೌಡರೂ ಶಿವಮೊಗ್ಗೆಯ ನೆಹರೂ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆವುಒಂದೆಡೆ ಜನ ಗುಂಪುಗೂಡಿದ್ದರುಒಬ್ಬ ಸೈಕಲನ್ನು ತೆಗೆವಾಗ ಪಕ್ಕದಲ್ಲಿ ನಿಂತಿದ್ದ ಕಾರಿಗೆ ತಾಗಿದೆಕಾರಿನ ಮಾಲೀಕ ಅವನಿಗೆ ಬೈಯುತ್ತಸೈಕಲ್ಲಿನವನು ಅವನಿಗೆ ಸಮಜಾಯಿಷಿ ಕೊಡುತ್ತ ಇದ್ದರುಆಗ ಸೈಕಲ್ಲಿನವನ ಗೆಳೆಯನು ಗುಂಪನ್ನು ಸೀಳಿಕೊಂಡು ಬಂದು ‘ಕ್ಯಾರೇಕ್ಯಾಹುವಾ?’ ಎಂದಕೂಡಲೇ ವಾಗ್ದಂಡನೆ ವಿಧಿಸುತ್ತಿದ್ದ ಗುಂಪು ಮಿಂಚಿನ ವೇಗದಲ್ಲಿ ಸೈಕಲ್ಲಿನವನಿಗೆ ದಬದಬ ಚಚ್ಚಿತುಬೈಗುಳ ನೂಕಾಟದಲ್ಲಿ ಮುಗಿದಿರುತ್ತಿದ್ದ ಪ್ರಕರಣಕ್ಕೆ ಭಾಷೆ ಹೊಸ ತಿರುವನ್ನು ಕೊಟ್ಟಿತ್ತುಶಿಕ್ಷೆಯ ಪ್ರಮಾಣ ಆರೋಪಿಯ ಭಾಷೆ ಸಾಮಾಜಿಕಧಾರ್ಮಿಕ ಹಿನ್ನೆಲೆಯ ಪ್ರಕಾರ ಬದಲಾಗುತ್ತದೆಮುಂದೆ ಉರ್ದು ವಾರ್ತೆ ಪ್ರಸಾರ ಮಾಡುವ ದೂರದರ್ಶನದ ನಿರ್ಣಯ ಕೋಮು ಗಲಭೆಗೆ ಕಾರಣವಾದಉರ್ದು ಬೋರ್ಡುಗಳಿಗೆ ಕಪ್ಪು ಮಸಿ ಬಳಿವ ಘಟನೆಗಳು ನಡೆದವುಉರ್ದು ಪರಕೀಯವಿದೇಶಿ ಎಂಬ ವಾದಗಳ ಹಿಂದೆ ಮುಸ್ಲಿಮರೂ ವಿದೇಶಿಯರು ಎಂಬ ದನಿಯಡಗಿದೆ.

ಭಾಷೆಯಿಂದ ದೂರಸರಿತವು ಅದರೊಳಗಿನ ಜ್ಞಾನಆಡುವ ಜನ,

ಸಂಸ್ಕ ತಿಯಿಂದ ದೂರ ಹೋಗುವುದೂ ಆಗಿದೆಹೀಗಾಗಿ ಉರ್ದುವನ್ನು ಬೌದ್ಧಿಕವಾಗಿ ಪಡೆದುಕೊಳ್ಳಲು ತೀರ್ಮಾನಿಸಿದೆಬಲಿಪಶು ಮನೋ ಭಾವದಿಂದ ಹೊರಬಂದು ದಖನಿ ಉರ್ದುವಿನ ಜೀವಂತಿಕೆಯನ್ನು ಗಮನಿಸ ತೊಡಗಿದೆಅದರ ಜತೆಗೆ ಸಾಹಿತ್ಯಕ ಸಂಬಂಧವನ್ನು ಮರುಸ್ಥಾಪಿಸಲು ಯತ್ನಿಸಿದೆದಖನಿ ಉರ್ದುವಿನ ಜೀವಂತಿಕೆಯ ಪ್ರತೀಕಗಳಾದ ಗಾದೆಗಳನ್ನು ಸಂಗ್ರಹಮಾಡಿದೆನೂರಾರು ಮುಸ್ಲಿಮೇತರರಿಗೆ ಉರ್ದುವಿನಲ್ಲಿ ಪಾಂಡಿತ್ಯವಿರುವುದು ಗೊತ್ತಾಯಿತುಹಿಂದಿ ಸಿನಿಮಾ ಗೀತೆಗಳಿಂದನುಸ್ರತ್ ಫತೆಯಲಿ ಹಾಡುಗಳಿಂದಜಗಜೀತಸಿಂಗರ ಗಜಲುಗಳಿಂದ ಉರ್ದು ಜತೆ ಜನರಿಗೆ ಏರ್ಪಟ್ಟಿರುವ ನಂಟನ್ನು ಗುರುತಿಸಿದೆಕನ್ನಡ ಲೇಖಕರ ಉರ್ದು ಗಜಲುಗಳನ್ನು ಓದಿದೆನಾವು ಮೆಚ್ಚಿ ಕೇಳುವ ಹಿಂದಿ ಸಿನಿಮಾದ ಹಾಡುಗಳೆಲ್ಲವೂ ಉರ್ದುವಿನವುಅವನ್ನು ಬರೆದವರು ಉರ್ದು ಕವಿಗಳು ಎಂದು ಅರಿತೆಉತ್ತರ ಭಾರತಕ್ಕೆ ಹೋದರೆ ಇಂಗ್ಲೀಷಿನ ಬದಲಿಗೆ ಉರ್ದು/ಹಿಂದಿ ಮಿಶ್ರಣದಲ್ಲಿ ಪ್ರಬಂಧ ಮಂಡಿಸಲು ಆರಂಭಿಸಿದೆಉರ್ದು ಓದುವುದನ್ನು ಕಲಿತೆಒಂದು ಕತೆ ಅನುವಾದಿಸಿದೆ.

 

ಆದರೆ ಉರ್ದುವಿನಲ್ಲಿ ಆರಂಭಿಕ ಶಿಕ್ಷಣ ಪಡೆಯುವುದುಮಕ್ಕಳನ್ನು ಅಸ್ಪಷ್ಟ ಕತ್ತಲಿನ ಭವಿಷ್ಯವಿಲ್ಲದ ದಾರಿಗೆ ಹಚ್ಚಿದಂತೆಉರ್ದು ಬಡವರ ಭಾಷೆಈ ವೈರುಧ್ಯಕರ ಅವಸ್ಥೆಯು ಅಂಗ್ರೇಜಿಯ ಮುಂದೆ ಕನ್ನಡಕ್ಕೂ ಇದೆಆದರೆ ಕನ್ನಡವು ರಾಜ್ಯಭಾಷೆಯಾದ ಕಾರಣಉರ್ದುವಿನಷ್ಟು ದಯನೀಯ ಸ್ಥಿತಿಯಿಲ್ಲಮನೆಬದಿಯ ಎಡದಂಡೆ ಕೆನಾಲಿನ ಮೇಲೆ ವಾಕ್ ಮಾಡುವಾಗ ಅಲ್ಲೊಬ್ಬ ಸೈಕಲ್ ತೊಳೆದುಜಳಕಮಾಡಿ ಬಟ್ಟೆಒಗೆದು ಒಣಹಾಕಿ ಬೀಡಿಸೇದುತ್ತ ಕುಳಿತಿದ್ದಆತ ಬೇಲ್ದಾರ್ ಕೆಲಸದವನುಮಕ್ಕಳು ಏನು ಓದುತ್ತಿದ್ದಾರೆಂದೆಇನ್ನೂ ಚಿಕ್ಕವರುಉರ್ದುವಿಗೆ ಹಾಕಬೇಕೆಂದಿರುವೆ ಎಂದನಾನು ಹೇಳಿದೆ: ‘ಕನ್ನಡಕ್ಕೆ ಅಂಗ್ರೇಜಿಗೆ ಹಾಕಿಉರ್ದು ಓದಿದವರು ಉನ್ನತ ವಿದ್ಯಾಭ್ಯಾಸ ಮಾಡುವುದುಸರ್ಕಾರಿ ನೌಕರಿ ಪಡೆಯುವುದು ಕಡಿಮೆನಾನೂ ನನ್ನ ಮಕ್ಕಳು ಕನ್ನಡ ಕಲಿತು ಈ ಸ್ಥಿತಿಗೆ ಬಂದಿದ್ದೇವೆ’ಶಿಕ್ಷಣದಲ್ಲಿ ಮನೆಮಾತಿನಿಂದ ದೂರ ಹೋದರೆ ಒಳಿತು ಎಂದು ಹೇಳುವುದು ಎಂಥ ವೈರುಧ್ಯ

andolanait

Recent Posts

ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಗಿಫ್ಟ್‌: ಟಾಕ್ಸಿಕ್‌ ಚಿತ್ರದ ಟೀಸರ್‌ ರಿಲೀಸ್‌

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ ಸಿಕ್ಕಿದ್ದು, ಬಹುನಿರೀಕ್ಷಿತ ಟಾಕ್ಸಿಕ್‌ ಚಿತ್ರದ ಟೀಸರ್‌ ಇಂದು ರಿಲೀಸ್‌ ಆಗಿದೆ.…

54 seconds ago

ಹುಲಿಗೆ ವಿಷಪ್ರಾಷನ ಮಾಡಿದ್ದ ಆರೋಪಿ ಸೆರೆ

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ವಿಷ ಪ್ರಶಾನದಿಂದ ಹುಲಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ…

38 mins ago

ಓದುಗರ ಪತ್ರ: ಸಾರ್ವಜನಿಕ ಶೌಚಾಲಯಗಳ ಬೀಗ ತೆರವು

ಮೈಸೂರಿನ ಮೆಟ್ರೋಪೋಲ್ ವೃತ್ತದ ಸಮೀಪ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ…

4 hours ago

ಓದುಗರ ಪತ್ರ: ಬಾಂಬ್ ಬೆದರಿಕೆ: ಕಠಿಣ ಶಿಕ್ಷೆ ನೀಡಿ

ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳು, ನ್ಯಾಯಾಲಯ ಮೊದಲಾದ ಕಡೆ ಬಾಂಬ್ ಇಡಲಾಗಿದೆ ಎಂದು ದುಷ್ಕರ್ಮಿಗಳು ಫೋನ್, ಇ-ಮೇಲ್ ಮೂಲಕ ಬೆದರಿಕೆ…

4 hours ago

ಓದುಗರ ಪತ್ರ: ದಾಖಲೆ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅತಿಹೆಚ್ಚು ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೆ ರಾಜ್ಯದ ಅನೇಕ…

4 hours ago

ಕಕ್ಕೆಹೊಳೆ, ಗಾಂಧಿ ವೃತ್ತದಲ್ಲಿ ಕ್ಯಾಮೆರಾ ಕಾರ್ಯಾರಂಭ

ಸಂಚಾರ ನಿಯಮ ಉಲ್ಲಂಸಿದವರ ವಿರುದ್ಧ ೮೧ ಪ್ರಕರಣ ದಾಖಲು! ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ಹೊಸ ವರ್ಷಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ…

4 hours ago